ಬಾಗಲಕೋಟೆ: ನೀವು ಅನ್ನದ ರಾಮಯ್ಯ ಅಲ್ಲ, ಚೀಲದ ರಾಮಯ್ಯ. ಅನ್ನ ಕೊಡೋದು ಮೋದಿ ಅವರು. ಅನ್ನದ ರಾಮಯ್ಯ ಅನ್ನಲು ನಿಮಗೆ ಯಾವುದೇ ಅಧಿಕಾರ ಇಲ್ಲ ಎಂದು ಮುಖ್ಯಮಂತ್ರಿ ವಿರುದ್ಧ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಇವತ್ತು ಮಜಾವಾದಿ ರಾಮಯ್ಯ ಆಗಿದ್ದೀರಾ. 2 ತಿಂಗಳಿನಿಂದ ಗೃಹಲಕ್ಷ್ಮೀ ಹಣ ಕೊಟ್ಟಿಲ್ಲ, ಆರ್ಥಿಕ ಶಿಸ್ತು ಎಲ್ಲಿದೆ? ಸಿದ್ದರಾಮಯ್ಯ ಈ ಬಾರಿ ಎಷ್ಟು ಸಾಲ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

07:42 PM (IST) Apr 05
ಹುಬ್ಬಳ್ಳಿಯ ಜಿಮ್ ಓನರ್ ಸಮೀರ್ ಮುಲ್ಲಾ ಲವ್ ಜಿಹಾದ್ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, ಅದೇ ಜಿಮ್ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾದ ಮುಫೀಸ್ ಮಿಯಾನ್ನಾವರ್ ಎಂಬಾತನ ವಿರುದ್ಧ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ಅ*ತ್ಯಾಚಾರ ಎಸಗಿ, ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಯುವತಿ ದೂರು ನೀಡಿದ್ದಾಳೆ.
06:13 PM (IST) Apr 05
ಟಾಲಿವುಡ್ ಸಿನಿಮಾಗಳಲ್ಲಿ ಐಟಂ ಸಾಂಗ್ಸ್ಗಳಿಗೆ ಒಂದು ವಿಶೇಷ ಕ್ರೇಜ್ ಇದೆ. ಕೆಲವು ಹಾಡುಗಳು ಇಡೀ ಸಿನಿಮಾವನ್ನೇ ಮೀರಿಸುವಷ್ಟು ಹಿಟ್ ಆಗಿವೆ. ಈ ಫೋಟೋ ಸ್ಟೋರಿಯಲ್ಲಿ ಆ ಹಾಡುಗಳ ಬಗ್ಗೆ ತಿಳಿಯೋಣ.
05:36 PM (IST) Apr 05
Mimicry Gopi: ಮಿಮಿಕ್ರಿ ಗೋಪಿ ಅವರು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದವರು. ಬಡತನದಲ್ಲಿ ಬೆಳೆದ ಮಿಮಿಕ್ರಿ ಗೋಪಿ ಅವರು ರಾಜಕಾರಣಿಗಳು, ಸೆಲೆಬ್ರಿಟಿಗಳ ಮಿಮಿಕ್ರಿ ಮಾಡಿ ಫೇಮಸ್ ಆಗಿದ್ದಾರೆ. ಆದರೆ ವೈಯಕ್ತಿಕ ಜೀವನದಲ್ಲಿ ಅನುಭವಿಸಿದ ಕಷ್ಟದ ಬಗ್ಗೆ ಅವರು ಜೋಡಿ ನಂ 1 ಶೋನಲ್ಲಿ ಮಾತನಾಡಿದ್ದಾರೆ.
04:12 PM (IST) Apr 05
Actress Cancer Treatment: ಲಿವರ್ ಕ್ಯಾನ್ಸರ್ನಿಂದ ಬಳಲುತ್ತಿರುವ ನಟಿ ದೀಪಿಕಾ ಕಕ್ಕರ್ ಇತ್ತೀಚೆಗೆ ಸಿಸ್ಟ್ ಸರ್ಜರಿ ನಂತರ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ಸಮಸ್ಯೆ ಮತ್ತೆ ಮರುಕಳಿಸಿದ್ದು, ತಮ್ಮನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂದು ಅವರು ಹೇಳಿಕೊಂಡಿದ್ದಾರೆ.
03:41 PM (IST) Apr 05
ಬ್ರಹ್ಮಗಂಟು ಹಾಗೂ ಲವ್ ಮಾಕ್ಟೇಲ್ ಸಿನಿಮಾ ಖ್ಯಾತಿಯ ನಟಿ ಗೀತಾ ಭಾರತಿ ಭಟ್ ಅವರು ತೂಕದ ವಿಚಾರಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ರಾಜಾರಾಮ್ ಭಟ್ ಜೊತೆ ಗೀತಾ ಮದುವೆಯಾಗಿದೆ. ಆಗಲೂ ಕೆಲವರು ನೆಗೆಟಿವ್ ಮಾತನಾಡಿದ್ದರು. ಜೋಡಿ ನಂ 1 ಸೀಸನ್ 3 ಶೋನಲ್ಲಿ ಗೀತಾ ಭಾರತಿ ಭಟ್ ಮಾತನಾಡಿದ್ದಾರೆ.
