Published : Aug 12, 2025, 07:43 AM ISTUpdated : Aug 12, 2025, 11:11 PM IST

India Latest News Live: KBC 17 - ಪಾಕಿಗಳಲ್ಲಿ ನಡುಕ ಹುಟ್ಟಿಸಿದ 'ಆಪರೇಷನ್​ ಸಿಂದೂರ' ನಾಯಕಿಯರು ಕೌನ್​ ಬನೇಗಾ ಕರೋಡ್​​ಪತಿಯಲ್ಲಿ

ಸಾರಾಂಶ

ಬೆಂಗಳೂರು (ಆ.12): ಕಳೆದ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಭಾರೀ ಮತಗಳವು ನಡೆದಿತ್ತು ಎಂದು ಆರೋಪಿಸಿ ಇತ್ತೀಚೆಗೆ ಬೆಂಗಳರಿನಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್, ಇದೀಗ ಈ ಹೋರಾಟದ ಕಿಚ್ಚನ್ನು ಈಗ ದೆಹಲಿಗೆ ಕೊಂಡೊಯ್ದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಪಕ್ಷಗಳು ಸೋಮವಾರ ಚುನಾವಣಾ ಆಯೋಗದ ವಿರುದ್ಧ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿವೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:11 PM (IST) Aug 12

KBC 17 - ಪಾಕಿಗಳಲ್ಲಿ ನಡುಕ ಹುಟ್ಟಿಸಿದ 'ಆಪರೇಷನ್​ ಸಿಂದೂರ' ನಾಯಕಿಯರು ಕೌನ್​ ಬನೇಗಾ ಕರೋಡ್​​ಪತಿಯಲ್ಲಿ

ಆಪರೇಷನ್​ ಸಿಂದೂರದ ಮೂಲಕ ಪಾಕಿಸ್ತಾನಿಗಳ ಎದೆಯನ್ನು ಝಲ್​ ಎನ್ನಿಸಿರೋ ಭಾರತೀಯ ಸೇನೆಯ ವೀರ ಯೋಧರಾದ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ ಅವರು ಕೌನ್​ ಬನೇಗಾ ಕರೋಡ್​ಪತಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

 

Read Full Story

10:24 PM (IST) Aug 12

Senior Citizens ಯಾವ ಬ್ಯಾಂಕ್​ನಲ್ಲಿ ಎಫ್​ಡಿ ಇಟ್ಟರೆ ಎಷ್ಟೆಷ್ಟು ಬಡ್ಡಿ ಸಿಗತ್ತೆ? ಇಲ್ಲಿದೆ ಫುಲ್​ ಡಿಟೇಲ್ಸ್​...

ಹಿರಿಯ ನಾಗರಿಕರು ಯಾವ ಬ್ಯಾಂಕ್​ನಲ್ಲಿ ಎಫ್​ಡಿ ಇಟ್ಟರೆ ಹೆಚ್ಚು ಬಡ್ಡಿ ಸಿಗತ್ತೆ? ಇಲ್ಲಿದೆ ಎಲ್ಲಾ ಬ್ಯಾಂಕ್​ಗಳ ಡಿಟೇಲ್ಸ್​...

 

Read Full Story

08:02 PM (IST) Aug 12

ಅಂಕವೇ ಮುಖ್ಯ ಎನ್ನುವ ಪೋಷಕರಿಗೆ ಹೆದರಿ ಓಡಿ ಬಂದ 12ರ ಬಾಲೆ! 200 ಮಂದಿಯಿಂದ ರೇ*ಪ್​

ಶಾಲೆಯಲ್ಲಿ ಫೇಲ್​ ಆದ 12 ವರ್ಷದ ಬಾಲಕಿಯೊಬ್ಬಳು ಸ್ಟ್ರಿಕ್ಟ್​ ಅಪ್ಪ-ಅಮ್ಮನಿಗೆ ಭಯಪಟ್ಟು ಮನೆಬಿಟ್ಟು ಹೋಗಿ ಕಾಮುಕರ ಬಲೆಯಲ್ಲಿ ಸಿಲುಕಿದ್ದಾಳೆ. ಈಕೆಯ ದಾರುಣ ಸ್ಟೋರಿ ಕೇಳಿ...

