ಹೈದರಾಬಾದ್‌ ಇನ್ಮೇಲೆ ತೆಲಂಗಾಣಕ್ಕೆ ಮಾತ್ರ :ಇಂದಿನಿಂದ ಮುತ್ತಿನನಗರಿಗೂ ಆಂಧ್ರ ಪ್ರದೇಶಕ್ಕೂ ಸಂಬಂಧ ಇಲ್ಲ!

Published : Jun 02, 2024, 05:45 PM IST
ಹೈದರಾಬಾದ್‌ ಇನ್ಮೇಲೆ ತೆಲಂಗಾಣಕ್ಕೆ ಮಾತ್ರ :ಇಂದಿನಿಂದ ಮುತ್ತಿನನಗರಿಗೂ ಆಂಧ್ರ ಪ್ರದೇಶಕ್ಕೂ ಸಂಬಂಧ ಇಲ್ಲ!

ಸಾರಾಂಶ

ಅವಿಭಜಿತವಾಗಿದ್ದ ಆಂಧ್ರ ಪ್ರದೇಶದಿಂದ ವಿಭಜನೆಗೊಂಡು ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯವಾದಾಗ ಅಂದಿನ ರಾಜಧಾನಿ ಹೈದರಾಬಾದ್‌ನ್ನು ಸ್ವಲ್ಪ ಕಾಲದವರೆಗೂ ಅಂದರೆ ಸುಮಾರು 10 ವರ್ಷಗಳವರೆಗೆ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿ ಬಳಸುವುದು ಎಂದು ತೀರ್ಮಾನವಾಗಿತ್ತು

ಹೈದರಾಬಾದ್: ಅವಿಭಜಿತವಾಗಿದ್ದ ಆಂಧ್ರ ಪ್ರದೇಶದಿಂದ ವಿಭಜನೆಗೊಂಡು ತೆಲಂಗಾಣ ಎಂಬ ಪ್ರತ್ಯೇಕ ರಾಜ್ಯವಾದಾಗ ಅಂದಿನ ರಾಜಧಾನಿ ಹೈದರಾಬಾದ್‌ನ್ನು ಸ್ವಲ್ಪ ಕಾಲದವರೆಗೂ ಅಂದರೆ ಸುಮಾರು 10 ವರ್ಷಗಳವರೆಗೆ ಎರಡೂ ರಾಜ್ಯಗಳಿಗೂ ರಾಜಧಾನಿಯಾಗಿ ಬಳಸುವುದು ಎಂದು ತೀರ್ಮಾನವಾಗಿತ್ತು. ಈ ಹತ್ತು ವರ್ಷಗಳ ಅವಧಿ ಈಗ ಮುಕ್ತಾಯವಾಗಿದ್ದು, ಇನ್ನು ಮುಂದೆ ಮುತ್ತಿನ ನಗರಿ ಅತೀ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಮೆಟ್ರೊಪಾಲಿಟನ್‌ ಸಿಟಿ ಹೈದರಾಬಾದ್ ಕೇವಲ ತೆಲಂಗಾಣಕ್ಕೆ ಮಾತ್ರ ಸೀಮಿತವಾಗಲಿದೆ. ಹೀಗಾಗಿ 2014 ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ ಇನ್ನು ಮುಂದೆ ಆಂಧ್ರ ಪ್ರದೇಶಕ್ಕೂ ಹೈದರಾಬಾದ್‌ಗೂ ರಾಜಧಾನಿಯ ವಿಚಾರವಾಗಿ ಯಾವುದೇ ಸಂಬಂಧ ಇರುವುದಿಲ್ಲ. ಹಾಗೂ ಎರಡು ತೆಲುಗು  ರಾಜ್ಯಗಳ ಜಂಟಿ ರಾಜಧಾನಿಯಾಗಿ ಇನ್ನು ಮುಂದೆ ಹೈದರಾಬಾದ್ ಇರುವುದಿಲ್ಲ.

