ಕರ್ಮ ಸಿದ್ಧಾಂತ ಗುಟ್ಟು ರಟ್ಟಾಯ್ತು..: ಇವುಗಳೇ ನಿಮ್ಮ ಪುನರ್ಜನ್ಮವನ್ನು ನಿರ್ಧರಿಸುವ ಅಂಶಗಳು!

Published : Jan 30, 2025, 01:16 PM ISTUpdated : Jan 30, 2025, 04:13 PM IST
ಕರ್ಮ ಸಿದ್ಧಾಂತ ಗುಟ್ಟು ರಟ್ಟಾಯ್ತು..: ಇವುಗಳೇ ನಿಮ್ಮ ಪುನರ್ಜನ್ಮವನ್ನು ನಿರ್ಧರಿಸುವ ಅಂಶಗಳು!

ಸಾರಾಂಶ

ಸದ್ಗುರುಗಳ ಪ್ರವಚನದಲ್ಲಿ ಕರ್ಮವನ್ನು ಪ್ರಾರಬ್ಧ ಮತ್ತು ಸಂಚಿತ ಎಂದು ವಿಭಜಿಸಿದ್ದಾರೆ. ಪ್ರಾರಬ್ಧ ಈ ಜನ್ಮದ ಫಲ, ಸಂಚಿತ ಪೂರ್ವಜನ್ಮದ ಸಂಗ್ರಹ. ಪ್ರಾರಬ್ಧ ಮುಟ್ಟಲಾಗದು, ಸಂಚಿತ ಕರಗಿಸಬಹುದು. ಸಂಚಿತ ಕರ್ಮ ಕರಗಿದಾಗ ಒಳಗಿನ ಪರಿವರ್ತನೆ ಆಗುತ್ತದೆ, ಬಾಹ್ಯವಾಗಿ ಬದಲಾವಣೆ ಕಾಣದು. ಆಧ್ಯಾತ್ಮಿಕ ಸಾಧನೆಯ ಫಲ ಈ ಜನ್ಮದಲ್ಲಿ ಪ್ರತ್ಯಕ್ಷವಾಗದೆ ಒಳಗಿನ ಸಂಚಿತ ಕರ್ಮವನ್ನೇ ಕರಗಿಸುತ್ತದೆ.

ಆಧ್ಯಾತ್ಮಿಕ ಗುರು ಹಾಗೂ ಯೋಗಿ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಸನಾತನ ಧರ್ಮದ 'ಕರ್ಮ ಸಿದ್ಧಾಂತ'ದ ಬಗ್ಗೆ ಹೇಳಿದ್ದಾರೆ. ಅದೀಗ ಭಾರೀ ವೈರಲ್ ಆಗ್ತಿದೆ. ಕರ್ಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ. ಒಂದು ಪ್ರಾರಬ್ಧ ಕರ್ಮ. ಇನ್ನೊಂದು ಸಂಚಿತ ಕರ್ಮ. ಸಂಚಿ ಅಂದ್ರೆ ಕೈ ಚೀಲ.. ಪ್ರಾರಬ್ಧ ಒಂದು ಜೀವಮಾನಕ್ಕೆ. ಈ ಪ್ರಾರಬ್ಧ ಕರ್ಮ ನಿಮ್ಮ ಜೀವಿತಾವಧಿಯನ್ನು ನಿರ್ಧರಿಸುತ್ತೆ.. ಇವತ್ತು ನಿಮ್ಮ ಪ್ರಾರಬ್ಧ ಕರ್ಮವನ್ನು ಕರಿಗಿಸಿಬಿಟ್ರೆ ನಾವು ನೀವು ಸಾಯಬಹುದು. ಆರೋಗ್ಯಕರವಾಗಿಯೇ ನೀವು ಇರಬಹುದು, ಆದ್ರೆ ಸಾಯ್ತೀರಿ.. ಯಾಕೆ ಅಂದ್ರೆ ಸಾಫ್ಟ್‌ವೇರ್ ಹೋಗ್ಬಿಟ್ಟಿದೆ.. 

ದೇಹದಲ್ಲಿ ಅದಿಲ್ಲ, ಆ ಜೀವನಕ್ಕೆ ಬೇಕಾದ ಸಾಫ್ಟ್‌ವೇರ್.. ಸ್ವಲ್ಪಕಾಲ ಸುಂದರ ಸ್ಥಿತಿ.. ಆಮೇಲೆ ನಿಶ್ಚಲರಾಗ್ತೀರಿ.., ನಂತ್ರ ಹೋಗ್ತೀರಿ.. ಹೀಗಾಗಿ ನಾವು ಪ್ರಾರಬ್ಧ ಕರ್ಮವನ್ನು ಮುಟ್ಟಲ್ಲ. ಮುಟ್ಟೋದು ಸಂಚಿಯನ್ನ.. ಕರ್ಮದ ಒಂದು ಉಗ್ರಾಣ ಇದೆ. ಈ ಜೀವನದಲ್ಲಿ ಅದು ವ್ಯಕ್ತವಾಗೋದೇ ಇಲ್ಲ, ಬರೋದೇ ಇಲ್ಲ.. ಅದು ಈ ಜೀವನದ ಬಗ್ಗೆ ಅಲ್ಲ.. ಆದ್ರೆ, ಸತ್ವ ತುಂಬಿರೋದು ಅದ್ರಿಂದಾನೇ.. 