 

Read Full Story

07:09 PM (IST) Aug 12

70 ವರ್ಷದ ದಾಂಪತ್ಯದ ನಂತರ 96ರ ಪತ್ನಿಗೆ ಡಿವೋರ್ಸ್ ನೀಡಿದ 99ರ ವೃದ್ಧ - ಕಾರಣ ಕೇಳಿದ್ರೆ ಶಾಕ್ ಆಗೋದ್ ಪಕ್ಕಾ!

99ರ ಹರೆಯದ ವೃದ್ಧ ತನ್ನ 96ರ ಹರೆಯದ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. 2011ರಲ್ಲಿ ಇಟಲಿಯಲ್ಲಿ ನಡೆದ ಈ ಘಟನೆ ಈಗ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಭಾರಿ ವೈರಲ್ ಆಗ್ತಿದೆ.

Read Full Story

06:21 PM (IST) Aug 12

ಸುದ್ದಿ ಹುಡುಕುವಲ್ಲಿ ಹೊಸ ಆಯಾಮ ಕಂಡುಕೊಂಡ Gen Z ಪೀಳಿಗೆ!

Gen Z ಪೀಳಿಗೆಯವರು ಸುದ್ದಿ ಸೇವನೆಯಲ್ಲಿ ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಉತ್ಪಾದಕ AI ಬಳಸಿ ಸುದ್ದಿಗಳನ್ನು ವಿಶ್ಲೇಷಿಸಿ, ಸ್ವತಂತ್ರವಾಗಿ ಪರಿಶೀಲಿಸಿ, ಸ್ಥಳೀಯ ಭಾಷೆಗಳಲ್ಲಿ ಸೇವಿಸುತ್ತಿದ್ದಾರೆ. ಇದು ಮಾಹಿತಿಯ ಸಕ್ರಿಯ ವಿಶ್ಲೇಷಣೆಗೆ ಚಿಂತನೆಗೆ ದಾರಿ ಮಾಡಿಕೊಡುತ್ತಿದೆ.

Read Full Story

05:49 PM (IST) Aug 12

ಅಕ್ಕಪಕ್ಕದ ಮನೆಯವರ ಬ್ರಾ ಕದಿಯುವ ಬೆಕ್ಕು - ಮಾರ್ಜಾಲದ ಆಟಕ್ಕೆ ಮಾಲಕಿ ಸುಸ್ತು

ಮಹಿಳೆಯೊಬ್ಬರ ಸಾಕು ಬೆಕ್ಕು ನಿರಂತರವಾಗಿ ಬೇರೆಯವರ ಬ್ರಾಗಳನ್ನು ಕದ್ದು ತರುತ್ತಿದ್ದ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಈ ವರ್ತನೆಗೆ ಬೆಕ್ಕಿನ ಮಾಲೀಕರು ಸುಸ್ತಾಗಿ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
Read Full Story

03:19 PM (IST) Aug 12

'ಸಿದ್ಧವಾಗಿರಿ, ನಾವು ನಿಮಗೆ ಕೆಲವು ಪ್ರಶ್ನೆ ಕೇಳಲಿದ್ದೇವೆ..' ಚುನಾವಣಾ ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್!

ಚುನಾವಣಾ ಆಯೋಗದ ಪರವಾಗಿ ಹಾಜರಾದ ಹಿರಿಯ ವಕೀಲರು, ಅಂತಹ ರೀತಿಯ ವ್ಯಾಯಾಮವು 'ಇಲ್ಲಿ ಮತ್ತು ಅಲ್ಲಿ ಕೆಲವು ದೋಷಗಳನ್ನು ಹೊಂದಿರುವುದು ಖಚಿತ' ಎಂದು ಹೇಳಿದ್ದಾರೆ.

 

Read Full Story

02:28 PM (IST) Aug 12

ಮತಗಳವು ಅಭಿಯಾನದಲ್ಲಿ ನನ್ನ ಪಾತ್ರವಿಲ್ಲ, ಕಾಂಗ್ರೆಸ್‌ನಿಂದ ನನ್ನ ಕ್ಲಿಪ್‌ ದುರುಪಯೋಗ ಎಂದ ನಟ ಕೇ ಕೇ ಮೆನನ್‌!

