ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

ಮಲಗಿದ್ದಲ್ಲೇ ಹೆಣವಾಗಿದ್ರು ಅಮ್ಮ, ಮಗ..! ತಾಯಿ ಸತ್ತ ಕೆಲವೇ ನಿಮಿಷಗಳಲ್ಲಿ ಪುತ್ರನೂ ಪ್ರಾಣಬಿಟ್ಟ..!

Published : Sep 09, 2023, 02:41 PM IST

ಗಂಡನನ್ನೂ ಕರೆದುಕೊಂಡು ಹೋಗಿ ವರ್ಕ್ ಮಾಡಿದ್ರು..!
ಅವಳು ಬದಲಾಗದಿದ್ದಾಗ ಗಂಡ ಅವಳನ್ನೇ ಬಿಟ್ಟು ಬಿಟ್ಟ..!
3 ವರ್ಷದ ಹಿಂದೆ ಅವನ ವಿರುದ್ಧ ಕೇಸ್ ದಾಖಲಿಸಿದ್ದ..!
ಅವಳನ್ನ ಕೊಲ್ಲೋದಕ್ಕೂ ಮೊದಲು ವಾಚ್ ಮಾಡಿದ್ದ..!

ಅವಳು ಏಕಾಂಗಿ ಹೆಣ್ಣು, ಇದ್ದ ಒಬ್ಬ ಮಗನನ್ನ ಕಷ್ಟ ಪಟ್ಟು ಓದಿಸಿದ್ಲು. ಗಂಡ ಅನ್ನಿಸಿಕೊಂಡವನು ಮೂರು ವರ್ಷದ ಹಿಂದೆಯೇ ಇವಳನ್ನ ಬಿಟ್ಟು ಹೋಗಿದ್ದ. ಕಷ್ಟಪಟಟು ಜೀವನ ಮಾಡ್ತಿದ್ದ ಅವಳು ಇದ್ದಕ್ಕಿದ್ದಂತೆ ಆವತ್ತು ಹೆಣವಾಗಿ ಹೋಗಿದ್ಲು. ತನ್ನದೇ ಮನೆಯ ಹಾಸಿಗೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಇನ್ನೂ ಆಕೆಯ ಮಗ ಅವಳ ಪಕ್ಕದಲ್ಲೇ ಉಸಿರು ಚೆಲ್ಲಿ ಮಲಗಿದ್ದ. ಇನ್ನೂ ಇದೇ ಡಬಲ್ ಮರ್ಡರ್ (double murder) ಕೇಸ್‌ನ ತನಿಖೆಗಿಳಿದ ಪೊಲೀಸರಿಗೆ ಕ್ಷಣಕ್ಕೊಂದು ಟ್ವಿಸ್ಟ್ ಸಿಕ್ತಿತ್ತು. ಹಾಸಿಗೆ ಮೇಲೆ ಚಿರ ನಿದ್ರೆಗೆ ಜಾರಿರುವ ಮಹಿಳೆ.. ಆಕೆಯ ವಸ್ತ್ರವೆಲ್ಲಾ ರಕ್ತ ಮಯ.. ಪಕ್ಕದಲ್ಲೇ ಬಾಲಕನ ಮೃತದೇಹ. ಈ ಫೋಟೋ ನೋಡ್ತಿದ್ರೆ ಇಲ್ಲಿ ಎರಡು ಹೆಣಗಳು ಬಿದ್ದಿರೋದು ಕನ್ಫರ್ಮ್ ಆಗುತ್ತೆ. ಈ ಘಟನೆ ಬೆಂಗಳೂರಿನ(Bengaluru) ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಲ್ಲಸಂಸ್ರದ ರವೀಂದ್ರ ನಗರದಲ್ಲಿ ನಡೆದಿದೆ. ಸೆಪ್ಟಂಬರ್ 5ನೇ ತಾರಿಖು  ಅಜ್ಜಿ ಅಂದ್ರೆ ನವನೀತ ತಾಯಿ, ಮಗಳು ಫೋನ್ ರಿಸೀವ್ ಮಾಡ್ತಿಲ್ಲವಲ್ಲ ಅಂತ ಮನೆಗೆ ಬಂದಿದ್ದಾರೆ. ಬಂದು ನೋಡಿದ್ರೆ ಮನೆಯ ಒಳಗಡೆಯಿಂದ ಲಾಕ್ ಆಗಿದ್ದು ಗಮನಿಸಿ ಅನುಮಾನ ಬಂದು ಕಿಟಿಕಿ ಗಾಜುಗಳನ್ನ ಒಡೆದು ನೋಡಿದ್ದಾಳೆ. ಅಷ್ಟೇ ಮಗಳು ಮತ್ತು ಮೊಮ್ಮಗ ರಕ್ತದ ಮಡುವಿನಲ್ಲಿ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಅಜ್ಜಿ ಲಕ್ಷ್ಮಿ ಮಗಳು ಮತ್ತು ಮೊಮ್ಮಗ ಮರ್ಡರ್ ಆಗಿದ್ದಾನೆ ಅಂತ ಗೊತ್ತಾಗ್ತಿದ್ದಾಗೆ ಪೊಲೀಸರಿಗೆ(police) ಮಾಹಿತಿ ನೀಡ್ತಾಳೆ. ಆಕೆಯೇ ಕಂಪ್ಲೆಂಟ್ ಕೊಡ್ತಾಳೆ. ಆಗ ಪೊಲೀಸರು ಅದೇ ಲಕ್ಷ್ಮಿಯವರನ್ನ ಯಾರ ಮೇಲಾದ್ರೂ ಅನುಮಾವಿದ್ಯಾ ಅಂತ ಕೇಳ್ತಾರೆ. ಆಗ ಆಕೆ ಹೆಳೋದೇ ತನ್ನ ಅಳಿಯನ ಹೆಸರನ್ನ. ಇನ್ನೂ ಮೂರು ವರ್ಷದ ಹಿಂದೆ ಗಂಡ ಚಂದ್ರು, ಹೆಂಡತಿ ಮಗನನ್ನ ಬಿಟ್ಟು ಬೇರೆಯಾಗಿಬಿಟ್ಟಿದ್ದಾನೆ.

ಇದನ್ನೂ ವೀಕ್ಷಿಸಿ:  ಕಮಲಕ್ಕೆ ದಳ ಬೇಕೋ..? ದಳಕ್ಕೆ ಕೇಸರಿಯೋ..? ಬಿಜೆಪಿ ಮೇಲೆ ಮೃದುಧೋರಣೆ ತೋರಿದ್ದೇಕೆ ದೊಡ್ಡ ಗೌಡರು..?

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more