
ಸದಾ ಸುತ್ತಮುತ್ತಲಿನವರನ್ನು ಪ್ರೀತಿಸುತ್ತಾ, ಕೆಲವರ ಜತೆ ಮುಲಾಜಿಲ್ಲದೆ ಜಗಳವಾಡುತ್ತಾ, ಸುತ್ತ ಸುಂದರಿಯರನ್ನು ಇಟ್ಟುಕೊಂಡು, ಬೇಕಾದಂತೆ ಸ್ಕಾಚ್ ಹೀರುತ್ತಾ, ಬದುಕನ್ನು ಉತ್ಸವದಂತೆ ಬದುಕಿ ಎದ್ದು ಹೋದ ವ್ಯಕ್ತಿ ಖುಷ್ವಂತ್ ಸಂಗ್. ಅವರು ಬದುಕಿದ್ದೂ ಹಾಗೇ, ಬರೆದದ್ದೂ ಹಾಗೇ. ಸುಖವಾಗಿ, ಆನಂದವಾಗಿ ಬದುಕೋಕೆ ಮತ್ತು ಯಾವುದೇ ಬೇಜಾರಿಲ್ದೇ ಸಾಯೋಕೆ ಏನು ಬೇಕು? ಖುಷ್ವಂತಜ್ಜ ಹೇಳಿದಂತೆ ಅದಕ್ಕಿರೋ ಸೂತ್ರಗಳು ಹತ್ತು. ಅವು ಇಲ್ಲಿವೆ.
ಕಚ್ಚೆ ಸೀರೆಯುಟ್ಟು ಅಜ್ಜಿಯ ಜಬರ್ದಸ್ತ್ ಡಾನ್ಸ್: ವೈರಲ್ ವೀಡಿಯೋ
5. ಅಸೂಯೆ ಇಲ್ಲದಿರುವಿಕೆ
ಐದನೆಯದಾಗಿ, ಜೀವನದಲ್ಲಿ ನಿಮಗಿಂತ ಉತ್ತಮ ಸ್ಥಿತಿಗೆ ಹೋದವರ ಬಗ್ಗೆ ಅಸೂಯೆಪಡುವುದನ್ನು ನಿಲ್ಲಿಸಿ. ನಿಮಗಿಂತ ಅಧಿಕಾರ ಅಥವಾ ಶ್ರೀಮಂತಿಕೆಯಲ್ಲಿ ಅಥವಾ ಖ್ಯಾತಿಯಲ್ಲಿ ಹೆಚ್ಚು ಎತ್ತರಕ್ಕೆ ಏರಿದವರನ್ನು ನೋಡುತ್ತಾ ಹೊಟ್ಟೆ ಉರಿದುಕೊಳ್ಳುತ್ತಿದ್ದರೆ ನೆಮ್ಮದಿ ನಾಶವಾಗುತ್ತದೆ. ನಿಮ್ಮನ್ನು ಇತರರೊಂದಿಗೆ ಹೋಲಿಸುವುದನ್ನು ತಪ್ಪಿಸಿ. ಯಾವಾಗಲೂ ನಮಗಿಂತ ಕೆಳಗೆ ಇರುವವರನ್ನೇ ಹೋಲಿಸಿಕೊಂಡರೆ ಒಳ್ಳೇದು. ಅದು ಬಿಟ್ಟು ನಮಗಿಂತ ಅತ್ಯುತ್ತಮ ಸ್ಥಾನದಲ್ಲಿ ಇರೋರನ್ನು ಹೋಲಿಸಿದರೆ ಹೇಗೆ?
6. ಗಾಸಿಪ್ ಮಾಡಬೇಡಿ
ಆರನೆಯದಾಗಿ, ಜನರು ನಿಮ್ಮ ಬಗ್ಗೆಯಾಗಲೀ, ನಿಮ್ಮ ಹತ್ತಿರ ಬಂದು ಇತರರ ಬಗ್ಗೆಯಾಗಲೀ ಗಾಸಿಪ್(Gossip) ಮಾಡಲು ಬಿಡಬೇಡಿ. ನಿಮ್ಮ ನಡೆನುಡಿ ಸ್ಪಷ್ಟವಾಗಿದ್ದರೆ ನೀವು ಗಾಸಿಪ್ಗೆ ಒಳಗಾಗುವುದಿಲ್ಲ. ಹಾಗೇ ಇತರರ ಬಗೆಗಿನ ಗಾಸಿಪ್ನಿಂದ ನಿಮ್ಮ ಸಮಯ ಹಾಳು. ಇದರಿಂದ ನಿಮ್ಮ ಮನಸ್ಸು ಕಹಿಯಾಗುತ್ತದೆ. ಏನೋ ಪಾಸಿಟಿವ್ ಗಾಸಿಪ್, ಇನ್ನೊಬ್ಬರ ಬಗ್ಗೆ ಒಳ್ಳೇದು ಮಾತನಾಡಬೇಕು. ನೆಗಟಿವ್ ಥಾಟ್ಸ್ ಇಲ್ಲದೇ ಹೋದರೆ ಬದುಕು ಹಸನಾಗುತ್ತಿದೆ. ಮುಖದಲ್ಲಿ ವರ್ಚಸ್ಕು ಹೆಚ್ಚುತ್ತೆ.