ಕಾಂಗ್ರೆಸ್ ಪಕ್ಷದ 'ಮತಗಳವು' ಅಭಿಯಾನದಲ್ಲಿ ತಮ್ಮ ವೀಡಿಯೊವನ್ನು ಒಪ್ಪಿಗೆಯಿಲ್ಲದೆ ಬಳಸಿಕೊಂಡಿರುವುದಕ್ಕೆ ನಟ ಕೆ.ಕೆ. ಮೆನನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 'ಸ್ಪೆಷಲ್ ಆಪ್ಸ್' ವೆಬ್ ಸರಣಿಯ ತಮ್ಮ ಪಾತ್ರದ ವೀಡಿಯೊವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

01:46 PM (IST) Aug 12

ಕೇವಲ ಪಿಯುಸಿ ಓದಿ ಐಎಎಸ್ ಅಧಿಕಾರಿ ಆದವನ ಬಂಧನ..!

ಇತ್ತೀಚೆಗೆ ನಕಲಿಗಳ ಹಾವಳಿ ಬಹಳ ತೀವ್ರವಾಗಿದೆ. ಹಾಗೆಯೇ ಗುರುಗ್ರಾಮದಲ್ಲಿ ಕೇವಲ ಪಿಯುಸಿ ಶಿಕ್ಷಣ ಮುಗಿಸಿದ್ದ ಯುವಕನೋರ್ವ ನಕಲಿ ಐಎಎಸ್ ಅಧಿಕಾರಿಯಾಗಿದ್ದು ಆತನನ್ನು ಪೊಲೀಸರು ಬಲೆಗೆ ಕೆಡವಿದ್ದಾರೆ.

Read Full Story

01:20 PM (IST) Aug 12

ಭಾರತದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಚೇತರಿಕೆ, ನಂ.1 ಬ್ರ್ಯಾಂಡ್‌ ಪಟ್ಟಕ್ಕೇರಿದ ವಿವೋ!

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆ ಎರಡೂವರೆ ವರ್ಷಗಳ ನಂತರ ಚೇತರಿಸಿಕೊಂಡಿದೆ. ಹೊಸ ಮಾದರಿಗಳ ಬಿಡುಗಡೆ, ಹೆಚ್ಚಿದ ಲಾಭಾಂಶ ಮತ್ತು ಮಾರ್ಕೆಟಿಂಗ್ ಚಟುವಟಿಕೆಗಳು ಈ ಬೆಳವಣಿಗೆಗೆ ಕಾರಣ. ಆದರೆ, ಹೆಚ್ಚಿದ ಮಾರಾಟ ಬೆಲೆಗಳ ಕಾರಣದಿಂದ ಬೇಡಿಕೆ ಕುಸಿಯುವ ಸಾಧ್ಯತೆಯಿದೆ.
Read Full Story

12:56 PM (IST) Aug 12

ಸಂಸದರಿಗಾಗಿ ಮೋದಿ ಅನಾವರಣ ಮಾಡಿದ 5 ಬೆಡ್‌ರೂಮ್‌ ಮನೆಗಳಲ್ಲಿ ಏನೆಲ್ಲಾ ವ್ಯವಸ್ಥೆಗಳಿವೆ?

ಪ್ರಧಾನಿ ಮೋದಿ ದೆಹಲಿಯಲ್ಲಿ 184 ಸಂಸದರಿಗಾಗಿ ನಿರ್ಮಿಸಲಾದ ಹೊಸ ವಸತಿ ಸಂಕೀರ್ಣವನ್ನು ಉದ್ಘಾಟಿಸಿದ್ದಾರೆ. ಈ ಸಂಕೀರ್ಣವು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ.
Read Full Story

12:47 PM (IST) Aug 12

ಮಗಳು ಮನೆಗಲ್ಲ... ಗಂಡು ಮಗುವಿನ ಮೋಹ 1 ವರ್ಷದ ಮಗಳಿಗೆ ವಿಷ ನೀಡಿದ ಪಾಪಿ ತಂದೆ

ಗಂಡು ಮಗುವಿನ ಆಸೆಗಾಗಿ ತಂದೆಯೊಬ್ಬ ತನ್ನ ಒಂದು ವರ್ಷದ ಮಗಳಿಗೆ ವಿಷ ಉಣಿಸಿ ಕೊಂದಿದ್ದಾನೆ. ಈ ಘಟನೆ ತ್ರಿಪುರಾದಲ್ಲಿ ನಡೆದಿದ್ದು, ಆರೋಪಿ ಸರ್ಕಾರಿ ಉದ್ಯೋಗಿ. 

