20 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!

20 ವರ್ಷದವಳಿಗೆ 45 ವರ್ಷದ ಅಂಕಲ್​ ಮೇಲೆ ಲವ್: ಬಲವಂತಕ್ಕೆ ಮದುವೆಯಾದವನಿಗೆ ಸಾವಿನ ಗಿಫ್ಟ್​​​!

Published : Nov 29, 2024, 12:43 PM IST

ಮಾಡದ ತಪ್ಪಿಗೆ ಇವತ್ತು ಮಂಜುನಾಥ ಹೆಣವಾದ. ಬೇಡ ಬೇಡ ಅಂದ್ರೂ ಆ ರಕ್ಷಿತ ಮಾತು ಕೇಳದೇ ಇವನನ್ನ ಮದುವೆಯಾಗಿ ಅವನ ಪ್ರಾಣ ಹೋಗೋದಕ್ಕೆ ನೇರ ಕಾರಣವಾಗಿದ್ದಾಳೆ. ಇತ್ತ ಹೆತ್ತವರು ಎಲ್ಲಿ ನನ್ನ ಮಗಳು ಅವನ ಜೊತೆ ಜೀವನ ಮಾಡಿದ್ರೆ ಅವಳ ಜೀವನ ಹಾಳಾಗಿಬಿಡುತ್ತೋ ಅನ್ನೋ ಆತಂಕದಲ್ಲಿ ಮಂಜುನಾಥನಿಗೆ ಬುದ್ಧಿ ಕಲಿಸಲು ಹೋಗಿ ಕೊಂದೇ ಬಿಟ್ಟಿದ್ದಾರೆ.

ಚಿತ್ರದುರ್ಗ(ನ.29): ಅವಳಿಗೆ 20 ವರ್ಷ.. ಅವನು 45 ವರ್ಷದ ಅಂಕಲ್​​.. ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.. ಮನೆಯಲ್ಲಿ ಒಪ್ಪಲ್ಲ ಅಂತ ಇಬ್ಬರೂ ಓಡಿ ಹೋಗಿ ಮದುವೆ ಕೂಡ ಆಗಿದ್ರು.. ಆದ್ರೆ ಹುಡುಗಿ ಮನೆಯವರು ರಾಜಿ ಪಂಚಾಯ್ತಿ ಮಾಡಿ 20 ದಿನದಲ್ಲಿ ನಿಶ್ಚಿತಾರ್ಥ ಮಾಡುವುದಾಗಿ ಹೇಳಿದ್ರು.. ಆದ್ರೆ ಇವತ್ತು ಅದೇ ಹುಡುಗಿಯ ಕುಟುಂಬ ತಮ್ಮ ಮನೆಯ ಅಳಿಯನನ್ನ ಬರ್ಬರವಾಗಿ ಕೊಂದು ಮುಗಿಸಿದೆ.. ತನ್ನ ಪಾಡಿಗೆ ತಾನಿದ್ದವನನ್ನ ಬಾ ಅಂತ ಕರೆದು ಭಿಕರವಾಗಿ ಕೊಲೆ ಮಾಡಿದ್ದಾರೆ.. ಅಷ್ಟಕ್ಕೂ 20 ದಿನದಲ್ಲಿ ನಿಶ್ಚಿತಾರ್ಥ ಮಾಡ್ತೀವಿ ಅಂದವರೇ ಅವನ ಕಥೆ ಮುಗಿಸಿದ್ದೇಕೆ..? ಅಂಥಹ ತಪ್ಪು ಆತ ಮಾಡಿದ್ದೇನು..? ಇಡೀ ಕರ್ನಾಟಕವನ್ನೇ ಬೆಚ್ಚಿ ಬೀಳೀಸಿದ್ದ ಮರ್ಡರ್​​ ಕಹಾನಿಯೇ ಇವತ್ತಿನ ಎಫ್​.ಐ.ಆರ್​​

45 ವರ್ಷದ ಅಂಕಲೊಬ್ಬ.. ಮನೆಯ ಮಗಳ ಮೇಲೆ ಕಣ್ಣು ಹಾಕಿದ್ರೆ ಯಾರು ತಾನೆ ಬಿಡ್ತಾರೆ ಹೇಳಿ.. ಅವನಿಗೆ ಸರಿಯಾಗಿ ಬಾರಿಸಬೇಕು ಅಂತ ಹೋಗಿ ಹಲ್ಲೆ ಮಾಡಿದ್ದಾರೆ.. ಆದ್ರೆ ಮಂಜುನಾಥ ಅವರ ಕೊಟ್ಟ ಪೆಟ್ಟು ತಾಳಲಾರದೇ ಹೆಣವಾಗಿಬಿಟ್ಟ.. ಇನ್ನೂ ಮಂಜುನಾಥನನ್ನ ಕೊಲ್ಲಲು ರಕ್ಷಿತಾ ಕುಟುಂಬದವರಿಗೆ ವಯಸ್ಸೊಂದೇ ಕಾರಣವಾಗಿರಲಿಲ್ಲ.. ಬದಲಿಗೆ ಮಂಜುನಾಥನ ಫ್ಲಾಷ್​​ಬ್ಯಾಕ್​ ಕೂಡ ತಲೆಕೆಡಸಿತ್ತು.

