Published : Aug 25, 2026, 07:09 AM ISTUpdated : Aug 25, 2026, 10:35 PM IST

Karnataka News Live: ಚಿಕ್ಕಣ್ಣ ಪಬ್ಲಿಕ್ ಮದುವೆ ಕರೆಯೋಲೆ; 'ಮದುವೆ' ಆದ್ಮೇಲೆ ಟಾಕ್ಸಿಕ್ ಸಿನಿಮಾ ನೋಡ್ತೀನಿ' ಎಂದ ಕಾಮಿಡಿ ಕಿಂಗ್!

ಸಾರಾಂಶ

ಬೆಂಗಳೂರು: ಕೇಂದ್ರ ಸರ್ಕಾರವು ಅಂಬಾನಿ, ಅದಾನಿ ಗುಲಾಮ ಎಂಬುದು ಈಗಲೂ ನಮ್ಮ ಅಭಿಪ್ರಾಯ. ಆದರೆ ನ್ಯಾಯಯುತವಾಗಿ ರಾಜ್ಯದಲ್ಲಿ ಅವರಿಗೆ ಗುತ್ತಿಗೆ ಸಿಕ್ಕಿದರೆ ನಾವು ಏನೂ ಮಾಡಲಾಗುವುದಿಲ್ಲ. ಅದಾನಿ ಅವರು ನಮ್ಮ ಸರ್ಕಾರಿ ಗುತ್ತಿಗೆದಾರ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನ್ಯಾಯಯುತವಾಗಿ ಅದಾನಿ ಅವರಿಗೆ ನಮ್ಮ ಸರ್ಕಾರದ ಪ್ರತಿಷ್ಠಿತ ಯೋಜನೆಯ ಟೆಂಡರ್‌ ಸಿಕ್ಕಿದೆ. ಹೀಗಾಗಿ ಅವರು ಸೌಜನ್ಯಕ್ಕೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಬಹುದು ಎಂದು ಸಮರ್ಥಿಸಿಕೊಂಡರು.

ರಾಹುಲ್‌ ಗಾಂಧಿ ಅವರು ಅಂಬಾನಿ, ಅದಾನಿ ಅವರನ್ನು ಬೈಯುತ್ತಿರುತ್ತಾರೆ ಎಂಬ ಪ್ರಶ್ನೆಗೆ, ‘ಈಗಲೂ ನಮ್ಮ ಅಭಿಪ್ರಾಯಕ್ಕೆ ನಾವು ಬದ್ಧರಿದ್ದೇವೆ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಗುಲಾಮ ಎಂಬುದನ್ನು ಈಗಲೂ ಹೇಳುತ್ತೇವೆ’ ಎಂದರು.

ಅದಾನಿಗೆ ಈಗ ಟೆಂಡರ್ ಸಿಕ್ಕಿದೆ. ಬಿಜೆಪಿ ನಾಯಕರು ಸುರಂಗ ರಸ್ತೆ ಮಾಡಬೇಕು ಎನ್ನುತ್ತಾರೋ ಅಥವಾ ಇಲ್ಲ ಎನ್ನುತ್ತಾರೋ? ಬಿಜೆಪಿ ಸಂಸದರು ಈ ಹಿಂದೆ ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅವರ ನೆಂಟರಿಗೆ ಸಿಕ್ಕಿದೆ. ನೆಂಟರು, ಬೀಗರು ಟೆಂಡರ್ ಹಾಕಬಹುದು. ನಾವು ಬೇಡ ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದರು.

ಅದಾನಿ ಬಗ್ಗೆ ನಮ್ಮ ಅಭಿಪ್ರಾಯ ಏನೇ ಇರಬಹುದು. ನಮ್ಮ ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ನಾನೇನಾದರೂ ಮಾಡಲು ಆಗುತ್ತಾ? ಕಾನೂನು ಪಾಲನೆ ಮಾಡಬೇಕು ಅಷ್ಟೇ. 

