Karnataka Assembly Election- 2018
May 2, 2018, 6:33 PM IST
ಹಾವೇರಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ಸಿ.ಎಂ. ಇಬ್ರಾಹಿಂ ಯಡಿಯೂರಪ್ಪ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಧಿಕಾರ ಸಿಗೋವರೆಗೆ ಮಾತ್ರ ಯಡಿಯೂರಪ್ಪ ಹಿಂದೂ, ಬಳಿಕ ಅನಂತ ಕುಮಾರ್ ಹೆಗಡೆ ಮುಂದು, ಯಡಿಯೂರಪ್ಪ ಹಿಂದು ಎಂದು ವ್ಯಂಗ್ಯವಾಡಿದ್ದಾರೆ. ಕರ್ನಾಟಕದಿಂದ 10 ಮಂದಿ ಲಿಂಗಾಯತ ವೀರಶೈವ ಸಂಸದರಿದ್ದರೂ ಯಾರಿಗೂ ಸಚಿವ ಸ್ಥಾನ ನೀಡಿಲ್ಲವೆಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.