ಇಂದಿರಾ ಕ್ಯಾಂಟೀನ್ ವಿಚಾರ: ಕಾಂಗ್ರೆಸ್ ಶಾಸಕರಿಂದಲೇ ಅಪಸ್ವರ

Jul 16, 2018, 6:58 PM IST

ಬೆಂಗಳೂರು[ಜು.16] ಇಂದಿರಾ ಕ್ಯಾಂಟೀನ್ ನಲ್ಲಿ ಭಯಂಕರ ಗೋಲ್ ಮಾಲ್ ನಡೆಯುತ್ತಿದೆ ಎಂದು ಕಾಂಗ್ರೆಸ್‌ನ ಪ್ರಭಾವಿ ಶಾಸಕರೊಬ್ಬರೆ ಅಸಮಾಧಾನ ಹೊರ ಹಾಕಿದ್ದಾರೆ.

ಡಿಸಿಎಂ ಪರಮೇಶ್ವರ ನೇತೃತ್ವದ ಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಬಗ್ಗೆ ಶಾಸಕ ಮುನಿರತ್ನ ಆಕ್ರೋಶ ಹೊರಹಾಕಿದ್ದು ಪ್ರತಿ ಹೊತ್ತಿಗೆ ಐನೂರು ಊಟ ತಿಂಡಿ ಖಾಲಿಯಾಗಿದೆ ಅಂತ ಸರ್ಕಾರದಿಂದ ಬಿಲ್ ತೆಗೆದುಕೊಳ್ಳಯತ್ತಾ ಇದ್ದಾರೆ. ಆದರೆ ಇಂದಿರಾ ಕ್ಯಾಂಟೀನ್ ನಲ್ಲಿ ಕೇವಲ 250 ಮಂದಿ ಊಟ ಮಾಡ್ತಿದ್ದಾರೆ. ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಸಿಗಲಿಲ್ಲ ಅಂತ ಎಷ್ಟೋ ಮಂದಿ ವಾಪಸ್ ಹೋಗ್ತಿದ್ದಾರೆ ಎಂದು ಹೇಳಿದ್ದಾರೆ.