Published : Aug 23, 2025, 07:49 AM ISTUpdated : Aug 23, 2025, 11:01 PM IST

India Latest News Live: ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರೋದು ಅಸಾಧ್ಯ - ಆಯ್ಕೆ ನಿಮ್ಮದು- ಸುಪ್ರೀಂಕೋರ್ಟ್ ಕಿವಿಮಾತು!

ಸಾರಾಂಶ

ಬೆಂಗಳೂರು (ಆ.23): ರೂಲ್‌ ಫ್ರಮ್‌ ಜೈಲ್‌ ಅಧಿಕಾರಿ ಯಾರಿಗೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅನೇಕ ವಿಪಕ್ಷ ನಾಯಕರು ಜೈಲಿನಲ್ಲಿದ್ದಾರೆ. ಅದೇ ಕಾರಣಕ್ಕಾಗಿ ಕ್ರಿಮಿನಲ್‌ ಮಂತ್ರಿಗಳ ವಜಾ ಮಸೂದೆಗೆ ವಿಪಕ್ಷ ಅಡ್ಡಿಪಡಿಸುತ್ತಿದೆ. ಭ್ರಷ್ಟ ಅಧಿಕಾರಿಗಳು ವಜಾ ಆಗ್ತಾರೆ. ಮಂತ್ರಿಗಳು ಯಾಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಬಿಹಾರ ವಿಧಾನಸಭಾ ಚುನಾವಣೆಯ ಭಾಷಣದಲ್ಲಿ ಹೇಳಿದ್ದಾರೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:01 PM (IST) Aug 23

ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರೋದು ಅಸಾಧ್ಯ - ಆಯ್ಕೆ ನಿಮ್ಮದು- ಸುಪ್ರೀಂಕೋರ್ಟ್ ಕಿವಿಮಾತು!

ಸ್ವಾತಂತ್ರ್ಯವೂ ಬೇಕು, ಪತಿಯ ಜೊತೆಗೆ ಇರುವುದು ಕಷ್ಟವಾಗಿದೆ ಎಂದ ಮಹಿಳೆಯೊಬ್ಬರಿಗೆ ಪಾಠ ಮಾಡಿರುವ ಕೋರ್ಟ್​ ಸ್ವಾತಂತ್ರ್ಯ ಮತ್ತು ಮದುವೆ ಒಟ್ಟಿಗೇ ಇರಲಾರದು ಎನ್ನುವ ಮೂಲಕ ಹೇಳಿದ್ದೇನು ಕೇಳಿ..

 

Read Full Story

08:59 PM (IST) Aug 23

ಮಹಾರಾಷ್ಟ್ರ ದಂತೆ ಕರ್ನಾಟಕದಲ್ಲಿಯಾದ್ರೆ ಚೆಂದ ಅಲ್ವಾ ಎಂದ ನೆಟ್ಟಿಗರು! ಇದು ಸರ್ಕಾರಿ ನೌಕರರ ಆಸೆ!

ಮುಂಬೈ - ರಾಜ್ಯದ ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ನಿವೃತ್ತಿ ವೇತನದಾರರಿಗೆ ಆಗಸ್ಟ್ ತಿಂಗಳ ಸಂಬಳ 5 ದಿನ ಮುಂಚಿತವಾಗಿಯೇ ಅಂದರೆ 26 ಆಗಸ್ಟ್‌ರಂದು ಬ್ಯಾಂಕ್ ಖಾತೆಗೆ ಜಮಾ ಆಗಲಿದೆ. ಇದರಿಂದ ನೌಕರರ ಗಣೇಶೋತ್ಸವದ ಸಂಭ್ರಮ ಇಮ್ಮಡಿ ಆಗಿದೆ.

Read Full Story

07:01 PM (IST) Aug 23

IIMT ಕಾಲೇಜಿನ ಸುಳ್ಳಿನ ಮುಖವಾಡ ರಿವೀಲ್ ಮಾಡಿದ ಐಸ್‌ ಕ್ರೀಂ ಮಾರಾಟಗಾರ - ವಿಡಿಯೋ ನೋಡಿ

ಐಐಎಂಟಿ ಕಾಲೇಜಿನ 1.8 ಕೋಟಿ ರೂ. ಪ್ಯಾಕೇಜ್ ಜಾಹೀರಾತಿನಲ್ಲಿ ಕಾಣಿಸಿಕೊಂಡ ವ್ಯಕ್ತಿ ವಾಸ್ತವದಲ್ಲಿ ಐಸ್‌ಕ್ರೀಂ ಮಾರಾಟಗಾರ ಎಂದು ಬಯಲಾಗಿದೆ. ಫೋಟೋಗೆ ಹಣ ನೀಡುವುದಾಗಿ ಹೇಳಿ ನಂತರ ನೀಡಿಲ್ಲ ಎಂದು ಯುವಕ ತಿಳಿಸಿದ್ದಾನೆ.
Read Full Story

