ಬೆಂಗಳೂರು(ಮೇ.30) ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಸುರಿದ ಭಾರಿ ಮಳೆಗೆ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಇದರ ಪರಿಣಾಮ ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪ್ರೌಢಶಾಲೆವರೆಗೆ ರಜೆ ಘೋಷಿಸಲಾಗಿದೆ. ಇತ್ತ ಮಂಗಳೂರು ಸೇರಿದಂತೆ ಹಲವು ಪ್ರದೇಶಗಳ ರಸ್ತೆಗಳು ಜಲಾವೃತಗೊಂಡಿದೆ. ಭಾರಿ ಪ್ರಮಾಣದ ನೀರು ರಸ್ತೆಗಳಲ್ಲಿ ಹರಿಯುತ್ತಿದೆ.

11:00 PM (IST) May 30
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್, ದಕ್ಷಿಣ ಏಷ್ಯಾದಲ್ಲಿ ಭಾರತದ ಪ್ರಾಬಲ್ಯವನ್ನು ಒಪ್ಪಿಕೊಳ್ಳುವುದಿಲ್ಲ ಮತ್ತು ಸಿಂಧೂ ಜಲ ಒಪ್ಪಂದದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
10:47 PM (IST) May 30
ಆಹಾರದ ಬೆಲೆಗಳನ್ನು ಕಡಿಮೆ ಮಾಡಲು ಮತ್ತು ಸ್ಥಳೀಯ ಸಂಸ್ಕರಣಾ ಉದ್ಯಮಕ್ಕೆ ಸಹಾಯ ಮಾಡಲು ಭಾರತ ಸರ್ಕಾರವು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಿದೆ.
10:26 PM (IST) May 30
ಜಾಗತಿಕ ತಾಪಮಾನ ಏರಿಕೆಯಿಂದ ಹಿಂದೂ ಕುಶ್ ಹಿಮಾಲಯವು ತನ್ನ ಮಂಜುಗಡ್ಡೆಯ 75% ನಷ್ಟು ಭಾಗವನ್ನು ಕಳೆದುಕೊಳ್ಳಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ಗೆ ಸೀಮಿತಗೊಳಿಸಿದರೆ, ಹಿಮನದಿಯ ಮಂಜುಗಡ್ಡೆಯ 40-45% ರಷ್ಟನ್ನು ಉಳಿಸಬಹುದು.
10:23 PM (IST) May 30
ಸ್ಯಾಂಡಲ್’ವುಡ್ ನ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಅವರು ತಮ್ಮ ಮುದ್ದಿನ ಮಗಳ ಜೊತೆ ಮುದ್ದಾದ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಫೋಟೊ ವೈರಲ್ ಆಗುತ್ತಿದೆ.
09:49 PM (IST) May 30
09:16 PM (IST) May 30
ಕೇಂದ್ರ ಸರ್ಕಾರವು ರಾಜ್ಯಗಳಿಗೆ ₹81,735 ಕೋಟಿ ಹೆಚ್ಚುವರಿ ತೆರಿಗೆ ವಿಕೇಂದ್ರೀಕರಣ ಕಂತನ್ನು ಜೂನ್ 2 ರಂದು ಬಿಡುಗಡೆ ಮಾಡಲಿದೆ. ಇದು ಜೂನ್ 10 ರಂದು ಬಿಡುಗಡೆಯಾಗುವ ನಿಯಮಿತ ಮಾಸಿಕ ಕಂತಿಗೆ ಹೆಚ್ಚುವರಿಯಾಗಿದೆ.
09:05 PM (IST) May 30
09:02 PM (IST) May 30
ಭಾರತ ಹವಾಮಾನ ಇಲಾಖೆ (ಐಎಂಡಿ) ಮುಂಬರುವ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಗಮನಾರ್ಹ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಲಾಗಿದೆ.
08:44 PM (IST) May 30
ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಅವರನ್ನು ಕೇರಳದ ಸಮುದಾಯ ಅತ್ಯಂತ ವೈಭವದಿಂದ ಸ್ವಾಗತಿಸಿದ್ದು, ನೆಟ್ಟಿಗರಿಂದ ನೆಗೆಟಿವ್ ಪ್ರತಿಕ್ರಿಯೆಗಳಿಗೆ ಕಾರಣವಾಯಿತು.