10:35 PM (IST) Aug 25

ಚಿಕ್ಕಣ್ಣ ಪಬ್ಲಿಕ್ ಮದುವೆ ಕರೆಯೋಲೆ; 'ಮದುವೆ' ಆದ್ಮೇಲೆ ಟಾಕ್ಸಿಕ್ ಸಿನಿಮಾ ನೋಡ್ತೀನಿ' ಎಂದ ಕಾಮಿಡಿ ಕಿಂಗ್!

ಸ್ಯಾಂಡಲ್‌ವುಡ್ 'ಕಾಮಿಡಿ ಕಿಂಗ್' ನಟ ಚಿಕ್ಕಣ್ಣ ಮದುವೆ ಇದೇ ತಿಂಗಳು 29 ಹಾಗೂ 30ಕ್ಕೆ ನಡೆಯಲಿದೆ. ಈ ಸಂಬಂಧ ಸುದ್ದಿಗೋಷ್ಠಿ ಆಯೋಜಿಸಿದ್ದ ನಟ ಚಿಕ್ಕಣ್ಣ ಅವರು 'ಎಲ್ಲರೂ ನನ್ನ ಮದುವೆ ಬನ್ನಿ.‌ ಯಾರು ಬರೋಕೆ ಆಗಲ್ವೋ ಅವರು ಮನೆಯಿಂದಲೇ ನನ್ನನ್ನ ಹರಸಿ' ಎಂದು ಹೇಳಿದ್ದಾರೆ.

Read Full Story

08:31 PM (IST) Aug 25

30,000 ಸಂಬಳ! ನೀವೂ ಕಾರು ಖರೀದಿಸಬಹುದು.. 20-4-10 ಸೂತ್ರ ಫಾಲೋ ಮಾಡಿ..!

30 ಸಾವಿರ ರೂಪಾಯಿ ಸಂಬಳ ಪಡೆಯುವವರು "20-4-10" ಸೂತ್ರವನ್ನು ಅನುಸರಿಸುವ ಮೂಲಕ ಮತ್ತು ಬಜೆಟ್ ಕಾರನ್ನು ಆಯ್ಕೆ ಮಾಡುವ ಮೂಲಕ ಕಾರ್ ಖರೀದಿಸಬಹುದು. ಡೌನ್ ಪೇಮೆಂಟ್, ಇಎಂಐ ಮಿತಿ ಮತ್ತು ಕಾರಿನ ನಿರ್ವಹಣಾ ವೆಚ್ಚಗಳನ್ನು ಮೊದಲೇ ಯೋಜಿಸುವುದು ಕಾರ್ ಖರೀದಿಯ ಕನಸನ್ನು ಸುಲಭಗೊಳಿಸುತ್ತದೆ.

Read Full Story

08:07 PM (IST) Aug 25

ಬೆಂಗಳೂರು 'ಗಾಂಧಿ‌ನಗರ'ದಲ್ಲಿ ಯಶ್ ಹೊಸ ದಾಖಲೆ.. ಈ ರೆಕಾರ್ಡ್ ಮಾಡಿದ ಏಕೈಕ ನಟ ರಾಕಿಂಗ್ ಸ್ಟಾರ್!

ಯಶ್ ಅಭಿನಯದ ವಿಶ್ವಮಟ್ಟದ ಟಾಕ್ಸಿಕ್ ಸಿನಿಮಾ ನಾಳೆ ಬಿಡುಗಡೆ ಆಗಲಿರುವುದು ಗೊತ್ತೇ ಇದೆ. ಬೆಂಗಳೂರಿನಲ್ಲಿ ಬೆಳಿಗ್ಗೆ 6 ಗಂಟೆಯಿಂದಲೇ ಪ್ರದರ್ಶನ ಆರಂಭವಾಗಲಿರುವುದು ವಿಶೇಷ. ಇಡೀ ಕರ್ನಾಟಕದಾದ್ಯಂತ ಒಟ್ಟೂ ಸ್ಕ್ರೀನ್‌ಗಳಲ್ಲಿ ಟಾಕ್ಸಿಕ್ ಪ್ರದರ್ಶನ ಆಗಲಿದೆ? ಈ ಸ್ಟೋರಿ ನೋಡಿ..

