ಭಾರತದಲ್ಲಿ ವಿಶ್ವಕಪ್ ಟೂರ್ನಿಗೆ ಪಾಕ್ ಆಕ್ರೋಶ, ಪಂಚಮಸಾಲಿ ಸಮಾವೇಶ; ಫೆ.21ರ ಟಾಪ್ 10 ಸುದ್ದಿ!

By Suvarna NewsFirst Published Feb 21, 2021, 5:00 PM IST
Highlights

ಟಿ20 ವಿಶ್ವಕಪ್‌ಗೆ ವೀಸಾ ಕೊಡಿ, ಇಲ್ಲವೇ ಭಾರತದಿಂದ ವಿಶ್ವಕಪ್‌ ಎತ್ತಂಗಡಿ ಮಾಡಿ ಎಂದು ಪಾಕಿಸ್ತಾನ ಎಚ್ಚರಿಕೆ ನೀಡದೆ. ಬೆಂಗಳೂರಿನಲ್ಲಿ ನ ಪಂಚಮಸಾಲಿ ಸಮಾವೇಶ ಆಯೋಜಿಸುವ ಮೂಲಕ ಸರ್ಕಾರ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಕಾಂಗ್ರೆಸ್ ರ್ಯಾಲಿಯಲ್ಲಿ ಬಳುಕುವ ಬಳ್ಳಿ ಡ್ಯಾನ್ಸ್ ವೈರಲ್, ಪುನಿತ್ ರಾಜ್ ಕುಮಾರ್ ಹಂಚಿಕೊಂಡ ಮೆಸೇಜ್ ಸೇರಿದಂತೆ ಫೆಬ್ರವರಿ 21ರ ಟಾಪ್ 10 ಸುದ್ದಿ ಇಲ್ಲಿವೆ.
 

ರಾಜಧಾನಿಯಲ್ಲಿ ಪಂಚಮಸಾಲಿ ಪಾಂಚಜನ್ಯ: ಸರ್ಕಾರದಿಂದ ಸಿಗುತ್ತಾ ಭರವಸೆ?...

ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ, ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಅರಮನೆ ಮೈದಾನದಲ್ಲಿ ಪಂಚಮಸಾಲಿ ಬೃಹತ್ ಸಮಾವೇಶ ನಡೆಯುತ್ತಿದೆ. 

ಕಾಂಗ್ರೆಸ್ ಆಯೋಜಿಸಿದ ರ‍್ಯಾಲಿಯಲ್ಲಿ ಬಳುಕುವ ಬಳ್ಳಿಯ ಲೈಲಾ ಡ್ಯಾನ್ಸ್; ತೀವ್ರ ಆಕ್ರೋಶ!...

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಜನಾಕ್ರೋಶ ಪ್ರತಿಭಟನೆ ಆಯೋಜಿಸಿದೆ. ಈ ಪ್ರತಿಭಟನಾ ಸಮಾವೇಶದಲ್ಲಿ ಕಾಂಗ್ರೆಸ್ ಮುಖಂಡರು ಬಳುಕುವ ಬಳ್ಳಿಯನ್ನು ಕರೆತಂದು ತಮ್ಮ ಮುಂದೆ ಲೈಲಾ ಮೇ ಲೈಲಾ ಡ್ಯಾನ್ಸ್ ಮಾಡಿಸಿದ್ದಾರೆ. ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಆನೆ ಬಂತೊಂದು ಆನೆ.. ಜೊತೆಗೆ ಬೆತ್ತಲೆ ರಾಣಿನೂ ಬಂದ್ರು!...

ಬೆತ್ತಲೆ ಪೋಸ್ ನೀಡುವುದರಲ್ಲಿ ಈಕೆ ಒಂದು ಕೈ ಮುಂದು.. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ  ಹಾಕಿಕೊಂಡಿರುವ ವಿಡಿಯೋ ಒಂದು ಟೀಕೆಗಳ ಸುರಿಮಳೆಗೆ ಕಾರಣವಾಗಿದೆ.

ಟಿ20 ವಿಶ್ವಕಪ್‌ಗೆ ವೀಸಾ ಕೊಡಿ, ಇಲ್ಲವೇ ಭಾರತದಿಂದ ವಿಶ್ವಕಪ್‌ ಎತ್ತಂಗಡಿ ಮಾಡಿ: ಪಾಕ್‌ ಎಚ್ಚರಿಕೆ...

ಪಾಕಿಸ್ತಾನಿಯರಿಗೆ ವೀಸಾ ನೀಡುವ ಬಗ್ಗೆ ಭಾರತ ಲಿಖಿತ ಭರವಸೆ ನೀಡಬೇಕು ಇಲ್ಲದಿದ್ದ ಪಕ್ಷದಲ್ಲಿ ಟಿ20 ವಿಶ್ವಕಪ್ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಬೇಕು ಎಂದು ಪಾಕಿಸ್ತಾನ ಪಟ್ಟು ಹಿಡಿದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಫ್ಯಾನ್ಸ್ ಜೊತೆ ಸ್ಯಾಡ್ ನ್ಯೂಸ್ ಹಂಚಿಕೊಂಡ ಪುನೀತ್ ರಾಜ್‌ಕುಮಾರ್...

