Sep 16, 2018, 4:01 PM IST
ಬೆಂಗಳೂರು(ಸೆ.16): ಇಂದು ಮಾಜಿ ಸಿಎಂ ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯಲ್ಲಿ ಪರಮೇಶ್ವರ್ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಸಿದ್ದು ಮುಂದೆ ಆಪರೇಷನ್ ಕಮಲದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್, ಬಿಜೆಪಿಯಿಂದ 22 ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಹಣ ನೀಡಲಾಗಿದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಬಿಜೆಪಿ ನಾಯಕರು ಕಾಂಗ್ರೆಸ್ - ಜೆಡಿಎಸ್ ಶಾಸಕರಿಗೆ ಟೋಕನ್ ಅಡ್ವಾನ್ಸ್ ನೀಡಿದ್ದಾರೆ ಎಂದು ಪರಂ ಮಾಹಿತಿ ನೀಡಿದ್ದು, ಬಿಜೆಪಿಯಿಂದ ಹಣ ಪಡೆದ ಶಾಸಕರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರತಿ ಶಾಸಕರಿಗೂ 10 ಕೋಟಿ ಹಣ ನೀಡಲಾಗಿದ್ದು, ಎಲ್ಲಾ ಶಾಸಕರನ್ನು ಕರೆದು ಮಾತಾಡಿ ಎಂದು ಸಿದ್ದುಗೆ ವೇಣುಗೋಪಾಲ್ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿದ್ದು ಮನೆಯಲ್ಲಿ ನಡೆದ ಸಭೆಯ ಸಂಪೂರ್ಣ ಮಾಹಿತಿ ಸುವರ್ಣ ನ್ಯೂಸ್ಗೆ ಲಭ್ಯವಾಗಿದ್ದು, ನಿಜಕ್ಕೂ ಆಪರೇಷನ್ ಕಮಲ ನಡೆಯುತ್ತಿದೆಯಾ ಎಂಬ ಅನುಮಾನ ಇದೀಗ ಮೂಡತೊಡಗಿದೆ.