Read Full Story

12:20 PM (IST) Aug 12

UAN ನಂಬರ್‌ ಮೂಲಕ ಇಪಿಎಫ್‌ನಲ್ಲಿ ಹಣ ಎಷ್ಟಿದೆ ಎಂದು ತಿಳಿದುಕೊಳ್ಳೋದು ಹೇಗೆ?

ನಿಮ್ಮ UAN ಬಳಸಿ EPF ಬಾಕಿ ಪರಿಶೀಲಿಸಲು EPFO ಪೋರ್ಟಲ್, SMS, UMANG ಆಪ್ ಮತ್ತು ಮಿಸ್ಡ್ ಕಾಲ್ ಸೌಲಭ್ಯಗಳನ್ನು ಬಳಸಬಹುದು. ಈ ವಿಧಾನಗಳು ನಿಮ್ಮ PF ಬಾಕಿ ಮತ್ತು ಕೊಡುಗೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ. ನಿಮ್ಮ UAN ಸಕ್ರಿಯವಾಗಿದ್ದು KYC ವಿವರಗಳೊಂದಿಗೆ ಲಿಂಕ್ ಆಗಿರಬೇಕು.
Read Full Story

12:12 PM (IST) Aug 12

ಬಿಜೆಪಿಯನ್ನು ಹಿಂದಿಕ್ಕಿದ ಕಾಂಗ್ರೆಸ್; ಯಾರಿಗೆ ಎಷ್ಟು ಫಾಲೋವರ್ಸ್?

ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಫಾಲೋವರ್ಸ್‌ಗಳ ಸಂಖ್ಯೆಗಳನ್ನು ಹೋಲಿಸಲಾಗಿದೆ. ಕೆಲವು ವೇದಿಕೆಗಳಲ್ಲಿ ಕಾಂಗ್ರೆಸ್ ಮುಂದಿದ್ದರೆ, ಇನ್ನು ಕೆಲವೆಡೆ ಬಿಜೆಪಿ ಮುನ್ನಡೆ ಸಾಧಿಸಿದೆ. ಮೋದಿ ಮತ್ತು ರಾಹುಲ್ ಗಾಂಧಿ ಅವರ ವೈಯಕ್ತಿಕ ಖಾತೆಗಳ ಫಾಲೋವರ್ಸ್‌ಗಳ ಮಾಹಿತಿಯನ್ನೂ ನೀಡಲಾಗಿದೆ.

Read Full Story

11:38 AM (IST) Aug 12

ಕೇರಳ - ಮತಾಂತರಕ್ಕೆ ಒತ್ತಾಯಿಸಿದ ಮುಸ್ಲಿಂ ಪ್ರಿಯಕರ ಸಾವಿಗೆ ಶರಣಾದ ಕ್ರಿಶ್ಚಿಯನ್ ಯುವತಿ

ಕೇರಳದಲ್ಲಿ ಪ್ರೀತಿಸಿದ ಯುವಕ ಮತ್ತು ಆತನ ಕುಟುಂಬದಿಂದ ಮತಾಂತರದ ಒತ್ತಾಯಕ್ಕೆ ಒಳಗಾದ 23 ವರ್ಷದ ಯುವತಿ ಸಾವಿಗೆ ಶರಣಾಗಿದ್ದಾಳೆ.

Read Full Story

11:04 AM (IST) Aug 12

Sarla Bhat Murder Case - 35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ್ ಮಹಿಳೆ ಹತ್ಯೆ ಪ್ರಕರಣ ರಿಒಪನ್, ತನಿಖಾ ಸಂಸ್ಥೆಯಿಂದ ದಾಳಿ!

