ಬಾಲಿವುಡ್ ಚಿತ್ರರಂಗಕ್ಕೆ ಭಯ ಹುಟ್ಟುಸಿದ್ದ ಯಶ್..! ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ನಡುಕ..!

ಬಾಲಿವುಡ್ ಚಿತ್ರರಂಗಕ್ಕೆ ಭಯ ಹುಟ್ಟುಸಿದ್ದ ಯಶ್..! ಸೌತ್ ಚಿತ್ರರಂಗದ ಮೇಲೆ ಹಿಂದಿ ಮಂದಿಗೆ ಮತ್ತೆ ನಡುಕ..!

Published : Feb 19, 2024, 09:38 AM IST

ಬಾಲಿವುಡ್ ಇಡೀ ಭಾರತೀಯ ಸಿನಿಮಾ ಜಗತ್ತನ್ನೇ ಆಳುತ್ತಿತ್ತು. ಆದ್ರೆ ಅದಕ್ಕೆ ಸರಿಯಾಗಿ ಟಾಂಗ್ ಕೊಟ್ಟಿದ್ದು ಕನ್ನಡಿಗ ರಾಕಿಂಗ್ ಸ್ಟಾರ್ ಯಶ್. ಸಿನಿಮಾ ರಂಗ ಅಂದ್ರೆ ಬರೀ ಬಾಲಿವುಡ್ ಅಲ್ಲ ನಾಮ್ಮಲ್ಲೂ ಪೊಟೆನ್ಷಿಯೆಲ್ ಇದೆ ಅದ್ಭುತ ಸಿನಿಮಾ ಮಾಡುತ್ತೇವೆ ಅಂತ ಕೆಜಿಎಫ್ ಮಾಡಿ 1200 ಕೋಟಿ ಕಲೆಕ್ಷನ್ ಮಾಡಿದ್ರು ಯಶ್. ಅಲ್ಲಿಂದ ಸೌತ್ ಸಿನಿಮಾಗಳು ಅಂದ್ರೆ ಬಾಲಿವುಡ್‌ಗೆ ಭಯ ಶುರುವಾಗಿತ್ತು.