08:37 PM (IST) May 30
08:01 PM (IST) May 30
06:57 PM (IST) May 30
06:51 PM (IST) May 30
ಆಶಿಶ್ ನೆಹ್ರಾ ರವರ ಅನುಗ್ರಹ, ಗುರು ಕೃಪಾಕಟಾಕ್ಷದ ಮಾರ್ಗದರ್ಶನದಲ್ಲಿ, ತರಬೇತಿ ಪಡೆಯುತ್ತಿರುವ ಗುಜರಾತ್ ಟೈಟಾನ್ಸ್ ಆಟಗಾರರು ಐಪಿಎಲ್ 2025 ರಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆನೆ ನಡೆದದ್ದೇ ದಾರಿ ಎನ್ನುತ್ತಿದ್ದಾರೆ.
06:45 PM (IST) May 30
ತಿರುಪತ್ತೂರಿನ ಒಂದು ದಂತ ಚಿಕಿತ್ಸಾಲಯದಲ್ಲಿ ಶುದ್ಧೀಕರಣವಿಲ್ಲದ ಸಲೈನ್ ಬಾಟಲಿಗಳ ಬಳಕೆಯಿಂದ ಮಾರಕ ಬ್ಯಾಕ್ಟೀರಿಯಾ ಹರಡಿ ಎಂಟು ಮಂದಿ ಸಾವಿಗೀಡಾಗಿದ್ದಾರೆ. 'ದಿ ಲ್ಯಾನ್ಸೆಟ್' ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
06:26 PM (IST) May 30
ತುಡರುಂ ಸಿನಿಮಾದಿಂದ ಹಿಡಿದು ಜೆರ್ರಿ ಸಿನಿಮಾವರೆಗೂ ಈ ವಾರ ಮಲಯಾಳಂ ನ ಈ ಸೂಪರ್ ಥ್ರಿಲ್ಲರ್ ಸಿನಿಮಾಗಳು OTTಗೆ ಬರಲಿದೆ. ಮಿಸ್ ಮಾಡದೇ ಸಿನಿಮಾ ನೋಡಿ.
06:10 PM (IST) May 30
06:02 PM (IST) May 30
05:43 PM (IST) May 30
ಚಾಮರಾಜನಗರದಲ್ಲಿ ಗ್ಯಾಸ್ ಡೆಲಿವರಿ ನೀಡಲು ಬಂದ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ಅತ್ಯಾ*ಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಈ ಘಟನೆ ಮಹಿಳೆಯರ ಸುರಕ್ಷತೆ ಬಗ್ಗೆ ಗಂಭೀರ ಚಿಂತನೆಗೆ ಎಡೆಮಾಡಿಕೊಟ್ಟಿದೆ.
05:37 PM (IST) May 30
05:23 PM (IST) May 30
04:54 PM (IST) May 30
ಈಗ ನಾಲ್ಕು ತಂಡಗಳಿದ್ದು, ಅವುಗಳಲ್ಲಿ ಯಾವ ತಂಡ ಈ ಬಾರಿಯ ಐಪಿಎಲ್ ಟ್ರೋಫಿ ಗೆಲ್ಲಲಿದೆ?
04:33 PM (IST) May 30
04:28 PM (IST) May 30
04:23 PM (IST) May 30
ಮನೆಯ ಮುಖ್ಯ ದ್ವಾರವು ವಾಸ್ತು ಪ್ರಕಾರ ಇಂಥದ್ದೇ ದಿಕ್ಕಲ್ಲಿದ್ದರೆ ಶುಭ. ಇಲ್ಲದಿದ್ದರೆ ಅಂಥ ಮನೆಯಲ್ಲಿರುವವರಿಗೆ ಸಂಕಷ್ಟ ಎದುರಾಗಬಹುದು. ವಾಸ್ತು ಪ್ರಕಾರ ಸಾಮಾನ್ಯವಾಗಿ ಪೂರ್ವ, ಉತ್ತರ ಮತ್ತು ಈಶಾನ್ಯ ದಿಕ್ಕಿನಲ್ಲಿ ಮನೆ ಮುಖ್ಯ ದ್ವಾರವಿದ್ದರೆ ಶುಭ.
