ಬೆಂಗಳೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಫೈರ್ಮ್ಯಾನ್ ಹುದ್ದೆಯನ್ನು ‘ಫೈರ್ ಫೈಟರ್’ ಮತ್ತು ಲೀಡಿಂಗ್ ಫೈರ್ಮ್ಯಾನ್ ಹುದ್ದೆಯನ್ನು ‘ಲೀಡಿಂಗ್ ಫೈಯರ್ ಫೈಟರ್’ ಎಂದು ಮರು ನಾಮಕರಣ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಕೇಂದ್ರ ಗೃಹ ಮಂತ್ರಾಲಯದ ಸ್ಟ್ಯಾಂಡಿಂಗ್ ಫೈರ್ ಅಡ್ವೈಸರಿ ಕಮಿಟಿ(ಎಸ್ಎಫ್ಎಸಿ) ಸಭೆಯ ತೀರ್ಮಾನದಂತೆ ಅಗ್ನಿಶಾಮಕ ಇಲಾಖೆಯಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಎರಡೂ ಹುದ್ದೆಗಳ ಹೆಸರನ್ನು ಬದಲಿಸಿದೆ.
ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ(ವೃಂದ ಮತ್ತು ನೇಮಕಾತಿ) ನಿಯಮಗಳು 2013ರ ಸಮಗ್ರ ಪರಿಷ್ಕರಣೆ ವೇಳೆ ಈ ಮರು ನಾಮಕರಣವನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ
09:08 AM (IST) Feb 16
09:04 AM (IST) Feb 16
ಗುರುದೇವ್ ಶ್ರೀ ಶ್ರೀ ರವಿ ಶಂಕರ್ ಅವರ ಸಾನ್ನಿಧ್ಯದಲ್ಲಿ 45ನೇ ವರ್ಷದ ಶಿವರಾತ್ರಿ ಆಚರಣೆ; ಮೂಲ ಸೋಮನಾಥ ಜ್ಯೋತಿರ್ಲಿಂಗದ ಐತಿಹಾಸಿಕ ಅವಶೇಷಗಳ ದರ್ಶನ ಭಕ್ತರಿಗೆ ಲಭಿಸಿದ ಅಪರೂಪದ ಅವಕಾಶ
08:29 AM (IST) Feb 16
ಸಮಸ್ತಿಪುರ(ಬಿಹಾರ): ಭಾರತ ಅಂಡರ್-19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ 10ನೇ ಕ್ಲಾಸ್ ಎಕ್ಸಾಂಗೆ ಚಕ್ಕರ್ ಹೊಡೆಯಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಯಾಕೆ ಹೀಗೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಡೀಟೈಲ್ಸ್
08:25 AM (IST) Feb 16
ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ಮೂಲದ ಐವರು ಕಾರಿನಲ್ಲಿ ಅತಿ ವೇಗವಾಗಿ ಚಲಿಸುತ್ತಿದ್ದರು ಎಂದು ತಿಳಿದುಬಂದಿದ್ದು, ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.
08:10 AM (IST) Feb 16
ಬೇರೇನೋ ಕಾರಣ ಹೇಳಿ ಕರೆದುಕೊಂಡು ಬಂದು ಈಗ ಮದುವೆ ಮಾಡಲು ಹೊರಟಿದ್ದಾರೆಂದು ತಿಳಿದುಕೊಂಡ ಕತ್ತೆ ‘ಮದುವೆ ಬೇಡಪ್ಪಾ ಬೇಡಾ..’ಎಂದು ಓಟಕ್ಕಿತ್ತಿತು. ಮದುವೆಗೆ ಗಂಡೇ ಇರದಿದ್ದರೆ ಕಷ್ಟ ಅಂತ ಒಂದಿಬ್ಬರು ಅದರ ಹಿಂದೆ ಓಡಿ ಹಿಡಿದುಕೊಂಡರು.
07:56 AM (IST) Feb 16
ಎರಡು ವಾರದ ಹಿಂದೆ ನಾಪತ್ತೆಯಾಗಿದ್ದ ಬರ್ಕ್ಲೆಯ ಕ್ಯಾಲಿಫೋರ್ನಿಯಾ ವಿವಿಯ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಇದೀಗ ಶವವಾಗಿ ಪತ್ತೆಯಾಗಿದ್ದಾರೆ. ಬರ್ಕಲಿ ಹಿಲ್ಸ್ ಸಮೀಪದ ಅನ್ಜಾ ಕೆರೆಯಲ್ಲಿ ಸಾಕೇತ್ ಶವ ಪತ್ತೆಯಾಗಿದೆ ಎನ್ನಲಾಗಿದೆ.