Read Full Story

07:20 PM (IST) Aug 25

"ನಾನು ಕರೆದಾಗ ಬರಬೇಕು" - ಸಾಗರದಲ್ಲಿ ಬ್ಲ್ಯಾಕ್‌ಮೇಲ್‌ಗೆ 17 ವರ್ಷದ ವಿದ್ಯಾರ್ಥಿನಿ ಬಲಿ

ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ವಿದ್ಯಾರ್ಥಿನಿ ಕಿಡಿಗೇಡಿಯೊಬ್ಬನ ಬ್ಲ್ಯಾಕ್‌ಮೇಲ್‌ ಹಾಗೂ ಕಿರುಕುಳಕ್ಕೆ ಬೇಸತ್ತು ವಿಷಸೇವಿಸಿ ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಫೋಟೋಗಳನ್ನು ಇಟ್ಟುಕೊಂಡು 'ನಾನು ಕರೆದಾಗ ಬರಬೇಕು' ಎಂದು ಬೆದರಿಸುತ್ತಿದ್ದ ಆರೋಪಿ ವಿರುದ್ಧ ಕ್ರಮ ಜರೂಗಿಸಲಾಗಿದೆ.

Read Full Story

06:59 PM (IST) Aug 25

ಊರ್ವಶಿ ಚಿತ್ರಮಂದಿರ ನೆಲಸಮ ಪ್ರಕ್ರಿಯೆ ಸದ್ಯಕ್ಕಿಲ್ಲ; ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆಯಾಜ್ಞೆ!

ಸದ್ಯಕ್ಕೆ ಊರ್ವಶಿ ಚಿತ್ರಮಂದಿರ ನೆಲಸಮವಾಗುವುದು ತಪ್ಪಿದೆ. ಸುಪ್ರೀಂ ಕೋರ್ಟ್ ಸೂಚಿಸಿದಂತೆ ಅಗತ್ಯ ಪ್ರಮಾಣಪತ್ರವನ್ನು ತಕ್ಷಣವೇ ಸಲ್ಲಿಸಲು ಹೈಕೋರ್ಟ್ ಆಡಳಿತ ಮಂಡಳಿಗೆ ಸೂಚಿಸಿದೆ. ಈ ಸುದ್ದಿಯಿಂದಾಗಿ ಬೆಂಗಳೂರಿನ ಸಾವಿರಾರು ಸಿನಿಮಾ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ನಮ್ಮೂರಿನ ಐತಿಹಾಸಿಕ ಹೆಗ್ಗುರುತೊಂದು ಸದ್ಯಕ್ಕೆ ಉಳಿದುಕೊಂಡಿದೆ.

Read Full Story

06:24 PM (IST) Aug 25

ಎಲ್ಲರೂ ಕಾರ್ ತಗೊಳ್ತಿದ್ರೆ ಕನ್ನಡಿಗರ ನೆಚ್ಚಿನ ಗಾಯಕಿ ತಗೊಂಡ್ರು ಎಲೆಕ್ಟ್ರಿಕ್ ಬೈಕ್ - ಅರ್ಚನಾ ಉಡುಪ ಬಾಲ್ಯದ ಕನಸು ನನಸು!

ಗಾಯಕಿ ಅರ್ಚನಾ ಉಡುಪ ಅವರು ರಾಯಲ್ ಎನ್‌ಫೀಲ್ಡ್‌ನ ಮೊಟ್ಟಮೊದಲ ಎಲೆಕ್ಟ್ರಿಕ್ ಬೈಕ್ 'ಫ್ಲೈಯಿಂಗ್ ಫೆಲಾ' ಖರೀದಿಸಿ ತಮ್ಮ ಬಾಲ್ಯದ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಈ ಲೇಖನವು ಅವರ ಸಂತಸದ ಕ್ಷಣಗಳ ಜೊತೆಗೆ, ಈ ಹೊಸ ಎಲೆಕ್ಟ್ರಿಕ್ ಬೈಕ್‌ನ ಬೆಲೆ, ಬ್ಯಾಟರಿ, ವೇಗ, ಮತ್ತು ವಿನ್ಯಾಸದ ವಿವರ ಇಲ್ಲಿದೆ.