ಅಪಾರ್ಟ್​ಮೆಂಟ್​ನಲ್ಲಿ ಅಸ್ಸಾಮಿ ಸುಂದರಿಯ ಡೆಡ್​ ಬಾಡಿ: ಬ್ರೇಕ್​​ ಅಪ್​ ಅಂದವಳಿಗೆ ಮಚ್ಚು ಬೀಸಿದ ಪಾಗಲ್​​​ ಪ್ರೇಮಿ!

ಕೇವಲ ವಯಸಷ್ಟೇ ರಕ್ಷಿತಾ ಮತ್ತು ಮಂಜುನಾಥನ ಲವ್​ಗೆ ಅಡ್ಡಿಯಾಗಿರಲಿಲ್ಲ ಬದಲಿಗೆ ಮಂಜುನಾಥನ ಹಿನ್ನಲೆಯೂ ರಕ್ಷಿತಾ ಕುಟುಂಬದ ತಲೆ ಕೆಡಸಿತ್ತು.. 5 ವರ್ಷದ ಹಿಂದೆ ಪ್ರೇಮ ವಿವಾಹವೆ ಆಗಿದ್ದ ಮಂಜುನಾಥ ಹೆಂಡತಿಯನ್ನ ಕರ್ಕೊಂಡು ಬೇರೆ ಊರಿಗೆ ಹೋಗಿ ವಾಸ ಮಾಡ್ತಿದ್ದ.. ಆದ್ರೆ ಹೆಂಡತಿ ಎರಡೇ ತಿಂಗಳಿಗೆ ಇವನ ಕಾಟ ತಾಳಲಾರದೇ ನೇಣು ಬಿಗಿದುಕೊಂಡಿದ್ಲು.. ಅದೇ ಕಾರಣಕ್ಕೆ ಮಂಜುನಾಥ ಜೈಲುವಾಸ ಅನುಭವಿಸಿ ಬಂದಿದ್ದ.. 10 ತಿಂಗಳ ಹಿಂದಷ್ಟೇ ಬೇಲ್​​​ ಬಡೆದು ಮನೆಗೆ ಬಂದಿದ್ದ.. ಆಗಲೇ ನೋಡಿ ಈತ ರಕ್ಷಿತಾ ಕಣ್ಣಿಗೆ ಬಿದ್ದಿದ್ದ.. ಇನ್ನೂ ರಕ್ಷಿತಾಗೆ ಈತನ ಮೇಲೆ ಲವ್​​​ ಹುಟ್ಟಿಬಿಟ್ಟಿತ್ತು.. ಆತ ಬೇಡ ಬೇಡ ಅಂದ್ರೂ ಅವಳು ಈತನಿಗೆ ಮದುವೆ ಮಾಡಿಕೊ ಅಂತ ಪೀಡಿಸುತ್ತಿದ್ದಳು.. ಒಂದು ದಿನ ಗಂಟು ಮೂಟೆ ಕಟ್ಟಿಕೊಂಡು ಮಂಜುನಾಥನ ಎದುರು ಬಂದು ನಿಂತಿದ್ಲು.. ಆಗ ಆತ ಬೇರೆ ದಾರಿ ಕಾಣದೆ ಆಕೆಯನ್ನ ಕರೆದುಕೊಂಡು ಹೋಗಿ ಮದುವೆ ಮಾಡಿಕೊಂಡಿದ್ದ.

ಮಾಡದ ತಪ್ಪಿಗೆ ಇವತ್ತು ಮಂಜುನಾಥ ಹೆಣವಾದ. ಬೇಡ ಬೇಡ ಅಂದ್ರೂ ಆ ರಕ್ಷಿತ ಮಾತು ಕೇಳದೇ ಇವನನ್ನ ಮದುವೆಯಾಗಿ ಅವನ ಪ್ರಾಣ ಹೋಗೋದಕ್ಕೆ ನೇರ ಕಾರಣವಾಗಿದ್ದಾಳೆ. ಇತ್ತ ಹೆತ್ತವರು ಎಲ್ಲಿ ನನ್ನ ಮಗಳು ಅವನ ಜೊತೆ ಜೀವನ ಮಾಡಿದ್ರೆ ಅವಳ ಜೀವನ ಹಾಳಾಗಿಬಿಡುತ್ತೋ ಅನ್ನೋ ಆತಂಕದಲ್ಲಿ ಮಂಜುನಾಥನಿಗೆ ಬುದ್ಧಿ ಕಲಿಸಲು ಹೋಗಿ ಕೊಂದೇ ಬಿಟ್ಟಿದ್ದಾರೆ. ಈ ಮೂಲಕ ಇಡೀ ಕುಟುಂಬವೇ ಜೈಲು ಪಾಲಾಗಲಿದೆ ಅಂತ ಹೇಳ್ತಾ ಇವತ್ತಿನ ಎಪಿಸೋಡ್​​ ಮುಗಿಸುತ್ತಿದ್ದೇನೆ.

25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
Read more