Karnataka Assembly Election- 2018

ಬಾದಾಮಿಯಲ್ಲಿ ಸಿಎಂ ತಂಗಿದ ಹೊಟೇಲ್‌ನಲ್ಲಿ ಐಟಿ ದಾಳಿ: ಸಿಕ್ಕಿದ್ದೇನು?

May 8, 2018, 12:25 PM IST

ಇನ್ನೇನು ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದ್ದು, ಚುನವಣಾ ಕಣ ರಂಗೇರಿದೆ. ಇದೀಗ ಇಲ್ಲಿ ಕಾಂಗ್ರೆಸ್ ಮುಖಂಡ ಆನಂದ್ ಸಿಂಗ್ ಹಾಗೂ ಸಿದ್ದರಾಮಯ್ಯ ತಂಗಿದ್ದ ರೆಸಾರ್ಟ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಹಣವನ್ನು ವಶಪಡಿಸಿಕೊಂಡಿದ್ದಾರೆ. ಯಾರಿಗೆ ಎಷ್ಟು ಹಣ ನೀಡಬೇಕೆಂಬ ಮಾಹಿತಿಯೂ ಅಲ್ಲಿ ಲಭ್ಯವಾಗಿದೆ ಎಂದು ಹೇಳಲಾಗುತ್ತಿದೆ.