7. ಚಂದದ ಹವ್ಯಾಸ
ಏಳನೆಯದಾಗಿ ಚಂದದ ಹವ್ಯಾಸವೊಂದು ನಿಮ್ಮದಾಗಿರಲಿ. ತೋಟಗಾರಿಕೆ, ಓದುವಿಕೆ, ಬರವಣಿಗೆ, ಚಿತ್ರಕಲೆ, ವಾದ್ಯ ನುಡಿಸುವುದು ಅಥವಾ ಸಂಗೀತವನ್ನು ಕೇಳುವುದು ಇತ್ಯಾದಿ. ಬಿಟ್ಟಿ ಡ್ರಿಂಕ್ಸ್ಗಾಗಿ ಅಥವಾ ಸೆಲೆಬ್ರಿಟಿಗಳನ್ನು ಭೇಟಿ ಮಾಡಲು ಕ್ಲಬ್ಗಳು ಅಥವಾ ಪಾರ್ಟಿಗಳಿಗೆ ಹೋಗುವುದು ಸಮಯ ವ್ಯರ್ಥ ಮಾಡುತ್ತದೆ. ನಿಮ್ಮನ್ನು ಅರ್ಥಪೂರ್ಣವಾಗಿ ಆವರಿಸುವ ಯಾವುದನ್ನಾದರೂ ಕೇಂದ್ರೀಕರಿಸಿ.
8. ಆತ್ಮಾವಲೋಕನ (Self Introspection)
ಎಂಟನೆಯದಾಗಿ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 15 ನಿಮಿಷಗಳನ್ನು ಆತ್ಮಾವಲೋಕನಕ್ಕೆ ಮೀಸಲಿಡಿ. ಬೆಳಿಗ್ಗೆ 10 ನಿಮಿಷಗಳು ಮನಸ್ಸನ್ನು ಸಂಪೂರ್ಣವಾಗಿ ನಿಶ್ಚಲವಾಗಿರಿಸಲು ಮತ್ತು ಐದು ನಿಮಿಷಗಳನ್ನು ನೀವು ಆ ದಿನ ಮಾಡಬೇಕಾದ ಕೆಲಸಗಳನ್ನು ಪಟ್ಟಿ(Work list) ಮಾಡಬೇಕು. ಸಂಜೆಯ ಸಮಯದಲ್ಲಿ, ಮನಸ್ಸನ್ನು ನಿಶ್ಚಲವಾಗಿರಿಸಲು ಐದು ನಿಮಿಷಗಳನ್ನು ಮೀಸಲಿಡಬೇಕು ಮತ್ತು ಮಾಡಿದ ಕೆಲಸಗಳ ಪರಿಶೀಲನೆಗೆ 10 ನಿಮಿಷ ಮೀಸಲಿಡಬೇಕು.
ಅಬ್ಬಬ್ಬಾ..203 ಯುನಿಟ್ ರಕ್ತದಾನ ಮಾಡಿ ಗಿನ್ನೆಸ್ ದಾಖಲೆಗೆ ಸೇರಿದ 80 ವರ್ಷದ ಅಜ್ಜಿ!
9. ಕೋಪಕ್ಕೆ ಬಲಿಯಾಗಬೇಡಿ
ಒಂಬತ್ತನೆಯದ ಅಂಶವೆಂದರೆ, ಕೋಪಕ್ಕೆ(Anger) ನಿಮ್ಮತನವನ್ನು ಕಳೆದುಕೊಳ್ಳಬೇಡಿ. ಕೋಪಗೊಳ್ಳದಿರಲು ಪ್ರಯತ್ನಿಸಿ. ಸೇಡು ತೀರಿಸಿಕೊಳ್ಳುವುದು ಅಗತ್ಯವೇ ಎಂದು ಯೋಚಿಸಿ. ನಿಮ್ಮ ಪ್ರೀತಿಗೆ(Love) ಅರ್ಹರಲ್ಲದವರು ನಿಮ್ಮ ಕೋಪಕ್ಕೆ ಅರ್ಹರಲ್ಲ. ಪ್ರೀತಿಗೆ ಅರ್ಹರಾದವರೂ ಕೋಪಕ್ಕೆ ಅರ್ಹರಲ್ಲ!
10. ವಿಷಾದವಿಲ್ಲದ ನಿರ್ಗಮನ
ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಅಂತಿಮ ಸಮಯ ಬಂದಾಗ, ಯಾರ ವಿರುದ್ಧವೂ ಅಥವಾ ಬದುಕಿನ ವಿರುದ್ಧವೂ ಯಾವುದೇ ವಿಷಾದ ಅಥವಾ ಅಸಮಾಧಾನವಿಲ್ಲದೆ ಉಸಿರು ಚೆಲ್ಲಬೇಕು. ನಿಮ್ಮನ್ನು ಕಳೆದುಕೊಂಡವರು ನಿಮ್ಮ ನಿರ್ಗಮನಕ್ಕಾಗಿ ದುಃಖಿಸಬೇಕೇ ಹೊರತು, ನೀವಲ್ಲ. ಬುದಕಲ್ಲಿ ತಪ್ಪು ಮಾಡಿರುತ್ತೇವೆ. ಆದರೆ, ಅದನ್ನು ತಿದ್ದಿಕೊಂಡು, ಹರ್ಟ್ ಮಾಡಿದವರಿಗೊಂದು ಕ್ಷಮೆ ಕೇಳಿದರೆ ಸಾಕು. ಮನಸ್ಸು ನಿರಾಳವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.