Published : Jun 11, 2025, 05:46 AM ISTUpdated : Jun 11, 2025, 11:47 PM IST

Karnataka News Live 11th June 2025: ಭಾರೀ ಮಳೆಗೆ ಧಾರವಾಡ-ವಿಜಯಪುರ ಹೆದ್ದಾರಿ ಬಂದ್! ಮನೆಗಳಿಗೆ ನುಗ್ಗಿದ ನೀರು!

ಸಾರಾಂಶ

 

ಕನ್ನಡಪ್ರಭ ವಾರ್ತೆ ಬೆಂಗಳೂರು: ಸಂಪುಟ ಪುನಾರಚನೆ ಸೂಚನೆ ನೀಡುವ ಚಿಂತನೆ ಹೊಂದಿದ್ದ ಹೈಕಮಾಂಡ್ ವರಿಷ್ಠರ ಮನವೊಲಿಸಿರುವ ರಾಜ್ಯ ನಾಯಕರು, ಸರ್ಕಾರಕ್ಕೆ ಎರಡೂವರೆ ವರ್ಷ ತುಂಬಿದ ನಂತರ ಅರ್ಥಾತ್ ನವೆಂಬರ್ -ಡಿಸೆಂಬರ್ ವೇಳೆಗೆ ಪ್ರಕ್ರಿಯೆ ನಡೆಸಲು ಒಪ್ಪಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಎಐಸಿಸಿ ನಾಯಕರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾ‌ರ್ ನಡೆಸಿದ ಸಭೆಯ ವೇಳೆ ಸಂಪುಟ ವಿಚಾರ ಚರ್ಚೆಯಾಗಿದೆ. ಇದರ ಜೊತೆಗೆ ಎಂಎಲ್‌ಸಿ ಪಟ್ಟಿಗೂ ಹೈಕಮಾಂಡ್ ತಡೆ ನೀಡಿದೆ. ಪಕ್ಷದ ಮುಖಂಡರು, ಕಾರ್ಯಕರ್ತರಿಂದ ತೀವ್ರ ಆಕ್ಷೇಪ ಹೊಂದಿದ್ದ ವಿಧಾನಪರಿಷತ್ತಿನ ನಾಮ ನಿರ್ದೇಶನದ 4 ಸ್ಥಾನಗಳಿಗೆ ಅಂತಿಮಗೊಂಡಿದ್ದ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ತಾತ್ಕಾಲಿಕ ಬ್ರೇಕ್ ನೀಡಿದೆ. ಇನ್ನಷ್ಟು ಚರ್ಚೆ ಅಗತ್ಯವಿರುವ ಕಾರಣ ಪಟ್ಟಿಗೆ ತಡೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪಟ್ಟಿ ಅಂತಿಮವಾಗಲಿದೆ ಎಂದು ವರದಿಯಾಗಿದೆ.

11:47 PM (IST) Jun 11

ಭಾರೀ ಮಳೆಗೆ ಧಾರವಾಡ-ವಿಜಯಪುರ ಹೆದ್ದಾರಿ ಬಂದ್! ಮನೆಗಳಿಗೆ ನುಗ್ಗಿದ ನೀರು!

ಧಾರವಾಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದ್ದು, ನವಲಗುಂದ ತಾಲೂಕಿನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಧಾರವಾಡ-ವಿಜಯಪುರ ಹೆದ್ದಾರಿಯು ಒಂದು ಘಂಟೆಗೂ ಹೆಚ್ಚು ಕಾಲ ಬಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲಾಡಳಿತವು ರೆಡ್ ಅಲರ್ಟ್ ಘೋಷಿಸಿದೆ.
Read Full Story

11:19 PM (IST) Jun 11

ಅನ್‌ಲಿಮಿಟೆಡ್ ಕಾಲ್, ಡೇಟಾ, 30 ದಿನ ವ್ಯಾಲಿಟಿಡಿ, ಇಲ್ಲಿದೆ BSNLನ 200 ರೂ ಒಳಗಿನ ಪ್ಲಾನ್

BSNL ₹200 ಕ್ಕಿಂತ ಕಡಿಮೆ ಬೆಲೆಯಲ್ಲಿ ಎರಡು ರೀಚಾರ್ಜ್ ಪ್ಲಾನ್‌ಗಳನ್ನು ನೀಡುತ್ತಿದೆ. ಅನ್‌ಲಿಮಿಟೆಡ್ ಕರೆ, 30 ದಿನ ವ್ಯಾಲಿಟಿಡಿ, ಉಚಿತ ಡೇಟಾ ಸೇರಿದಂತೆ ಹಲವು ಆಫರ್ ನೀಡಲಾಗಿದೆ. 

Read Full Story

11:16 PM (IST) Jun 11

Karnataka Rains - ಉಡುಪಿ ಜಿಲ್ಲೆಗೆ ನಾಳೆ ರೆಡ್‌ ಅಲರ್ಟ್; ಶಾಲೆಗಳಿಗೆ ರಜೆ ಘೋಷಣೆ!

