ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

ಕಾಂಗ್ರೆಸ್ ಮುಖಂಡ ಲಕ್ಷ್ಮಣ್ ಸವದಿ ಆಪ್ತನ ಮರ್ಡರ್..! ಎಲೆಕ್ಷನ್ ಹೊತ್ತಲ್ಲಾದ ಕೊಲೆ ರಹಸ್ಯವೇನು..?

Published : Apr 10, 2024, 04:31 PM IST

ಸ್ನೇಹಿತನಿಗೆ ಸಹಾಯ     ಮಾಡಿದ್ದೇ ತಪ್ಪಾಯ್ತು!
ಉಪಾಧ್ಯಕ್ಷನ ಕಷ್ಟಕ್ಕೆ ಅಧ್ಯಕ್ಷ ನೆರವಾಗಿದ್ದ..!
ಅವನ ಕಥೆ ಮುಗಿಸಿ ಹಂತಕರು ಎಸ್ಕೇಪ್..!
 

ಆತ ಹತ್ತೂರಿಗೆ ಬೇಕಾಗಿದ್ದ ವ್ಯಕ್ತಿ. ಕಾಂಗ್ರೆಸ್ ಮುಖಂಡ ಮೇಲಾಗಿ ಶಾಸಕರಾದ ಲಕ್ಷ್ಮಣ ಸವದಿ(Lakshmana Savadi) ಮತ್ತು ರಾಜು ಕಾಗೆ ಪರಮಾಪ್ತನ್ನಾಗಿದ್ದ. ಹೀಗಿದ್ದ ವ್ಯಕ್ತಿ ಆವತ್ತೊಂದು ದಿನ ತನ್ನೂರಿನಲ್ಲೇ ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದ. ಸದಾ ಜನರ ಮಧ್ಯೆ ಇರುತ್ತಿದ್ದವನನ್ನ ವಾಚ್ ಮಾಡಿ ಒಂಟಿಯಾಗಿದ್ದಾಗಲೇ ಅವನ ಕಥೆ ಮುಗಿಸಿ ಹಂತಕರು ಎಸ್ಕೇಪ್ ಆಗಿದ್ದರು. ಇನ್ನೂ ಈ ಕೇಸ್ನ ತನಿಖೆ ನಡೆಸಿದ ಪೊಲೀಸರಿಗೆ(Police) ಹಂತಕರು ಒಂದೇ ಒಂದು ಸುಳಿವನ್ನ ಬಿಟ್ಟಿರಿಲ್ಲ. ಆದರೆ ಬೆಂಬಿಡದ ಪೊಲೀಸರು ಕೊಲೆಯಾಗಿ ಮೂರೇ ದಿನದಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ವಿಠ್ಠಲ್ ಪೂಜಾರಿ ತಾನೇ ಅಣ್ಣಪ್ಪನನ್ನ ಕೊಂದಿದ್ದು ಅಂತ ಒಪ್ಪಿಕೊಂಡಿದ್ದ. ಇನ್ನೂ ಯಾಕೆ ಕಂದೆ ಅಂತ ಕೇಳಿದಾಗ ಆತ ಹೇಳಿದ್ದು 20 ಗುಂಟೆ ಜಮೀನಿನ ವಿಚಾರ. ಆದ್ರೆ ಆ 20 ಗುಂಟೆ ಜಮೀನಿಗೂ(Land) ಅಣ್ಣಪ್ಪನಿಗೂ ಯಾವುದೇ ಸಂಬಂಧವಿಲ್ಲ. ಆದ್ರೂ ಅಲ್ಲಿ ಅಣ್ಣಪ್ಪ ಬಲಿಯಾಗಿದ್ದ. ಉಪಾಧ್ಯಕ್ಷನಿಗೆ ಸಹಾಯ ಮಾಡಲು ಹೋಗಿ ಅಧ್ಯಕ್ಷ ಕೊಲೆಯಾಗಿ ಹೋಗಿದ್ದ. ವರ್ಷಗಳ ಹಿಂದೆ ಅಪಾಧ್ಯಕ್ಷ 20 ಗಂಟೆ ಜಮೀನನ್ನ ವಿಠ್ಠಲ್ ಪೂಜಾರಿ ಬಳಿ 9 ಲಕ್ಷ ಕೊಟ್ಟು ಖರೀಧಿಸಿದ್ದ. ಆದ್ರೆ ದುಡ್ಡ ಪಡೆದ ವಿಠ್ಠಲಾ ಜಮೀನು ಮಾತ್ರ ಕೊಟ್ಟಿರಲಿಲ್ಲ. ಕೇಳೋಕೆ ಹೋದ್ರೆ ಆವಾಜ್ ಹಾಕ್ತಿದ್ದ. ಇದೇ ಜಗಳದ ಕಾರಣ ಒಂದೆರಡು ಕೇಸ್ಗಳೂ ಆಗಿದ್ವು. ಆದ್ರೆ ಒಂದು ದಿನ ಉಪಾರ್ಧಯಕ್ಷ, ಅಧ್ಯಕ್ಷ ಅಣ್ಣಪನ ಬಳಿ ಸಮಸ್ಯೆಯನ್ನ ಹೇಳಿಕೊಂಡಿದ್ದ. ಸ್ನೇಹಿತನಿಗಾಗಿ ಅಣ್ಣಪ್ಪ ಆ ಸಮಸ್ಯೆಯನ್ನ ಬಗೆ ಹರಿಸಿದ್ದ ವಿಠ್ಠಲ್ನಿಂದ ಜಮೀನನ್ನ ಬಿಡಿಸಿಕೊಟ್ಟಿದ್ದ. ಇದೇ ದ್ವೆಷವನ್ನ ಇಟ್ಟುಕೊಂಡಿದ್ದ ವಿಠ್ಠಲ ತನ್ನ ಸಂಬಂಧಿಕರು ಮತ್ತು ಸ್ನೇಹಿತರ ಜೊತೆಗೂಡಿ ಸ್ಕೆಚ್ ರೆಡಿ ಮಾಡಿಯೇಬಿಟ್ಟ. ಊರ ಜನರಿಗೆ ಒಳ್ಳೆಯದು ಮಾಡ್ತಾ ನೊಂದವರು ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿ ಎತ್ತಿ ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡ್ತಿದ್ದ ಅಣ್ಣಪ್ಪ ಇಂದು ಬೇರೆಯವರ ಸಲುವಾಗಿ ಕೊಲೆಯಾಗಿ ಹೋಗಿದ್ದಾನೆ.

ಇದನ್ನೂ ವೀಕ್ಷಿಸಿ:  Loksabha Eection 2024: ಬೆಳಗಾವಿ, ಉತ್ತರಕನ್ನಡದಲ್ಲಿ MES ಟೆನ್ಷನ್..! ಎರಡೂ ಪಕ್ಷಗಳಿಗೆ ಶುರು ಮತ ವಿಭಜನೆ ಸಂಕಷ್ಟ!

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more