ಆದಿಲ್‌ ಸಾವು ಪ್ರಕರಣ: ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ ಎಂದ ಪತ್ನಿ!

ಆದಿಲ್‌ ಸಾವು ಪ್ರಕರಣ: ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ ಎಂದ ಪತ್ನಿ!

Published : May 26, 2024, 05:37 PM ISTUpdated : May 26, 2024, 05:43 PM IST

ಚನ್ನಗಿರಿಯಲ್ಲಿ ಲಾಕಪ್ ಡೆತ್ ಆರೋಪ ಸಂಬಂಧ ಹೊಸ ವಿಷಯ ಬೆಳಕಿಗೆ ಬಂದಿದೆ. ಈ ಮೂಲಕ ಚನ್ನಗಿರಿಯಲ್ಲಿ ಬೇರು ಬಿಟ್ಟಿದಿಯಾ ಮಟ್ಕಾ ದಂಧೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಯಾಕೆಂದರೆ ಆದಿಲ್ ಸಾವಿನ ಸುತ್ತಾ ಮಟ್ಕಾ ದಂಧೆಯ ಜಾಡು ಕಂಡುಬರುತ್ತಿದೆ. ಆದಿಲ್ ಮಟ್ಕಾ ದಂಧೆ ಬಗ್ಗೆ ಪತ್ನಿ ಹೀನಾಬಾನು ಒಪ್ಪಿಕೊಂಡಿದ್ದಾರೆ.  

ಚನ್ನಗಿರಿಯಲ್ಲಿ(Channagiri) ಲಾಕಪ್ ಡೆತ್ (Lockup Death) ಆರೋಪ ಸಂಬಂಧ ಇದೀಗ ಚನ್ನಗಿರಿ ಧಗಧಗ ಉರಿಯುತ್ತಿದೆ. ಅಲ್ಲದೆ ಈ ವೇಳೆ ಚನ್ನಗಿರಿಯಲ್ಲಿ ಬೇರು ಬಿಟ್ಟಿದಿಯಾ ಮಟ್ಕಾ ದಂಧೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಯಾಕೆಂದರೆ ಆದಿಲ್ (Adil) ಸಾವಿನ ಸುತ್ತಾ ಮಟ್ಕಾ ದಂಧೆಯ ಜಾಡು ಕಂಡುಬರುತ್ತಿದೆ. ಆತನ ಸಾವಿಗೆ ಮಟ್ಕಾ ದಂಧೆಯೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಮೂಡಿದ್ದು, ಆದಿಲ್ ಮಟ್ಕಾ ದಂಧೆ ಬಗ್ಗೆ ಪತ್ನಿ ಹೀನಾಬಾನು ಒಪ್ಪಿಕೊಂಡಿದ್ದಾರೆ. ಅಲ್ಲದೆ  ಚನ್ನಗಿರಿ ಪೊಲೀಸರಿಗೆ ಮಟ್ಕಾ ಕಮಿಷನ್‌ನಲ್ಲಿ ಪಾಲನ್ನೂ ಸಹ ನೀಡಲಾಗುತ್ತಿತ್ತಂತೆ. ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ, ಈ ತಿಂಗಳು ಮಾಮೂಲು ನೀಡಿಲ್ಲ ಎಂದು ಕರೆದುಕೊಂಡು ಹೋಗಿದ್ರು, ಆದ್ರೆ ನನ್ನ ಗಂಡನನ್ನೇ ಕೊಂದು ಬಿಟ್ಟಿದ್ದಾರೆ ಎಂದು ಹೀನಾಬಾನು ಅಳಲು ತೋಡಿಕೊಂಡಿದ್ದಾರೆ. 

ಇನ್ನುಯ ಚನ್ನಗಿರಿಯಲ್ಲಿ ಯಾವುದೇ ಮಟ್ಕಾ ದಂಧೆ (Matka Gang) ಇಲ್ಲ ಎಂದು ‘ಕೈ’ ಶಾಸಕ ಹೇಳಿಕೆ ನೀಡಿದ್ದಾರೆ. ಆದರೆ ಈ ಹಿಂದೆ ಆದಿಲ್ ಮೇಲೆಯೇ 3 ಬಾರಿ ಮಟ್ಕಾ ಕೇಸ್ ದಾಖಲಾಗಿದೆ. ಆದಿಲ್ ಸಾವಿನ ಬಳಿಕ ಚನ್ನಗಿರಿಯಲ್ಲಿ ಮಟ್ಕಾ ದಂಧೆ ಗುಟ್ಟು ರಟ್ಟಾಗಿದ್ದು,  ಮಟ್ಕಾ ದಂಧೆಗೆ ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್‌ ತಲೆದಂಡವಾಗಿದ್ದು, ಮಟ್ಕಾ ವಿರುದ್ಧ ಚನ್ನಗಿರಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಕರ್ನಾಟಕ ಬಿಹಾರ ಆಗುತ್ತಿದೆ ಎಂದ ವಿಜಯೇಂದ್ರ: 27 ಜನರ ಸಾವಿಗೆ ಹೊಣೆ ಯಾರು ಎಂದ ಪರಮೇಶ್ವರ್‌?

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!