LIVE NOW
Published : Aug 25, 2026, 07:09 AM ISTUpdated : Aug 25, 2026, 09:47 AM IST

Karnataka News Live: ಟೌನ್‌ಶಿಪ್ ಸರ್ವೆಗೆ ತೆರಳಿದ್ದ ಅಧಿಕಾರಿಗಳಿಗೆ ಬಿಡದಿ ರೈತರ ಪೊರಕೆ ಏಟು ಪ್ರಕರಣ; ಹೈಕೋರ್ಟ್ ಮಹತ್ವದ ತೀರ್ಪು

ಸಾರಾಂಶ

ಬೆಂಗಳೂರು: ಕೇಂದ್ರ ಸರ್ಕಾರವು ಅಂಬಾನಿ, ಅದಾನಿ ಗುಲಾಮ ಎಂಬುದು ಈಗಲೂ ನಮ್ಮ ಅಭಿಪ್ರಾಯ. ಆದರೆ ನ್ಯಾಯಯುತವಾಗಿ ರಾಜ್ಯದಲ್ಲಿ ಅವರಿಗೆ ಗುತ್ತಿಗೆ ಸಿಕ್ಕಿದರೆ ನಾವು ಏನೂ ಮಾಡಲಾಗುವುದಿಲ್ಲ. ಅದಾನಿ ಅವರು ನಮ್ಮ ಸರ್ಕಾರಿ ಗುತ್ತಿಗೆದಾರ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನ್ಯಾಯಯುತವಾಗಿ ಅದಾನಿ ಅವರಿಗೆ ನಮ್ಮ ಸರ್ಕಾರದ ಪ್ರತಿಷ್ಠಿತ ಯೋಜನೆಯ ಟೆಂಡರ್‌ ಸಿಕ್ಕಿದೆ. ಹೀಗಾಗಿ ಅವರು ಸೌಜನ್ಯಕ್ಕೆ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿರಬಹುದು ಎಂದು ಸಮರ್ಥಿಸಿಕೊಂಡರು.

ರಾಹುಲ್‌ ಗಾಂಧಿ ಅವರು ಅಂಬಾನಿ, ಅದಾನಿ ಅವರನ್ನು ಬೈಯುತ್ತಿರುತ್ತಾರೆ ಎಂಬ ಪ್ರಶ್ನೆಗೆ, ‘ಈಗಲೂ ನಮ್ಮ ಅಭಿಪ್ರಾಯಕ್ಕೆ ನಾವು ಬದ್ಧರಿದ್ದೇವೆ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಗುಲಾಮ ಎಂಬುದನ್ನು ಈಗಲೂ ಹೇಳುತ್ತೇವೆ’ ಎಂದರು.

ಅದಾನಿಗೆ ಈಗ ಟೆಂಡರ್ ಸಿಕ್ಕಿದೆ. ಬಿಜೆಪಿ ನಾಯಕರು ಸುರಂಗ ರಸ್ತೆ ಮಾಡಬೇಕು ಎನ್ನುತ್ತಾರೋ ಅಥವಾ ಇಲ್ಲ ಎನ್ನುತ್ತಾರೋ? ಬಿಜೆಪಿ ಸಂಸದರು ಈ ಹಿಂದೆ ಬಾಯಿ ಬಡಿದುಕೊಳ್ಳುತ್ತಿದ್ದರು. ಈಗ ಅವರ ನೆಂಟರಿಗೆ ಸಿಕ್ಕಿದೆ. ನೆಂಟರು, ಬೀಗರು ಟೆಂಡರ್ ಹಾಕಬಹುದು. ನಾವು ಬೇಡ ಎನ್ನಲು ಆಗುತ್ತಾ? ಎಂದು ಪ್ರಶ್ನಿಸಿದರು.

ಅದಾನಿ ಬಗ್ಗೆ ನಮ್ಮ ಅಭಿಪ್ರಾಯ ಏನೇ ಇರಬಹುದು. ನಮ್ಮ ಚಿತ್ತಾಪುರದಲ್ಲಿ ಎಸಿಸಿ ಸಿಮೆಂಟ್ ಫ್ಯಾಕ್ಟರಿ ಖರೀದಿ ಮಾಡಿದ್ದಾರೆ. ನಾನೇನಾದರೂ ಮಾಡಲು ಆಗುತ್ತಾ? ಕಾನೂನು ಪಾಲನೆ ಮಾಡಬೇಕು ಅಷ್ಟೇ. 