Read Full Story

05:16 PM (IST) Aug 25

ಶಾಸಕ ಪ್ರದೀಪ್ ಈಶ್ವರ್‌ ವಿರುದ್ಧ ಜಾಮೀನು ರಹಿತ ವಾರೆಂಟ್ (NBW) ಜಾರಿ ಮಾಡಿದ ಕೋರ್ಟ್!

ಮಾಜಿ ಸಂಸದ ಪ್ರತಾಪ್ ಸಿಂಹ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ, ವಿಚಾರಣೆಗೆ ನಿರಂತರವಾಗಿ ಗೈರುಹಾಜರಾದ ಕಾರಣ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರೆಂಟ್ (NBW) ಜಾರಿಗೊಳಿಸಿದೆ. ಪ್ರದೀಪ್ ಈಶ್ವರ್ ಹಾಗೂ ಅವರ ವಕೀಲರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಈ ಆದೇಶ ಹೊರಬಿದ್ದಿದೆ.
Read Full Story

04:35 PM (IST) Aug 25

'ಟಾಕ್ಸಿಕ್' ಬಿಡುಗಡೆ ಹಿನ್ನೆಲೆ; ಧರ್ಮಸ್ಥಳಕ್ಕೆ‌ ಭೇಟಿ ಕೊಟ್ಟ ನಟ ದೇವಾಲಯದಲ್ಲಿ ಹೇಳಿದ ದೊಡ್ಡ ರಹಸ್ಯ ಏನು?

ಈ ವೇಳೆ ನಟ ಯಶ್ ಅವರು ‘ಎಲ್ಲರಿಗೂ ಒಳ್ಳೆಯದಾಗಲಿ, ಮುಂಜುನಾಥ ಸ್ವಾಮಿಯ ಅನುಗ್ರಹ ಎಲ್ಲರ ಮೇಲೆ ಇರಲಿ.. ನಾನು ಯಾವಾಗ್ಲೂ ಬರ್ತೀನಿ, ಪ್ರತಿ ವರ್ಷ ಬರ್ತೀನಿ.. ನನ್ನ ಎಲ್ಲಾ ಸಿನಿಮಾ ಬಿಡುಗಡೆ ಸಮಯದಲ್ಲೂ ಬರ್ತಿನಿ’ಎಂದಿದ್ದಾರೆ. ಜೊತೆಗೆ, ಮತ್ತೊಂದು ಗುಟ್ಟು ರಟ್ಟು ಮಾಡಿದ್ದಾರೆ..

Read Full Story

03:11 PM (IST) Aug 25

ಯಶ್ 'ಟಾಕ್ಸಿಕ್' ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ನ್ಯಾಯಾಲಯದಿಂದ 'ಜಾನ್ ಡೋ' ಆದೇಶ

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ನಾಳೆ ಅಂದರೆ 26 ಆಗಸ್ಟ್ 2026ರಂದು ಜಗತ್ತಿನಾದ್ಯಂತ ಬಿಡುಗಡೆ ಆಗದೆ. ಇದೀಗ, ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ವಿರುದ್ಧ ಮಾನಹಾನಿಕರ ವಿಷಯ ಪ್ರಕಟಿಸದಂತೆ ಬೆಂಗಳೂರು ನ್ಯಾಯಾಲಯದಿಂದ 'ಜಾನ್ ಡೋ' (John Doe) ಆದೇಶ ಹೊರಡಿಸಲಾಗಿದೆ.