06:06 PM (IST) Aug 23

ಕೊಳಲು ವಾದನಕ್ಕೆ ಬೆರಗಾದ ಕಂದ - ಅಂಬೆಗಾಲಿಡುತ್ತಲೇ ಸಂಗೀತಗಾರನ ಬಳಿ ಬಂದ

ದೆಹಲಿ ಮೆಟ್ರೋದಲ್ಲಿ ಕೊಳಲು ವಾದಕನೋರ್ವನ ಕೊಳಲ ನಾದಕ್ಕೆ ಮಗುವನ್ನು ಅಮ್ಮನ ಕೈಯಿಂದಿಳಿದು ಅಂಬೆಗಾಲಿಡುತ್ತಲೇ ಆತನ ಬಳಿ ಹೋಗಿದೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

Read Full Story

05:58 PM (IST) Aug 23

ಒಳ್ಳೇ ಕ್ವಾಲಿಟಿಯೇ ಮುಳುವಾಯ್ತು Tupperwareಗೆ, ಕಂಪನಿ ಮುಚ್ಚಿದ್ಯಾಕೆ?

ಉತ್ತಮ ಗುಣಮಟ್ಟದ ಉತ್ಪನ್ನಗಳಿಂದಲೇ ಟಪ್ಪರ್‌ವೇರ್ ಕಂಪನಿ ದಿವಾಳಿಯಾಗಿದೆ. ಬದಲಾದ ಮಾರುಕಟ್ಟೆಗೆ ಹೊಂದಿಕೊಳ್ಳದೆ, ಡಿಜಿಟಲ್ ಯುಗದಲ್ಲಿ ಹಿಂದುಳಿದಿರುವುದು ಕಂಪನಿಯ ನಷ್ಟಕ್ಕೆ ಕಾರಣ.
Read Full Story

05:00 PM (IST) Aug 23

2ನೇ ಕ್ಲಾಸ್ ಮಗು ಬಿಟ್ಟು ಬೀಗ ಹಾಕಿ ಹೋದ ಶಿಕ್ಷಕರು - ಕಿಟಕಿಯಲ್ಲಿ ತಲೆ ಸಿಕ್ಕಿಸಿ ರಾತ್ರಿಯಿಡೀ ಒದ್ದಾಡಿದ ಬಾಲಕಿ!

ಒಡಿಶಾದ ಶಾಲೆಯೊಂದರಲ್ಲಿ ಶಿಕ್ಷಕರು ಒಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಗಮನಿಸದೇ ತರಗತಿ ಕೋಣೆಗೆ ಬೀಗ ಹಾಕಿ ಹೋಗಿದ್ದಾರೆ. ಇದರಿಂದ ಹೊರಗೆ ಬರಲು ಯತ್ನಿಸಿದ ಬಾಲಕಿ ರಾತ್ರಿಯಿಡೀ ಕಿಟಕಿಯಲ್ಲಿ ಸಿಲುಕಿಕೊಂಡು ಕಾಲ ಕಳೆದ ಘಟನೆ ನಡೆದಿದೆ.

Read Full Story

03:43 PM (IST) Aug 23

ಭಾರತೀಯ ಸೇನೆಗೆ ಸೇರ್ಪಡೆಯಾದ ಬೆಂಗಳೂರಿನ ಸ್ವದೇಶಿ ಎಐ ಯುದ್ಧ ವಿಮಾನ 'ಕಾಲಭೈರವ'

ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ MALE ಡ್ರೋನ್ ಕಾಲ್ ಭೈರವ, ಭಾರತದ ರಕ್ಷಣಾ ವಲಯದಲ್ಲಿ ಹೊಸ ಯುಗವನ್ನು ಪ್ರಾರಂಭಿಸುತ್ತಿದೆ. ವಿದೇಶಿ ವ್ಯವಸ್ಥೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದರ ಜೊತೆಗೆ, ಕೈಗೆಟುಕುವ ಬೆಲೆಯಲ್ಲಿ ಸುಧಾರಿತ ಯುದ್ಧ ಸಾಮರ್ಥ್ಯವನ್ನು ಒದಗಿಸುತ್ತದೆ.
Read Full Story

