Crime News: ಹೆಂಡತಿಯನ್ನ ಕೊಂದು..ಮಗುವನ್ನ ಎಸೆದು ಮನೆಗೆ ಬಂದಿದ್ದ..! ಹುಟ್ಟಿಸಿದ ಅಪ್ಪನಿಗೆ ಮಗು ಬೇಡವಾಗಿದ್ದೇಕೆ ?

Crime News: ಹೆಂಡತಿಯನ್ನ ಕೊಂದು..ಮಗುವನ್ನ ಎಸೆದು ಮನೆಗೆ ಬಂದಿದ್ದ..! ಹುಟ್ಟಿಸಿದ ಅಪ್ಪನಿಗೆ ಮಗು ಬೇಡವಾಗಿದ್ದೇಕೆ ?

Published : Apr 14, 2024, 05:54 PM IST

ಹೆಂಡತಿ ಮಕ್ಕಳಿದ್ದರೂ ಮತ್ತೊಬ್ಬಳ ಸಹವಾಸ ಮಾಡಿದ್ದ..!
ಅವನಿಂದ ಮಗು ಪಡೆದವಳು ಮದುವೆಯಾಗು ಅಂದಿದ್ದಳು.!
ಪ್ರೀತಿಸಿದವಳಿಗೆ ಬೆಂಕಿ ಇಟ್ಟು ಮಗುವನ್ನ ಎಸೆದು ಹೋಗಿದ್ದ..!

ಅವಳು ಬಡ ಕುಟುಂಬದ ಹೆಣ್ಣು ಮಗಳು. 10ನೇ ಕ್ಲಾಸ್ ಮುಗಿಸಿ ಕುಟುಂಬಕ್ಕೆ ನೆರವಾಗಲಿ ಅಂತ ಕೆಲಸಕ್ಕೆ ಸೇರಿದ್ದಳು. ಆವತ್ತೊಂದು ದಿನ ಕೆಲಸಕ್ಕೆ ಅಂತ ಮನೆಯಿಂದ ಹೋದವಳು ವಾಪಸ್ ಬರಲೇ ಇಲ್ಲ. ಎಲ್ಲಿ ಹುಡುಕಾಡಿದ್ರೂ ಅವಳ ಸುಳಿವು ಸಿಗದಿದ್ದಾಗ ಮಿಸ್ಸಿಂಗ್(Missing) ಕಂಪ್ಲೆಂಟ್ ಕೊಟ್ಟರು. ಆದ್ರೂ ಆ ಯುವತಿ 2 ತಿಂಗಳಾದ್ರೂ ಪತ್ತೆಯಾಗಲೇ ಇಲ್ಲ. ಆದ್ರೆ 2 ತಿಂಗಳ ನಂತರ ಆಕೆ ಹೆಣವಾಗಿ(Murder) ಸಿಕ್ಕಿದ್ಲು. ಆಕೆಯನ್ನ ಯಾರೋ ಉಸಿರುಗಟ್ಟಿಸಿ ಕೊಂದು ನಂತರ ಪೆಟ್ರೋಲ್ ಹಾಕಿ ಸುಟ್ಟಿಬಿಟ್ಟಿದ್ದರು. ಹುಟ್ಟಿಸಿದವನೇ ಒಂದು ತಿಂಗಳ ಹಸುಗೂಸನ್ನ ಎಸೆದಿದ್ದ ಹೆಂಡತಿಯನ್ನ ಸುಟ್ಟಿದ್ದಾನೆ ಅಂದ್ರೆ ಯಾವುದೇ ಆಶ್ಚರ್ಯವಿಲ್ಲ. ಒಟ್ಟಿಗೆ ಕೆಲಸ ಮಾಡುವಾಗ ಪರಿಚಯವಾದವರು ಪ್ರೀತಿಯಲ್ಲಿ ಬಿದ್ದಿದ್ರು. ಆದ್ರೆ ಅವನಿಗೆ ಅದಾಗಲೇ ಮದುವೆಯಾಗಿ ಮಗು ಕೂಡ ಇತ್ತು. ಆದ್ರೂ ರುಕ್ಸಾನಾಳನ್ನ ತಲೆಕೆಡಿಸಿ ಅವಳನ್ನ ಗರ್ಭಿಣಿ ಮಾಡಿದ್ದ. 8 ತಿಂಗಳ ಗರ್ಭಿಣಿಯಾದ್ರೂ ರುಕ್ಸಾನಾ ಕುಟುಂಬಕ್ಕೆ ವಿಷಯವೇ ಗೊತ್ತಿರಲಿಲ್ಲ. ಆದರೆ ಇನ್ನೇನು ಡೆಲಿವರಿ ಡೇಟ್ ಹತ್ತಿರ ಬಂತೋ ಆಕೆ ಮದುವೆಯಾಗಲು ದುಂಬಾಲು ಬಿದ್ದಳು. ಬೇರೆ ದಾರಿ ಕಾಣದೆ ಆತ ದೂರದ ಊರಲ್ಲಿ ಮನೆ ಮಾಡಿ ಇಟ್ಟಿದ್ದ. ಆದ್ರೆ ಮಗು(Child) ಆದ ನಂತರ ರುಕ್ಸಾನ ಅವನಿಗೆ ಬೇಡವಾದಳು. ಅವಳನ್ನ ಮುಗಿಸೋ ನಿರ್ಧಾರ ಮಾಡಿದ. ಬೆಂಗಳೂರಿಗೆ(Bengaluru) ಹೋಗೋಣ ಅಂತ ಹೇಳಿ ಮಾರ್ಗ ಮಧ್ಯೆಯೇ ಅವಳ ಕಥೆ ಮುಗಿಸಿ ಮಗುವನ್ನೂ ಎಸೆದು ಎಸ್ಕೇಪ್ ಆಗಿದ್ದ. ಆದ್ರೆ ಇದ್ಯಾವುದೂ ಗೊತ್ತಿರದೇ ರಕ್ಸಾನಾ ಕುಟುಂಬದವರು ಮಿಸ್ಸಿಂಗ್ ಕೇಸ್ ದಾಖಲಿಸಿದ್ರು. ಆದ್ರೆ ಈಗ ಇದ್ದೊಬ್ಬಳನ್ನ ಕಳೆದುಕೊಂಡು ಕಂಗಾಲಾಗಿದ್ದಾರೆ. ಮದುವೆಯಾದರೂ ಲವ್ ಮಾಡಿ ಹಿಂದೆ ಬಿದ್ದು ರುಕ್ಸಾನ ಹುಚ್ಚು ಪ್ರೀತಿಗೆ ಪ್ರೀಯಕರಿನಿಂದ ಕೊಲೆಯಾಗಿದ್ದಾಳೆ. 

ಇದನ್ನೂ ವೀಕ್ಷಿಸಿ:  Sadananda Gowda on Vokkaliga: ಟೇಕನ್ ಫಾರ್ ಗ್ರ್ಯಾಂಟೆಡ್ ರೀತಿಯಲ್ಲಿ ಒಕ್ಕಲಿಗರನ್ನು ನಡೆಸಿಕೊಳ್ತಿದ್ದಾರೆ: ಸದಾನಂದಗೌಡ

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more