Jan 29, 2019, 8:24 PM IST
ಕಾಂಗ್ರೆಸ್ ನಾಯಕರ ‘ಆಕ್ಷೇಪಕಾರಿ’ ಹೇಳಿಕೆಗಳಿಗೆ ಜೆಡಿಎಸ್ ನಾಯಕರೂ ತಿರುಗೇಟು ನೀಡಲಾರಂಭಿಸಿದ್ದಾರೆ. ಸೋಮವಾರ ‘ರಾಜೀನಾಮೆ‘ ಎಚ್ಚರಿಕೆ ನೀಡಿದ ಬಳಿಕ ಜೆಡಿಎಸ್ ಶಾಸಕರು ಸಿಎಂ ಎಚ್.ಡಿ.ಕುಮಾರಸ್ವಾಮಿ ಬೆಂಬಲಕ್ಕೆ ನಿಂತಿದ್ದಾರೆ. ಹದ್ದುಮೀರಿ ಹೇಳಿಕೆಗಳನ್ನು ನೀಡಿದರೆ ಸರ್ಕಾರಕ್ಕೆ ಧಕ್ಕೆಯಾದರೆ ನಾವು ಜವಾಬ್ದಾರರಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಜೆಡಿಎಸ್ ನಾಯಕ ಎಚ್ಚರಿಕೆ ನೀಡಿದ್ದಾರೆ.