ಅವನ ಸಾವಿಗೆ ಕಾರಣ, ಇನ್ನೊಬ್ಬನ ಲವ್ ಕಹಾನಿ: ಇದು ಟ್ರೈಯಾಂಗುಲರ್ ಲವ್ ಸ್ಟೋರಿ..!

ಅವನ ಸಾವಿಗೆ ಕಾರಣ, ಇನ್ನೊಬ್ಬನ ಲವ್ ಕಹಾನಿ: ಇದು ಟ್ರೈಯಾಂಗುಲರ್ ಲವ್ ಸ್ಟೋರಿ..!

Published : Jul 30, 2023, 12:44 PM IST

ಇನ್ನೊಬ್ಬನ ಲವ್ವರ್‌ಗೆ ಲವ್ ಯು ಅಂದಿದ್ದ..!
ಕಾಲೇಜಿಗೆ ಬಂದವರಿಗೆ ಸಿಕ್ಕಿದ್ದು ಅವನ ಗೆಳೆಯ..!
ಪೈಪ್‌ನಲ್ಲಿ ಹೊಡೆದು ಅವನ ಕಥೆ ಮುಗಿಸಿದ್ರು..!
 

ಅವನು ಫಸ್ಟ್ ಇಯರ್ ಡಿಗ್ರಿ ಓದುತ್ತಿದ್ದ ಯುವಕ. ತನ್ನ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನ ಕಂಡಿದ್ದ. ಹೆತ್ತವರು ಕೂಡ ಆತನನ್ನ ಕಷ್ಟಪಟ್ಟು ಕಾಲೇಜಿಗೆ ಸೇರಿಸಿದ್ರು. ಆತ ಕೂಡ ಚೆನ್ನಾಗಿ ಓದುತ್ತಿದ್ದ. ಆದ್ರೆ ಆವತ್ತೊಂದು ದಿನ ಕಾಲೇಜಿಗೆ ಅಂತ ಹೋದವನು ವಾಪಸ್ ಬರಲೇ ಇಲ್ಲ. ಮಧ್ಯಾಹ್ನ ಫ್ರೆಂಡ್ಸ್ ಜೊತೆ ಇದ್ದೀನಿ ಅಂತ ತಾಯಿಗೆ ಫೋನ್ನಲ್ಲಿ ಹೇಳಿದ್ದೇ ಕೊನೆ ನಂತರ ಆತ ಎಲ್ಲಿಗೆ ಹೋದ ಏನಾದ ಅಂತ ಗೊತ್ತೇ ಆಗಲಿಲ್ಲ. ಹುಡುಕಬಾರದ ಜಾಗದಲ್ಲೆಲ್ಲಾ ಆತನನ್ನ ಹುಡುಕಾಡಿದ್ರು. ಆದ್ರೆ ರಾತ್ರಿ ಹೊತ್ತಿಗೆ ಆತನ ಸುದ್ದಿ ಹೆತ್ತವರಿಗೆ ಸಿಕ್ಕಿತ್ತು. ಆದ್ರೆ ಆ ಸುದ್ದಿ ಅವನ ಸಾವಿನದ್ದಾಗಿತ್ತು. ಮೆರ್ವೇಶ್ ಕೊಲೆಯಾದ(Murder) ನಂತರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಮೆರ್ವೇಶ್ ಹೆತ್ತವರೇ ಒಂದು ಸುಳಿವು ಕೊಟ್ಟಿದ್ರು. ಮೆರ್ವೇಶ್ ಕಾಣೆಯಾದಗ ಇನ್ನಿಲ್ಲದಂತೆ ಹುಡುಕುತ್ತಿದ್ದ ಅವನ ಕುಟುಂಬವನ್ನ ಅವತ್ತು ಸಂಜೆ ಒಬ್ಬ ಬಂದು ಭೇಟಿ ಮಾಡಿದ್ದ. ಮೆರ್ವೇಶ್ ಇನ್ನೂ ಬಂದಿಲ್ವಾ ಅಂತ ಕೇಳಿದ್ದ. ಅವನ ಮೇಲೆಯೇ ಹೆತ್ತವರಿಗೆ ಡೌಟ್ ಬಂದಿತ್ತು. ಪೊಲೀಸರೂ(police) ತಡ ಮಾಡದೇ ಅವನ ಹಿಂದೆ ಬಿದ್ರು. ಅದೊಂದು ಟ್ರೈಯಾಂಗುಲರ್ ಲವ್ ಸ್ಟೋರಿ(love). ಇಬ್ಬರು ಲವ್ವರ್ಗಳ ಮಧ್ಯೆ ಒಬ್ಬ ಎಂಟ್ರಿಯಾಗಿದ್ದ. ಅವನೇ ಮೆರ್ವೇಶ್ ಸ್ನೇಹಿತ. ಬೇರೊಬ್ಬ ಪ್ರೀತಿಸುತ್ತಿದ್ದ ಹುಡುಗಿಗೆ ಮೆರ್ವೇಶ್ ಸ್ನೇಹಿತ ಲೋಹಿತ್ ಮೆಸೇಜ್ ಮಾಡ್ತಿದ್ದ. ಆಕೆಗೆ ಲವ್ ಮಾಡು ಅಂತ ಪ್ರಾಣ ಹಿಂಡುತ್ತಿದ್ದ. ಇದು ಅತಿ ಅನಿಸಿದಾಗ ಆ ಹುಡುಗಿ ತನ್ನ ಬಾಯ್ಫ್ರೆಂಡ್ಗೆ ಹೇಳಿದ್ಲು. ಯಾವಾಗ ಬಾಯ್ಫ್ರೆಂಡ್ಗೆ ಲೋಹಿತ್ ವಿಷ್ಯ ಗೊತ್ತಾಯ್ತೋ ಆತನಿಗೆ ಬುದ್ಧಿ ಕಲಿಸಲು ಮುಂದಾದ ಇದಕ್ಕೆ ಆತ ರೌಡಿ ಶೀಟರ್ ಸ್ನೇಹಿತರನ್ನ ಬಳಸಿಕೊಂಡಿದ್ದ. ಆದ್ರೆ ಲೋಹಿತ್ ನಸೀಬು ಆವತ್ತು ಚೆನ್ನಾಗಿತ್ತು. ಆತ ರೌಡಿಗಳಿಗೆ ಸಿಕ್ಕಲಿಲ್ಲ ಅವನ ಬದಲಿಗೆ ಸಿಕ್ಕಿದ್ದು ಅವನ ಸ್ನೇಹಿತ ಮೆರ್ವೇಶ್. ಮೆರ್ವೇಶ್‌ನನ್ನ ಎತ್ತಾಕೊಂಡು ಹೋದ ಅವರು ಅವನ ಕಥೆಯನ್ನೇ ಮುಗಿಸಿಬಿಟ್ಟಿದ್ರು. 

ಇದನ್ನೂ ವೀಕ್ಷಿಸಿ:  ಒಕ್ಕಲಿಗ Vs ಒಕ್ಕಲಿಗ..ರೆಡಿನಾ ಕೇಸರಿ “ಸಮರ”ವ್ಯೂಹ..?: ಬಿಜೆಪಿಗೂ ಸಿಗುತ್ತಾ "ಒಕ್ಕಲಿಗ" ಸಾರಥ್ಯ..?

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more