04:21 PM (IST) May 30
ನೀರನ್ನು ಅಸ್ತ್ರವನ್ನಾಗಿ ಮಾಡುವ ಭಾರತದ ಯೋಜನೆಯನ್ನು ತಿರಸ್ಕರಿಸಿರುವ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಸಿಂಧೂ ನದಿ ನೀರು ಒಪ್ಪಂದದ ರೆಡ್ಲೈನ್ ದಾಟಲು ಭಾರತಕ್ಕೆ ಬಿಡೋದಿಲ್ಲ ಎಂದಿದ್ದಾರೆ.
04:12 PM (IST) May 30
ಅಮ್ಮಾ ಎಂದರೇನೇ ತ್ಯಾಗಕ್ಕೆ ಮತ್ತೊಂದು ಹೆಸರು ಎನ್ನುವುದನ್ನು ಸಾಬೀತು ಮಾಡಿದ್ದಾರೆ ಇಲ್ಲೊಬ್ಬ ಮಹಿಳೆ. ಮಗನಿಗೆ ಮೂರು ಬಾರಿ ಮರುಜನ್ಮ ನೀಡಿರುವ ಮಹಾತಾಯಿಯ ಸ್ಟೋರಿ ಕೇಳಿ...
03:52 PM (IST) May 30
03:46 PM (IST) May 30
ಥೈಲ್ಯಾಂಡ್ನ ಫುಕೆಟ್ನಲ್ಲಿರುವ ಟೈಗರ್ ಕಿಂಗ್ಡಮ್ನಲ್ಲಿ ಭಾರತೀಯ ಪ್ರವಾಸಿಗರೊಬ್ಬರ ಮೇಲೆ ಹುಲಿಯೊಂದು ದಾಳಿ ಮಾಡಿದೆ..
03:43 PM (IST) May 30
ಏಪ್ರಿಲ್ 9 ರಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಚಿನ್ನದ ಸಾಲಗಳ ಕುರಿತು ಸಮಗ್ರ ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
03:27 PM (IST) May 30
'ಕಮಲ್ ಹಾಸನ್ ಕ್ಷಮೆ ಕೇಳಿ ದೊಡ್ಡೋರು ಆಗಬಹುದಿತ್ತು.. ಬೇಡದ ಜಾಗದಲ್ಲಿ.. ಬೇಡದ ವಿಷ್ಯ ಮಾತಾಡಿರೋದು ಸರಿಯಲ್ಲ.. ಪ್ರೀತಿ ಇರೋ ಕಡೆ.. ಕ್ಷಮೆ ಮತ್ತು ಗೌರವನೂ ಇರಬೇಕು. ಈ ಥರಾ ಹೇಳಿಕೆಯಿಂದ ಬೇರೆ ನಟರಿಗೂ ತೊಂದರೆ…
03:23 PM (IST) May 30
ಆರ್ಬಿಸಿ ತಂಡ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಸಂಭ್ರಮಾಚರಿಸಿದರೆ, ಮಹಿಳೆಯೊಬ್ಬಳು ತನ್ನ ದಾಂಪತ್ಯವನ್ನೇ ಪಣಕ್ಕಿಟ್ಟಿದ್ದಾಳೆ. ಏನಿದು ವಿಷ್ಯ?
03:20 PM (IST) May 30
ಉಳ್ಳಾಲದ ಭೂಕುಸಿತದಲ್ಲಿ ಮನೆ ಕುಸಿದು ಮೂವರು ಸಾವು. ತಾಯಿ ಅಶ್ವಿನಿ ಮಕ್ಕಳನ್ನು ರಕ್ಷಿಸಲು ಗೋಡೆ ತಡೆದು ಪ್ರಜ್ಞೆ ಕಳೆದುಕೊಂಡರು. ರಕ್ಷಣಾ ಕಾರ್ಯಾಚರಣೆ ತಡವಾದ ಕಾರಣ ಇಬ್ಬರು ಮಕ್ಕಳು ಮೃತಪಟ್ಟರು. ಅಶ್ವಿನಿ ಸ್ಥಿತಿ ಗಂಭೀರ, ಮಕ್ಕಳ ಸಾವಿನ ವಿಚಾರ ಮುಚ್ಚಿಡಲಾಗಿದೆ. ಗಂಡ, ಮಾವನಿಗೂ ಗಾಯ.
03:18 PM (IST) May 30
ಐಪಿಎಲ್ ಟೂರ್ನಿಯ ಸೆನ್ಸೇಶನ್, 14 ವರ್ಷದ ವೈಭವ್ ಸೂರ್ಯವಂಶಿ ಹಾಗೂ ಕ್ರಿಕೆಟಿನ ಪೋಷಕರನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯವಂಶಿ ಮೋದಿ ಕಾಲಿಗೆರಗಿ ಆಶೀರ್ವಾದ ಪಡೆದಿದ್ದಾರೆ.