ಜೂನ್ 12 ರಂದು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಜಿಲ್ಲಾಡಳಿತವು ರೆಡ್ ಅಲರ್ಟ್ ಘೋಷಿಸಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯದ ಇತರ ಜಿಲ್ಲೆಗಳಿಗೂ ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
Read Full Story

10:57 PM (IST) Jun 11

ಗೋಲ್ಮಾಲ್ ಮಾಡಿದ ನಟ ಅರ್ಷದ್ ವಾರ್ಸಿಗೆ ಸೆಬಿ ಶಾಕ್, ಷೇರು ಮಾರುಕಟ್ಟೆಯಿಂದ ನಿಷೇಧ

ಬಾಲಿವುಡ್‌ನಲ್ಲಿ ಗೋಲ್ಮಾಲ್ ಸಿನಿಮಾ ಮೂಲಕ ಮಿಂಚಿದ ನಟ ಷೇರುಮಾರುಕಟ್ಟೆಯಲ್ಲಿ ಮಾಡಿದ ಗೋಲ್ಮಾಲ್‌ಗೆ ಭಾರಿ ದಂಡ ತೆರಬೇಕಾಗಿ ಬಂದಿದೆ. ಬಾಲಿವುಡ್ ನಟ ಅರ್ಷದ್ ವಾರ್ಸಿ ಹಾಗೂ ನಟನ ಪತ್ನಿಗೆ ಸೆಬಿ ಶಾಕ್ ಕೊಟ್ಟಿದೆ. ಷೇರು ಮಾರುಕಟ್ಟೆಯಿಂದ ನಿಷೇಧ ಹೇರಿದೆ.

 

Read Full Story

10:51 PM (IST) Jun 11

ED Raid - 'ನನ್ನ ಮನೆಯಿಂದ ಒಂದು ತುಂಡನ್ನೂ ಸೀಜ್ ಮಾಡಿಲ್ಲ' - ಶಾಸಕ ಭರತ್ ರೆಡ್ಡಿ

Valmiki scam case: ಶಾಸಕ ಭರತ್ ರೆಡ್ಡಿ ಅವರ ಬಳ್ಳಾರಿ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದ್ದು, ಯಾವುದೇ ವಸ್ತುಗಳನ್ನು ವಶಪಡಿಸಿಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ರಾಜಕೀಯ ಷಡ್ಯಂತ್ರದ ಭಾಗವಾಗಿ ಈ ದಾಳಿ ನಡೆದಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story

10:21 PM (IST) Jun 11

ಐಟಿ ಲೋಕದಿಂದ ಆಟೋ ಚಾಲಕನಾದ ಬೆಂಗಳೂರಿಗನ ಕಣ್ಣೀರ ಕತೆ, ಹೊಸ ಅಧ್ಯಾಯಕ್ಕೆ ಹುಡುಕಾಟ

ಈತ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಪ್ರಮುಖ ಹುದ್ದೆ ನಿರ್ವಹಿಸಿದ ಪ್ರತಿಭಾನ್ವಿತ. ಆದರೆ ಬದುಕಿನಲ್ಲಿ ಎದುರಾದ ಸವಾಲು ಕೆಲಸವನ್ನು ಕಿತ್ತುಕೊಂಡಿತ್ತು. ಇದೀಗ ಆಟೋ ಚಾಲಕನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವ ಈತ ಮತ್ತೆ ಉದ್ಯೋದತ್ತ ಮುಖ ಮಾಡಲು ಹೋರಾಟ ನಡೆಸುತ್ತಿದ್ದಾನೆ. 

Read Full Story

09:30 PM (IST) Jun 11

ಆರ್‌ಸಿಬಿಗೆ ಕಪ್, ಇಶಾನ್ ಖಾತೆ ಸಸ್ಪೆಂಡ್, ಕೊಹ್ಲಿ ಎಚ್ಚರಿಸಿದ 14 ವರ್ಷ ಬಳಿಕ ಕ್ರಮ, ಏನಿದು ಘಟನೆ?

ಆರ್‌ಸಿಬಿ ಕಪ್ ಗೆಲ್ಲಲು 18 ವರ್ಷ ಬೇಕಾಯಿತು. ಇತ್ತ ಇಶಾನ್ ಖಾತೆ ಅಮಾನತ್ತಾಗಲು 14 ವರ್ಷವೇ ಬೇಕಾಗಿದೆ. ವಿರಾಟ್ ಕೊಹ್ಲಿ ಎಚ್ಚರಿಸಿದ ಬಳಿಕ ಬರೋಬ್ಬರಿ 14 ವರ್ಷದ ಬಳಿಕ ಎಕ್ಸ್ ಖಾತೆ ಸಸ್ಪೆಂಡ್ ಆಗಿದೆ. ಏನಿದು ಪ್ರಕರಣ?

Read Full Story

08:55 PM (IST) Jun 11

ಭಾರಿ ಮಳೆಯಿಂದ ಕರ್ನಾಟಕದ 2 ಜಿಲ್ಲೆಯ ಶಾಲಾ ಕಾಲೇಜಿಗೆ ನಾಳೆ ರಜೆ ಘೋಷಣೆ

ನಾಳೆ(ಜೂ.12) ಭಾರಿ ಮಳೆಯಿಂದ ಕರ್ನಾಟಕದ ಎರಡು ಜಿಲ್ಲೆಗಳ ಶಾಲಾ ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ಭಾರಿ ಮಳೆ ಮುನ್ಸೂಚನೆ ನೀಡಿರುವ ಹಿನ್ನಲೆಯಲ್ಲಿ ಒಂದು ದಿನ (ಜೂ.12) ರಜೆ ನೀಡಲಾಗಿದೆ.

