ಮಗ ತೀರಿ ಹೋದ ಸುದ್ದಿ ತಿಳಿದು ಅಮ್ಮನಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ ತಾಯಿ-ಮಗ

Published : Mar 04, 2023, 02:36 PM IST
ಮಗ ತೀರಿ ಹೋದ ಸುದ್ದಿ ತಿಳಿದು ಅಮ್ಮನಿಗೂ ಹೃದಯಾಘಾತ, ಸಾವಿನಲ್ಲೂ ಒಂದಾದ ತಾಯಿ-ಮಗ

ಸಾರಾಂಶ

ತಾಯಂದಿರು ತಮ್ಮ ಮಕ್ಕಳಿಗಾಗಿ ಜೀವನದಲ್ಲಿ ಎಲ್ಲಾ ಕಷ್ಟವನ್ನು ಎದುರಿಸಲು ಸಿದ್ಧವಾಗುತ್ತಾರೆ. ಮಕ್ಕಳಿಗೆ ನೋವಾದರೆ ಕಣ್ಣೀರಾಗುತ್ತಾರೆ. ತಾಯಿ-ಮಕ್ಕಳ ಬಾಂಧವ್ಯವೇ ಅಂಥದ್ದು. ಅದು ಅಕ್ಷರಹಃ ನಿಜವೆಂಬುದು ಇಲ್ಲಿ ಸಾಬೀತಾಗಿದೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ. 

ಬಾಗಲಕೋಟೆ: ಅಮ್ಮ ಎಂದರೆ ಆಕೆ ಎಲ್ಲವೂ ಹೌದು. ಪ್ರೀತಿ, ಶಕ್ತಿ, ಧೈರ್ಯ, ನಂಬಿಕೆ ಎಲ್ಲವೂ.ಎಲ್ಲಾ ತಾಯಂದಿರು ತಮ್ಮ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಾರೆ. ಮಕ್ಕಳನ್ನೇ ಸರ್ವಸ್ವ ಎಂದುಕೊಳ್ಳುತ್ತಾರೆ. ಮಕ್ಕಳಿಗಾಗಿ ಜೀವನದಲ್ಲಿ ಎಲ್ಲಾ ಕಷ್ಟವನ್ನು ಎದುರಿಸಲು ಸಿದ್ಧವಾಗುತ್ತಾರೆ. ಮಕ್ಕಳಿಗೆ ನೋವಾದರೆ ಕಣ್ಣೀರಾಗುತ್ತಾರೆ. ತಾಯಿ-ಮಕ್ಕಳ ಬಾಂಧವ್ಯವೇ ಅಂಥದ್ದು. ಅದು ಅಕ್ಷರಹಃ ನಿಜವೆಂಬುದು ಇಲ್ಲಿ ಸಾಬೀತಾಗಿದೆ. ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಸಾವಿನಲ್ಲೂ ತಾಯಿ-ಮಗ ಒಂದಾಗಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದ ಮಗ ದಶರಥ ದುರ್ವೆ  (60), ತಾಯಿ ಶಾವಕ್ಕ ದುರ್ವೆ (90) ಮೃತ ದುರ್ದೈವಿಗಳು. ಕಳೆದ ಒಂದು ವಾರದಿಂದ ಅನಾರೋಗ್ಯಕ್ಕೀಡಾಗಿದ್ದ ಮಗ ದಶರಥ ಇಂದು ಬೆಳಿಗ್ಗೆ ಕೊನೆಯುಸಿರೆಳೆದರು (Death). ದುಃಖಿತರಾಗಿದ್ದ ತಾಯಿ, ಮಗನ ಅಗಲಿಕೆ ನೋವು ಸಹಿಸದೇ ಹೃದಯಾಘಾತದಿಂದ (Heartattack) ಸಂಜೆ ಸಾವನ್ನಪ್ಪಿದರು. ಸಾವಿನಲ್ಲೂ ಒಂದಾದ ತಾಯಿ-ಮಗ (Son-mother) ಅಂತ್ಯಕ್ರಿಯೆಯನ್ನು ಒಟ್ಟಿಗೇ ನಡೆಸಲಾಯಿತು. ತಾಯಿ ಮಗನ ಸಾವು ಕಂಡು  ಗ್ರಾಮಸ್ಥರು ಮಮ್ಮಲ ಮರಗಿದರು.

ಡಿಜೆ ಸೌಂಡ್‌ ಗದ್ದಲ, ಹಾರ ಬದಲಿಸುತ್ತಿದ್ದಂತೆ ಹೃದಯಾಘಾತವಾಗಿ ಸಾವನ್ನಪ್ಪಿದ ವರ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಗರ್ಭ ಶ್ರೀಮಂತನೆಂದು ಎಂಜಿನಿಯರ್‌ನನ್ನ ಮದುವೆಯಾದಳು... ಫಸ್ಟ್‌ ನೈಟ್‌ನಲ್ಲೇ ಬಯಲಾಯ್ತು ಕರಾಳ ಸತ್ಯ!
ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