ನ್ಯಾಯಾಧೀಶರ ವಿರುದ್ಧದ ಲಂಚದ ಪ್ರಕರಣ: ಅರ್ಜಿ ತಿರಸ್ಕರಿಸಿದ ಸುಪ್ರೀಂ

Published : Nov 14, 2017, 04:50 PM ISTUpdated : Apr 11, 2018, 12:38 PM IST
ನ್ಯಾಯಾಧೀಶರ ವಿರುದ್ಧದ ಲಂಚದ ಪ್ರಕರಣ: ಅರ್ಜಿ ತಿರಸ್ಕರಿಸಿದ ಸುಪ್ರೀಂ

ಸಾರಾಂಶ

ಹಿರಿಯ ವಕೀಲರು ಎಫ್'ಐಆರ್'ಗೆ ಸಂಬಂಧಿಸಿದಂತೆ  ಮೂಲಭೂತ ಅಂಶವನ್ನು ಪರಿಶೀಲಿಸದೆ ಬೇಜವಾಬ್ದಾರಿಯುತ ಆರೋಪಗಳನ್ನು ಮಾಡಿದ್ದಾರೆ. ಈ ರೀತಿಯ ಆರೋಪಗಳು ನ್ಯಾಯಾಂಗದ ವ್ಯವಸ್ಥೆಗೆ ಪೆಟ್ಟು ಬೀಳುವುದಲ್ಲದೆ  ದೇಶದ ಸಮಗ್ರತೆಯ ಮೇಲೆ ಅನಾವಶ್ಯಕವಾಗಿ ಅನುಮಾನಗಳನ್ನು ಮೂಡಿಸುತ್ತವೆ.

ನವದೆಹಲಿ(.14): ನ್ಯಾಯಾಧೀಶರ ವಿರುದ್ಧವಿರುವ ಲಂಚದ ಆರೋಪದ ತನಿಖೆಯನ್ನು ಎಸ್ಐಟಿ'ಗೆ ವಹಿಸಬೇಕೆಂಬ ಹಿರಿಯ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿದೆ. ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಇದೊಂದು ಬೇಜವಾಬ್ದಾರಿಯುತ ಪ್ರಕರಣವಾಗಿದ್ದು ಕಾನೂನಿಗಿಂತ ಯಾರು ಮಿಗಿಲಲ್ಲ' ಎಂದು ತಿಳಿಸಿದೆ.            

ಸೆಪ್ಟೆಂಬರ್ 19ರಂದು ಸಿಬಿಐ ಮಾಜಿ ಒಡಿಸಾ ಹೈಕೋರ್ಟ್ ನ್ಯಾಯಾಧೀಶರು ಒಳಗೊಂಡಂತೆ ಹಲವು ಮಂದಿ ಭ್ರಷ್ಟಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಎಫ್'ಐಆರ್ ಸಲ್ಲಿಸಿತ್ತು. ವೈದ್ಯಕೀಯ ಕಾಲೇಜಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ನ್ಯಾಯಾಧೀಶರು ಸೇರಿದಂತೆ ಹಲವರು ಲಾಭವನ್ನು ಪಡೆದು ತೀರ್ಪು ಪ್ರಕಟಿಸಿದರೆಂಬ ಆರೋಪಿಸಲಾಗಿದೆ.

ಈ ರೀತಿಯ ಆರೋಪದಿಂದ ನ್ಯಾಯಾಂಗಕ್ಕೆ ಪೆಟ್ಟು

ಆರ್.ಕೆ.ಅಗರ್'ವಾಲ್, ಅರುಣ್ ಮಿಶ್ರಾ ಹಾಗೂ ಎ.ಎಂ.ಖಾನ್ವಿಲ್ಕರ್ ಅವರನು  ಒಳಗೊಂಡ ನ್ಯಾಯಪೀಠ, ಲಂಚ ನೀಡಿಕೆಯಿಂದ ತಮ್ಮತ್ತ ಸೆಳೆದುಕೊಳ್ಳಲು ಮಾಡಿದ ಪ್ರಯತ್ನಗಳು ಫೋರಮ್ ಶಾಪಿಂಗ್ ಎನಿಸುವುದಿಲ್ಲ ಎಂದು ಹೇಳಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿ ಹಾಕಿದೆ.

ಹಿರಿಯ ವಕೀಲರು ಎಫ್'ಐಆರ್'ಗೆ ಸಂಬಂಧಿಸಿದಂತೆ  ಮೂಲಭೂತ ಅಂಶವನ್ನು ಪರಿಶೀಲಿಸದೆ ಬೇಜವಾಬ್ದಾರಿಯುತ ಆರೋಪಗಳನ್ನು ಮಾಡಿದ್ದಾರೆ. ಈ ರೀತಿಯ ಆರೋಪಗಳು ನ್ಯಾಯಾಂಗದ ವ್ಯವಸ್ಥೆಗೆ ಪೆಟ್ಟು ಬೀಳುವುದಲ್ಲದೆ  ದೇಶದ ಸಮಗ್ರತೆಯ ಮೇಲೆ ಅನಾವಶ್ಯಕವಾಗಿ ಅನುಮಾನಗಳನ್ನು ಮೂಡಿಸುತ್ತವೆ. ಸಿಬಿಐ ಸಲ್ಲಿಸಿರುವ ಎಫ್'ಐಆರ್ ಯಾವುದೇ ನ್ಯಾಯಾಧೀಶರ ವಿರುದ್ಧವಾಗಿಲ್ಲ ಅಲ್ಲದೆ ಒಬ್ಬರ ವಿರುದ್ಧದ ಆರೋಪಕ್ಕೆ ಎಲ್ಲರ ಮೇಲೆ ಗೂಬೆ ಕೂರಿಸಲು ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್ ತಿಳಿಸಿದೆ.

ಮೆಡಿಕಲ್ ಕಾಲೇಜು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಡಿಶಾ ಹೈಕೋರ್ಟ್'ನ ನಿವೃತ್ತ ನ್ಯಾಯಾಧೀಶ ಇಶ್ರತ್ ಮಸ್ರೂರ್ ಖುದ್ದುಸಿ ವಿರುದ್ಧವೇ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಬೇಕೆಂದು ಜೈಸ್ವಾಲ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!