ನಾವ್ಯಾರ್ ಗೊತ್ತಾ?: ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ!

Aug 21, 2018, 6:50 PM IST

ಹೈದರಾಬಾದ್(ಆ.21): ತೆಲಂಗಾಣದ ಮಾಜಿ ಎಂಎಲ್ ಸಿ ರಂಗಾ ರೆಡ್ಡಿ ಅವರ ಬೆಂಬಲಿಗರು ಎಂದು ಹೇಳಲಾದ ಯುವಕರ ಗುಂಪೊಂದು ಅರಣ್ಯ ಅಧಿಕಾರಿಗೆ ಕಪಾಳಮೋಕ್ಷ ಮಾಡಿದ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಸುನ್ನಿಪೆಂಟಾ ಎಂಬ ಗ್ರಾಮದಲ್ಲಿ ಕರ್ತವ್ಯನಿರರಾಗಿದ್ದ ಜ್ಯೋತಿ ಸ್ವರೂಪ್ ಎಂಬ ಅರಣ್ಯಾಧಿಕಾರಿ, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುತ್ತಿದ್ದ 6 ಜನ ಯುವಕರ ತಂಡವನ್ನು ತಡೆದಿದ್ದರು.

ಇದರಿಂದ ವ್ಯಘ್ರರಾದ ಯುವಕರ ಗುಂಪು, ತಾವು ಮಾಜಿ ಎಂಎಲ್ ಸಿ ರಂಗಾ ರೆಡ್ಡಿ ಅವರ ಮಗನ ಗೆಳೆಯರಾಗಿದ್ದು, ನಮ್ಮ ವಾಹನ ತಡೆಯಲು ನಿನಗೆಷ್ಟು ಧೈರ್ಯ ಎಂದು ದರ್ಪ ತೋರಿದ್ದಾರೆ. ಅಲ್ಲದೇ ಅಧಿಕಾರಿ ಜ್ಯೋತಿ ಸ್ವರೂಪ್ ಅವರ ಮೇಲೆ ಹಲ್ಲೆ ಮಾಡಿ ಕಾಲಿಗೆ ಬಿದ್ದು ಕ್ಷಮಾಪಣೆ ಕೋರುವಂತೆ ಮಾಡಿದ್ದಾರೆ.

ಇನ್ನು ಮಾಜಿ ಎಂಎಲ್ ಸಿ ರಂಗಾ ರೆಡ್ಡಿ ಮತ್ತು ಅವರ ಮಗ ಘಟನೆಯನ್ನು ಖಂಡಿಸಿದ್ದು, ಅವರಲ್ಲಿ ಒಬ್ಬರೂ ತಮಗೆ ಪರಿಚಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯುವಕರ ಗುಂಪು ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

ಸದ್ಯ ಘಟನೆಗೆ ಸಂಬಂಧಿಸಿದಂತೆ 6 ಜನರನ್ನು ಬಂಧಿಸಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.