Aug 17, 2018, 8:20 PM IST
ಕವಿ ಹೃದಯದ ಶ್ರೇಷ್ಠ ವಾಗ್ಮಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ವಾಗ್ಝರಿಗೆ ಮರುಳಾಗದವರು ಯಾರು? ಈ ರಾಜಕೀಯ ವಿಕಾಸ ಪುರುಷನ ಅನೇಕ ಭಾಷಣಗಳು ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುತ್ತಿತ್ತು. ಕೇವಲ ಒಂದೇ ಒಂದು ಮತದಿಂದ ಸರಕಾರ ಉರುಳಿದಾಗ, ಸಂಸತ್ತಿನಲ್ಲಿ ಮಾಡಿದ ಭಾಷಣವಂತೂ ಅದ್ಭುತ. ಮಾತಿಗೆ ಮಾತು ಬೆಸೆದು, ಬಿಗುವಿನ ವಾತಾವರಣವನ್ನು ತಿಳಿಗೊಳಿಸುವ ಕಲೆ ವಾಜಪೇಯಿಗೆ ಕರಗತವಾಗಿತ್ತು. ಅಟಲ್ ಅವರ ಮಾತುಗಳು ಎಂದೆಂದಿಗೂ ಅಮರ. ಇಲ್ಲಿವೆ ಅವರ ಕೆಲವು ಅತ್ಯದ್ಫುತ ಮಾತಿನ ತುಣುಕುಗಳು.