03:28 PM (IST) Aug 23

ಅಂದು ಜಯಲಲಿತಾ, ಇಂದು ಅಮಿತ್ ಶಾ; ತಮಿಳುನಾಡಿನ ರಾಜಕಾರಣಿ ಮನೆ ನೋಡಿ ಶಾಕ್

ಮಾಜಿ ಸಿಎಂ ಜಯಲಲಿತಾ  ಒಮ್ಮೆ ಸಮಾವೇಶಕ್ಕೆ ಜಾಗ ಹುಡುಕುತ್ತಿದ್ದರು. ಅಂದು ಆ ಉದ್ಯಮಿ  100 ಎಕರೆ ಜಮೀನು ಖರೀದಿಸಿ ಜಯಲಲಿತಾ ಅವರಿಗೆ ನೀಡಿದ್ರಂತೆ. ಇಂದು ಅದೇ ಉದ್ಯಮಿ ಮನೆಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಅಮಿತ್ ಶಾ,  ಫೈವ್ ಸ್ಟಾರ್  ಹೋಟೆಲ್‌ನಂತಿರೋ ಬಂಗ್ಲೆ ನೋಡಿ ಒಂದು ಕ್ಷಣ ಶಾಕ್ ಆಗಿದ್ರಂತೆ.

Read Full Story

03:18 PM (IST) Aug 23

ಪಾಕಿಸ್ತಾನದ ಮೇಲೆ ಅಮೆರಿಕಕ್ಕೆ ಯಾಕಿಷ್ಟು ಮಮಕಾರ, ಇಲ್ಲಿದೆ ಡೀಟೇಲ್ಸ್‌!

ಅಮೆರಿಕಾ ತನ್ನ ಸ್ವಪ್ರಯೋಜನಗಳಿಗಾಗಿ ಯಾರ ಜೊತೆ ಬೇಕಾದರೂ ದೋಸ್ತಿ ಮಾಡ್ಕೊಳ್ಳುತ್ತೆ. ಯಾರನ್ನಾದ್ರೂ ವಿರೋಧಿಸುತ್ತೆ. ಬೇರೆ ದೇಶಗಳ ವಿಷಯಗಳಲ್ಲಿ ತಲೆ ಹಾಕುತ್ತೆ. ಇಂಥ ದೇಶ ಇತ್ತೀಚೆಗೆ ಪಾಕಿಸ್ತಾನಕ್ಕೆ ಹತ್ತಿರ ಆಗ್ತಿದೆ. ಇದಕ್ಕೆ ನಿಜವಾದ ಕಾರಣ ಏನು ಅಂತ ನೋಡೋಣ.

 

Read Full Story

03:06 PM (IST) Aug 23

ಎನ್‌ಎಸ್‌ಜಿ 'ಬ್ಲ್ಯಾಕ್ ಕ್ಯಾಟ್' ಕಮಾಂಡೋ ಆಗೋದು ಹೇಗೆ?

ಎನ್‌ಎಸ್‌ಜಿ ಕಮಾಂಡೋ: 'ಬ್ಲ್ಯಾಕ್ ಕ್ಯಾಟ್ಸ್' ಅಂತ ಫೇಮಸ್ ಆಗಿರೋ ಎನ್‌ಎಸ್‌ಜಿ ಕಮಾಂಡೋ ಆಗೋದು ಅನೇಕ ಯುವಕರ ಕನಸು. ಆದ್ರೆ, ಈ ತಂಡ ಸೇರೋಕೆ ಸ್ಪೆಷಲ್ ಅರ್ಹತೆ, ಕಠಿಣ ಆಯ್ಕೆ ಪ್ರಕ್ರಿಯೆ ದಾಟಬೇಕು. ಅದೇನು ಅಂತ ನೋಡೋಣ. 

 

 

 

Read Full Story

01:15 PM (IST) Aug 23

ಬೇಟೆಯಾಡಲು ಬಂದ ಚಿರತೆಯನ್ನು ಮಕಾಡೆ ಮಲಗಿಸಿದ ಬೀದಿನಾಯಿ - ವೀಡಿಯೋ ವೈರಲ್

ನಾಸಿಕ್‌ನಲ್ಲಿ ಬೀದಿನಾಯಿಯೊಂದು ಚಿರತೆಯನ್ನು ಬೇಟೆಯಾಡಿ 300 ಮೀಟರ್ ಎಳೆದೊಯ್ದ ಘಟನೆ ನಡೆದಿದೆ. ಈ ಅಪರೂಪದ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