07:55 AM (IST) Feb 16
KSRTC ಬಸ್ ಡಿಕ್ಕಿಯಿಂದ ಕೈಗಳನ್ನು ಕಳೆದುಕೊಂಡು ಐಟಿ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದ ಮಹಿಳೆಗೆ ಅಪಘಾತ ಪರಿಹಾರ ನ್ಯಾಯಾಧಿಕರಣವು ಕೇವಲ 2.80 ಲಕ್ಷ ರೂ. ಪರಿಹಾರ ನೀಡಿತ್ತು. ಹೈಕೋರ್ಟ್ ಮಹಿಳೆ ಭವಿಷ್ಯದ ಆದಾಯ ನಷ್ಟ ಪರಿಗಣಿಸಿ ಪರಿಹಾರದ ಮೊತ್ತವನ್ನು 15 ಲಕ್ಷ ರೂ.ಗೆ ಹೆಚ್ಚಿಸಿ ಮಹತ್ವದ ಆದೇಶ ನೀಡಿದೆ.
07:33 AM (IST) Feb 16
30 ಲಕ್ಷ ಮೌಲ್ಯದ ಒಡವೆಗಳೊಂದಿಗೆ ನಾಪತ್ತೆಯಾಗಿದ್ದ ಪ್ರಿಯಾಂಕಾ, ತಾನು ಕೊ*ಲೆಯಾಗಿದ್ದೇನೆಂದು ಬಿಂಬಿಸಿ ಪ್ರಿಯಕರನೊಂದಿಗೆ ಪರಾರಿಯಾಗಲು ಯತ್ನಿಸಿದ್ದಳು. ಪತಿ ಜೊತೆಗಿನ ಜೀವನದಲ್ಲಿ ಅಸಮಾಧಾನಗೊಂಡಿದ್ದ ಆಕೆ, ತನ್ನ ಕೊಲೆ ನಾಟಕದ ಮೂಲಕ ಮಧ್ಯಪ್ರದೇಶಕ್ಕೆ ಹೋಗಲು ಯೋಜಿಸಿದ್ದಳು.
07:18 AM (IST) Feb 16
ಬೆಂಗಳೂರು ಅಭಿವೃದ್ಧಿ ಪ್ರಾಕಾರದಿಂದ ಹಂಚಿಕೆ ಮಾಡಿರುವ ನಿವೇಶನಗಳಲ್ಲಿ ಗುತ್ತಿಗೆ ಮತ್ತು ಕರಾರು ಪತ್ರದ ಪ್ರಕಾರ ನಿಗದಿತ ಅವಧಿಯೊಳಗೆ ಮನೆ ಅಥವಾ ಕಟ್ಟಡ ನಿರ್ಮಿಸದ ಮಾಲೀಕರಿಗೆ ವಿಧಿಸುತ್ತಿದ್ದ ಶೇ.10ರಷ್ಟು ದಂಡ ಶುಲ್ಕ ಪರಿಷ್ಕರಣೆ ಮಾಡಿ ಶೇ.2.5 ರಿಂದ ಶೇ.10 ರವರೆಗೆ ನಾಲ್ಕು ವಿಭಾಗಗಳಲ್ಲಿ ದರ ನಿಗದಿ
07:16 AM (IST) Feb 16
₹400 ಕೋಟಿ ನಾಪತ್ತೆ ಪ್ರಕರಣದಲ್ಲಿ, ದೂರುದಾರ ಸಂದೀಪ್ ಪಾಟೀಲ್ ಮಹಾರಾಷ್ಟ್ರ ಎಸ್ಐಟಿ ತನಿಖೆ ಪಾರದರ್ಶಕವಾಗಿಲ್ಲ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಬೆಳಗಾವಿಯಲ್ಲಿ ಹೊಸ ಎಫ್ಐಆರ್ ದಾಖಲಿಸಿ ಸ್ವತಂತ್ರ ತನಿಖೆ ನಡೆಸುವಂತೆ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ.
07:11 AM (IST) Feb 16
ಡೀಸೆಲ್ ದರ ಹೆಚ್ಚಳ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಸಾಗಿಸುವ ಲಗೇಜ್ ದರ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ದರ ಸೋಮವಾರದಿಂದ ಜಾರಿಗೆ ಬರಲಿದೆ. ಡೀಸೆಲ್, ಸಿಬ್ಬಂದಿ ಹಾಗೂ ಇತರೆ ವೆಚ್ಚಗಳ ಹೆಚ್ಚಳ ಹಿನ್ನೆಲೆಯಲ್ಲಿ ನಿಗಮದ ಬಸ್ಗಳಲ್ಲಿ ಸಾಗಿಸುವ ಲಗೇಜ್ ದರವನ್ನು ಪರಿಷ್ಕರಿಸಲಾಗಿದೆ.
07:00 AM (IST) Feb 16
ಇತ್ತೀಚೆಗಷ್ಟೇ ಕೋಡರ್ಗಳ ಕೆಲಸ ಕಸಿಯುವ ಭೂತದಂತೆ ಬಿಂಬಿತವಾಗಿದ್ದ ಆ್ಯಂಥ್ರೋಪಿಕ್ ಸಂಸ್ಥೆಯ ಎಐ ಟೂಲ್ ಕ್ಲಾಡ್, ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರ ಅಪಹರಣದಲ್ಲಿ ಅಮೆರಿಕ ಸೇನೆಗೆ ಸಹಾಯ ಮಾಡಿತ್ತು ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.