ಯುವರತ್ನ ಮೂರನೇ ಹಾಡಿನ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಅಭಿಮಾನಿಗಳ ಜೊತೆ ಬೇಸರದ ಸುದ್ದಿ ಹಂಚಿಕೊಂಡ ಪುನೀತ್.

ರೆಡ್‌ಮಿ ನೋಟ್ 10 ಸೀರೀಸ್ ಹೊಸ ಫೋನ್‌ಗಳು ಶೀಘ್ರ ಮಾರುಕಟ್ಟೆಗೆ, ಏನೇನಿವೆ ವಿಶೇಷತೆ...

ರೆಡ್‌ಮಿ ನೋಟ್‌ 10 ಸೀರೀಸ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗ ಹಾಕಲು ಸಿದ್ಧವಾಗಿವೆ. ಈ ಬಗ್ಗೆ ಟ್ವಿಟರ್‌ನಲ್ಲಿ ಮಾಹಿತಿ ಸೋರಿಕೆಯಾಗಿದ್ದು, ಈ ಸೀರೀಸ್‌ನಲ್ಲಿ ಒಟ್ಟು ಮೂರು ಫೋನ್‌ಗಳನ್ನು ಮಾರ್ಚ್ 4ರಂದು ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಬ್ಯಾಟರಿ ಮತ್ತು ಪ್ರೊಸೆಸರ್ ದೃಷ್ಟಿಯಿಂದ ಈ ಫೋನ್ ಧಮಾಕಾ ಆಗಿರಲಿವೆ.

ಪೆಟ್ರೋಲ್‌ ಬೆಲೆ ಇಳಿಕೆ : ಸಚಿವೆ ನಿರ್ಮಲಾ ಪ್ರಸ್ತಾಪ...

ದೇಶದಲ್ಲಿ ದಿನ ದಿನವೂ ಕೂಡ ಪೆಟ್ರೋಲ್ ಬೆಲೆ ಭಾರೀ ಏರಿಕೆಯಾಗುತ್ತಿದೆ. ಇದರಿಂದ ಗ್ರಾಹಕರು ಸಂಕಷ್ಟ ಪಡುವ ಸ್ಥಿತಿ ಎದುರಾಗಿದೆ. ಇದೀಗ ಮೊದಲ ಬಾರಿಗೆ ನಿರ್ಮಲಾ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. 

ಹೊಸ ಬಜಾಜ್ ಪಲ್ಸರ್ 180 ಬಿಡುಗಡೆಯಾಗಿದೆ, ಹೀಗಿದೆ ನೋಡಿ...

ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿರುವ ಬಜಾಜ್ ಆಟೋ ಇದೀಗ ಹೊಸ ಪಲ್ಸರ್ 180 ಬಿಡುಗಡೆ ಮಾಡಿದೆ. ಈ ಬೈಕ್ ಬೆಲೆ 1.08 ಲಕ್ಷ ರೂಪಾಯಿಯಾಗಿದೆ. ಬಿಎಸ್ 6 ಆಧರಿತ ಎಂಜಿನ್ ಹೊಂದಿರುವ ಈ ಬೈಕ್ ಹೋಂಡಾ ಹಾರ್ನೆಟ್, ಟಿವಿಎಸ್ ಅಪಾಚೆ ಮತ್ತು ಹೀರೋ ಎಕ್ಸ್‌ಟ್ರೀಮ್‌ಗೆ ತೀವ್ರ ಪೈಪೋಟಿ ನೀಡಬಹುದು.

ರೈತ ಪ್ರತಿಭಟನೆ ಬೆಂಬಲಿಸಿ ಸಮಾವೇಶ; ಕಾಂಗ್ರೆಸ್ ಪಕ್ಷದೊಳಗೆ ಭಿನ್ನಮತ!...

ರೈತ ಪ್ರತಿಭಟನೆ ಬೆಂಬಲಿಸಿರುವ ಕಾಂಗ್ರೆಸ್ ಇದೀಗ ಎಲ್ಲಾ ರಾಜ್ಯಗಳಲ್ಲಿ ರೈತ ಸಮಾವೇಶ ಮಾಡೋ ಮೂಲಕ ಕೇಂದ್ರದ ವಿರುದ್ಧ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸುತ್ತಿದೆ. ಆದರೆ ಕೆಲ ರಾಜ್ಯದಲ್ಲಿ ರೈತ ಪ್ರತಿಭಟನೆ ಸಮಾವೇಶದಿಂದ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡಿದೆ.

'ಮೋದಿ ಸರ್ಕಾರದ ವಿರುದ್ಧ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮ'...

ದೇಶ ಹಾಗೂ ರಾಜ್ಯದಲ್ಲಿ ರೈತ, ಕಾರ್ಮಿಕ, ಜನತೆಯ ಹಿತ ಕಾಯುವಲ್ಲಿ ವಿಫಲವಾಗಿರುವ ಬಿಜೆಪಿ ಸರ್ಕಾರಗಳಿಗೆ ಜನತೆ ತಕ್ಕಪಾಠ ಕಲಿಸಲು ಚುನಾವಣೆಗೆ ಕಾಯುತ್ತಿದ್ದಾರೆ: ವಿ.ಎಸ್‌. ಉಗ್ರಪ್ಪ

click me!