Read Full Story

12:08 PM (IST) Aug 23

ತಮ್ಮನ ಬೆಂಬಲಕ್ಕೆ ನಿಂತ ಪುಟ್ಟ ಬಾಲಕಿ - ಈ ಅಕ್ಕ ತಮ್ಮನ ವೀಡಿಯೋ ಭಾರಿ ವೈರಲ್

ತಮ್ಮನಿಗೆ ಅಪ್ಪ ಬೈಯುತ್ತಿದ್ದನ್ನು ಸಹಿಸದ ಅಕ್ಕ, ಅಪ್ಪನ ವಿರುದ್ಧವೇ ತಿರುಗಿಬಿದ್ದಿದ್ದಾಳೆ. ಈ ಮುದ್ದಾದ ಜಗಳದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಕ-ತಮ್ಮನ ಪ್ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
Read Full Story

11:13 AM (IST) Aug 23

ಡ್ರಗ್ ಮಾರಿಯೇ ಮೂರಂತಸ್ಥಿನ ಮನೆ ಕಟ್ಕೊಂಡಿದ್ದ ಡ್ರಗ್ ಪೆಡ್ಲರ್ ಯಾಸಿನ್ ಮಚ್ಲಿ ಐಷಾರಾಮಿ ಮನೆಧ್ವಂಸ

ಡ್ರಗ್ ದಂಧೆಯಲ್ಲಿ ತೊಡಗಿದ್ದ ಮಚ್ಲಿ ಕುಟುಂಬದ ಐಷಾರಾಮಿ ಮನೆಯನ್ನು ಭೋಪಾಲ್‌ನಲ್ಲಿ ಧ್ವಂಸಗೊಳಿಸಲಾಗಿದೆ. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಈ ಮನೆಯಲ್ಲಿ 30 ಕ್ಕೂ ಹೆಚ್ಚು ಕೊಠಡಿಗಳು, ಗ್ಯಾರೇಜ್ ಮತ್ತು ಉದ್ಯಾನವನವಿತ್ತು.
Read Full Story

07:55 AM (IST) Aug 23

ರೂಲ್‌ ಫ್ರಂ ಜೈಲ್‌ ಅಧಿಕಾರ ಯಾರಿಗೂ ಇಲ್ಲ : ಮೋದಿ

ರೂಲ್ ಫ್ರಂ ಜೈಲ್‌ (ಜೈಲಿನಿಂದಲೇ ಆಡಳಿತ) ನಡೆಸುವ ಅಧಿಕಾರ ಯಾರಿಗೂ ಇಲ್ಲ. ಕ್ರಿಮಿನಲ್‌ಗಳು ಜೈಲಲ್ಲಿರಬೇಕೇ ವಿನಾ ಅಧಿಕಾರದಲ್ಲಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.

 

Read Full Story

07:54 AM (IST) Aug 23

ಹಂದಿ ಮಾಂಸ ಭಾರಿ ಹೆಚ್ಚಳ : ಜಗತ್ತಿನಾದ್ಯಂತ ಶುರುವಾಗಿದೆ ಶಟಲ್‌ಕಾಕ್‌ ಬರ!

ಜಗತ್ತಿನಾದ್ಯಂತ ಅತಿವೇಗವಾಗಿ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿರುವ ಕ್ರೀಡೆಗಳಲ್ಲಿ ಬ್ಯಾಡ್ಮಿಂಟನ್‌ ಕೂಡ ಒಂದು. ಭಾರತದಲ್ಲೂ ಬ್ಯಾಡ್ಮಿಂಟನ್‌ ಆಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಸದ್ಯದ ಕಳವಳಕಾರಿ ಸಂಗತಿ ಏನೆಂದರೆ ಆಟವಾಡಲು ಶಟಲ್‌ಗಳೇ ಸಿಗದೆ ಹೋಗುವ ಪರಿಸ್ಥಿತಿ ಬರಬಹುದು.

 

Read Full Story

07:54 AM (IST) Aug 23

ಡಿಆರ್‌ಐ ಭಾರಿ ಡ್ರಗ್ಸ್‌ ಬೇಟೆ : 72 ಕೋಟಿಯ ಡ್ರಗ್ಸ್ ಜಪ್ತಿ

ಡ್ರಗ್ಸ್ ಮಾಫಿಯಾ ವಿರುದ್ಧ ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಕಂದಾಯ ಜಾರಿ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಒಟ್ಟು 72 ಕೋಟಿ ರು. ಮೌಲ್ಯದ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.