 

Read Full Story

08:54 PM (IST) Jun 11

ಚಾಮರಾಜನಗರ - ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಳ! ಕಾರಣವೇನು ಗೊತ್ತಾ?

ಚಾಮರಾಜನಗರದಲ್ಲಿ ಸರ್ಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಳವಾಗಿದೆ. ಎಲ್‌ಕೆಜಿ, ಯುಕೆಜಿ ಆರಂಭ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ಶಿಕ್ಷಕರ ಕೊರತೆ ನೀಗಿಸುವಿಕೆ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ಎರಡು ವರ್ಷಗಳಲ್ಲಿ 20ಕ್ಕೂ ಹೆಚ್ಚು ಶಾಲೆಗಳು ಮುಚ್ಚಿದ್ದವು.
Read Full Story

08:40 PM (IST) Jun 11

ಮಂಗ್ಲಿ ಪಾರ್ಟಿ ಗಲಾಟೆಗೆ 'ಬಿಗ್ ಬಾಸ್' ದಿವಿ ಕೊಟ್ಟ ಕ್ಲಾರಿಟಿ ಏನು? ಈ ತರಹನೂ ಇರುತ್ತಾ ವಿಷ್ಯ..?

ಮಂಗಳಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಟಿ, ಬಿಗ್ ಬಾಸ್ ಖ್ಯಾತಿಯ ದಿವಿ ಭಾಗವಹಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ವಿವಾದದಲ್ಲಿ ದಿವಿ ಸಿಲುಕಿಕೊಂಡಿದ್ದಾರೆ ಎಂಬ ಪ್ರಚಾರ ನಡೆಯುತ್ತಿದೆ.

Read Full Story

08:22 PM (IST) Jun 11

ಮಾಲ್ಡೀವ್ಸ್‌ನಲ್ಲಿ ಓಡಾಡುತ್ತಿರುವ ಕೀರ್ತಿ ಸುರೇಶ್, ಆಂಟನಿ ಟಾಟಿಲ್ ಜೊತೆ ಅಲ್ಲೇನ್ ಮಾಡ್ತಿದಾರೆ?

ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೀರ್ತಿ ಸುರೇಶ್, ಇತ್ತೀಚೆಗೆ ತಮ್ಮ ಗಂಡನ ಜೊತೆ ರೋಮ್ಯಾಂಟಿಕ್ ರಜೆಗಾಗಿ ಮಾಲ್ಡೀವ್ಸ್‌ಗೆ ಹೋಗಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

 

Read Full Story

08:02 PM (IST) Jun 11

'ನನ್​ ಮದ್ವೆ ಮಾಡಿದ್ರೆ ಪರಿಣಾಮ ನೆಟ್ಟಗಿರಲ್ಲ' ಎಂದಿದ್ದ ಸೋನಂ! ಅಮಾಯಕನ ಬಲಿ ಕೊಟ್ರಾ ತಾಯಿ?

ಹನಿಮೂನ್​ನಲ್ಲಿ ಪತಿಯನ್ನೇ ಮುಗಿಸಿರುವ ಆರೋಪ ಸೋನಂ ರಘುವಂಶಿಯ ಮೇಲಿದೆ. ಆದರೆ ಒಲ್ಲದ ಮದುವೆಗೆ ಒತ್ತಾಯದಿಂದ ಒಪ್ಪಿಸಿ, ಈಕೆಯ ತಾಯಿ ಅಮಾಯನಕ ಬಲಿ ಕೊಟ್ರಾ ಎನ್ನುವ ಮಾತು ಕೇಳಿಬರ್ತಿದೆ. ಏನದು?

 

Read Full Story

07:50 PM (IST) Jun 11

ಇನ್ಸ್‌ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆಯಲ್ಲಿ ಇಳಿಕೆ, ಗಂಡನಿಗೆ ಡೈವೋರ್ಸ್‌ ನೀಡುವ ಎಚ್ಚರಿಕೆ ನೀಡಿದ ಹೆಂಡ್ತಿ!

ಉತ್ತರ ಪ್ರದೇಶದ ಮಹಿಳೆಯೊಬ್ಬರು ಮನೆಕೆಲಸದಿಂದಾಗಿ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಲು ಸಾಧ್ಯವಾಗುತ್ತಿಲ್ಲ ಮತ್ತು ಫಾಲೋವರ್ಸ್‌ಗಳು ಕಡಿಮೆಯಾಗಿದ್ದಾರೆ ಎಂದು ಗಂಡನಿಗೆ ಡೈವೋರ್ಸ್‌ ನೀಡಲು ನಿರ್ಧರಿಸಿದ್ದಾರೆ. ಪತಿಯ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Read Full Story

07:31 PM (IST) Jun 11

ಜೂ.17ರ ವರೆಗೆ ಕರ್ನಾಟಕ ಸೇರಿ 17 ರಾಜ್ಯದಲ್ಲಿ ಭಾರಿ ಮಳೆ, IMD ಎಚ್ಚರಿಕೆ

ಕೆಲವು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಇದೀಗ ಬೆಂಗಳೂರು ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದೆ. ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ ಒಂದು ವಾರ ಅತೀಯಾದ ಮಳೆ, ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ ಎಂದಿದೆ.

