ರೈತನ ಮಿತ್ರನ್ಯಾರು? ಕೆಲಸ ಕಳೆದುಕೊಂಡ ವೈರಲ್ ಪ್ರಶ್ನೆ ಸೆಟ್ ಮಾಡಿದ್ದ ಶಿಕ್ಷಕ

Mar 29, 2019, 10:44 PM IST

ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಮೌಂಟ್ ಕಾರ್ಮಲ್ ಹೈಸ್ಕೂಲ್ ಶಾಲೆ ದೊಡ್ಡ ಎಡವಟ್ಟೊಂದನ್ನ ಮಾಡಿಕೊಂಡಿತ್ತು 8 ನೇ ತರಗತಿಯ ತೃತೀಯ ಭಾಷೆ ಕನ್ನಡ ಪರೀಕ್ಷೆಗೆ ರೈತನ ಮಿತ್ರ ಯಾರು ಎಂಬ ಪ್ರಶ್ನೆಗೆ ಮೂರು ಉತ್ತರಗಳನ್ನ ಕೊಡುವ ಮೂಲಕ ವಿವಾದ ಸೃಷ್ಠಿಸಿಕೊಂಡಿತ್ತು. ರೈತನ ಮಿತ್ರನ ಪ್ರಶ್ನೆಗೆ ಹೆಚ್.ಡಿ ಕುಮಾರಸ್ವಾಮಿ, ಎರೆಹುಳು ಹಾಗೂ ಬಿಎಸ್ ಯಡಿಯೂರಪ್ಪ ಎಂಬ ಮೂರು ಉತ್ತರಗಳನ್ನ ಕೊಡಲಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಪ್ರಶ್ನೆ ವೈರಲ್ ಆಗುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಎಚ್ಚೆತ್ತುಕೊಂಡು ಪ್ರಶ್ನೆ ಪತ್ರಿಕೆ ಸೆಟ್ ಮಾಡಿದ ಶಿಕ್ಷಕರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ಬಗ್ಗೆ ನಮ್ಮ ಪ್ರತಿನಿಧಿ ನಂದೀಶ್ ಮಲ್ಲೇನಹಳ್ಳಿ ಮೌಂಟ್ ಕಾರ್ಮಲ್ ಹೈಸ್ಕೂಲ್ ಶಾಲೆಯ ಪ್ರಾಂಶುಪಾಲ ರಾಘವೇಂದ್ರ ಜೊತೆ ನಡೆಸಿರುವ ಚಿಟ್ ಚಾಟ್  ಇಲ್ಲಿದೆ..