ಆದಿಲ್‌ ಸಾವು ಪ್ರಕರಣ: ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ ಎಂದ ಪತ್ನಿ!

ಆದಿಲ್‌ ಸಾವು ಪ್ರಕರಣ: ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ ಎಂದ ಪತ್ನಿ!

Published : May 26, 2024, 05:37 PM ISTUpdated : May 26, 2024, 05:43 PM IST

ಚನ್ನಗಿರಿಯಲ್ಲಿ ಲಾಕಪ್ ಡೆತ್ ಆರೋಪ ಸಂಬಂಧ ಹೊಸ ವಿಷಯ ಬೆಳಕಿಗೆ ಬಂದಿದೆ. ಈ ಮೂಲಕ ಚನ್ನಗಿರಿಯಲ್ಲಿ ಬೇರು ಬಿಟ್ಟಿದಿಯಾ ಮಟ್ಕಾ ದಂಧೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಯಾಕೆಂದರೆ ಆದಿಲ್ ಸಾವಿನ ಸುತ್ತಾ ಮಟ್ಕಾ ದಂಧೆಯ ಜಾಡು ಕಂಡುಬರುತ್ತಿದೆ. ಆದಿಲ್ ಮಟ್ಕಾ ದಂಧೆ ಬಗ್ಗೆ ಪತ್ನಿ ಹೀನಾಬಾನು ಒಪ್ಪಿಕೊಂಡಿದ್ದಾರೆ.  

ಚನ್ನಗಿರಿಯಲ್ಲಿ(Channagiri) ಲಾಕಪ್ ಡೆತ್ (Lockup Death) ಆರೋಪ ಸಂಬಂಧ ಇದೀಗ ಚನ್ನಗಿರಿ ಧಗಧಗ ಉರಿಯುತ್ತಿದೆ. ಅಲ್ಲದೆ ಈ ವೇಳೆ ಚನ್ನಗಿರಿಯಲ್ಲಿ ಬೇರು ಬಿಟ್ಟಿದಿಯಾ ಮಟ್ಕಾ ದಂಧೆ ಎನ್ನುವ ಪ್ರಶ್ನೆ ಕಾಡತೊಡಗಿದೆ. ಯಾಕೆಂದರೆ ಆದಿಲ್ (Adil) ಸಾವಿನ ಸುತ್ತಾ ಮಟ್ಕಾ ದಂಧೆಯ ಜಾಡು ಕಂಡುಬರುತ್ತಿದೆ. ಆತನ ಸಾವಿಗೆ ಮಟ್ಕಾ ದಂಧೆಯೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಮೂಡಿದ್ದು, ಆದಿಲ್ ಮಟ್ಕಾ ದಂಧೆ ಬಗ್ಗೆ ಪತ್ನಿ ಹೀನಾಬಾನು ಒಪ್ಪಿಕೊಂಡಿದ್ದಾರೆ. ಅಲ್ಲದೆ  ಚನ್ನಗಿರಿ ಪೊಲೀಸರಿಗೆ ಮಟ್ಕಾ ಕಮಿಷನ್‌ನಲ್ಲಿ ಪಾಲನ್ನೂ ಸಹ ನೀಡಲಾಗುತ್ತಿತ್ತಂತೆ. ನನ್ನ ಗಂಡ ಲೋಕಲ್ ಪೊಲೀಸರಿಗೆ ಪ್ರತಿ ತಿಂಗಳು ಮಾಮೂಲು ನೀಡ್ತಿದ್ದ, ಈ ತಿಂಗಳು ಮಾಮೂಲು ನೀಡಿಲ್ಲ ಎಂದು ಕರೆದುಕೊಂಡು ಹೋಗಿದ್ರು, ಆದ್ರೆ ನನ್ನ ಗಂಡನನ್ನೇ ಕೊಂದು ಬಿಟ್ಟಿದ್ದಾರೆ ಎಂದು ಹೀನಾಬಾನು ಅಳಲು ತೋಡಿಕೊಂಡಿದ್ದಾರೆ. 

ಇನ್ನುಯ ಚನ್ನಗಿರಿಯಲ್ಲಿ ಯಾವುದೇ ಮಟ್ಕಾ ದಂಧೆ (Matka Gang) ಇಲ್ಲ ಎಂದು ‘ಕೈ’ ಶಾಸಕ ಹೇಳಿಕೆ ನೀಡಿದ್ದಾರೆ. ಆದರೆ ಈ ಹಿಂದೆ ಆದಿಲ್ ಮೇಲೆಯೇ 3 ಬಾರಿ ಮಟ್ಕಾ ಕೇಸ್ ದಾಖಲಾಗಿದೆ. ಆದಿಲ್ ಸಾವಿನ ಬಳಿಕ ಚನ್ನಗಿರಿಯಲ್ಲಿ ಮಟ್ಕಾ ದಂಧೆ ಗುಟ್ಟು ರಟ್ಟಾಗಿದ್ದು,  ಮಟ್ಕಾ ದಂಧೆಗೆ ಡಿವೈಎಸ್‌ಪಿ, ಸರ್ಕಲ್ ಇನ್‌ಸ್ಪೆಕ್ಟರ್‌ ತಲೆದಂಡವಾಗಿದ್ದು, ಮಟ್ಕಾ ವಿರುದ್ಧ ಚನ್ನಗಿರಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಇದನ್ನೂ ವೀಕ್ಷಿಸಿ:  ಕರ್ನಾಟಕ ಬಿಹಾರ ಆಗುತ್ತಿದೆ ಎಂದ ವಿಜಯೇಂದ್ರ: 27 ಜನರ ಸಾವಿಗೆ ಹೊಣೆ ಯಾರು ಎಂದ ಪರಮೇಶ್ವರ್‌?

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!