Read Full Story

07:28 PM (IST) Jun 11

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಲು ಸರ್ಕಾರದ ವತಿಯಿಂದಲೇ ಅಲ್ಪಸಂಖ್ಯಾತರಿಗೆ ತರಬೇತಿ!

ರಾಜ್ಯ ಸರ್ಕಾರದ ಅಲ್ಪಸಂಖ್ಯಾತ ಇಲಾಖೆಯು ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅಲ್ಪಸಂಖ್ಯಾತರಿಗೆ ಪರೀಕ್ಷಾ ಪೂರ್ವ ತರಬೇತಿ ನೀಡಲಿದೆ. ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಮತ್ತು ಪಾರ್ಸಿ ಜನಾಂಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
Read Full Story

07:17 PM (IST) Jun 11

80-90s advts; ಇನ್ನಷ್ಟು, ಮತ್ತಷ್ಟು ಕೇಳಬೇಕೆನ್ನಿಸುವ, ಆ ದಿನಗಳಲ್ಲಿ ತೇಲಿಹೋಗುವ ಈ ಜಾಹೀರಾತುಗಳ ಕೇಳಿ...

80-90ರ ದಶಕದಲ್ಲಿ ಕೆಲವೊಂದು ಜಾಹೀರಾತುಗಳು ಅದೆಷ್ಟು ಮನಸ್ಸಿಗೆ ಹಿತಕೊಡುತ್ತಿದ್ದವು ಎಂದರೆ, ಅವುಗಳನ್ನೆಲ್ಲಾ ಒಂದೆಡೆ ಹಾಡಿ ರಸದೌತಣ ನೀಡಿದ್ದಾರೆ ಈ ಗಾಯಕಿ.. ಕೇಳಿ...

 

Read Full Story

07:17 PM (IST) Jun 11

ಭಾನುಪ್ರಿಯಾಗೆ ವಾರ್ನಿಂಗ್ ಮಾಡಿದ ಚಿರಂಜೀವಿ; ನಂಗೆ ಆಗಲ್ಲ, 'ಸ್ವಲ್ಪ ಕಮ್ಮಿ ಮಾಡು' ಅಂದಿದ್ಯಾಕೆ?

ಮೆಗಾಸ್ಟಾರ್ ಚಿರಂಜೀವಿ ಒಬ್ಬ ನಾಯಕಿಯ ಡ್ಯಾನ್ಸ್ ಬಗ್ಗೆ ತುಂಬಾ ఇబ್ಬಂದಿ ಪಟ್ಟರಂತೆ. ಕೊನೆಗೆ ಆಕೆಗೆ ವಾರ್ನಿಂಗ್ ಕೊಡಬೇಕಾಯ್ತು ಅಂತ ಚಿರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story

07:03 PM (IST) Jun 11

ಬಡತನದಿಂದ ಬಂದು ಸ್ಟಾರ್ ಗಾಯಕಿಯಾದ ಮಂಗ್ಲಿ; ಲೈಫ್‌ನಲ್ಲಿ ಏನೇನೆಲ್ಲಾ ಆಗೋಗಿದೆ ನೋಡಿ!

ಬಡ ಕುಟುಂಬದಿಂದ ಬಂದ ಮಂಗಳಿ ಸ್ಟಾರ್ ಗಾಯಕಿಯಾಗಿ ಹೇಗೆ ಬೆಳೆದರು? ಸಿನಿಮಾ ಪ್ರಯಾಣ ಹೇಗೆ ಶುರುವಾಯಿತು? ಮಂಗಳಿ ನಿಜವಾದ ಹೆಸರೇನು? ಹುಟ್ಟುಹಬ್ಬದ ಪಾರ್ಟಿ ವಿವಾದದ ಬಗ್ಗೆ ತಿಳಿಯಿರಿ.
Read Full Story

06:47 PM (IST) Jun 11

Viral Video - ನಾನು ರಾಯಲ್‌ ಚಾಲೆಂಜೇ ಕುಡಿಯಲ್ಲ, ಇನ್ನು ಟೀಮ್‌ ಖರೀದಿಸ್ತೀನಾ? - ಡಿಕೆ ಶಿವಕುಮಾರ್‌

ಆರ್‌ಸಿಬಿ ಮಾರಾಟದ ಸುದ್ದಿ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್‌ ಅವರ ಮೇಲೆ ಅನುಮಾನದ ಹುತ್ತ ಬಿದ್ದಿತ್ತು. ಆದರೆ ಡಿಕೆಶಿ ಈ ಎಲ್ಲಾ ಸುದ್ದಿಗಳನ್ನು ತಳ್ಳಿಹಾಕಿದ್ದಾರೆ. ತಮಗೆ ಆರ್‌ಸಿಬಿ ಖರೀದಿಸುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

06:44 PM (IST) Jun 11

19 ವರ್ಷದ ಯುವಕನಿಗೆ ಹೃದಯಾಘಾತ; ರಾತ್ರಿ ಮಲಗಿದ್ದ ಸ್ಥಿತಿಯಲ್ಲೇ ಸಾವು; ಗೆಳೆಯರು ಶಾಕ್!