Read Full Story

02:42 PM (IST) Aug 25

'ಟಾಕ್ಸಿಕ್' ಬಿಡುಗಡೆ ಹಿನ್ನೆಲೆ; ಧರ್ಮಸ್ಥಳಕ್ಕೆ‌ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ ನಟ ಯಶ್

ತಮ್ಮ ಕೆಜಿಎಫ್ ಸಿನಿಮಾದ ಬಿಡುಗಡೆ ಸಮಯದಿಂದ ಈ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದಾರೆ. ಕೆಜಿಎಫ್-1 ಹಾಗೂ ಕೆಜಿಎಫ್-2 ಸಿನಿಮಾ ಬಿಡುಗಡೆ ವೇಳೆ ಧರ್ಮಸ್ಥಳಕ್ಕೆ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದ ನಟ ಯಶ್ ಅವರು, ಟಾಕ್ಸಿಕ್ ಸಿನಿಮಾದ ಮಹೂರ್ತದ ಸಮಯದಲ್ಲೂ ಹೋಗಿ ಭೇಟಿಯಾಗಿದ್ದರು.

Read Full Story

02:15 PM (IST) Aug 25

Shivamogga ಉಪ್ಪಿನಕಾಯಿ ಬ್ಯುಸಿನೆಸ್; ದಿನಕ್ಕೆ 500-600 kg ಸೇಲ್, 3-4 ಕೋಟಿ ಆದಾಯ

ಶಿವಮೊಗ್ಗ ಜಿಲ್ಲೆಯ ರಿಪ್ಪನಪೇಟೆ ಬಳಿಯ 'ಬರುವೆ' ಗ್ರಾಮದ ಪಿಕಲ್ಸ್, ರಾಜ್ಯದಾದ್ಯಂತ ಪ್ರಸಿದ್ಧಿ ಪಡೆದಿದೆ. ಸುಧೀಂದ್ರ ಹೆಬ್ಬಾರ್ ಅವರು ತಮ್ಮ ತಾಯಿಯ ಪಾಕವಿಧಾನದಿಂದ ಆರಂಭಿಸಿದ ಈ ಉದ್ಯಮವು ಇಂದು ದಿನಕ್ಕೆ 500-600 ಕೆಜಿ ಉಪ್ಪಿನಕಾಯಿ ಮಾರಾಟ ಮಾಡಿ, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಿದೆ.

Read Full Story

12:55 PM (IST) Aug 25

ಕಸ್ತೂರಿರಂಗನ್ - ಇಡೀ ಪಶ್ಚಿಮ ಘಟ್ಟವನ್ನೇ ತೆರವುಗೊಳಿಸುವ ಹುನ್ನಾರ - ನೆಂಪೆ ದೇವರಾಜ್ ಕಳವಳ

ಕಸ್ತೂರಿರಂಗನ್ ವರದಿಯನ್ನು ವಿರೋಧಿಸಿ ತೀರ್ಥಹಳ್ಳಿ ಮತ್ತು ಸಾಗರದಲ್ಲಿ ಮಲೆನಾಡು ಹೋರಾಟ ಕ್ರಿಯಾಸಮಿತಿ ಹಾಗೂ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಈ ವರದಿಯು ಪಶ್ಚಿಮ ಘಟ್ಟದಿಂದ ಜನರನ್ನು ಒಕ್ಕಲೆಬ್ಬಿಸುವ ಹುನ್ನಾರವಾಗಿದ್ದು, ಮಲೆನಾಡಿನ ರೈತರಿಗೆ ಮಾರಕವಾಗಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ವರದಿಯನ್ನು ಕೈಬಿಡಲು ಆಗ್ರಹಿಸಿ, ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದೆ.
Read Full Story

12:32 PM (IST) Aug 25

ಅತ್ತಿಗೆ ಕಸಗುಡಿಸಿ ಬಂದಾಗ ಮನೇಲಿ ಮೈದುನ ಇಲ್ಲ, ₹10 ಲಕ್ಷ ಒಡವೆ ಇಲ್ಲ! ತಮ್ಮನ ಕೃತ್ಯ ಕೇಳಿ ಅಣ್ಣನೂ ಶಾಕ್!

