ದೇವರ ದರ್ಶನಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅಟ್ಯಾಕ್: ಮಚ್ಚು ಬೀಸೋ ಮುಂಚೆ ಕಾನ್ಸಟೇಬಲ್‌ ಹಾಜರ್..!

ದೇವರ ದರ್ಶನಕ್ಕೆ ಬಂದ ಜೆಡಿಎಸ್‌ ಕಾರ್ಯಕರ್ತನ ಮೇಲೆ ಅಟ್ಯಾಕ್: ಮಚ್ಚು ಬೀಸೋ ಮುಂಚೆ ಕಾನ್ಸಟೇಬಲ್‌ ಹಾಜರ್..!

Published : Aug 15, 2023, 01:00 PM IST

ಸ್ನೇಹಿತರಾಗಿದ್ದವರು ದುಡ್ಡಿಗಾಗಿ ವೈರಿಗಳಾದರು..!
ಅಟ್ಯಾಕ್ ಪ್ಲಾನ್ ಮಾಡಿದವನು ಸ್ನೇಹಿತನೇ..!
ಅವನ ಪ್ರಾಣ ಉಳಿಸಿದ್ದು ಪೊಲೀಸ್ ಪೇದೆ..!

ಆತ ಜೆಡಿಎಸ್ ಕಾರ್ಯಕರ್ತ, ಹೆಂಡತಿ ಪುರಸಭೆ ಸದಸ್ಯೆಯಾಗಿದ್ದಳು. ರಾಜಕೀಯ ಮೂಲಕ ಜನರ ಸೇವೆ ಮಾಡಿಕೊಂಡಿದ್ದ ಆತನ ಮೇಲೆ ಆವತ್ತೊಂದು ದಿನ ಡೆಡ್ಲಿ ಅಟ್ಯಾಕ್ ನಡೆದುಬಿಟ್ಟಿತ್ತು. ದೇವಸ್ಥಾನಕ್ಕೆ ಹೋಗಿ ಕೈ ಮುಗಿದು ಹೊರ ಬರ್ತಿದಂತೆ ಅವನ ಮೇಲೆ ಹಂತಕರ ಪಡೆ ಅಟ್ಯಾಕ್(Attack) ಮಾಡಿತ್ತು. ದೇವರಿಗೆ ಕೈ ಮುಗಿದ ಪರಿಣಾಮನೋ ಏನೋ ಆತ ಬದುಕುಳಿದುಬಿಟ್ಟ. ಇನ್ನೂ ಆತನ ಪ್ರಾಣ ಉಳಿಸಿದ್ದು ಒಬ್ಬ ಪೊಲೀಸ್ ಪೇದೆ. ನಂತರ ಹಲ್ಲೆಯ ತನಿಖೆ ನಡೆದ ಪೊಲೀಸರಿಗೆ ಅವನ ಬ್ಯುಸಿನೆಸ್ ಬಗ್ಗೆ ಒಂದೊಂದೇ ಮಾಹಿತಿಗಳು ಗೊತ್ತಾಗ್ತಾ ಹೊಯ್ತು. ಅಷ್ಟೇ ಅಲ್ಲ ಆತನ ಮೇಲೆ ಅಟ್ಯಾಕ್ ಮಾಡಿದ ಕಿರಾತಕ ಯಾರು ಅನ್ನೋದು ಗೊತ್ತಾಗಿಹೊಯ್ತು. ಇಷ್ಟೆಲ್ಲಾ ಆಸೆ ಇಟ್ಟುಕೊಂಡವನಿಗೆ ಶತ್ರುಗಳಿರೋದಿಲ್ವಾ..? ಅಂದಹಾಗೆ ಮೊನ್ನೆ ಆಂಜನೇಯನ ಎದುರು ಅಪ್ಪು ಗೌಡರ(Appugowda) ಮೇಲೆ ಅಟ್ಯಾಕ್ ಮಾಡಿದವರು ಆತನನ್ನ ಕೊಲ್ಲದೇ ಎಸ್ಕೇಪ್ ಆಗಿದ್ರು. ಕಾರಣ ಅದೇ ದೇವಸ್ಥಾನಕ್ಕೆ(Temple) ಅದೇ ಟೈಂನಲ್ಲಿ ಬಂದಿದ್ದ ಒಬ್ಬ ಪೇದೆ. ತನ್ನ ಪ್ರಾಣದ ಹಂಗನ್ನೂ ಬಿಟ್ಟು ಆ ಪೇದೆ ಅಪ್ಪು ಗೌಡರನ್ನ ಉಳಿಸಲು ಹೋರಾಡಿದ್ದ. ಅಷ್ಟೇ ಅಲ್ಲ ಹಂತಕರು ಎಸ್ಕೇಪ್ ಆಗುವಾಗ ಅವರನ್ನೇ ಫಾಲೋ ಮಾಡಿದ ಆತ 20 ಕಿಲೋ ಮೀಟರ್ ಚೇಸ್ ಮಾಡಿ ಅವರನ್ನ ಲಾಕ್ ಮಾಡಿದ್ದ. ಕುಮಾರಸ್ವಾಮಿಯಂಥವರು ಒಬ್ಬರು ಪ್ರತೀ ಠಾಣೆಯಲ್ಲೂ ಇದ್ದುಬಿಟ್ಟರೆ ಸಾಕು ಅಲ್ವಾ..? ಇನ್ನೂ ಹಂತಕರನ್ನ ಚೇಸ್ ಮಾಡಿ ಹಿಡಿದ ನಂತರ ಅವರನ್ನ ವಿಚಾರಣೆಗೆ ಒಳಪಡಿಸಲಾಯ್ತು. ಆದ್ರೆ ಅವರು ಹೇಳಿದ ಒಂದು ಹೆಸರು ಕೇಳಿ ಪೊಲೀಸರೇ ದಂಗಾಗಿಹೋಗಿದ್ರು. ಕಾರಣ ಅಪ್ಪು ಗೌಡ ಮೇಲೆ ಅಟ್ಯಾಕ್ ಮಾಡುವಂತೆ ಹೆಳಿದ್ದು ಅಪ್ಪುಗೌಡನ ಸ್ನೇಹಿತನೇ ಆಗಿದ್ದ.

ಇದನ್ನೂ ವೀಕ್ಷಿಸಿ:  ಬುಡಕಟ್ಟು ಸಮುದಾಯದ ಯುವತಿಯಿಂದ ಧ್ವಜಾರೋಹಣ ಮಾಡಿಸಿದ ಎಸ್‌ಪಿ !

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more