ಬೆಂಗಳೂರಿನ ಜೆಪಿ ನಗರದಲ್ಲಿ ೧೯ ವರ್ಷದ ಯುವಕ ನಿಶಾಂತ್ ಗೌಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನದಿಂದ ಬೆಂಗಳೂರಿಗೆ ಬಂದು ೧೫ ದಿನಗಳಾಗಿದ್ದ ಯುವಕ ಡಿಪ್ಲೋಮಾ ಪದವಿ ಮುಗಿಸಿ ಅಪ್ರೆಂಟಿಸ್ ಆಗಿ ಕೆಲಸ ಮಾಡುತ್ತಿದ್ದರು.
Read Full Story

06:23 PM (IST) Jun 11

ಡ್ರೀಮ್​ಗರ್ಲ್​ ಸಿಕ್ಕಳೆಂದು ಈತ ಚಾಟ್​ ಮಾಡಿದ್ದೇ ಮಾಡಿದ್ದು... ಆಮೇಲೆ ನೋಡಿದ್ರೆ ಅವಳೇ ಇವಳು...

ವಿವಾಹಿತನೊಬ್ಬ ಇನ್​ಸ್ಟಾಗ್ರಾಮ್​ನಲ್ಲಿ ಯುವತಿಯೊಬ್ಬಳನ್ನು ಫ್ರೆಂಡ್​ ಮಾಡಿಕೊಂಡು, ಡ್ರೀಮ್​ಗರ್ಲ್​ ಸಿಕ್ಕಳೆಂದು ಚಾಟ್​ ಮಾಡಿದ್ದೇ ಮಾಡಿದ್ದು... ಆಮೇಲೆ ನೋಡಿದ್ರೆ ಅವಳು.....! ಆಗಿದ್ದೇನು ನೋಡಿ!

 

Read Full Story

06:18 PM (IST) Jun 11

ಉದ್ಯೋಗಿಗಳಿಗೆ ಮತ್ತೊಂದು ಶಾಕ್ ಕೊಟ್ಟ ಗೂಗಲ್, ಈ ಬಾರಿ ಉದ್ಯೋಗ ಕಡಿತಕ್ಕೆ VEP ಪ್ರಯೋಗ

ಕಳೆದ ತಿಂಗಳು 200 ಮಂದಿಯನ್ನು ಉದ್ಯೋಗದಿಂದ ತೆಗೆದು ಹಾಕಿದ್ದ ಗೂಗಲ್ ಇದೀಗ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಆದರೆ ಈ ಬಾರಿ ಉದ್ಯೋಗ ಕಡಿತಕ್ಕೆ VEP ಜಾರಿ ಮಾಡಿದೆ.

Read Full Story

06:16 PM (IST) Jun 11

25ನೇ ವಯಸ್ಸಿನಲ್ಲೇ ಕೂದಲು ಬಿಳಿಯಾಗಿದ್ಯಾ? ಮನೆಯಲ್ಲಿ ಈ ಎಣ್ಣೆ ತಯಾರಿಸಿ ಕೂದಲು ಕಪ್ಪಾಗುತ್ತೆ!

ಕೆಲವರಿಗೆ ವಯಸ್ಸಾಗುವ ಮೊದಲೇ ಬಿಳಿ ಕೂದಲಿನ ಸಮಸ್ಯೆ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ನಿಮಗೂ ಆ ಸಮಸ್ಯೆ ಕಾಣಿಸಿಕೊಂಡಿದ್ರೆ, ಇವತ್ತೆ ಈ ಆಯುರ್ವೇದ ಎಣ್ಣೆಯನ್ನು ಮನೆಯಲ್ಲಿ ತಯಾರಿಸಿ ಕೂದಲಿಗೆ ಹಚ್ಚಿ, ಬಿಳಿ ಕೂದಲು ಕೂಡ ಕಪ್ಪಾಗುತ್ತೆ.

 

Read Full Story

06:11 PM (IST) Jun 11

ಶಾರುಖ್‌, ಸಲ್ಮಾನ್‌, ಅಮೀರ್‌ ಇವರಾರೂ ಅಲ್ಲ ಗೋವಾದ ವಿಜಯ್‌ ಮಲ್ಯರ ಕಿಂಗ್‌ಫಿಶರ್‌ ವಿಲ್ಲಾ ಮಾಲೀಕ ಈ ಬಾಲಿವುಡ್‌ ನಟ!

Vijay Mallya Kingfisher Villa: ವಿಜಯ್ ಮಲ್ಯ ಅವರ ಕಿಂಗ್‌ಫಿಷರ್ ವಿಲ್ಲಾ ಗೋವಾದ ರಾಜಧಾನಿ ಪಣಜಿಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಕ್ಯಾಂಡೋಲಿಮ್ ಬೀಚ್‌ನಲ್ಲಿದ್ದು, ಈ ವಿಲ್ಲಾ ಸುಮಾರು ಮೂರು ಎಕರೆಗಳಷ್ಟು ವಿಸ್ತೀರ್ಣದಲ್ಲಿದೆ.

 

Read Full Story

06:09 PM (IST) Jun 11

ಶಿಲ್ಪಾ ಶೆಟ್ಟಿ ಮುಂಬೈ ಬಂಗ್ಲೆಯೊಳಕ್ಕೆ ಏನೆಲ್ಲಾ ಇದೆ ನೋಡಿದ್ದೀರಾ? ಇಲ್ಲಿದೆ ನೋಡಿ ಶಾಕಿಂಗ್ ಫೋಟೋಸ್!

