Coronavirus Karnataka
Apr 7, 2020, 9:25 PM IST
ಬೆಂಗಳೂರು(ಏ. 07) ಸಿಎಂ ಯಡಿಯೂರಪ್ಪ ಅವರ ಬೆಂಬಲಕ್ಕೆ ಆರ್ಎಸ್ಎಸ್ ನಿಂತುಕೊಂಡಿದೆ. ಯಾರೋ ಒಂದಿಷ್ಟು ಜನ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ದೂರುವುದು ಸರಿ ಅಲ್ಲ ಎಂದು ಯಡಿಯೂರಪ್ಪ ಹೇಳಿದ ಮಾತಿಗೆ ಬೆಂಬಲ ನೀಡಿದೆ.
ಆರ್ ಎಸ್ ಎಸ್ ತನ್ನ ಎಲ್ಲ ಶಿಬಿರಗಳನ್ನು ಬಂದ್ ಮಾಡಿದೆ. ಕೊರೋನಾ ವಿರುದ್ಧದ ಹೋರಾಟಕ್ಕೆ ಸರ್ಕಾರದೊಂದಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಯಡಿಯೂರಪ್ಪ ಕೇಳಿಕೊಂಡಿದ್ದರು.