ಹೊಸ ಬ್ಯುಸಿನೆಸ್ ಆರಂಭಿಸಲು ಹಣವಿಲ್ಲದೆ, ವ್ಯಕ್ತಿಯೊಬ್ಬ ತನ್ನ ಅಣ್ಣನ ಮನೆಗೆ ನುಗ್ಗಿ ಅತ್ತಿಗೆಯ ಚಿನ್ನಾಭರಣಗಳನ್ನು ಕದ್ದಿದ್ದಾನೆ. ಬೆಂಗಳೂರಿನ ಬೇಗೂರಿನಲ್ಲಿ ನಡೆದ ಈ ಘಟನೆಯಲ್ಲಿ, ಅಣ್ಣ ಊರಿಗೆ ಹೋದಾಗ ಹೊಂಚು ಹಾಕಿ ಕೃತ್ಯ ಎಸಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.
Read Full Story

12:29 PM (IST) Aug 25

ಶಿವಮೊಗ್ಗ ಜಿಲ್ಲೆಯಲ್ಲಿ 48,668 ಮತದಾರರ ಹೆಸರುಗಳು ಪಟ್ಟಿಯಿಂದ ಹೊರಗೆ । ಆಕ್ಷೇಪಣೆಗೆ ಸೆಪ್ಟೆಂಬರ್ 23 ಕೊನೆ ದಿನ

ಶಿವಮೊಗ್ಗ ಜಿಲ್ಲೆಯಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ನಂತರ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ದೋಷಪೂರಿತ ಮಾಹಿತಿ ಸೇರಿದಂತೆ ವಿವಿಧ ಕಾರಣಗಳಿಂದ ಸುಮಾರು 48,668 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದ್ದು, ಆಕ್ಷೇಪಣೆ ಸಲ್ಲಿಸಲು ಸೆಪ್ಟೆಂಬರ್ 23ರವರೆಗೆ ಅವಕಾಶ ಕಲ್ಪಿಸಲಾಗಿದೆ.
Read Full Story

11:47 AM (IST) Aug 25

'ಟಾಕ್ಸಿಕ್' ಜೊತೆಗೆ 'ಜಾಕಿ 42' ಥಿಯೇಟರಿಕಲ್ ಟ್ರೈಲರ್ ಪ್ರದರ್ಶನ; ಕಿರಣ್ ರಾಜ್ ಕಮಾಲ್ ಬೋನಸ್!

ಇಡೀ ಜಗತ್ತು ಸದ್ಯಕ್ಕೆ 'ಟಾಕ್ಸಿಕ್ ಮಯ'. ನಾಳೆಯಿಂದ, ಅಂದರೆ 26 ಆಗಸ್ಟ್ 2026ರಿಂದ ವಿಶ್ವದಾದ್ಯಂತ ಬಿಡುಗಡೆಯಾಗ್ತಿರೋ ಯಶ್ ಟಾಕ್ಸಿಕ್ ಸಿನಿಮಾದ ಜೊತೆಗೆ ಕರ್ನಾಟಕದಾದ್ಯಂತ ಕಿರಣ್ ರಾಜ್ ಅಭಿನಯದ 'ಜಾಕಿ 42' ಕೂಡ ಕಮಾಲ್ ಮಾಡಲಿದೆ. ಹೇಗೆ ನೋಡಿ..

Read Full Story

11:36 AM (IST) Aug 25

ಬರೋಬ್ಬರಿ ಈ 75 ದಿನ KSR ಬೆಂಗಳೂರು ನಿಲ್ದಾಣಕ್ಕೆ ಎರಡು ಮೇಮು ರೈಲು; ಭಾಗಶಃ ರದ್ದು

KrantiVeera Sangolli Rayanna Railway Station Bengaluru ಕೆಂಗೇರಿ-ರಾಮನಗರಂ ಭಾಗದಲ್ಲಿ ಹಳಿ ನವೀಕರಣ ಕಾಮಗಾರಿಯಿಂದಾಗಿ, 2026ರ ಆಗಸ್ಟ್ 29ರಿಂದ 2027ರ ಫೆಬ್ರವರಿ 19ರವರೆಗೆ ನಿಗದಿತ ದಿನಗಳಲ್ಲಿ ಮೇಮು ರೈಲುಗಳ ಸಂಚಾರವನ್ನು ಭಾಗಶಃ ರದ್ದುಗೊಳಿಸಲಾಗಿದೆ.