ಶಿಲ್ಪಾ ಶೆಟ್ಟಿ ಅವರ ಮುಂಬೈನಲ್ಲಿರುವ ಐಷಾರಾಮಿ ಮನೆಯ ಒಂದು ನೋಟ. ಯೋಗ ಸ್ಥಳದಿಂದ ಹಿಡಿದು ರಾಯಲ್ ಅಡುಗೆಮನೆ ಮತ್ತು ಸುಂದರವಾದ ಉದ್ಯಾನವನದವರೆಗೆ, ಎಲ್ಲವೂ ವಿಶೇಷ.
Read Full Story

05:53 PM (IST) Jun 11

ಸಪ್ತಮಿ ಗೌಡ 'ತಮ್ಮುಡು'ದಲ್ಲಿ ಇದೇನು ಹೊಸ ಕಥೆ?.. ಅಕ್ಕನ ಮಾತಿಗೆ ಫೈಟ್‌ ಶುರು ಮಾಡಿದ ನಿಥಿನ್!

ನಿತಿನ್‌ ಹೀರೋ ಆಗಿರೋ 'ತಮ್ಮುಡು' ಸಿನಿಮಾ ಟ್ರೈಲರ್‌ ರಿಲೀಸ್‌ ಆಗಿದೆ. ವೇಣು ಶ್ರೀರಾಮ್‌ ಡೈರೆಕ್ಷನ್‌ನ ಈ ಚಿತ್ರದ ಟ್ರೈಲರ್‌ ಹೇಗಿದೆ ಅಂತ ನೋಡೋಣ.

 

Read Full Story

05:47 PM (IST) Jun 11

ಮುಂದಿನ ಫ್ಯಾಬ್-4 ಪೈಕಿ ಹೆಸರಿಸಿದ ಕೇನ್ ವಿಲಿಯಮ್ಸನ್; ಇಬ್ಬರು ಭಾರತೀಯರಿಗೆ ಸ್ಥಾನ!

ಕ್ರಿಕೆಟ್‌ನ ಫ್ಯಾಬ್ 4 ಪಟ್ಟಿಯಲ್ಲಿ ಮುಂದಿನ ಪೀಳಿಗೆಯ ಆಟಗಾರರು ಯಾರಾಗಬಹುದು ಎಂಬ ಚರ್ಚೆಗೆ ಕೇನ್ ವಿಲಿಯಮ್ಸನ್ ಉತ್ತರಿಸಿದ್ದಾರೆ. ಯಶಸ್ವಿ ಜೈಸ್ವಾಲ್, ಶುಭ್‌ಮನ್ ಗಿಲ್ ಸೇರಿದಂತೆ ಐವರು ಆಟಗಾರರನ್ನು ಈ ಪಟ್ಟಿಯಲ್ಲಿ ಸೇರಿಸಿದ್ದಾರೆ.
Read Full Story

05:38 PM (IST) Jun 11

ಎಲಾನ್ ಮಸ್ಕ್ & ಟ್ರಂಪ್ ವಾಗ್ದಾಳಿ; ಈಗ ಮಸ್ಕ್ ಪಶ್ಚಾತ್ತಾಪ, ಟ್ರಂಪ್ ಕಥೆ ಏನೀಗ?

ಟ್ರಂಪ್ ಮೇಲೆ ಗಂಭೀರ ಆರೋಪ ಮಾಡಿದ್ದ ಎಲಾನ್ ಮಸ್ಕ್ ಈಗ ತಮ್ಮ ಹೇಳಿಕೆಗಳ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಪ್ರಮುಖರ ನಡುವಿನ ವಾಗ್ದಾಳಿ ನಂತರ ಮಸ್ಕ್ ವರ್ತನೆಯ ಬದಲಾವಣೆ ಚರ್ಚೆಗೆ ಗ್ರಾಸವಾಗಿದೆ.

Read Full Story

05:36 PM (IST) Jun 11

ಲೈಂಗಿಕ ಕ್ರಿಯೆ ನಡೆಸದಿದ್ರೂ ಗರ್ಭಿಣಿಯಾದ ಯುವತಿ! ವೈದ್ಯಲೋಕಕ್ಕೆ ಸವಾಲು - ಆಗಿದ್ದೇನು ನೋಡಿ

ಗರ್ಭ ಧರಿಸಲು ಲೈಂಗಿಕ ಕ್ರಿಯೆ ನಡೆಯಲೇಬೇಕು ಎನ್ನುವುದು ಸಾಮಾನ್ಯ ಮಾತಾದರೂ, ಇಲ್ಲೊಬ್ಬ ಯುವತಿ ಕೇವಲ ಚುಂಬನದಿಂದ ಗರ್ಭ ಧರಿಸಿದ್ದಾಳೆ. ಅಷ್ಟಕ್ಕೂ ಹೀಗೆ ಆಗಿದ್ದೇಕೆ ನೋಡಿ...