ಸೌತ್ ಸ್ಟಾರ್ಸ್‌ಗಳಾದ ಯಶ್, ಪ್ರಭಾಸ್, ಅಲ್ಲು ಅರ್ಜುನ್ , ರಾಮ್ ಚರಣ್, ರಿಷಬ್ ಶೆಟ್ಟಿ, ಕಿಚ್ಚ ಸುದೀಪ್ ಇವ್ರೆಲ್ಲಾ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಸೂಪರ್ ಹಿಟ್ ಕೊಟ್ಟಿದ್ರು. ಅದರಲ್ಲೂ ಬಾಲಿವುಡ್‌ನಲ್ಲಿ(Bollywood) ಭಾರಿ ದೊಡ್ಡ ಕಲೆಕ್ಷನ್ ಮಾಡಿದ್ರು. ಇದ್ರಿಂದ ಹಿಂದಿ ಸಿನಿಮಾಗಳ ಸ್ಟಾರ್‌ಗಳು ಗಲ್ಲಾಪೆಟ್ಟೆಗೆ ಕೊಳ್ಳೆ ಹೊಡೆಯಲಾಗದೇ ಒದ್ದಾಡಿದ್ರು. ಸಲ್ಮಾನ್ ಖಾನ್ ಶಾರುಖ್ ಖಾನ್, ಅಮೀರ್ ಖಾನ್ ಅಕ್ಷಯ್ರಂತ ಸೂಪರ್ ಸ್ಟಾರ್ಗಳೇ ಗೆಲುವಿಗಾಗಿ ಒದ್ದಾಡಿದ್ರು. ಈಗ ಸೌತ್ ಚಿತ್ರರಂಗದ(South Film Industry) ಮೇಲೆ ಹಿಂದಿ ಮಂದಿಗೆ ಮತ್ತೆ ಭಯ ಬಂದಿದೆ. ಆ ಐದು ಸಿನಿಮಾಗಳ ಎದುರು ತಮ್ಮ ಸಿನಿಮಾ ರಿಲೀಸ್ ಮಾಡೋಕೆ ಬಾಲಿವುಡ್ ಮಂದಿ ಹೆದರುತ್ತಿದ್ದಾರಂತೆ. ಅಲ್ಲು ಅರ್ಜುನ್(Allu Arjun) ನಟನೆಯ ‘ಪುಷ್ಪ: ದಿ ರೂಲ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೊದಲ ಭಾಗ 2021ರಲ್ಲಿ ಕೊನೆಯಲ್ಲಿ ರಿಲೀಸ್ ಆಯಿತು. ಪುಷ್ಪರಾಜ್ ಪಾತ್ರ ಎಲ್ಲರ ಹೃದಯ ಗೆದ್ದಿದೆ. ಈಗ ಎರಡನೇ ಭಾಗಕ್ಕೆ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರ  2024ರ ಆಗಸ್ಟ್ 15ರಂದು ರಿಲೀಸ್ ಆಗಲಿದೆ. ಈ ಸಿನಿಮಾ ‘ಸಿಂಗಂ ಅಗೇನ್’ ಚಿತ್ರದ ಎದುರು ರಿಲೀಸ್ ಆಗಲಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ’(Kantara) ಚಿತ್ರಕ್ಕೆ ಪ್ರೀಕ್ವೆಲ್ ರೆಡಿ ಆಗುತ್ತಿದೆ. ಇದಕ್ಕೆ ‘ಕಾಂತಾರ: ಅಧ್ಯಾಯ 1′ ಎಂದು ಹೆಸರು ಇಡಲಾಗಿದೆ. ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡೋದು ಪಕ್ಕಾ. ಈ ವರ್ಷಾಂತ್ಯಕ್ಕೆ ಕಾಂತಾರ ಅಧ್ಯಾಯ 1 ಸಿನಿಮಾ ರಿಲೀಸ್ ಆಗಲಿದೆ. ಆದ್ರೆ ಆ ಸಿನಿಮಾದ ಎದುರು ಬಾಲಿವುಡ್ನ ಯಾವ ಸಿನಿಮಾನೂ ರಿಲೀಸ್ ಮಾಡುತ್ತಿಲ್ಲ. ಜೂನಿಯರ್ ಎನ್ಟಿಆರ್ ಅಂದ್ರೆ ಬಾಲಿವುಡ್ ಮಂದಿಗೆ ಭಯ ಇದೆ. ಅದಕ್ಕೆ ಕಾರಣ ಆರ್‌ಆರ್‌ಆರ್ ಸಿನಿಮಾದ ಬಿಗ್ ಸಕ್ಸಸ್. ಈಗ  ಜೂನಿಯರ್ ಎನ್ಟಿಆರ್ ‘ದೇವರ’ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ನ ಜಾನ್ವಿ ಕಪೂರ್ ಮತ್ತು ಸೈಫ್ ಅಲಿ ಖಾನ್ ಕೂಡ ಬಣ್ಣ ಹಚ್ಚಿದ್ದಾರೆ. ಏಪ್ರಿಲ್ 5ರಂದು ಬಿಡುಗಡೆ ಆಗಲಿರೋ ದೇವಾರ ಸಿನಿಮಾ ಎದುರು ಹಿಂದಿಯ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆ ಮಾಡದಿರಲು ಬಾಲಿವುಡ್ ಡಿಸೈಡ್ ಮಾಡಿದೆಯಂತೆ. 

ಇದನ್ನೂ ವೀಕ್ಷಿಸಿ:  Today Horoscope: ಮಕರ ರಾಶಿಯಿಂದ ಕುಂಭ ರಾಶಿಗೆ ಬುಧನ ಪ್ರವೇಶ.. ಯಾವ ರಾಶಿಯವರಿಗೆ ಶುಭ-ಅಶುಭ ?

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more