Karnataka Assembly Election- 2018

ತಂದೆಯ ಸಮಾಧಿ ಬಳಿ ಶಪಥಗೈದ ದರ್ಶನ್

May 9, 2018, 1:52 PM IST

ಮಂಡ್ಯ[ಮೇ.09]: ನಾನೂ ಎಲ್ಲಿಗೂ ಹೋಗೋದಿಲ್ಲ. ನಿಮ್ಮಗಳ ಜೊತೆಯೇ ಸದಾ ಕಾಲ ಇರ್ತೀನಿ. ನಿಮಗಾಗಿ ಕೆಲಸ ಮಾಡ್ತೀನಿ, ದುಡೀತೀನಿ. ತಂದೆಯವರ ಹಲವಾರು ಕನಸು ಈಡೇರಿಸಲು ಪಣ ತೊಟ್ಟಿದ್ದೇನೆ. ರೈತ ಹೋರಾಟಕ್ಕೆ ಹಾಗು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತೀನಿ. ಹೊಸ ಆಲೋಚನೆಗಳೊಂದಿಗೆ ನಿಮ್ಮ ಸೇವೆ ಮಾಡ್ತೀನಿ ಎಂದು ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಸಮಾಧಿ ಬಳಿ ದರ್ಶನ್ ಪುಟ್ಟಣ್ಣಯ್ಯ ಪ್ರಮಾಣ ಮಾಡಿದ್ದಾರೆ.
ಮೇಲುಕೋಟೆ ಕ್ಷೇತ್ರದ ಸ್ವರಾಜ್ ಇಂಡಿಯಾ ಪಕ್ಷದ ಅಭ್ಯರ್ಥಿಯಾಗಿರುವ ದರ್ಶನ್ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.