Chamarajanagar Crime: ಕರಿಮಣಿ ಮಾಲೀಕ ನೀನಲ್ಲ..! ಪತ್ನಿ ರೀಲ್ಸ್ ಹುಚ್ಚಿಗೆ ನೇಣಿಗೆ ಶರಣಾದ ಪತಿ..!

Chamarajanagar Crime: ಕರಿಮಣಿ ಮಾಲೀಕ ನೀನಲ್ಲ..! ಪತ್ನಿ ರೀಲ್ಸ್ ಹುಚ್ಚಿಗೆ ನೇಣಿಗೆ ಶರಣಾದ ಪತಿ..!

Published : Feb 17, 2024, 06:15 PM IST

ಚಾಮರಾಜನಗರದಲ್ಲಿ ಪತ್ನಿಯ ರೀಲ್ಸ್‌ ಹುಚ್ಚಿಗೆ ಪತಿ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗ್ತಿದೆ.
 

ಈಗೇನಿದ್ರೂ ಸೋಷಿಯಲ್ ಮೀಡಿಯಾ ಜಮಾನ. ಮನುಷ್ಯ ಅಪ್ ಡೇಟ್ ಆಗ್ತಾ ಇದ್ದಂತೆ ತಂತ್ರಜ್ಞಾನ ಕೂಡ ಅಪ್ ಡೇಟ್ ಆಗ್ತಾನೆ ಇದೆ. ಉಂಡ್ರು, ತಿಂದ್ರೂ ಏನ್ ಮಾಡಿದ್ರು ಧೀಡಿರ್ ಅಂತ ಸೋಷಿಯಲ್ ಮೀಡಿಯಾದಲ್ಲಿ(Social Media) ಶೇರ್ ಮಾಡ್ತಾರೆ ಈಗಿನ್ ಮಂದಿ. ಈ ಸೋಷಿಯಲ್ ಮೀಡಿಯಾ ಟೈಮ್ ಪಾಸ್‌ಗೆ ಎಂಜಾಯ್ ಮೆಂಟ್‌ಗೆ ಇಟ್ಕೊಂಡ್ರೆ ಓಕೆ. ಆದ್ರೆ ಅತಿರೇಕ ಆದ್ರೆ ದುರಂತಗಳೇ ಸೃಷ್ಟಿ ಆಗ್ತಾವೆ. ಓ ನಲ್ಲ ನೀನಲ್ಲ ಕರಿಮಣಿ ಮಾಲೀಕ ನೀನಲ್ಲ.. ಅಬ್ಬಬ್ಬಾ ಈ ಸಾಂಗ್ ಇತ್ತೀಚೆಗೆ ದೊಡ್ಡ ಟ್ರೆಂಡ್ ಅನ್ನೇ ಸೃಷ್ಟಿ ಮಾಡಿದೆ. ಯಾರ ಮೊಬೈಲ್ ನೋಡಿದ್ರೂ ಇದೆ, ಯಾವ ಸೋಷಿಯಲ್ ಮೀಡಿಯಾ ನೋಡುದ್ರು ಇದೆ. ಕಳೆದ 25 ವರ್ಷದ ಹಿಂದೆ ರಿಲೀಸ್ ಆಗಿದ್ದ ಉಪೇಂದ್ರ ಸಿನಿಮಾದ ಈ ಹಾಡು ಇಂದು ಒಂದು ಜೀವವನ್ನೇ ತೆಗೆದು ಬಿಟ್ಟಿದೆ. ಕೇವಲ ಕರಿಮಣಿ ಮಾಲೀಕ  ನೀನಲ್ಲ ರೀಲ್ಸ್ ಗೆ(Reels) ಬೇಸತ್ತು ಕುಮಾರ ಆತ್ಮಹತ್ಯೆ(Suicide) ಮಾಡ್ಕೊಂಡ್ನಾ ಅನ್ನೋದನ್ನ ಪೊಲೀಸರಿಗೂ(Police) ನಂಬೋಕೆ ಆಗ್ತಿಲ್ಲ. ರೀಲ್ಸ್ ಅಲ್ಲದೇ ಬೇರೆ ಬೇರೆ ಕಾರಣಗಳು ಸಹ ಇದ್ವು.  ಕುಮಾರನ ಸಾವಿಗೆ ಆತನ ಹೆಂಡತಿ ಹೇಳೋದೆ ಬೇರೆ. ಸಿಕ್ಕಾಪಟ್ಟೆ ಸಾಲ ಮಾಡ್ಕೊಂಡಿದ್ದ. ವಿಪರೀತಿ ಕುಡಿತದ ಚಟ ಸಹ ಇತ್ತು. ಅಲ್ಲದೆ ಇಸ್ಪೀಟ್ ನಲ್ಲೂ ಸೋತಿದ್ದ.. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡ್ಕೊಂಡಿರ್ಬೋದು ಅಂತಾಳೆ. ಈ ಕುಮಾರ ತನ್ನ ಪತ್ನಿ ರೂಪಾಳ ರೀಲ್ಸ್ ನಿಂದ ಸಾವಿಗೀಡಾದ್ನೋ.. ಅಥವಾ ಸಾಲಬಾಧೆಯಿಂದ ಸತ್ನೋ ಅನ್ನೋದನ್ನು ಪೊಲೀಸರು(Police) ತನಿಖೆ ಮಾಡ್ತಾರೆ. ಆದ್ರೆ ಅತಿಯಾದ್ರೆ ಅಮೃತ ಕೂಡ ವಿಷವಾಗುತ್ತೆ ಅನ್ನೋದಕ್ಕೆ ಇವತ್ತಿನ್ ಸ್ಟೋರಿಗೆ ಸಾಕ್ಷಿ.

ಇದನ್ನೂ ವೀಕ್ಷಿಸಿ:  ಈಗ ಕಣಿವೆ ರಾಜ್ಯದಲ್ಲೂ ಮೈತ್ರಿ ಬಿರುಕು..! I.N.D.I.A ಕ್ಕೆ ಫಾರೂಕ್ ವಿದಾಯ..!

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more