ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

Published : Apr 10, 2024, 04:31 PM IST

ಸ್ನೇಹಿತನಿಗೆ ಸಹಾಯ     ಮಾಡಿದ್ದೇ ತಪ್ಪಾಯ್ತು!
ಉಪಾಧ್ಯಕ್ಷನ ಕಷ್ಟಕ್ಕೆ ಅಧ್ಯಕ್ಷ ನೆರವಾಗಿದ್ದ..!
ಅವನ ಕಥೆ ಮುಗಿಸಿ ಹಂತಕರು ಎಸ್ಕೇಪ್..!
 

ಆತ ಹತ್ತೂರಿಗೆ ಬೇಕಾಗಿದ್ದ ವ್ಯಕ್ತಿ. ಕಾಂಗ್ರೆಸ್ ಮುಖಂಡ ಮೇಲಾಗಿ ಶಾಸಕರಾದ ಲಕ್ಷ್ಮಣ ಸವದಿ(Lakshmana Savadi) ಮತ್ತು ರಾಜು ಕಾಗೆ ಪರಮಾಪ್ತನ್ನಾಗಿದ್ದ. ಹೀಗಿದ್ದ ವ್ಯಕ್ತಿ ಆವತ್ತೊಂದು ದಿನ ತನ್ನೂರಿನಲ್ಲೇ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಸದಾ ಜನರ ಮಧ್ಯೆ ಇರುತ್ತಿದ್ದವನನ್ನ ವಾಚ್ ಮಾಡಿ ಒಂಟಿಯಾಗಿದ್ದಾಗಲೇ ಅವನ ಕಥೆ ಮುಗಿಸಿ ಹಂತಕರು ಎಸ್ಕೇಪ್ ಆಗಿದ್ದರು. ಇನ್ನೂ ಈ ಕೇಸ್ನ ತನಿಖೆ ನಡೆಸಿದ ಪೊಲೀಸರಿಗೆ(Police) ಹಂತಕರು ಒಂದೇ ಒಂದು ಸುಳಿವನ್ನ ಬಿಟ್ಟಿರಿಲ್ಲ. ಆದರೆ ಬೆಂಬಿಡದ ಪೊಲೀಸರು ಕೊಲೆಯಾಗಿ ಮೂರೇ ದಿನದಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ವಿಠ್ಠಲ್ ಪೂಜಾರಿ ತಾನೇ ಅಣ್ಣಪ್ಪನನ್ನ ಕೊಂದಿದ್ದು ಅಂತ ಒಪ್ಪಿಕೊಂಡಿದ್ದ. ಇನ್ನೂ ಯಾಕೆ ಕಂದೆ ಅಂತ ಕೇಳಿದಾಗ ಆತ ಹೇಳಿದ್ದು 20 ಗುಂಟೆ ಜಮೀನಿನ ವಿಚಾರ. ಆದ್ರೆ ಆ 20 ಗುಂಟೆ ಜಮೀನಿಗೂ(Land) ಅಣ್ಣಪ್ಪನಿಗೂ ಯಾವುದೇ ಸಂಬಂಧವಿಲ್ಲ. ಆದ್ರೂ ಅಲ್ಲಿ ಅಣ್ಣಪ್ಪ ಬಲಿಯಾಗಿದ್ದ. ಉಪಾಧ್ಯಕ್ಷನಿಗೆ ಸಹಾಯ ಮಾಡಲು ಹೋಗಿ ಅಧ್ಯಕ್ಷ ಕೊಲೆಯಾಗಿ ಹೋಗಿದ್ದ. ವರ್ಷಗಳ ಹಿಂದೆ ಅಪಾಧ್ಯಕ್ಷ 20 ಗಂಟೆ ಜಮೀನನ್ನ ವಿಠ್ಠಲ್ ಪೂಜಾರಿ ಬಳಿ 9 ಲಕ್ಷ ಕೊಟ್ಟು ಖರೀಧಿಸಿದ್ದ. ಆದ್ರೆ ದುಡ್ಡ ಪಡೆದ ವಿಠ್ಠಲಾ ಜಮೀನು ಮಾತ್ರ ಕೊಟ್ಟಿರಲಿಲ್ಲ. ಕೇಳೋಕೆ ಹೋದ್ರೆ ಆವಾಜ್ ಹಾಕ್ತಿದ್ದ. ಇದೇ ಜಗಳದ ಕಾರಣ ಒಂದೆರಡು ಕೇಸ್ಗಳೂ ಆಗಿದ್ವು. ಆದ್ರೆ ಒಂದು ದಿನ ಉಪಾರ್ಧಯಕ್ಷ, ಅಧ್ಯಕ್ಷ ಅಣ್ಣಪನ ಬಳಿ ಸಮಸ್ಯೆಯನ್ನ ಹೇಳಿಕೊಂಡಿದ್ದ. ಸ್ನೇಹಿತನಿಗಾಗಿ ಅಣ್ಣಪ್ಪ ಆ ಸಮಸ್ಯೆಯನ್ನ ಬಗೆ ಹರಿಸಿದ್ದ ವಿಠ್ಠಲ್ನಿಂದ ಜಮೀನನ್ನ ಬಿಡಿಸಿಕೊಟ್ಟಿದ್ದ. ಇದೇ ದ್ವೆಷವನ್ನ ಇಟ್ಟುಕೊಂಡಿದ್ದ ವಿಠ್ಠಲ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜೊತೆಗೂಡಿ ಸ್ಕೆಚ್ ರೆಡಿ ಮಾಡಿಯೇಬಿಟ್ಟ. ಊರ ಜನರಿಗೆ ಒಳ್ಳೆಯದು ಮಾಡ್ತಾ ನೊಂದವರು ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ್ತಿದ್ದ ಅಣ್ಣಪ್ಪ ಇಂದು ಬೇರೆಯವರ ಸಲುವಾಗಿ ಕೊಲೆಯಾಗಿ ಹೋಗಿದ್ದಾನೆ.

ಇದನ್ನೂ ವೀಕ್ಷಿಸಿ:  Loksabha Eection 2024: ಬೆಳಗಾವಿ, ಉತ್ತರಕನ್ನಡದಲ್ಲಿ MES ಟೆನ್ಷನ್..! ಎರಡೂ ಪಕ್ಷಗಳಿಗೆ ಶುರು ಮತ ವಿಭಜನೆ ಸಂಕಷ್ಟ!

26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
Read more