- 2017-18 ನೇ ಸಾಲಿನ ಬಾದರಾಯಣ ಸಮ್ಮಾನ್ ಸೇರಿದಂತೆ ಹಲವು ಭಾಷಾ ಪ್ರಶಸ್ತಿ ಪ್ರಕಟ
- 6 ಕನ್ನಡಿಗರಿಗೆ ಪ್ರಶಸ್ತಿ ಗರಿ
- ವಿನಾಯಕ ಉಡುಪ, ಡಾ. ಎಂ ಚಿದಾನಂದ ಮೂರ್ತಿ ಸೇರಿದಂತೆ ನಾಲ್ವರಿಗೆ ಪ್ರಶಸ್ತಿ
ನವದೆಹಲಿ (ಆ. 16): 2016, 2017 ಹಾಗೂ 2018 ನೇ ಸಾಲಿನ ಬಾದರಾಯಣ ಸಮ್ಮಾನ್ ಸೇರಿದಂತೆ ಹಲವು ಭಾಷಾ ಪ್ರಶಸ್ತಿಗಳನ್ನು ಹಾಗೂ ಭಾಷೆಗಳಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳ ಗೌರವ ಪ್ರಶಸ್ತಿಗಳನ್ನು ಬುಧವಾರ ಪ್ರಕಟಿಸಲಾಗಿದೆ.
6 ಕನ್ನಡಿಗರು ಈ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇನ್ನು 2018 ನೇ ಸಾಲಿನಲ್ಲಿ ಶೃಂಗೇರಿಯ ವಿನಾಯಕ ಉಡುಪ ಅವರಿಗೆ ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಪ್ರಾಪ್ತಿಯಾಗಿದೆ. ಇದೇ ವೇಳೆ, ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಹಿರಿಯ ವಿದ್ವಾಂಸ ಡಾ.ಎಂ.ಚಿದಾನಂದ ಮೂರ್ತಿ ಈ ಗೌರವಕ್ಕೆ ಆಯ್ಕೆಯಾ ಗಿದ್ದಾರೆ.
2017 ನೇ ಸಾಲಿಗೆ ಬೆಂಗಳೂರಿನ ಭುವ ನಗಿರಿ ಅನಂತ ಶರ್ಮ ಅವರಿಗೆ ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಲಭಿಸಿದೆ. ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಟಿ.ವಿ. ವೆಂಕಟಾಚಲ ಶಾಸ್ತ್ರಿ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 2016 ನೇ ಸಾಲಿನಲ್ಲಿ ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಖ್ಯಾತ ಇತಿಹಾಸ ತಜ್ಞ ಎಸ್. ಶೆಟ್ಟರ್ ಅವರು ರಾಷ್ಟ್ರಪತಿಗಳ ಗೌರವ ಪ್ರಶಸ್ತಿ ಪಡೆದಿದ್ದಾರೆ.
ಇದೇ ಸಾಲಿನ ಶಾಸ್ತ್ರೀಯ ಕನ್ನಡ ವಿಭಾಗದಲ್ಲಿ ಡಾ| ಮಂಜುನಾಥ ಅವರು ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.