ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!

ತಾಯಿಯ ಗೆಳೆಯನ ಕಥೆ ಮುಗಿಸಿದ ಮಗ: ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ಕಥೆ ಕಟ್ಟಿದ್ದ..!

Published : Aug 05, 2023, 02:27 PM IST

ತಾಯಿಯ ಅನೈತಿಕ ಸಂಬಂಧದಿಂದ ಬೇಸತ್ತ ಮಗ..!
ಆ್ಯಕ್ಸಿಡೆಂಟ್ ಪ್ರಕರಣಕ್ಕೆ ಸಿಗ್ತು ಬಿಗ್ ಟ್ವಿಸ್ಟ್..!
ಆ್ಯಕ್ಸಿಡೆಂಟ್ ಆದ ಜಾಗದಲ್ಲಿ ಸಿಕ್ಕಿತ್ತು ರಕ್ತದ ಕಟ್ಟಿಗೆ..!

ಅವನು ಕೂಲಿ ಕಾರ್ಮಿಕ. ಹೆಂಡತಿ ಮೂರು ಮಕ್ಕಳೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸ್ತಿದ್ದ. ಆದ್ರೆ ಆವತ್ತೊಂದು ದಿನ ಟೈಫಾಯ್ಡ್ ಬಂದಿದ್ದ ಕಾರಣ ಮೆಡಿಕಲ್ ಸ್ಟೋರಿಗೆ ಹೋಗಿ ಬರ್ತೀನಿ ಅಂತ ಹೋದವನು ವಾಪಸ್ ಬರಲೇ ಇಲ್ಲ. ಅವನ ಫೋನ್‌ಗೆ ಕಾಲ್ ಮಾಡಿದ್ರೆ ಫೋನ್ ಸ್ವಿಚ್ ಆಫ್. ಆತಂಕಗೊಂಡಿದ್ದ ಆತನ ಕುಟುಂಬಕ್ಕೆ ಕೆಲವೇ ಗಂಟೆಗಳಲ್ಲಿ ಒಂದು ಫೋನ್ ಕಾಲ್ ಬಂದಿತ್ತು. ಅತ್ತಕಡೆಯಿಂದ ಕಾಲ್ ಮಾಡಿದವರು ಪೊಲೀಸರು. ನಿಮ್ಮ ಮಗನಿಗೆ ಆ್ಯಕ್ಸಿಡೆಂಟ್(Accident) ಆಗಿದೆ ಬೇಗ ಬನ್ನಿ ಅಂದಿದ್ರು. ಇನ್ನೂ ಇದೇ ಆ್ಯಕ್ಸಿಡೆಂಟ್ ಕೇಸ್‌ನ ಬೆನ್ನು ಬಿದ್ದ ಪೊಲೀಸರಿಗೆ ಅವನ ಫೋನ್ ಒಂದು ಮಾಹಿತಿ ಕೊಟ್ಟಿತ್ತು. ಅದು ಆ್ಯಕ್ಸಿಡೆಂಟ್ ಅಲ್ಲ ಬದಲಿಗೆ ಮರ್ಡರ್(murder) ಅನ್ನೋದನ್ನ. ಯಾವಾಗ ರಾಘವೇಂದ್ರ ರೆಡ್ಡಿ ಶವ ಸಿಕ್ಕ ಹತ್ತಿರದಲ್ಲೇ ಒಂದು ರಕ್ತದ ಕಲೆ ಇರುವ ಕಟ್ಟಿಗೆ ಸಿಗ್ತೋ ಪೊಲೀಸರಿಗೆ ಅದು ಆ್ಯಕ್ಸಿಡೆಂಟ್ ಅಲ್ಲ ಕೊಲೆ ಅನ್ನೋದು ಕನ್ಫರ್ಮ್ ಆಗಿತ್ತು. ಕೂಲಿ ಮಾಡೋದಕ್ಕೆ ಅಂತ ಊರೂರು ಅಲಿತಿದ್ದ ರಾಘವೇಂದ್ರನಿಗೆ ಅವಳೊಬ್ಬಳ ಪರಿಚಯವಾಗಿತ್ತು. ನಂತರ ಅವರಿಬ್ಬರ ನಡುವೆ ಅನೈತಿಕ ಸಂಬಂಧವೂ(Illegal relationship) ಬೆಳೆಯಿತು. ಹೀಗೆ 2 ವರ್ಷ ಕಳೆಯಿತು. ಆದ್ರೆ ಇವರಿಬ್ಬರ ವಿಷ್ಯ ಊರಲ್ಲೆಲ್ಲಾ ಪಸರ್ ಆಯ್ತು, ಕೊನೆಗೆ ಆ ಮಹಿಳೆಯ ಮಗನಿಗೂ ಗೊತ್ತಾಯ್ತು. ಯಾವಾಗ ತಾಯಿ ಪರಪರುಷನ ಸಹವಾಸ ಮಾಡಿದ್ದಾಳೆ ಅಂತ ಗೊತ್ತಾಯ್ತೋ ಆತ ಅವನನ್ನೇ ಮುಗಿಸಲು ನಿರ್ಧಾರ ಮಾಡಿದ್ದ. ತನ್ನ ಸ್ನೇಹಿತ ಜೊತೆಗೆ ಸೇರಿಕೊಂಡು ಆವತ್ತೊಂದು ದಿನ ತನ್ನ ಮನೆಗೆ ಹೋಗಿ ಬರ್ತಿದ್ದವನನ್ನ ಅಡ್ಡಗಟ್ಟಿ ಅವನ ಕಥೆ ಮುಗಿಸಿ ಕೊನೆಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಆ್ಯಕ್ಸಿಡೆಂಟ್ ರೀತಿ ಶವವನ್ನ ಹಾಕಿ ಹೋಗಿದ್ದ.

ಇದನ್ನೂ ವೀಕ್ಷಿಸಿ:  ಎಲೆಕ್ಟ್ರಾನಿಕ್ ವಾರ್‌ಗೆ ನಾಂದಿ ಹಾಡಿತಾ ಭಾರತದ ನಿರ್ಧಾರ ?: ಚೀನಾ ಲ್ಯಾಪ್ ಟಾಪ್ ಬೇಕಾ ? ತಗೊಳ್ಳಿ ಲೈಸೆನ್ಸ್ !

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more