ಮಗನ ರಕ್ಷಣೆ ಮಾಡಲು ನೀರಿಗೆ ಹಾರಿದ್ದ ಅಪ್ಪ, ತಂದೆ-ಮಗನ ಶವ ಪತ್ತೆ

Aug 4, 2022, 4:10 PM IST

ಕಲಬುರಗಿ, (ಆಗಸ್ಟ್ .04): ಸೊಪ್ಪು ತರಲು ಹೋಗಿ ನೀರುಪಾಲಾಗಿದ್ದ ತಂದೆ ಮಗನ ಶವ ಪತ್ತೆಯಾಗಿದೆ.  ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ಜಲಾಶಯದ ಮುಖ್ಯ ಕಾಲುವೆಗೆ ಬಿದ್ದಿದ್ದ ಅಪ್ಪ-ಮಗ. 

ಕಲಬುರಗಿಯಲ್ಲಿ ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ಮಹಿಳೆ, ಮುಂದುವರೆದ ಶೋಧ ಕಾರ್ಯ

ಸೊಪ್ಪು ತರಲು ಹೋಗಿದ್ದ ಸಂದರ್ಭದಲ್ಲಿ ಮಗ ಕಾಲು ಕಾಲುವೆಗೆ ಬಿದ್ದಿದ್ದಾನೆ. ಇದನ್ನು ನೋಡಿದ ತಂದೆ ಮಗನ ರಕ್ಷಣೆಗೆಂದು ಕಾಲುವೆಗೆ ಹಾರಿದ್ದಾನೆ. ಆದ್ರೆ, ನೀರಿನ ರಭಸಕ್ಕೆ ಇಬ್ಬರು ಕೊಚ್ಚಿಕೊಂಡು ಹೋಗಿದ್ದರು.