ಇರೋಕೆ ಮನೆಯಿಲ್ಲ, ಉಡಲು ಬಟ್ಟೆಯೂ ಇಲ್ಲ: ಬದುಕಿಗೆ ಕೊಳ್ಳಿಯಿಟ್ಟ ಕೆಮಿಕಲ್ ಫ್ಯಾಕ್ಟರಿ

Nov 12, 2020, 12:24 PM IST

ಬೆಂಗಳೂರು (ನ. 12): ಹೊಸಗುಡ್ಡಹಳ್ಳಿ ಕೆಮಿಕಲ್ ಫ್ಯಾಕ್ಟರಿ ಗೋದಾಮಿನ ಅಗ್ನಿ ದುರಂತದಲ್ಲಿ ನೂರಾರು ಜನರ ಕನಸುಗಳು ಬೆಂದು ಹೋಗಿವೆ. ಬೆಂಕಿಯಲ್ಲಿ 40 ಲಕ್ಷಕ್ಕೂ ಅಧಿಕ ಮೌಲ್ಯದ ವಾಹನಗಳು ಭಸ್ಮವಾಗಿವೆ. ಟೆಂಪೋ ಕಳೆದುಕೊಂಡ ಶಂಭುಲಿಂಗ ಎನ್ನುವವರು ಮಾಲಿಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇನ್ನಷ್ಟು ಕೇಸ್‌ಗಳು ದಾಖಲಾಗುವ ಸಾಧ್ಯತೆ ಇದೆ. 

ಸಂಪುಟ ವಿಸ್ತರಣೆ ಕಸರತ್ತು: ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಮತ್ತೆ ನಿರಾಸೆ?

20 ಕ್ಕೂ ಹೆಚ್ಚು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣಗಳು ಭಸ್ಮವಾಗಿವೆ. ಇರಲು ಮನೆ ಇಲ್ಲ, ಉಡಲು ಬಟ್ಟೆಯಿಲ್ಲ.. ಎನ್ನುವ ಸ್ಥಿತಿಯಲ್ಲಿ ಅಲ್ಲಿನ ನಿವಾಸಿಗಳು.