ದೇವರ ದರ್ಶನಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅಟ್ಯಾಕ್: ಮಚ್ಚು ಬೀಸೋ ಮುಂಚೆ ಕಾನ್ಸಟೇಬಲ್‌ ಹಾಜರ್..!

ದೇವರ ದರ್ಶನಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅಟ್ಯಾಕ್: ಮಚ್ಚು ಬೀಸೋ ಮುಂಚೆ ಕಾನ್ಸಟೇಬಲ್‌ ಹಾಜರ್..!

Published : Aug 15, 2023, 01:00 PM IST

ಸ್ನೇಹಿತರಾಗಿದ್ದವರು ದುಡ್ಡಿಗಾಗಿ ವೈರಿಗಳಾದರು..!
ಅಟ್ಯಾಕ್ ಪ್ಲಾನ್ ಮಾಡಿದವನು ಸ್ನೇಹಿತನೇ..!
ಅವನ ಪ್ರಾಣ ಉಳಿಸಿದ್ದು ಪೊಲೀಸ್ ಪೇದೆ..!

ಆತ ಜೆಡಿಎಸ್ ಕಾರ್ಯಕರ್ತ, ಹೆಂಡತಿ ಪುರಸಭೆ ಸದಸ್ಯೆಯಾಗಿದ್ದಳು. ರಾಜಕೀಯ ಮೂಲಕ ಜನರ ಸೇವೆ ಮಾಡಿಕೊಂಡಿದ್ದ ಆತನ ಮೇಲೆ ಆವತ್ತೊಂದು ದಿನ ಡೆಡ್ಲಿ ಅಟ್ಯಾಕ್ ನಡೆದುಬಿಟ್ಟಿತ್ತು. ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೊರ ಬರ್ತಿದಂತೆ ಅವನ ಮೇಲೆ ಹಂತಕರ ಪಡೆ ಅಟ್ಯಾಕ್(Attack) ಮಾಡಿತ್ತು. ದೇವರಿಗೆ ಕೈ ಮುಗಿದ ಪರಿಣಾಮನೋ ಏನೋ ಆತ ಬದುಕುಳಿದುಬಿಟ್ಟ. ಇನ್ನೂ ಆತನ ಪ್ರಾಣ ಉಳಿಸಿದ್ದು ಒಬ್ಬ ಪೊಲೀಸ್ ಪೇದೆ. ನಂತರ ಹಲ್ಲೆಯ ತನಿಖೆ ನಡೆದ ಪೊಲೀಸರಿಗೆ ಅವನ ಬ್ಯುಸಿನೆಸ್ ಬಗ್ಗೆ ಒಂದೊಂದೇ ಮಾಹಿತಿಗಳು ಗೊತ್ತಾಗ್ತಾ ಹೊಯ್ತು. ಅಷ್ಟೇ ಅಲ್ಲ ಆತನ ಮೇಲೆ ಅಟ್ಯಾಕ್ ಮಾಡಿದ ಕಿರಾತಕ ಯಾರು ಅನ್ನೋದು ಗೊತ್ತಾಗಿಹೊಯ್ತು. ಇಷ್ಟೆಲ್ಲಾ ಆಸೆ ಇಟ್ಟುಕೊಂಡವನಿಗೆ ಶತ್ರುಗಳಿರೋದಿಲ್ವಾ..? ಅಂದಹಾಗೆ ಮೊನ್ನೆ ಆಂಜನೇಯನ ಎದುರು ಅಪ್ಪು ಗೌಡರ(Appugowda) ಮೇಲೆ ಅಟ್ಯಾಕ್ ಮಾಡಿದವರು ಆತನನ್ನ ಕೊಲ್ಲದೇ ಎಸ್ಕೇಪ್ ಆಗಿದ್ರು. ಕಾರಣ ಅದೇ ದೇವಸ್ಥಾನಕ್ಕೆ(Temple) ಅದೇ ಟೈಂನಲ್ಲಿ ಬಂದಿದ್ದ ಒಬ್ಬ ಪೇದೆ. ತನ್ನ ಪ್ರಾಣದ ಹಂಗನ್ನೂ ಬಿಟ್ಟು ಆ ಪೇದೆ ಅಪ್ಪು ಗೌಡರನ್ನ ಉಳಿಸಲು ಹೋರಾಡಿದ್ದ. ಅಷ್ಟೇ ಅಲ್ಲ ಹಂತಕರು ಎಸ್ಕೇಪ್ ಆಗುವಾಗ ಅವರನ್ನೇ ಫಾಲೋ ಮಾಡಿದ ಆತ 20 ಕಿಲೋ ಮೀಟರ್ ಚೇಸ್ ಮಾಡಿ ಅವರನ್ನ ಲಾಕ್ ಮಾಡಿದ್ದ. ಕುಮಾರಸ್ವಾಮಿಯಂಥವರು ಒಬ್ಬರು ಪ್ರತೀ ಠಾಣೆಯಲ್ಲೂ ಇದ್ದುಬಿಟ್ಟರೆ ಸಾಕು ಅಲ್ವಾ..? ಇನ್ನೂ ಹಂತಕರನ್ನ ಚೇಸ್ ಮಾಡಿ ಹಿಡಿದ ನಂತರ ಅವರನ್ನ ವಿಚಾರಣೆಗೆ ಒಳಪಡಿಸಲಾಯ್ತು. ಆದ್ರೆ ಅವರು ಹೇಳಿದ ಒಂದು ಹೆಸರು ಕೇಳಿ ಪೊಲೀಸರೇ ದಂಗಾಗಿಹೋಗಿದ್ರು. ಕಾರಣ ಅಪ್ಪು ಗೌಡ ಮೇಲೆ ಅಟ್ಯಾಕ್ ಮಾಡುವಂತೆ ಹೆಳಿದ್ದು ಅಪ್ಪುಗೌಡನ ಸ್ನೇಹಿತನೇ ಆಗಿದ್ದ.

ಇದನ್ನೂ ವೀಕ್ಷಿಸಿ:  ಬುಡಕಟ್ಟು ಸಮುದಾಯದ ಯುವತಿಯಿಂದ ಧ್ವಜಾರೋಹಣ ಮಾಡಿಸಿದ ಎಸ್‌ಪಿ !

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more