Kalaburagi: ಹಾಡಹಗಲೇ ಬರ್ಬರ ಹತ್ಯೆ: ದೃಶ್ಯ ನೋಡಿದರೆ ಎದೆ ಝಲ್‌ ಎನ್ನುತ್ತೆ..!

Jan 7, 2023, 5:44 PM IST

ಕಲಬುರಗಿ (ಜ.07):  ಕಲಬುರಗಿ ನಗರದಲ್ಲಿ ಹಾಡ ಹಗಲೇ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ವ್ಯಕ್ತಿಯ ಬರ್ಬರ ಕೊಲೆ ಮಾಡಿರುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಈಗ ಸಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದು, ನೋಡುಗರ ಎದೆ ಝಲ್ಲೆನಿಸುತ್ತದೆ.

ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಭವಾನಿ ನಗರದ ರಿಂಗ್ ರಸ್ತೆಯಲ್ಲಿ ಜನವರಿ 4 ರಂದು ಕೊಲೆ ನಡೆದಿತ್ತು. ಚೆನ್ನವೀರ ನಗರದ ಪ್ರಶಾಂತ್ ಕುಂಬಾರ್ ಮೃತ ದುರ್ದೈವಿ ಆಗಿದ್ದರೆ, ಅವರನ್ನು ಇದೇ ಚೆನ್ನವೀರ ನಗರದ ನಿವಾಸಿ ಮಂಜುನಾಥ ಸ್ವಾಮಿ ಕೊಲೆ ಮಾಡಿದ್ದನು. ಹಾಡಹಗಲೇ ಜನನಿಬಿಡ ಪ್ರದೇಶದಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕೋ ವಿಡಿಯೋ ಮೊಬೈಲ್ ಕ್ಯಾಮಾರದಲ್ಲಿ ರೆಕಾರ್ಡ್ ಆಗಿತ್ತು. ಸದ್ಯ ಮಂಜುನಾಥ ಸ್ವಾಮಿಯನ್ನು ಪೊಲೀಸರು ಬಂಧಿಸಿದ್ದಾರೆ.  

ಪೊಲೀಸರ ಫೈರಿಂಗ್‌: ಮಂಜುನಾಥ್ ಸ್ವಾಮಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಮೇಲೆ ಪೊಲೀಸರು ಫೈರಿಂಗ್ ನಡೆಸಿದ್ದರು. ನಂತರ ಕಾಲಿಗೆ ಗುಂಡೇಟು ತಿಂದು ಗಾಯಗೊಂಡ ಬಳಿಕ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದಾನೆ. ಗಾಯಾಳು ಆರೋಪಿ ಮಂಜುನಾಥ್‌ ಸ್ವಾಮಿಯನ್ನು ಪೊಲೀಸರು ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾನೆ. ಕಲಬುರಗಿ ನಗರದ ಚೌಕ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣ ನಡೆದಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.