 

Read Full Story

07:53 AM (IST) Aug 23

ಬಿಹಾರದಲ್ಲಿ ಏಷ್ಯಾದ ಅತಿ ಅಗಲದ 6 ಲೇನ್‌ ಸೇತುವೆ : 34 ಮೀ. ಅಗಲ

ಬಿಹಾರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಾಣವಾಗಿರುವ ಏಷ್ಯಾದ ಅತಿ ಅಗಲವಾದ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ.

 

Read Full Story

07:53 AM (IST) Aug 23

ಕಂಡ ಕಂಡಲ್ಲಿ ಬೀದಿನಾಯಿಗೆ ಆಹಾರ ಹಾಕಬೇಡಿ : ಸುಪ್ರೀಂ ಎಚ್ಚರಿಕೆ

‘ನಾಯಿಗಳಿಗೆ ಬೀದಿಗಳಲ್ಲಿ ಸಿಕ್ಕಸಿಕ್ಕಲ್ಲಿ ಆಹಾರ ಹಾಕಬಾರದು’ ಎಂದು ಕಟ್ಟೆಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್‌, ಅದಕ್ಕಾಗಿ ಮೀಸಲು ಸ್ಥಳಗಳನ್ನು ಸ್ಥಾಪಿಸುವಂತೆ ನಗರಪಾಲಿಕೆಗಳಿಗೆ ಸೂಚಿಸಿದೆ.

 

Read Full Story

07:52 AM (IST) Aug 23

ಲಂಕಾ ಮಾಜಿ ಅಧ್ಯಕ್ಷ ವಿಕ್ರಮ ಸಿಂಘೆ ಬಂಧನ

ಸರ್ಕಾರಿ ಹಣ ದುರ್ಬಳಕೆ ಆರೋಪದ ಮೇಲೆ ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್‌ ವಿಕ್ರಮಸಿಂಘೆ ಅವರನ್ನುಶುಕ್ರವಾರ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

 

Read Full Story

07:52 AM (IST) Aug 23

ಭಾರತೀಯ ಅಂತರಿಕ್ಷ ಕೇಂದ್ರದ ಪ್ರತಿಕೃತಿ ಅನಾವರಣ

ದೇಶದ ಬಾಹ್ಯಾಕಾಶ ಕ್ಷೇತ್ರದ ಕನಸಿನ ಅಂತರಿಕ್ಷ ಕೇಂದ್ರದ ಪ್ರತಿಕೃತಿಯನ್ನು ಇಸ್ರೋ ಶುಕ್ರವಾರ ಅನಾವರಣಗೊಳಿಸಿದೆ. ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ 2 ದಿನದ ರಾಷ್ಟ್ರೀಯ ಅಂತರಿಕ್ಷ ದಿನ ಆಚರಣೆಯ ಸಂದರ್ಭದಲ್ಲಿ ಈ ಮಹತ್ವದ ಬೆಳವಣಿಗೆಯಾಗಿದೆ.

 

Read Full Story

07:52 AM (IST) Aug 23

ಪಾಕಲ್ಲಿ ಕಾರ್ಖಾನೆಗಿಂತ ಮಸೀದಿ, ಮದರಸಾಗಳೇ ಹೆಚ್ಚು : ಆರ್ಥಿಕ ಸಮೀಕ್ಷೆ

ಆರ್ಥಿಕವಾಗಿ ಜರ್ಜರಿತಗೊಂಡಿರುವ ಪಾಕಿಸ್ತಾನದಲ್ಲಿ ಮೊದಲ ಬಾರಿಗೆ ಆರ್ಥಿಕ ಸಮೀಕ್ಷೆ ನಡೆಸಿದ್ದು, ದೇಶದಲ್ಲಿ ಕಾರ್ಖಾನೆಗಳಿಗಿಂತ ಹೆಚ್ಚು ಮಸೀದಿ, ಮದರಸಾಗಳೇ ಇವೆ ಎಂದು ಹೇಳಿದೆ.

 

Read Full Story

07:51 AM (IST) Aug 23

‘ಮತ ಚೋರಿ’ ಬಗ್ಗೆ ‘ಮತ ಚೋರ’ ಮೌನ: ರಾಹುಲ್‌ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಗಯಾ ಭೇಟಿ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಮತ ಚೋರ ಬಿಹಾರಕ್ಕೆ ಬಂದರೂ ಮತ ಚೋರಿ ಬಗ್ಗೆ ಒಂದೂ ಮಾತನಾಡಲಿಲ್ಲ’ ಎಂದಿದ್ದಾರೆ.

 

Read Full Story

More Trending News