03:16 PM (IST) Apr 05
Rashmika Mandanna Birthday Celebration: ರಶ್ಮಿಕಾ ಮಂದಣ್ಣ ನಿಜವಾದ ಪ್ಯಾನ್-ಇಂಡಿಯಾ ಸ್ಟಾರ್ ಆಗಿ ಬೆಳೆದಿದ್ದಾರೆ. ತಮ್ಮ ಚಾರ್ಮ್, ಬಹುಮುಖ ಪ್ರತಿಭೆಯಿಂದಾಗಿ ಎಲ್ಲ ಭಾಷೆಗಳಲ್ಲೂ ಜನರ ಮನಸ್ಸು ಗೆದ್ದಿದ್ದಾರೆ. ಇಂದು ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.
12:59 PM (IST) Apr 05
ಆ್ಯಂಕರ್ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಪಯಣ ಮತ್ತು ಅದರ ಹಿಂದಿನ ನೋವಿನ ಹಾದಿಗಳನ್ನು ಹಂಚಿಕೊಂಡಿದ್ದಾರೆ. ಸಮಾಜದಲ್ಲಿ ಯಶಸ್ವಿ ಮಹಿಳೆಯರು ಎದುರಿಸುವ ಸವಾಲುಗಳು, ಇಲ್ಲಸಲ್ಲದ ಆರೋಪಗಳು ಮತ್ತು ಆನ್ಲೈನ್ ಟ್ರೋಲ್ಗಳ ಬಗ್ಗೆ ಅವರು ಆರ್.ಜೆ. ಮಯೂರ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
12:59 PM (IST) Apr 05
ನಟಿ ಸುಧಾ ಬೆಳವಾಡಿಯವರು ಕನ್ನಡದ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಂಗಾರು ಮಳೆ, ಮೊಗ್ಗಿನಮನಸ್ಸು, ಜೋಕ್ ಫಾಲ್ಸ್, ಗಾಳಿಪಟ, ಗೂಗ್ಲಿ ಸೇರಿದಂತೆ ಹಲವಾರು ಸಿನಿಮಾಗಳನ್ನು, ಅವರ ಅತ್ಯದ್ಭುತ ನಟನೆಯನ್ನೂ ಇಂದಿಗೂ ಸಿನಿಪ್ರೇಕ್ಷಕರು ನೆನಪಿಸಿಕೊಳ್ಳುತ್ತಾರೆ. ಇದೀಗ, ಈ ಹಳೆಯ ವಿಡಿಯೋ ವೈರಲ್ ಆಗುತ್ತಿದೆ.
11:34 AM (IST) Apr 05
OTT Movies: ಓಟಿಟಿಯಲ್ಲಿ ಸಿನಿಮಾಗಳಿಗೆ ಸಖತ್ ರೆಸ್ಪಾನ್ಸ್ ಸಿಗುತ್ತೆ. ಥಿಯೇಟರ್ಗಳಲ್ಲಿ ಡಿಸಾಸ್ಟರ್ ಆದ ಚಿತ್ರಗಳು ಕೂಡ ಓಟಿಟಿಯಲ್ಲಿ ಹಿಟ್ ಆಗೋದು ಕಾಮನ್.ಥಿಯೇಟರ್ನಲ್ಲಿ ಸೋತ ಎರಡು ತೆಲುಗು ಚಿತ್ರಗಳು ಪ್ರೈಮ್ ವಿಡಿಯೋದಲ್ಲಿ ಇಂಡಿಯಾ ವೈಡ್ ಟ್ರೆಂಡ್ ಆಗುತ್ತಿವೆ. ಆ ಸಿನಿಮಾಗಳು ಯಾವುವು?