35 ವರ್ಷಗಳ ಹಿಂದೆ ನಡೆದ ಕಾಶ್ಮೀರಿ ಪಂಡಿತ್ ಮಹಿಳೆ ಸರಳಾ ಭಟ್ ಹತ್ಯೆ ಪ್ರಕರಣದ ತನಿಖೆಯನ್ನು ಮತ್ತೆ ಆರಂಭಿಸಲಾಗಿದೆ. ಮಂಗಳವಾರ ಮಧ್ಯ ಕಾಶ್ಮೀರದ ಹಲವೆಡೆ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಜೆಕೆಎಲ್‌ಎಫ್‌ನ ಮಾಜಿ ನಾಯಕ ಸೇರಿದಂತೆ ಹಲವರ ಮನೆಗಳಲ್ಲಿ ಶೋಧ ನಡೆದಿದೆ.
Read Full Story

10:51 AM (IST) Aug 12

ಕಾರಿನಲ್ಲಿ ಚಿರತೆ ಮರಿಯ ಪಯಣ - ವೀಡಿಯೋ ಭಾರಿ ವೈರಲ್

ತಾಯಿ ಬಿಟ್ಟು ಹೋದ ಚಿರತೆ ಮರಿಯೊಂದನ್ನು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಯುವಕನೋರ್ವ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಕಾರಿನಲ್ಲಿ ಮರಿಯನ್ನು ಕರೆದೊಯ್ಯುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

07:49 AM (IST) Aug 12

ದಿಲ್ಲಿ ತಲುಪಿದ ಕರ್ನಾಟಕದ ಮತಗಳವು ಹೋರಾಟ ಕಿಚ್ಚು- ಆಯೋಗದ ವಿರುದ್ಧ ವಿಪಕ್ಷ ಪ್ರತಿಭಟನೆ

ಮತಗಳವಿನ ಆರೋಪದ ಕುರಿತು ಸಾಕ್ಷ್ಯ ನೀಡುವಂತೆ ಪಕ್ಷದ ಹಿರಿಯ ನಾಯಕ ರಾಹುಲ್‌ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್‌ ನೀಡಿದ್ದಕ್ಕೆ ರಾಜ್ಯದ ಕಾಂಗ್ರೆಸ್‌ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

Read Full Story

07:48 AM (IST) Aug 12

ವಾಷಿಂಗ್ಟನ್‌ನಲ್ಲಿ ಸೇನೆ ನಿಯೋಜನೆಗೆ ಟ್ರಂಪ್ ಆದೇಶ

ಅಮೆರಿಕ ಅಧ್ಯಕ್ಷ ಟ್ರಂಪ್ ರಾಜಧಾನಿ ವಾಷಿಂಗ್ಟನ್ ಡಿಸಿಯ ಪೊಲೀಸ್ ಇಲಾಖೆಯನ್ನು ಸರ್ಕಾರದ ನಿಯಂತ್ರಣಕ್ಕೆ ಒಳಪಡಿಸಿ, ಆ ಜಾಗಕ್ಕೆ ರಾಷ್ಟ್ರೀಯ ಗಾರ್ಡ್‌ (ಸೇನೆ) ಅನ್ನು ನಿಯೋಜಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.

 

Read Full Story

07:48 AM (IST) Aug 12

ಕೆ.ಸಿ.ವೇಣುಗೋಪಾಲ್ ಇದ್ದ ವಿಮಾನ ಅಪಘಾತದಿಂದ ಜಸ್ಟ್‌ ಮಿಸ್

ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತಿರುವನಂತಪುರದಿಂದ ದಿಲ್ಲಿಗೆ ಹೋಗುತ್ತಿದ್ದ ಏರ್‌ ಇಂಡಿಯಾ ವಿಮಾನ ಪ್ರಕ್ಷುಬ್ಧತೆ ಹಾಗೂ ತಾಂತ್ರಿಕ ಸಮಸ್ಯೆಗೆ ಗುರಿಯಾಗಿ ಚೆನ್ನೈನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

 

Read Full Story

07:47 AM (IST) Aug 12

ಆಂಧ್ರದಲ್ಲೂ ಮಹಿಳೆಯರಿಗೆ, ಮಂಗಳಮುಖಿಯರಿಗೂ ಕರ್ನಾಟಕ ಮಾದರಿ ಉಚಿತ ಸಾರಿಗೆ

ಕರ್ನಾಟಕ ಮಾದರಿಯಲ್ಲಿ ಆಂಧ್ರಪ್ರದೇಶ ಮಹಿಳೆಯರಿಗಾಗಿ ಉಚಿತ ಸಾರಿಗೆ ಯೋಜನೆ ಜಾರಿಗೆ ಮುಂದಾಗಿದೆ. 2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು ಸರ್ಕಾರ ಆ.15ರಿಂದ ಯೋಜನೆ ಆರಂಭಿಸಲಿದೆ.