Read Full Story

10:57 AM (IST) Aug 25

Mandya - ಜೈಲಿನಲ್ಲಿ ಇರಬೇಕಿದ್ದ ಆರೋಪಿ ಗರ್ಲ್‌ಫ್ರೆಂಡ್ ಜೊತೆ, ಆಸ್ಪತ್ರೆಗೆ ಬಂದ ನ್ಯಾಯಾಧೀಶರಿಗೆ ಬಿಗ್ ಶಾಕ್!

ಅಕ್ರಮ ಖಾತೆ ಪ್ರಕರಣದ ಆರೋಪಿಯೊಬ್ಬನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ರಾಜಾತಿಥ್ಯ ನೀಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಜಿಲ್ಲಾ ನ್ಯಾಯಾಧೀಶರ ದಿಢೀರ್ ಭೇಟಿ ವೇಳೆ, ಯಾವುದೇ ಆರೋಗ್ಯ ಸಮಸ್ಯೆಯಿಲ್ಲದ ಕೈದಿಯು ಯುವತಿಯೊಂದಿಗೆ ವಿಶೇಷ ಕೊಠಡಿಯಲ್ಲಿದ್ದು, ವಿಐಪಿ ಚಿಕಿತ್ಸೆ ಪಡೆಯುತ್ತಿರುವುದು ಪತ್ತೆಯಾಗಿದೆ.

Read Full Story

10:44 AM (IST) Aug 25

ರಾಮಮಂದಿರ ಹುಂಡಿ ಕಳ್ಳತನ ಪ್ರಕರಣ - ಕೊನೆಗೂ ಮೌನಮುರಿದ ಮಂತ್ರಾಲಯ ಶ್ರೀಗಳು! ಸನಾತನ ಧರ್ಮದ ಬಗ್ಗೆ ಮಹತ್ವದ ಹೇಳಿಕೆ

ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ರಾಮಮಂದಿರ ಹುಂಡಿ ಕಳ್ಳತನ, ಸನಾತನ ಹಿಂದೂ ಧರ್ಮದ ಶ್ರೇಷ್ಠತೆ, ಮತ್ತು ಧಾರ್ಮಿಕ ಸಾಮರಸ್ಯದ ಬಗ್ಗೆ ಮಾತನಾಡಿದ್ದಾರೆ. ಮಠ-ಮಾನ್ಯಗಳಲ್ಲಿ ಆರ್ಥಿಕ ಪಾರದರ್ಶಕತೆಯ ಅಗತ್ಯವನ್ನು ಒತ್ತಿಹೇಳಿದ ಅವರು, ದಲಿತ ಕೇರಿಗೆ ಭೇಟಿ ನೀಡುವುದು ತಮಗೆ ಹೊಸದಲ್ಲ ಎಂದರು

Read Full Story

10:21 AM (IST) Aug 25

ಮರಡೋನಾ ‘ಹ್ಯಾಂಡ್‌ ಆಫ್‌ ಗಾಡ್‌’ ಗೋಲಿನ ಚೆಂಡು ₹32 ಕೋಟಿಗೆ ಹರಾಜು; ಖರೀದಿದಾರ ಯಾರು?