11:21 AM (IST) Apr 05
11:00 AM (IST) Apr 05
10:28 AM (IST) Apr 05
ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಸಚಿವ ಎನ್ಎಸ್ ಬೋಸರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಮತ್ತು ಗ್ಯಾರಂಟಿ ಯೋಜನೆಗಳು ಪಕ್ಷದ ಗೆಲುವಿಗೆ ಪ್ರಮುಖ ಕಾರಣವಾಗಲಿದ್ದು, ಬಿಜೆಪಿಯ ಅಪಪ್ರಚಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು
09:43 AM (IST) Apr 05
LPG Gas Stove: ಎಲ್ಪಿಜಿ ಗ್ಯಾಸ್ ಸ್ಟವ್ ಒಮ್ಮೊಮ್ಮೆ ಸರಿಯಾಗಿ ಉರಿಯೋದಿಲ್ಲ. ಹೀಗಾದಾಗ ಸಿಲಿಂಡರ್ ಗ್ಯಾಸ್ ಉಳಿತಾಯ ಮಾಡಲು ಆಗೋದಿಲ್ಲ. ಕೊಬ್ಬರಿ ಎಣ್ಣೆಯಿಂದ ಸಿಲಿಂಡರ್ ಗ್ಯಾಸ್ ಉಳಿತಾಯ ಮಾಡಬಹುದು. ಏನು ಮಾಡಬಹುದು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
09:15 AM (IST) Apr 05
09:07 AM (IST) Apr 05
Bhagyalakshmi Kannada Serial Episode Update: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯ ಮದುವೆಯದ್ದೇ ಸಮಸ್ಯೆ ಆಗಿದೆ. ಮೊದಲು ಇಷ್ಟವಿಲ್ಲದೆ ತಾಂಡವ್ನನ್ನು ಮದುವೆಯಾಗಿ 16 ವರ್ಷ ನರಕ ಅನುಭವಿಸಿದ್ದ ಭಾಗ್ಯ, ಈಗ ಇಷ್ಟದಂತೆ ಮದುವೆ ಆಗಲು ರೆಡಿ. ಇದಕ್ಕೆ ಮಗಳೇ ಅಡ್ಡಿಯಾದಳು. ಈ ಬಗ್ಗೆ ಮಾಹಿತಿಯಿದೆ.
08:51 AM (IST) Apr 05
ಸಿಂಧನೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜನರು ತನ್ನನ್ನು ಹೊಗಳಿದರೂ ಚುನಾವಣೆಯಲ್ಲಿ ಜೆಡಿಎಸ್ಗೆ ಮತ ನೀಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ರಾಜ್ಯ ಸರ್ಕಾರದ ಜೊತೆ ನಿಲ್ಲುವುದಾಗಿ ಹೇಳಿದರು.
08:22 AM (IST) Apr 05
2019ರ ಏಪ್ರಿಲ್ 1ಕ್ಕೂ ಮುನ್ನ ನೋಂದಣಿಯಾದ ಹಳೆಯ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯವಾಗಿದೆ. ಈ ನಿಯಮವನ್ನು ಹಿಂಪಡೆದಿದೆ ಎಂಬ ಸುಳ್ಳು ಸುದ್ದಿಗಳನ್ನು ನಂಬದಂತೆ ಸಾರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ಹೈಕೋರ್ಟ್ ಕೂಡ ಯಾವುದೇ ತಡೆಯಾಜ್ಞೆ ನೀಡಿಲ್ಲ ಎಂದು ತಿಳಿಸಿದೆ.
07:49 AM (IST) Apr 05
ಎಸ್ಎಸ್ಎಲ್ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ರಾಜ್ಯಪಾಲರು ಪತ್ರ ಬರೆದಿದ್ದಾರೆ. ಇದನ್ನು ಹಿಂದಿ ಹೇರಿಕೆಯ ಯತ್ನ ಎಂದು ಖಂಡಿಸಿರುವ ಕರವೇ 'ರಾಜ್ಯಪಾಲರೇ ಕರ್ನಾಟಕ ಬಿಟ್ಟು ತೊಲಗಿ' ಘೋಷಣೆಯೊಂದಿಗೆ ರಾಜಭವನ ಮುತ್ತಿಗೆ.
07:27 AM (IST) Apr 05
ಹೊಸಪೇಟೆ ಭಾಗದಲ್ಲಿ ಟೊಮ್ಯಾಟೋ ಬೆಲೆ ದಾಖಲೆ ಮಟ್ಟಕ್ಕೆ ಕುಸಿದಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಫ್ತು ವ್ಯತ್ಯಯದಿಂದಾಗಿ ಬೇಡಿಕೆ ಕಡಿಮೆಯಾಗಿದ್ದು, ಸಾಗಾಣಿಕೆ ವೆಚ್ಚವೂ ಸಿಗದ ಕಾರಣ ರೈತರು ಟೊಮ್ಯಾಟೋವನ್ನು ರಸ್ತೆಗೆ ಸುರಿದು, ಜಾನುವಾರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.
07:21 AM (IST) Apr 05
ಕಾರ್ಕಳದ 12 ವರ್ಷದ ಬಾಲಕ ಸಮರ್ಥ್, ತನಿಮಾನಿಗ ಹೆಣ್ಣು ದೈವಕ್ಕೆ ಗಗ್ಗರ ಕಟ್ಟಿ ಭೂತ ಕೋಲ ನೆರವೇರಿಸಿದ್ದಾನೆ. ತನ್ನ ಅಜ್ಜ ಮತ್ತು ತಂದೆಯ ಮೂರು ತಲೆಮಾರುಗಳ ಪರಂಪರೆಯನ್ನು ಮುಂದುವರಿಸಿರುವ ಈ ಬಾಲಕನ ದೈವಾರಾಧನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.