 

Read Full Story

07:47 AM (IST) Aug 12

ದಿಲ್ಲಿ ಬೀದಿ ನಾಯಿಗಳ ಶೆಡ್‌ಗೆ ಹಾಕಿ : ಸುಪ್ರೀಂ ಖಡಕ್‌ ಆದೇಶ

ಬೀದಿನಾಯಿ ಕಡಿತದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿರುವ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ದೆಹಲಿ ವ್ಯಾಪ್ತಿಯಲ್ಲಿರುವ ಎಲ್ಲಾ ಬೀದಿನಾಯಿಗಳನ್ನು ಶೀಘ್ರದಲ್ಲೇ ಆಶ್ರಯ ತಾಣಗಳಿಗೆ (ಶೆಡ್‌ಗೆ) ಸೇರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 

Read Full Story

07:46 AM (IST) Aug 12

ಅವಧಿ ಮುಗಿದರೂ ದಂಡವಿಲ್ಲದೆ ಟಿಡಿಎಸ್‌ ಕ್ಲೇಂ ಸಾಧ್ಯ

ಸೋಮವಾರ ಗದ್ದಲದ ನಡುವೆಯೂ ಆದಾಯ ತೆರಿಗೆಗೆ ಸಂಬಂಧಿಸಿದ 2 ಪರಿಷ್ಕೃತ ಮಸೂದೆಗಳನ್ನು ಲೋಕಸಭೆಯಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ವಿತ್ತ ಸಚಿವ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಆದಾಯ ತೆರಿಗೆ(2) ಮಸೂದೆ ಮತ್ತು ತೆರಿಗೆ ಕಾನೂನುಗಳು (ತಿದ್ದುಪಡಿ) ಮಸೂದೆಗಳು ಅಂಗೀಕಾರವಾದವು.

 

 

Read Full Story

07:46 AM (IST) Aug 12

ಕೆನಡಾ ಕೆಫೆ ಮೇಲೆ ದಾಳಿ ಬೆನ್ನಲ್ಲೇ ಕಪಿಲ್ ಶರ್ಮಾ ಭದ್ರತೆ ಹೆಚ್ಚಳ

ಹಾಸ್ಯ ನಟ ಕಪಿಲ್ ಶರ್ಮಾ ಅವರಿಗೆ ಸೇರಿದ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ ತಿಂಗಳ ಅಂತರದಲ್ಲಿ 2 ಸಲ ದಾಳಿ ನಡೆದ ಬೆನ್ನಲ್ಲೇ ಮುಂಬೈ ಪೊಲೀಸರು ನಟನಿಗೆ ಭದ್ರತೆ ಹೆಚ್ಚಿಸಿದ್ದಾರೆ.

 

Read Full Story

07:45 AM (IST) Aug 12

ಯುದ್ಧ ಬೇಡ, ಶಾಂತಿ ಕಾಪಾಡಿ : ಜೆಲೆನ್ಸ್ಕಿಗೆ ಮೋದಿ ಕರೆ

ರಷ್ಯಾ-ಉಕ್ರೇನ್ ನಡುವೆ ಶಾಂತಿ ಸ್ಥಾಪನೆ ಉದ್ದೇಶದಿಂದ ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಮಾತನಾಡಿದ್ದ ಪ್ರಧಾನಿ ಮೋದಿ, ಸೋಮವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಜೆಲೆನ್‌ಸ್ಕಿ ಅವರೊಂದಿಗೂ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.

 

Read Full Story

07:45 AM (IST) Aug 12

ಪಾಕ್‌ನ ಭಾರತ ದೂತರಿಗೆಪತ್ರಿಕೆ, ಗ್ಯಾಸ್‌, ನೀರು ಕಟ್‌ - ಮತ್ತೆ ರಾಜತಾಂತ್ರಿಕ ಸಮರ

ಪಹಲ್ಗಾಂ ದಾಳಿಯ ಮೂಲಕ ಭಾರತದ ಆಕ್ರೋಶಕ್ಕೆ ತುತ್ತಾಗಿದ್ದ ಪಾಕಿಸ್ತಾನ ಇದೀಗ ಮತ್ತೆ ಭಾರತದ ವಿರುದ್ಧ ರಾಜತಾಂತ್ರಿಕ ಸಮರ ಆರಂಭಿಸಿದೆ.

 

Read Full Story

More Trending News