ಫುಟ್ಬಾಲ್‌ ದಂತಕಥೆ ಡಿಗೋ ಮರಡೋನಾ ಅವರ 'ಹ್ಯಾಂಡ್‌ ಆಫ್‌ ಗಾಡ್‌' ಗೋಲಿಗೆ ಬಳಸಿದ್ದ ಚೆಂಡು ಬರೋಬ್ಬರಿ 32 ಕೋಟಿ ರೂಪಾಯಿಗೆ ಹರಾಜಾಗಿದೆ. 1986ರ ಫಿಫಾ ವಿಶ್ವಕಪ್‌ನ ಈ ವಿವಾದಾತ್ಮಕ ಚೆಂಡು, ಪಂದ್ಯದ ರೆಫ್ರಿ ಅಲಿ ಬಿನ್‌ ನಾಸ್ಸೆರ್‌ ಬಳಿ 36 ವರ್ಷಗಳ ಕಾಲ ಇತ್ತು. ಈ ಹಿಂದೆ ಮರಡೋನಾ ಅವರ ಜೆರ್ಸಿ ಕೂಡ ದಾಖಲೆ ಬೆಲೆಗೆ ಮಾರಾಟವಾಗಿತ್ತು.
Read Full Story

09:47 AM (IST) Aug 25

ಟೌನ್‌ಶಿಪ್ ಸರ್ವೆಗೆ ತೆರಳಿದ್ದ ಅಧಿಕಾರಿಗಳಿಗೆ ಬಿಡದಿ ರೈತರ ಪೊರಕೆ ಏಟು ಪ್ರಕರಣ; ಹೈಕೋರ್ಟ್ ಮಹತ್ವದ ತೀರ್ಪು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆರು ರೈತರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಾಡಿಗೆ ಕಾರು ಚಾಲಕ ದೂರು ನೀಡಿರುವುದು ಅನುಮಾನಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Read Full Story

09:11 AM (IST) Aug 25

ನೈಋತ್ಯ ರೈಲ್ವೇ ವ್ಯಾಪ್ತಿಗೆ ಮಂಗಳೂರು ಸೇರಿದ್ಯಾಕೆ? ಇಲಾಖೆಯಿಂದಲೇ ಬಂತು ಸ್ಪಷ್ಟನೆ

ಮಂಗಳೂರು ರೈಲ್ವೆ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದು ಸಂಪೂರ್ಣ ಆಡಳಿತಾತ್ಮಕ ಬದಲಾವಣೆಯಾಗಿದ್ದು, ಇದರಿಂದ ಕೇರಳ ಯಾವುದೇ ನಿಲ್ದಾಣಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ

Read Full Story

08:04 AM (IST) Aug 25

ಹಳ್ಳಿಗೇರಿ ಪರಿಸರದಲ್ಲಿ 63 ಕೀಟ-ಜೇಡ ಪ್ರಭೇದಗಳ ದಾಖಲೆ - ಬಯಲಾಯ್ತು ಅಪರೂಪದ ರಹಸ್ಯಗಳು

ಹಳ್ಳಿಗೇರಿಯಲ್ಲಿ ನಡೆದ ಕ್ಷೇತ್ರ ಕಾರ್ಯಾಗಾರದಲ್ಲಿ, 35ಕ್ಕೂ ಹೆಚ್ಚು ಕೀಟ ಮತ್ತು 28ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಯಶಸ್ವಿ ಕಾರ್ಯಕ್ರಮದ ಫಲವಾಗಿ, ಸ್ಥಳೀಯ ಜೀವವೈವಿಧ್ಯ ದಾಖಲಾತಿಯ ಮಹತ್ವವನ್ನು ಸಾರುವುದರ ಜೊತೆಗೆ, ಅಪರೂಪದ ಕೀಟ ಪ್ರಪಂಚದ ಉದ್ಯಾನ ನಿರ್ಮಾಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

Read Full Story

07:44 AM (IST) Aug 25

ದೊಡ್ಡಬಳ್ಳಾಪುರ-ದಾಬಸ್‌ಪೇಟೆ 5000 ಎಕ್ರೆ ಕ್ವಿನ್ ಸಿಟಿಯಲ್ಲಿ ಹೊಸ ಅಧ್ಯಾಯ - MB Patil

KWIN City ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ 5000 ಎಕರೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ, ಟೊಯೊಟಾ ಸೇರಿದಂತೆ 14 ಅಗ್ರಗಣ್ಯ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ.

Read Full Story

More Trending News