02:36 PM (IST) May 30
ಕರಾವಳಿ ಪ್ರದೇಶದಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು, ಕಾಂಗ್ರೆಸ್ ಸರ್ಕಾರ ಕೊಲೆಗಳಲ್ಲಿ 'ರಾಜಕೀಯ ಕೂಳು' ಬೇಯಿಸಿಕೊಳ್ಳುತ್ತಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.
02:07 PM (IST) May 30
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಫೈನಲ್ ಪ್ರವೇಶಿಸುತ್ತಿದ್ದಂತೆಯೇ ಕಪ್ಪು ನಮ್ದೇ ಎನ್ನೋದು ಗ್ಯಾರೆಂಟಿಯಾಗಿದೆ. ಇದರ ಜೊತೆಗೀಗ 'ರಾಜಧಾನಿನೂ ನಮ್ದೇ' ಎನ್ನೋ ಕೂಗು ಬಂದಿದೆ. ಅದೇನದು ನೋಡಿ!
01:59 PM (IST) May 30
01:29 PM (IST) May 30
ಕೇರಳ ಮೂಲದ ವ್ಯಕ್ತಿಯೊಬ್ಬರಿಗೆ ಅದೃಷ್ಟಲಕ್ಷ್ಮಿ ಎರಡೆರಡು ಬಾರಿ ಒಲಿದಿದ್ದಾಳೆ. ಅವರಿಗೆ ದುಬೈ ಡ್ಯೂಟಿ-ಫ್ರೀ ಮಿಲೇನಿಯಮ್ ಮಿಲಿಯನೇರ್ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ $1 ಮಿಲಿಯನ್ ಲಾಟರಿ ಹೊಡೆದಿದೆ.
01:17 PM (IST) May 30
2019 ರಲ್ಲಿ ಬಿಡುಗಡೆಯಾದ ಹ್ಯುಂಡೈ ವೆನ್ಯೂ 6,68,000 ಯೂನಿಟ್ಗಳನ್ನು ಮಾರಾಟ ಮಾಡುವ ಮೂಲಕ ಯಶಸ್ಸನ್ನು ಕಂಡಿದೆ. ಸ್ಟೈಲಿಶ್ ವಿನ್ಯಾಸ, ಆಧುನಿಕ ತಂತ್ರಜ್ಞಾನ ಮತ್ತು ಪ್ರಭಾವಶಾಲಿ ಕಾರ್ಯಕ್ಷಮತೆಯಿಂದಾಗಿ ಈ ಕಾರು ಜನಪ್ರಿಯವಾಗಿದೆ. ಹೊಸ ತಲೆಮಾರಿನ ವೆನ್ಯೂ 2025 ರ ಅಕ್ಟೋಬರ್ನಲ್ಲಿ ಬಿಡುಗಡೆಯಾಗಬಹುದು.
01:09 PM (IST) May 30
ಐಪಿಎಲ್ 2025 ಫೈನಲ್ಗೆ ಲಗ್ಗೆ ಇಟ್ಟ ಆರ್ಸಿಬಿ ಈ ಬಾರಿ ಟ್ರೋಫಿ ಗೆಲ್ಲುತ್ತಾ? ಚಾಂಪಿಯನ್ ಪಟ್ಟ ಖಚಿತ ಎನ್ನುತ್ತಿದ್ದಾರೆ. ಫ್ಯಾನ್ಸ್. ಕಾರಣ 14ರಲ್ಲಿ 11ರ ಲೆಕ್ಕ ಮುಂದಿಟ್ಟಿದ್ದಾರೆ. ಏನಿದು 14ರಲ್ಲಿ 11 ಸ್ಟ್ಯಾಟ್ಸ್
01:01 PM (IST) May 30
'ಕನ್ಯತ್ವ' ಒಂದು ರಾತ್ರಿಯ ಆಸ್ತಿ... ಎನ್ನುತ್ತಲೇ ಮದುವೆಯಾಗುವ ಗಂಡುಮಕ್ಕಳಿಗೆ ಉಚಿತ ಸಲಹೆ ಕೊಟ್ಟು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಅವರು ಹೇಳಿದ್ದೇನು ನೋಡಿ!