 

Read Full Story

05:33 PM (IST) Jun 11

ಕನ್ನಡ ಸಿನಿಮಾಗಳಲ್ಲಿ ಧೂಳೆಬ್ಬಿಸಿದ ಪರ ಭಾಷೆಯ ಸ್ಟಾರ್ ನಟರು

ಅಕ್ಷಯ್ ಕುಮಾರ್, ಮೋಹನ್ ಲಾಲ್, ಮಮ್ಮೂಟಿಯಿಂದ ಹಿಡಿದು ಪಂಕಜ್ ತ್ರಿಪಾಟಿ, ನಾಸಿರುದ್ದೀನ್ ಶಾವರೆಗೂ ಈ ಎಲ್ಲಾ ನಟರು ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ.

 

Read Full Story

05:32 PM (IST) Jun 11

'ಆಕೆಗೆ ಗಲ್ಲು ಶಿಕ್ಷೆಯಾಗಲಿ..' ರಾಜಾ ರಘುವಂಶಿ ತಾಯಿಯ ಅಪ್ಪಿಕೊಂಡು ಕಣ್ಣೀರಿಟ್ಟ ಸೋನಮ್‌ ಸಹೋದರ!

ಇಂದೋರ್‌ನ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆತನ ಪತ್ನಿ ಸೋನಮ್ ಸೇರಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಸೋನಮ್ ಸಹೋದರ ಗೋವಿಂದ್, ರಾಜಾ ಕುಟುಂಬವನ್ನು ಭೇಟಿ ಮಾಡಿ, ಸೋನಮ್‌ಳ ಕೃತ್ಯಕ್ಕೆ ತನ್ನ ನಾಚಿಕೆ ಮತ್ತು ಕೋಪ ವ್ಯಕ್ತಪಡಿಸಿದ್ದಾರೆ. 

Read Full Story

04:49 PM (IST) Jun 11

ಭಾರತವನ್ನ ಕೆಣಕುತ್ತಿದ್ದಾರಾ ಟ್ರಂಪ್? ಯುಎಸ್ ಸೇನಾ ದಿನದ ಮೆರವಣಿಗೆಗೆ ಅಸಿಮ್ ಮುನಿರ್ ಆಹ್ವಾನಿಸಿದ ಅಮೆರಿಕ!

ಆಪರೇಷನ್ ಸಿಂದೂರ್ ನಲ್ಲಿ ಸೋಲನುಭವಿಸಿದ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಮೆರಿಕದ ಸೇನಾ ದಿನಾಚರಣೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಜೂನ್ 14 ರಂದು ನಡೆಯಲಿರುವ ಸೇನಾ ದಿನಾಚರಣೆಗೆ ಅಮೆರಿಕ ಅವರನ್ನು ಆಹ್ವಾನಿಸಿದೆ ಎಂದು ವರದಿಯಾಗಿದೆ. 

Read Full Story

04:46 PM (IST) Jun 11

ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಫೀಸ್ ಎದುರು ಗನ್ ಪತ್ತೆ; ಕಚೇರಿ ಸಿಬ್ಬಂದಿಗೆ ಆತಂಕ!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಬೆಂಗಳೂರಿನ ವಸಂತನಗರದಲ್ಲಿರುವ ಕಚೇರಿ ಎದುರು ಗನ್ ಪತ್ತೆಯಾಗಿದೆ. ಇದರಿಂದ ಸಚಿವರ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

Read Full Story

04:41 PM (IST) Jun 11

ಕಠ್ಮಂಡುವಿನ ಮೌಂಟ್ ಎವರೆಸ್ಟ್ ಬಳಿ 10 ನಾಗರ ಹಾವುಗಳು ಪತ್ತೆ - ಇದು ಎಚ್ಚರಿಕೆಯ ಸಂಕೇತ ಎಂದ ತಜ್ಞರು

ನೇಪಾಳದ ರಾಜಧಾನಿ ಕಠ್ಮಂಡು ಸಮೀಪ ಇರುವ ಎವರೆಸ್ಟ್ ಶಿಖರದ ತಳದಲ್ಲಿ ಕೇವಲ ಒಂದು ತಿಂಗಳ ಅವಧಿಯಲ್ಲಿ 10 ನಾಗರಹಾವುಗಳು ಕಾಣಿಸಿಕೊಂಡಿವೆ. 

Read Full Story

04:35 PM (IST) Jun 11

ಯಶ್ ಹೀರೋ ಆಗ್ಬೇಕಿತ್ತು, ಆದ್ರೆ ಯೋಗರಾಜ್ ಭಟ್ ಸಿನಿಮಾ 'ಪಂಚರಂಗಿ' ನಾಯಕ ಬದಲಾಗಿದ್ದು ಹೇಗೆ?

ಬಾಲಿವುಡ್ ಸಿನಿರಂಗ ಸೇರಿದಂತೆ ಭಾರತದ ಎಲ್ಲಾ ಚಿತ್ರರಂಗಗಳಲ್ಲಿ ಈ ರೀತಿಯ ಘಟನೆಗಳು ಅಂದು ಹಾಗೂ ಇಂದು ನಡೆಯುತ್ತಲೇ ಇರುತ್ತವೆ. ಅಮಿತಾಭ್ ಬಚ್ಚನ್ ಮಾಡಬೇಕಿದ್ದ ಅದೆಷ್ಟೋ ಪಾತ್ರಗಳು ಬೇರೆ ನಟರ ಪಾಲಾಗಿದೆ. ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಮಾಡಬೇಕಿದ್ದ ಸಿನಿಮಾ ಬೇರೆ ನಟಿಯರ ಪಾಲಾಗಿದೆ. ಈ ಸಂಗತಿ ಇಂದಿಗೂ 

Read Full Story

04:27 PM (IST) Jun 11

ಅಮೇರಿಕಾ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೃಷ್ಟಿಸಿದ ಜೀಬ್ರಾ ವಿಡಿಯೋ; ಅಂಥಾದ್ದೇನಿದೆ ಅಂತೀರಾ..?