ಇಂದಿನಿಂದ ಹೈದರಾಬಾದ್ ಕೇವಲ ತೆಲಂಗಾಣದ ರಾಜಧಾನಿಯಾಗಿ ಮಾತ್ರ ಕಾರ್ಯನಿರ್ವಹಿಸಲಿದೆ. 2014 ರಲ್ಲಿ ಏಕೀಕೃತ ಆಂಧ್ರಪ್ರದೇಶವನ್ನು ವಿಭಜಿಸಿದಾಗ, ಹೈದರಾಬಾದ್ ಅನ್ನು 10 ವರ್ಷಗಳ ಅವಧಿಗೆ ಎರಡೂ ರಾಜ್ಯಗಳಿಗೆ ರಾಜಧಾನಿಯಾಗಿ ಬಳಸುವುದು ಎಂದು ತೀರ್ಮಾನವಾಗಿತ್ತು. ಅಲ್ಲದೇ 10 ವರ್ಷದ ನಂತರ ಇದು ಹೀಗೆ ಮುಂದುವರೆಯುವಂತಿಲ್ಲ ಎಂದು ತೀರ್ಮಾನವಾಗಿತ್ತು. 2014 ರ ಆಂಧ್ರಪ್ರದೇಶ ಮರುಸಂಘಟನೆ ಕಾಯಿದೆಯ ಪ್ರಕಾರ, ಇನ್ನು ಮುಂದೆ ಹೈದರಾಬಾದ್ ತೆಲಂಗಾಣ ರಾಜ್ಯದ ರಾಜಧಾನಿಯಾಗಿರುತ್ತದೆ ಮತ್ತು ಆಂಧ್ರ ಪ್ರದೇಶ ರಾಜ್ಯಕ್ಕೆ ಹೊಸ ರಾಜಧಾನಿ ಇರುತ್ತದೆ.
  
ಫೆಬ್ರವರಿ 2014 ರಲ್ಲಿ ಸಂಸತ್ತಿನಲ್ಲಿ ಎಪಿ ಮರು ಸಂಘಟನೆ ಮಸೂದೆಯನ್ನು ಅಂಗೀಕರಿಸಿದ ನಂತರ 2014 ರ  ಜೂನ್ 2 ರಂದು ಅಧಿಕೃತವಾಗಿ ತೆಲಂಗಾಣ ರಾಜ್ಯ ಅಸ್ತಿತ್ವಕ್ಕೆ ಬಂತು. ಕಳೆದ ತಿಂಗಳಷ್ಟೇ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಹೈದರಾಬಾದ್‌ನ ಲೇಕ್ ವ್ಯೂ ಸರ್ಕಾರಿ ಅತಿಥಿ ಗೃಹದಂತಹ ಕಟ್ಟಡಗಳನ್ನು ಆಂಧ್ರಪ್ರದೇಶಕ್ಕೆ 10 ವರ್ಷಗಳ ಅವಧಿಗೆ ಮಂಜೂರು ಮಾಡಿದ್ದು, ಅವಧಿ ಮುಕ್ತಾಯ ಸಮೀಪಿಸಿರುವುದರಿಂದ ಜೂನ್ 2 ರ ನಂತರ ಅವುಗಳನ್ನು ತೆಲಂಗಾಣದ ಸುಪರ್ದಿಗೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಪ್ರತ್ಯೇಕಗೊಂಡು ದಶಕಗಳೇ ಪೂರ್ಣಗೊಂಡಿದ್ದರೂ ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ನಡುವೆ ಹಲವು ಸಮಸ್ಯೆಗಳು ಬಗೆಹರಿಯದೇ ಉಳಿದಿವೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನೀತಿ ಸಂಹಿತೆಯಿಂದಾಗಿ ಅಂಕಿತ ಸಿಗದೇ ಈ ವಿಚಾರಕ್ಕೆ ಸಂಬಂಧಿಸಿದ ಹಲವು ಯೋಜನೆಗಳು ಇಂದಿಗೂ ಮುಂದೂಡಲ್ಪಟ್ಟಿವೆ ಎಂಬ ಮಾಹಿತಿ ಇದೆ.  ಕಾಂಗ್ರೆಸ್ ಸರ್ಕಾರ ಇಂದು ತೆಲಂಗಾಣ ಸ್ಥಾಪನಾ ದಿನದ ಅಂಗವಾಗಿ ದಿನವಿಡೀ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?
ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು