ರಜನಿಕಾಂತ್ ಸಮಾಜ ಸೇವೆಗೆ ಹೊಸ ಯೋಜನೆ..! ಬಡವರಿಗಾಗೆ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ತಲೈವಾ..!

ರಜನಿಕಾಂತ್ ಸಮಾಜ ಸೇವೆಗೆ ಹೊಸ ಯೋಜನೆ..! ಬಡವರಿಗಾಗೆ ಆಸ್ಪತ್ರೆ ಕಟ್ಟಿಸುತ್ತಿದ್ದಾರೆ ತಲೈವಾ..!

Published : Mar 05, 2024, 10:02 AM ISTUpdated : Mar 05, 2024, 10:03 AM IST

ಸಮಾಜ ಸೇವೆ ಮಾಡೋದಕ್ಕೆ ರಾಜಕೀಯಕ್ಕೆ ಬರಬೇಕಿಲ್ಲ. ಸಮಾಜಕ್ಕೆ ಏನಾದ್ರು ಕೊಡುಗೆ ಕೊಡಬೇಕು ಒಂದಿಷ್ಟು ಮಂದಿಗೆ ಆಸರೆ ಆಗಬೇಕು ಅನ್ನೋ ಮನಸ್ಸಿರಬೇಕು ಆ ಕೆಲಸ ಮಾಡಬೇಕು. ಇಡೀ ಪ್ರಪಂಚವೇ ಅವರನ್ನ ಕೊಂಡಾಡುತ್ತೆ. ಈಗ ನಟ ತಲೈವಾ ರಜನಿಕಾಂತ್‌ರನ್ನೂ ಇಡೀ ದೇಶ ಕೊಂಡಾಡುತ್ತಿದೆ. 

ರಜನಿಕಾಂತ್ ಸೂಪರ್ ಸ್ಟಾರ್.. ಕೋಟಿ ಕೋಟಿ ಆಸ್ತಿಯ ಒಡೆಯ. ಆದ್ರೆ ರಜನಿಕಾಂತ್(Rajinikanth) ಕೂಡ ಬಡವರ ಮನೆ ಹುಡುಗನಾಗಿದ್ದವರೇ. ಹೀಗಾಗಿ ಬಡವರ ಕಷ್ಟ ನಷ್ಟ ರಜನಿಗೆ ಚೆನ್ನಾಗೆ ಗೊತ್ತಿದೆ. ಅದ್ಕೇ ಈಗ ರಾಜಕೀಯ ಬೇಡ ಸಮಾಜವೇವೆ ಮಾಡಿದ್ರೆ ಸಾಕು ಅಂತ ಸೋಷಿಯಲ್ ವರ್ಕ್ಗೆ ಹೊಸ ಯೋಜನೆ ಹಾಕಿಕೊಂಡಿದ್ದಾರೆ. ಅದೇ ಬಡವರಿಗಾಗೆ ದೊಡ್ಡ ಆಸ್ಪತ್ರೆ(Hospital) ಕಟ್ಟಿಸೋ ಯೋಜನೆ. ಎಷ್ಟೋ ಜನ ಬಡವರು ಆರೋಗ್ಯ ಸರಿ ಪಡಿಸಿಕೊಳ್ಳಲು ದುಡ್ಡಿಲ್ಲದೇ ನೊಂದು ಬೆಂದವರಿದ್ದಾರೆ. ಅಂತವರಿಗಾಗೆ ನಟ ರಜನಿಕಾಂತ್ ಬಡವರಿಗೆ(Poor people) ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಅಂತ ತಮಿಳುನಾಡಿನ(Tamilnadu) ಚಂಗಲ್ಪಟ್ಟು ಜಿಲ್ಲೆಯ ತಿರುಪ್ಪುರೂರದಲ್ಲಿ ಬೃಹತ್ ಆಸ್ಪತ್ರೆ ನಿರ್ಮಿಸಲು ಹೊರಟಿದ್ದಾರೆ. ಎಲ್ಲಾ ಸೌಲಭ್ಯಗಳು ಇರೋ ಆ ಆಸ್ಪತ್ರೆ 12 ಎಕರೆ ಜಾಗದಲ್ಲಿ ಆ ಸುಸಜ್ಜಿತವಾಗಿ ತಲೆ ಎತ್ತಲಿದೆಯಂತೆ. ನಟ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರೆ. ಹೊಸ ಪಕ್ಷ ಕಟ್ಟುತ್ತಾರೆ ಅಂತೆಲ್ಲಾ ಸುದ್ದಿ ಆಗಿದೆ. ರಾಜಕೀಯಕ್ಕೆ ಬರಲು ರಜಿನಿ ಕೂಡ ತುದಿಗಾಲಲ್ಲಿದ್ರು. ಆದ್ರೆ ಅನಾರೋಗ್ಯ ರಜನಿ ರಾಜಕೀಯ ಭವಿಷ್ಯವನ್ನ ಹಾಳುಮಾಡ್ತು. ಹೀಗಾಗಿ ತನ್ನ ರಾಜಕೀಯ ಪಕ್ಷವನ್ನು ಸಮಾಜ ಸೇವಾ ಸಂಘವನ್ನಾಗಿ ಬದಲಾವಣೆ ಮಾಡಿದ್ರು. ರಾಜಕೀಯ ಪ್ರವೇಶ ಮಾಡದಿದ್ರೂ ಜನಸೇವೆ ಮಾಡುತ್ತೇನೆ ಎಂದಿದ್ದ ತಲೈವಾ ಬಡ ಜನರಿಗೆ ಉಚಿತ ಚಿಕಿತ್ಸೆ ನೀಡುವ ಉದ್ದೇಶದಿಂದ ಬೃಹತ್  ಆಸ್ಪತ್ರೆ ಕಟ್ಟುತ್ತಿದ್ದಾರೆ. ರಜನಿಯ ಈ ಮಹತ್ಕಾರ್ಯಕ್ಕೆ ಫ್ಯಾನ್ಸ್ ಕೈ ಮುಗಿಯುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Deepika Das: ಕರಿಮಣಿ ಮಾಲೀಕನ ಪರಿಚಯಿಸಿದ BIG BOSS ಬ್ಯೂಟಿ..! ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ದೀಪಿಕಾ ದಾಸ್..!

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more