09:47 AM (IST) Aug 25

ಟೌನ್‌ಶಿಪ್ ಸರ್ವೆಗೆ ತೆರಳಿದ್ದ ಅಧಿಕಾರಿಗಳಿಗೆ ಬಿಡದಿ ರೈತರ ಪೊರಕೆ ಏಟು ಪ್ರಕರಣ; ಹೈಕೋರ್ಟ್ ಮಹತ್ವದ ತೀರ್ಪು

ಬಿಡದಿ ಟೌನ್‌ಶಿಪ್ ಯೋಜನೆಗೆ ಭೂ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆರು ರೈತರ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಬಾಡಿಗೆ ಕಾರು ಚಾಲಕ ದೂರು ನೀಡಿರುವುದು ಅನುಮಾನಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿದೆ.

Read Full Story

09:11 AM (IST) Aug 25

ನೈಋತ್ಯ ರೈಲ್ವೇ ವ್ಯಾಪ್ತಿಗೆ ಮಂಗಳೂರು ಸೇರಿದ್ಯಾಕೆ? ಇಲಾಖೆಯಿಂದಲೇ ಬಂತು ಸ್ಪಷ್ಟನೆ

ಮಂಗಳೂರು ರೈಲ್ವೆ ಪ್ರದೇಶವನ್ನು ಪಾಲಕ್ಕಾಡ್ ವಿಭಾಗದಿಂದ ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ. ಇದು ಸಂಪೂರ್ಣ ಆಡಳಿತಾತ್ಮಕ ಬದಲಾವಣೆಯಾಗಿದ್ದು, ಇದರಿಂದ ಕೇರಳ ಯಾವುದೇ ನಿಲ್ದಾಣಗಳನ್ನು ಕಳೆದುಕೊಳ್ಳುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ

Read Full Story

08:04 AM (IST) Aug 25

ಹಳ್ಳಿಗೇರಿ ಪರಿಸರದಲ್ಲಿ 63 ಕೀಟ-ಜೇಡ ಪ್ರಭೇದಗಳ ದಾಖಲೆ - ಬಯಲಾಯ್ತು ಅಪರೂಪದ ರಹಸ್ಯಗಳು

ಹಳ್ಳಿಗೇರಿಯಲ್ಲಿ ನಡೆದ ಕ್ಷೇತ್ರ ಕಾರ್ಯಾಗಾರದಲ್ಲಿ, 35ಕ್ಕೂ ಹೆಚ್ಚು ಕೀಟ ಮತ್ತು 28ಕ್ಕೂ ಅಧಿಕ ಜೇಡ ಪ್ರಭೇದಗಳನ್ನು ಗುರುತಿಸಲಾಗಿದೆ. ಈ ಯಶಸ್ವಿ ಕಾರ್ಯಕ್ರಮದ ಫಲವಾಗಿ, ಸ್ಥಳೀಯ ಜೀವವೈವಿಧ್ಯ ದಾಖಲಾತಿಯ ಮಹತ್ವವನ್ನು ಸಾರುವುದರ ಜೊತೆಗೆ, ಅಪರೂಪದ ಕೀಟ ಪ್ರಪಂಚದ ಉದ್ಯಾನ ನಿರ್ಮಾಣಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

Read Full Story

07:44 AM (IST) Aug 25

ದೊಡ್ಡಬಳ್ಳಾಪುರ-ದಾಬಸ್‌ಪೇಟೆ 5000 ಎಕ್ರೆ ಕ್ವಿನ್ ಸಿಟಿಯಲ್ಲಿ ಹೊಸ ಅಧ್ಯಾಯ - MB Patil

KWIN City ದೊಡ್ಡಬಳ್ಳಾಪುರ ಮತ್ತು ದಾಬಸ್‌ಪೇಟೆ ನಡುವೆ 5000 ಎಕರೆಯಲ್ಲಿ ಅಭಿವೃದ್ಧಿಪಡಿಸುತ್ತಿರುವ ಕ್ವಿನ್ ಸಿಟಿಯಲ್ಲಿ, ಟೊಯೊಟಾ ಸೇರಿದಂತೆ 14 ಅಗ್ರಗಣ್ಯ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಂಡಿವೆ.

Read Full Story

More Trending News