Rameswaram Cafe blast: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ: ಹಿಂದೂ ಯುವಕರನ್ನು ಸಿಲುಕಿಸೋ ಯತ್ನ ಎಂದ ಆರಗ ಜ್ಞಾನೇಂದ್ರ

Apr 6, 2024, 1:01 PM IST

ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ(Rameswaram Cafe blast) ಪ್ರಕರಣದಲ್ಲಿ ಹಿಂದೂ ಯುವಕರನ್ನು ಸಿಲುಕಿಸೋ ಯತ್ನ ನಡೆಯುತ್ತಿದೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ(Araga Jnanendra) ಗಂಭೀರ ಆರೋಪ ಮಾಡಿದ್ದಾರೆ. ಬಿಜೆಪಿ(BJP) ಕಾರ್ಯಕರ್ತನನ್ನು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. BJP ಕಾರ್ಯಕರ್ತ ಮೊಬೈಲ್ ಖರೀದಿಗೆ ಐಡಿ ನೀಡಿದ್ದಾನೆ. ಈ ಐಡಿ ಬಳಸಿ ಉಗ್ರರು (Terrorists)ನಕಲಿ ಖಾತೆ ತೆರೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ. 8 ಹಿಂದೂ ಯುವಕರ ಐಡಿಯನ್ನು ಉಗ್ರರು ಬಳಸಿದ್ದಾರೆ. NIA 8 ಯುವಕರನ್ನು ವಿಚಾರಣೆ ಮಾಡುವ ಸಾಧ್ಯತೆ ಇದೆ . ಉಗ್ರರು ತೀರ್ಥಹಳ್ಳಿಯಲ್ಲಿ ಭಯಾನಕತೆ  ಸೃಷ್ಟಿ ಮಾಡುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತ ಸಾಯಿಪ್ರಸಾದ್‌ನನ್ನು NIA ಸಾಕ್ಷಿಯಾನ್ನಾಗಿಸಿದೆ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದಾರೆ.

ಇದನ್ನೂ ವೀಕ್ಷಿಸಿ:  KS Eshwarappa: ಮೋದಿ ಭಾವಚಿತ್ರಕ್ಕಾಗಿ ಕೋರ್ಟ್ ಮೊರೆ ಹೋದ ಈಶ್ವರಪ್ಪ! ಮುಂಜಾಗ್ರತ ಕ್ರಮವಾಗಿ ಕೆವಿಯಟ್ ಸಲ್ಲಿಕೆ