ಕೆಲವು ವಿಷಯಗಳು ಹಾಗೆ. ಅನಿರೀಕ್ಷಿತವಾಗಿ ಅವು ವೈರಲ್ ಆಗುತ್ತವೆ. ಇದರಲ್ಲಿ ಏನು ದೊಡ್ಡ ವಿಷಯ ಎಂದು ಇತರರು ಯೋಚಿಸುವಾಗಲೇ ವಿಷಯ ವೈರಲ್ ಆಗುತ್ತದೆ. ಅಮೇರಿಕಾದಲ್ಲಿ ಭಾರೀ ಟ್ರೆಂಡಿಂಗ್ ಆಗಿರುವ ಈ ಜೀಬ್ರಾದ ವಿಡಿಯೋವನ್ನೊಮ್ಮೆ ನೀವೂ ನೋಡಿ..

Read Full Story

04:23 PM (IST) Jun 11

Monkeys cute video - ಮರ ಹತ್ತಲು ಬಿಡದ ಅಮ್ಮನಿಗೆ ಮುದ್ದು ಮಾಡಿ ಬೆಣ್ಣೆ ಹಚ್ತಿರೋ ಮರಿ! ಕ್ಯೂಟ್​ ವಿಡಿಯೋ

ಅಮ್ಮ ಮತ್ತು ಮಗುವಿನ ಬಾಂಧವ್ಯವೇ ಅತ್ಯಂತ ಸುಂದರ, ಸುಮಧುರ. ಅದು ಮನುಷ್ಯರೇ ಆಗಿರಬಹುದು, ಪ್ರಾಣಿಗಳೇ ಆಗಿರಬಹುದು. ಅಮ್ಮನನ್ನು ಪುಸಲಾಯಿಸುತ್ತಿರುವ ಮರಿಮಂಗನ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ ನೋಡಿ!

 

Read Full Story

04:15 PM (IST) Jun 11

ಮೂರ್ತಿ ದಂಪತಿ, ನಿಖಿಲ್ ಕಾಮತ್ ಸೇರಿ ಮಲ್ಯ ಕಿಂಗ್‌ಫಿಶರ್ ಟವರ್‌ನಲ್ಲಿದೆ ದಿಗ್ಗಜರ ಮನೆ

ಬೆಂಗಳೂರಿನ ಕಿಂಗ್‌ಫಿಶನರ್ ಟವರ್ ಅತ್ಯಂತ ಐಷಾರಾಮಿ ಮನೆ ಹೊಂದಿದೆ. ಅತೀ ದುಬಾರಿ ಟವರ್‌ ಮೇಲೆ ವಿಜಯ್ ಮಲ್ಯ ಪೆಂಟ್‌ಹೌಸ್ ಮನೆ ಇದೆ. ವಿಶೇಷ ಅಂದರೆ ಈ ಕಿಂಗ್‌ಫಿಶರ್ ಟವರ್‌ನಲ್ಲಿ ಹಲವು ದಿಗ್ಗಜರು ಮನೆ ಖರೀದಿಸಿದ್ದಾರೆ. ಈ ದಿಗ್ಗಜರು ಯಾರು?

Read Full Story

04:07 PM (IST) Jun 11

ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಗುಡ್ ನ್ಯೂಸ್, ಬಳ್ಳಾರಿ-ಚಿಕ್ಕಜಾಜೂರು ರೈಲ್ವೆ ಡಬ್ಲಿಂಗ್‌ಗೆ ಅನುಮೋದನೆ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ₹6,405 ಕೋಟಿ ವೆಚ್ಚದ ಎರಡು ರೈಲ್ವೆ ಯೋಜನೆಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಗಳು ಜಾರ್ಖಂಡ್ ಮತ್ತು ಕರ್ನಾಟಕದಲ್ಲಿ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ.
Read Full Story

03:54 PM (IST) Jun 11

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ಇಂಗ್ಲೆಂಡ್ ತಂಡದಲ್ಲಿ ಮಹತ್ವದ ಬದಲಾವಣೆ! 19 ವರ್ಷದ ವೇಗಿ ತಂಡ ಸೇರ್ಪಡೆ

ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ಇಂಗ್ಲೆಂಡ್ ವೇಗಿ ಜೋಶ್ ಟಂಗ್ ಗಾಯಗೊಂಡಿದ್ದಾರೆ. ಟಂಗ್ ಬದಲಿಗೆ 19 ವರ್ಷದ ಯುವ ವೇಗಿ ಎಡ್ಡಿ ಜೇಕ್ ತಂಡ ಸೇರಿದ್ದಾರೆ. ಈಗಾಗಲೇ ಇಂಗ್ಲೆಂಡ್ ತಂಡವು ವೇಗದ ಬೌಲರ್‌ಗಳ ಗಾಯದ ಸಮಸ್ಯೆಯಿಂದ ಬಳಲುತ್ತಿದೆ.
Read Full Story

More Trending News