ಓಬಿಸಿ, ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಮಸೂದೆಗೆ ತೆಲಾಂಗಣ ವಿಧಾನಸಭೆ ಅಸ್ತು

Published : Apr 16, 2017, 03:48 AM ISTUpdated : Apr 11, 2018, 12:45 PM IST
ಓಬಿಸಿ, ಪರಿಶಿಷ್ಟ ಜಾತಿ ಪಂಗಡ ಮೀಸಲಾತಿ ಮಸೂದೆಗೆ ತೆಲಾಂಗಣ ವಿಧಾನಸಭೆ ಅಸ್ತು

ಸಾರಾಂಶ

ರಜಾದಿನದ ಹೊರತಾಗಿಯೂ ಸರ್ಕಾರವು ಕರೆದಿದ್ದ ವಿಶೇಷಾಧಿವೇಶನದಲ್ಲಿ ‘ತೆಲಾಂಗಣ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಸೂದೆ-2017’ಯನ್ನು ಅಂಗೀಕರಿಸಲಾಗಿದೆ.  ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ,  ಹಾಗೂ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಈ ಮಸೂದೆಯು ಖಚಿತಪಡಿಸುತ್ತದೆ.

ಹೈದರಾಬಾದ್ (ಏ.16): ಪರಿಶಿಷ್ಟ ಪಂಗಡ ಹಾಗೂ ಮುಸ್ಲಿಮ್ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು  ಕ್ರಮವಾಗಿ ಶೇ.10 ಹಾಗೂ ಶೇ.12ಕ್ಕೆ ಏರಿಸುವ ಮಸೂದೆಯನ್ನು ಇಂದು ತೆಲಾಂಗಣ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಇದರೊಂದಿಗೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮೀಸಲಾತಿ ಮಿತಿಯನ್ನು ವಿಧಾನಸಭೆಯು ಮೀರಿದಂತಾಗಿದೆ.

ರಜಾದಿನದ ಹೊರತಾಗಿಯೂ ಸರ್ಕಾರವು ಕರೆದಿದ್ದ ವಿಶೇಷಾಧಿವೇಶನದಲ್ಲಿ ‘ತೆಲಾಂಗಣ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಸೂದೆ-2017’ಯನ್ನು ಅಂಗೀಕರಿಸಲಾಗಿದೆ.  ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ,  ಹಾಗೂ ಸರ್ಕಾರಿ ಸೇವೆಗಳಲ್ಲಿ ಮೀಸಲಾತಿಯನ್ನು ಈ ಮಸೂದೆಯು ಖಚಿತಪಡಿಸುತ್ತದೆ.

ಮಸೂದೆಯಲ್ಲಿ ಪರಿಶಿಷ್ಟ ಪಂಗಡಗಳಿಗೆ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಸರ್ಕಾರಿ ಸೇವೆಗಳಲ್ಲಿರುವ ಮೀಸಲಾತಿಯನ್ನು ಶೇ.6ರಿಂದ 10ಕ್ಕೆ ಏರಿಸಲಾಗಿದೆ.

ಐವರು ಬಿಜೆಪಿ ಶಾಸಕರು ಮಸೂದೆಗೆ ಭಾರೀ ವೀರೋಧ ವ್ಯಕ್ತಪಡಿಸಿದ್ದು, ಬಳಿಕ ಅವರನ್ನು ಸದನದಿಂದ ಅಮಾನತುಗೊಳಿಸಬೇಕಾಯಿತು.  

ಹಿಂದುಳಿದ ಮುಸ್ಲಿಮ್ ವರ್ಗಗಳಿಗೆ ಹಾಲಿ ಶೇ.4ರಷ್ಟಿರುವ ಮೀಸಲಾತಿಯನ್ನು ಶೇ.12ಕ್ಕೆ ಏರಿಸುವ ಈ ಮಸೂದೆಯನ್ನು ಖುದ್ದು ಮುಖ್ಯಮಂತ್ರಿ  ಕೆ,ಚಂದ್ರಶೇಖರ್ ರಾವ್ ವಿಧಾನಸಬೆಯಲ್ಲಿ ಮಂಡಿಸಿದರು. ಈ ಮಸೂದೆಯು ಹಾಗೂ ಮೀಸಲಾತಿಯು ಯಾವುದೇ ಧರ್ಮಾಧಾರಿತವಾಗಿರದೇ, ಕೇವಲ ಹಿಂದುಳಿಯುವಿಕೆ ಆಧಾರದಲ್ಲಾಗಿದೆಯೆಂದು ಕೆಸಿಆರ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಪ್ರತ್ಯೇಕ ತೆಲಾಂಗಣ ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ, ಅವರಲ್ಲಿ ಶೇ.90 ಮಂದಿ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ  ಹಿಂದುಳಿದವರಾಗಿದ್ದಾರೆ. ಆದುದರಿಂದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬೇಕಾಗಿದೆಯೆಂದು ಅವರು ಸದನಕ್ಕೆ ತಿಳಿಸಿದ್ದಾರೆ.

ಈ ಮಸೂದೆ ಅಂಗೀಕಾರಗೊಳ್ಳುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ.62ಕ್ಕೇರಿದಂತಾಗುತ್ತದೆ. ಆದರೆ ನವಂಬರ್ 1992ರಲ್ಲಿ ಇಂದಿರಾ ಸಾವ್ನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮೀಸಲಾತಿ ಮಿತಿಯನ್ನು ಶೆ.50ಕ್ಕೆ ನಿಗದಿಪಡಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Breaking ಸ್ಮೋಕ್ ಬಾಂಬ್ ಎಸೆದು ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿ, 3 ಸಾವು, ಐವರು ಗಂಭೀರ
ಶಕ್ತಿಯಡಿ ಸರ್ಕಾರದಿಂದ ಸಾರಿಗೆ ನಿಗಮಕ್ಕೆ ₹4000 ಕೋಟಿ ಬಾಕಿ: ಸಚಿವ ರಾಮಲಿಂಗಾರೆಡ್ಡಿ