ಸ್ಫೋಟಕ ದಾಖಲೆಯೊಂದಿಗೆ ಮತ್ತೊಂದು ಹಗರಣ ಬಯಲು: ನಾಗೇಂದ್ರ, ದದ್ದಲ್ ಆಯ್ತು? ಮುಂದೆ ಯಾರು ಅಂತೀರಾ?

ಸ್ಫೋಟಕ ದಾಖಲೆಯೊಂದಿಗೆ ಮತ್ತೊಂದು ಹಗರಣ ಬಯಲು: ನಾಗೇಂದ್ರ, ದದ್ದಲ್ ಆಯ್ತು? ಮುಂದೆ ಯಾರು ಅಂತೀರಾ?

Published : Jul 21, 2024, 01:24 PM ISTUpdated : Jul 21, 2024, 02:06 PM IST

ಎಂಎಲ್ಎ ರಕ್ಷಣೆಗೆ ನಿಂತೀದಿಯಾ ಸಿದ್ದರಾಮಯ್ಯ ಸರ್ಕಾರ..? 
ತನಿಖೆಗೆ ಗ್ರೀನ್ ಸಿಗ್ನಲ್ ಕೊಟ್ರೆ ಅರೆಸ್ಟ್ ಆಗ್ತಾರಾ ಎಂಎಲ್ಎ..?
ನಾಲ್ಕು ತಿಂಗಳಾದರೂ ಅನುಮತಿ ಕೊಡದ ರಾಜ್ಯ ಸರ್ಕಾರ..?  

ಕಾಂಗ್ರೆಸ್‌ ಸರ್ಕಾರದ (Congress government) ಮತ್ತೊಬ್ಬ ಶಾಸಕರೊಬ್ಬರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ. ಸ್ಪೋಟಕ ದಾಖಲೆಗಳೊಂದಿಗೆ ಸುದ್ದಿ ಬ್ರೇಕ್‌ ಮಾಡಲಾಗಿದೆ. ಕೋಮುಲ್ ಸಂಸ್ಥೆಯಲ್ಲಿ(Komul hiring scam) ನಡೆದ ಅತಿದೊಡ್ಡ ಭ್ರಷ್ಟಚಾರ ಇದಾಗಿದೆ. ಮಾಲೂರು ಶಾಸಕ ಕೆ.ವೈ. ನಂಜೇಗೌಡರ (KY Nanjegowda) ಮೇಲಿದೆ ಗಂಭೀರ ಆರೋಪ ಕೇಳಿಬಂದಿದೆ. 75 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ನಡೆದಿದೆ ಬಿಗ್ ಗೋಲ್ ಮಾಲ್ ನಡೆದಿದೆ. ಕೋಟಿ ಕೋಟಿ ಹಣ ಪಡೆದು ಅನರ್ಹರಿಗೆ ನೇಮಕಾತಿ ಕೊಟ್ಟ ಆರೋಪ ಕೇಳಿಬಂದಿದೆ. ಕೇಂದ್ರದ ತನಿಖಾ ಸಂಸ್ಥೆಗಳೇ ಬಯಲು ಪ್ರಕರಣವನ್ನು ಮಾಡಿವೆ. ಅಕ್ರಮ ಭೂ ಮಂಜೂರಾತಿ ಪ್ರಕರಣದಲ್ಲಿ ದಾಳಿ ಮಾಡಿದ್ದ ಇಡಿ, ಶಾಸಕ ನಂಜೇಗೌಡ ಸೇರಿ ಹಲವರ ನಿವಾಸದ ಮೇಲೆ ದಾಳಿ ಮಾಡಿದೆ. ಇಡಿ ದಾಳಿ ವೇಳೆ ಕೋಮುಲ್ ನೇಮಕಾತಿಯ ಹಗರಣ ಪತ್ತೆಯಾಗಿದ್ದು, ಅನರ್ಹರ ನೇಮಕಾತಿ ಬಗ್ಗೆ ಸ್ಪಷ್ಟ ದಾಖಲೆಗಳು ಇಡಿಗೆ ಲಭ್ಯವಾಗಿವೆ. ನೇಮಕಾತಿ ಹಗರಣದಲ್ಲಿ ಹಲವರು ಹಣ ಪಡೆದ ಬಗ್ಗೆ ಮಾಹಿತಿ ಇದೆ. ದಾಳಿಯಲ್ಲಿ ಪತ್ತೆಯಾದ ಅಂಶಗಳನ್ನ ಲೋಕಾಯುಕ್ತ ಗಮನಕ್ಕೆ ಇಡಿ ತಂದಿದೆ. ಲೋಕಾಯುಕ್ತ ಮಹಾನಿರ್ದೇಶಕರಿಗೆ ಇಡಿ ಅಧಿಕಾರಿಗಳು ಪತ್ರ ಬರೆದಿದ್ದು, ಮಾರ್ಚ್ 3- 2024 ರಂದು ಲೋಕಾಯುಕ್ತ(Lokayukta) ಸಂಸ್ಥೆಗೆ ಪತ್ರ ಬರೆಯಲಾಗಿದೆ.  ಇಡಿ ವರದಿ ಆಧರಿಸಿ ತನಿಖೆ ಮಾಡಲು ರಾಜ್ಯ ಸರ್ಕಾರದ ನಿರ್ದೇಶನವನ್ನು ಲೋಕಾಯುಕ್ತ ಸಂಸ್ಥೆ ಕೋರಿದೆ. ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ಎಫ್ಎಆರ್ ದಾಖಲಿಸಿಕೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಶಾಸಕರು ಸೇರಿ ಸರ್ಕಾರಿ ಅಧಿಕಾರಿಗಳ ಭಾಗಿ ಹಿನ್ನೆಲೆ ತನಿಖೆಯ ಅನುಮತಿಗಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.

ಇದನ್ನೂ ವೀಕ್ಷಿಸಿ:  ದರ್ಶನ್‌ಗೆ ಮುಳುವಾಗುತ್ತಾ ಮತ್ತೊಂದು ಸಾಕ್ಷಿ? ಶವ ಬಿಸಾಕಿದ ಬಳಿಕ ಸ್ನೇಹಿತನ ಬಳಿ ಕಥೆ ಹೇಳಿದ್ದ ಆರೋಪಿ!

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