ವಾಲ್ಮೀಕಿ ನಿಗಮ ಅಧಿಕಾರಿ ಆತ್ಮಹತ್ಯೆ ಕೇಸ್‌: ಪ್ರಕರಣ ಸೂಕ್ಷ್ಮವಾಗಿ ಗಮನಿಸುತ್ತಿರುವ ಕಾಂಗ್ರೆಸ್‌ ಹೈಕಮಾಂಡ್‌!

Jun 1, 2024, 9:48 AM IST

ವಾಲ್ಮೀಕಿ ಅಭಿವೃದ್ಧಿ ನಿಗಮ ಅಧಿಕಾರಿ ಆತ್ಮಹತ್ಯೆ ಪ್ರಕರಣ(Valmiki Corporation officer suicide case) ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಈ ಪ್ರಕರಣವನ್ನು ಕಾಂಗ್ರೆಸ್‌ ಹೈಕಮಾಂಡ್‌(Congress Highcommand) ಗಂಭೀರವಾಗಿ ಪರಿಗಣಿಸಿದ್ದು, ಸೂಕ್ಷ್ಮವಾಗಿ ಗಮನಿಸುತ್ತಿದೆ. ಸಿಎಂ ಸಿದ್ದರಾಮಯ್ಯಗೆ(CM Siddaramaiah) ನಿರಂತರವಾಗಿ ಕೆಸಿ ವೇಣುಗೋಪಾಲ್(KC Venugopal)‌ ಕರೆ ಮಾಡಿ ಈ ಬಗ್ಗೆ ವಿಚಾರಿಸುತ್ತಿದ್ದಾರಂತೆ. ಅಲ್ಲದೇ ರಾಜ್ಯ ಸರ್ಕಾರದ ಜೊತೆ ನಿರಂತರವಾಗಿ ಸಂಪರ್ಕದಲ್ಲಿ ಹೈಕಮಾಂಡ್‌ ಇದೆ. ಪ್ರಕರಣದ ತನಿಖೆ ಸಾಗುತ್ತಿರುವ ಮಾರ್ಗದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಈ ಕೇಸ್‌ ಸಂಬಂಧ ಸಚಿವ ನಾಗೇಂದ್ರ ಮೇಲೆ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದು, ಪ್ರಕರಣ ಸಂಬಂಧ ಹೈದರಾಬಾದ್‌ಗೆ ಹೋಗಿ ಬರ್ತೆನೆ ಎಂದಿದ್ದ ಸಚಿವರಿಗೆ ಎಲ್ಲಿಗೂ ಬೇಡ ಸುಮ್ಮನೆ ಇರಿ ಎಂದು ಸಿಎಂ ಸೂಚಿಸಿದ್ದಾರಂತೆ. 

ಇದನ್ನೂ ವೀಕ್ಷಿಸಿ:  ಪ್ರಜ್ವಲ್‌ ಟ್ರಾವೆಲ್‌ ಹಿಸ್ಟರಿ ಕಲೆಹಾಕಿದ ಎಸ್‌ಐಟಿ ಅಧಿಕಾರಿಗಳು..ಹಂಗೇರಿಯಾದಿಂದ ವಿಡಿಯೋ ಮಾಡಿದ್ರಾ ಸಂಸದ?