ಹಾಸನ: ಕೆಲವು ಬಾರಿ ಕೆಲ ಸಮಸ್ಯೆಗಳನ್ನು ಹಣದ ಆಸೆಯಿಂದ ಉದ್ಭವ ಮಾಡುತ್ತಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ದೆಹಲಿಯ ವಿದ್ಯಾರ್ಥಿಗಳ ದಂಗೆಯ ಕುರಿತು ಪ್ರತಿಕ್ರಿಯಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವಾರು ಸಂದರ್ಭಗಳಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಿವೆ, ಆದರೆ ಈ ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದನ್ನು ಈ ಮಟ್ಟದಲ್ಲಿ ಅಸಮಾಧಾನ ವ್ಯಕ್ತಪಡಿಸಿ, ದುರುಪಯೋಗ ಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಾವುದೋ ಕಾಣದ ಶಕ್ತಿಗಳು ಇದರಲ್ಲಿ ಸೇರಿವೆ. ನಮ್ಮ ದೇಶದ ಅಭಿವೃದ್ಧಿ ಸಹಿಸಲಾರದೆ ಈ ತರಹ ಅವ್ಯವಸ್ಥೆ ಮಾಡುತ್ತಿದ್ದಾರೆ ಎಂದರು.
ನಮ್ಮ ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳಲ್ಲಿ ದೇಶದ ಭದ್ರತೆಯನ್ನು ಅಸ್ಥಿರಗೊಳಿಸಲು ಹಲವಾರು ಕಾಣದ ಕೈಗಳು ಪ್ರಯತ್ನಪಡುತ್ತಿವೆ. ಆದ್ದರಿಂದ ಯುವ ಜನತೆ ತಾಳ್ಮೆಯಿಂದ ವರ್ತಿಸಬೇಕಿದೆ ಎಂದರು.
01:36 PM (IST) Jul 22
ಯುವ ರೈತ ಚೇತನ್ ಗೌಡ ಅವರು ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ದೇವಿ ಚಿತ್ರದಲ್ಲಿ ಭವ್ಯಾ ಗೌಡ ಅವರು ನಾಯಕ ಚೇತನ್ ಗೌಡ ಅವರಿಗೆ ನಾಯಕಿ ಆಗಿದ್ದಾರೆ. ಈ ಹೊಸ ಜೋಡಿ ಸ್ಯಾಂಡಲ್ವುಡ್ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
01:28 PM (IST) Jul 22
12:03 PM (IST) Jul 22
ಆರೆಕ್ಸ್ ಬೈಕಿನ ಸುತ್ತ ನಡೆಯುವ ಕಥೆಯ ಜೊತೆಗೆ ಹಾರರ್ ಕಥಾಹಂದರ ಕೂಡಾ ಇದರೊಟ್ಟಿಗೆ ಬೆಸೆದುಕೊಂಡಿದೆ. ಹಾಗಂತ ಬೆನ್ನುಬೀಳುವ ದೆವ್ವ, ಪ್ರೇತಕಾಟ, ರೆಗ್ಯುಲರ್ ಎನ್ನಿಸುವ ಭಯಾನಕ ದೃಶ್ಯಗಳು ಯಾವುವೂ ಇಲ್ಲಿರೋದಿಲ್ಲ. ಬದಲಿಗೆ, ಬದುಕಿನ ತಳಮಳಗಳು, ಹೆತ್ತವಳ ಸಂಕಟ, ಪ್ರೀತಿಯ ಉತ್ಕಟತೆಗಳೆಲ್ಲಾ ಇಲ್ಲಿ ಪಾತ್ರಗಳಾಗಿ ಹೊರಹೊಮ್ಮಲಿವೆ.
11:02 AM (IST) Jul 22
10:35 AM (IST) Jul 22
10:17 AM (IST) Jul 22
ನೆಲಮಂಗಲ ತಾಲೂಕಿನ ಸೋಲೂರು ಹೋಬಳಿಯಲ್ಲಿ ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕಾಗಿ ನಡೆಸಲು ಬಂದಿದ್ದ ಭೂ ಸರ್ವೇ ಕಾರ್ಯವನ್ನು ಸ್ಥಳೀಯ ರೈತರು ತಡೆದು ನಿಲ್ಲಿಸಿದ್ದಾರೆ. ಯಾವುದೇ ಪೂರ್ವ ಮಾಹಿತಿ ನೀಡದೆ ರಹಸ್ಯವಾಗಿ ಸರ್ವೇ ನಡೆಸಲು ಬಂದ ಸಿಬ್ಬಂದಿಯನ್ನು ಮುತ್ತಿಗೆ ಹಾಕಿ, ತೀವ್ರ ವಿರೋಧ ವ್ಯಕ್ತಪಡಿಸಿ ವಾಪಸ್ ಕಳುಹಿಸಿದ್ದಾರೆ.
09:01 AM (IST) Jul 22
08:20 AM (IST) Jul 22
08:01 AM (IST) Jul 22
08:00 AM (IST) Jul 22
ಯಾವ ಪಕ್ಷದ ಸರ್ಕಾರ ಬಂದರೂ ಕನ್ನಡದ ಪರ ನಿಲ್ಲುವುದಿಲ್ಲ ಎಂದು ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಬೇಸರ ವ್ಯಕ್ತಪಡಿಸಿದ್ದಾರೆ. ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ 'ಕನ್ನಡ ಚಂದ್ರ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದ ಕೆಲಸಗಳು ತಾರ್ಕಿಕ ಅಂತ್ಯ ಕಾಣುತ್ತಿಲ್ಲ ಎಂದು ಬೇಸರ.
07:47 AM (IST) Jul 22
07:38 AM (IST) Jul 22
07:28 AM (IST) Jul 22
ಬೀದರ್ನ ಗುರುನಾನಕ ದೇವ್ ಎಂಜಿನಿಯರಿಂಗ್ ಕಾಲೇಜಿನ ಹಳೆಯ ವಿದ್ಯಾರ್ಥಿ ನರಸಿಂಗ್ ಮಾಧವ್ ಶಿಂಧೆ, ಸ್ಕೈರೂಟ್ ಏರೋಸ್ಪೇಸ್ ಅಭಿವೃದ್ಧಿಪಡಿಸಿದ 'ವಿಕ್ರಮ್-1' ಉಡಾವಣಾ ವಾಹಕ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಉಡಾವಣಾ ವಾಹಕದ ನಾಲ್ಕನೇ ಹಂತದ ವಿನ್ಯಾಸ ಮತ್ತು ಅಭಿವೃದ್ಧಿಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ.