ಯಡಿಯೂರಪ್ಪ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು!

Jul 5, 2018, 7:23 PM IST

ಬೆಂಗಳೂರು(ಜು.5): ಸಿಎಂ ಕುಮಾರಸ್ವಾಮಿ ಅವರ ಬಜೆಟ್‌ನ್ನು ‘ಅಣ್ತಮ್ಮ’ ಬಜೆಟ್ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟೀಕಿಸಿದ್ದಾರೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಕುಮಾರಸ್ವಾಮಿ, ಧರ್ಮಸ್ಥಳದ ಮಂಜುನಾಥ ಸ್ವಾಮಿ ಹೆಸರಲ್ಲಿ ಬಿಎಸ್‌ವೈ ಸುಳ್ಳು ಹೇಳಬಾರದು ಎಂದು ಕಾಲೆಳೆದಿದ್ದಾರೆ. 

ರೈತರ ಖಾಸಗಿ ಸಾಲದ ಕುರಿತು ಪ್ರಶ್ನೆ ಕೇಳಿದಾಗ ಸಿಎಂ ಕುಮಾರಸ್ವಾಮಿ ಮೇಲಿನಂತೆ ಉತ್ತರಿಸಿದ್ದಾರೆ. ಖಾಸಗಿ ಸಾಲ ಪಡೆದುಕೊಂಡ ರೈತರ ಬವಣೆ ತಮಗೆ ಗೊತ್ತಿದೆ, ಆದರೆ ಅವರ ಸಾಲವನ್ನೂ ಮನ್ನಾ ಮಾಡುವುದಾಗಿ ತಾವು ಎಲ್ಲಿಯೂ ಹೇಳಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 

ಧರ್ಮಸ್ಥಳ ಮಂಜುನಾಥ ಸ್ವಾಮಿ ಹೆಸರಲ್ಲಿ ಬಿಎಸ್‌ವೈ ಸುಳ್ಳು ಹೇಳಿದರೆ ಅವರಿಗೆ ಕೆಟ್ಟದಾಗುತ್ತದೆ. ಈ ಬಗ್ಗೆ ಅವರು ಎಚ್ಚರದಿಂದ ಇರುವುದು ಒಳಿತು ಎಂದು ಸಿಎಂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..