ತ್ರಿವೇಣಿಯಲ್ಲಿ ಎಷ್ಟು ದಿನ ಸ್ನಾನ ಮಾಡಿದ್ರೆ ಪಾಪ ಪರಿಹಾರ, ಸದ್ಗುರು ಹೇಳೋದೇನು?

ಹಾಗಾಗಿ ನಾವು ಸಂಚಿತ ಕರ್ಮನ ಕರಗಿಸಿದ್ರೆ ತುಂಬಾ ದೊಡ್ಡ ಉಗ್ರಾಣ.. ಸರಳ ಉಗ್ರಾಣ ಅಲ್ಲ, ಸಂಕೀರ್ಣ ಉಗ್ರಾಣ.. ಇದು ಕರಗೋಕೆ ಶುರುವಾದ್ರೆ ನಿಮ್ಮ ಜೀವನದಲ್ಲಿ ಏನೂ ಬದಲಾಗಿಲ್ಲ ಅನ್ಸುತ್ತೆ.. ಆದ್ರೆ ಒಂದು ರೀತಿಯ ಪಾರದರ್ಶಕತೆ ಇರುತ್ತೆ.. ನಿಮ್ಮ ಅಸ್ತಿತ್ವದ ಅಪಾರದರ್ಶಕ ಅಂಶಗಳು ಕಡಿಮೆಯಾಗುತ್ತೆ.. ಆದ್ರೆ, ಗೊತ್ತಾಗೋ ತರ ಯಾವುದೇ ಪರಿವರ್ತನೆ ಇಲ್ಲ, ನೀವಿನ್ನೂ ಹಾಗೇ ಇದ್ದೀರಾ, ಅದೇ ವ್ಯಕ್ತಿ.. ನಿಮಗೇ ಆಶ್ಚರ್ಯ ಆಗುತ್ತೆ, ನಿಜವಾಗಿಯೂ ಇದು ಏನು? ಆಧ್ಯಾತ್ಮಿಕ ಪ್ರಕ್ರಿಯೆನಾ ಅಂತ!

ಆಧ್ಯಾತ್ಮಿಕ ಸಾಧನೆಯನ್ನು ಮಾಡಿದಾಗಲೆಲ್ಲಾ ಫಲಿತಾಂಶನ ನಿರ್ಧರಿಸ್ತೀರಿ.. ಆದ್ರೆ, ಅದು ಈ ಜೀವನದಲ್ಲಿ ಬರಲ್ಲ, ಅದನ್ನು ಈಗ್ಲೇ ನಿರೀಕ್ಷಿಸಬೇಡಿ.. ಅದು ಮರದ ಮೇಲ್ಪದರವನ್ನು ಮುಟ್ಟಲ್ಲ, ಒಳಗಿನ ತಿರುಳನ್ನು ನುಂಗಿ ಹಾಕಿರುತ್ತೆ.. ಆಧ್ಯಾತ್ಮಿಕ ಸಾಧನೆ ಅಂದ್ರೆ ಅದು..

ಮಹಾಕುಂಭ ಮೇಳದ ಬಗ್ಗೆ ನುಡಿದಿದ್ದ ಭವಿಷ್ಯ ನಿಜವಾಯ್ತು; ಅವಘಡಕ್ಕೆ ಇದೇ ಕಾರಣ..?!

ನೀವು ಮೇಲ್ನೋಟಕ್ಕೆ ಹಾಗೇ ಇರೋ ಅದೇ ವ್ಯಕ್ತಿ ಆಗಿರ್ತೀರಿ, ಆದ್ರೆ ಒಳಗಿರುವ ಅಂಶಗಳು, ಅಂದ್ರೆ ಸಂಚಿತ ಕರ್ಮಗಳು ಕರಗುತ್ತಾ ಇರುತ್ತವೆ' ಎಂದು ಆಧ್ಯಾತ್ಮ ಗುರು, ಯೋಗಿ ಸದ್ಗುರು ಜಗ್ಗಿ ವಾಸುದೇವ್ ಅವರು ತಮ್ಮ ಪ್ರವಚನವೊಂದರಲ್ಲಿ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಮಲಗುವ ಮುನ್ನ ನೀರು ಕುಡಿಯುತ್ತೀರಾ?, ಈ ವಿಷಯಗಳನ್ನು ನೀವು ತಿಳಿದಿರಲೇಬೇಕು
ಕೊಲೊನ್ ಕ್ಯಾನ್ಸರ್.. 30 ವರ್ಷದ ನಂತ್ರ ಈ ಲಕ್ಷಣ ಕಾಣಿಸಿಕೊಂಡರೆ ನಿರ್ಲಕ್ಷಿಸಬೇಡಿ