ನವದೆಹಲಿ: ‘ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜಗದೀಪ್ ಧನಕರ್ ಮೌನಕ್ಕೆ ಜಾರಿ 100 ದಿನ ಕಳೆದಿದೆ. ಆದರೂ ಅವರಿಗೆ ಬಿಜೆಪಿ ಕನಿಷ್ಠ ವಿದಾಯ ಕಾರ್ಯಕ್ರಮವನ್ನೂ ಕೇಂದ್ರ ಮಾಡಿಲ್ಲ’ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ. ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ‘ ಜು.21 ತಡರಾತ್ರಿ ಜಗದೀಪ್ ಧನಕರ್ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ 100 ದಿನಗಳು ಕಳೆಯಿತು. ಪ್ರತಿದಿನ ಸುದ್ದಿಯಲ್ಲಿ ಇರುತ್ತಿದ್ದ ಮಾಜಿ ಉಪರಾಷ್ಟ್ರಪತಿ ಸಂಪೂರ್ಣ ಮೌನಕ್ಕೆ ಜಾರಿದ್ದಾರೆ. ಹೀಗಿದ್ದರೂ ಪ್ರಜಾಪ್ರಭುತ್ವದ ಸಂಪ್ರದಾಯದ ಪ್ರಕಾರ ಅವರಿಗೆ ಕನಿಷ್ಠ ಬಿಳ್ಕೋಡುಗೆ ಸಮಾರಂಭವನ್ನಾದರೂ ಕೇಂದ್ರ ಮಾಡಬೇಕಿತ್ತು. ಆದರೆ ಅವರು ಅದನ್ನೂ ಮಾಡಿಲ್ಲ’ ಎಂದು ಕಿಡಿ ಕಾರಿದ್ದಾರೆ.

11:18 PM (IST) Oct 30
ICC ಮಹಿಳಾ ವಿಶ್ವಕಪ್ 2025: ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಜೆಮಿಮಾ ರೋಡ್ರಿಗಸ್ ಅವರ ಸೂಪರ್ ಶತಕ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಅದ್ಭುತ ಬ್ಯಾಟಿಂಗ್ನಿಂದ ಟೀಂ ಇಂಡಿಯಾ ಗೆಲುವು ಸಾಧಿಸಿತು.
09:24 PM (IST) Oct 30
India vs Australia Women's WC Semi-Final ಮಹಿಳಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ನೀಡಿದ 339 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ, ಆರಂಭಿಕ ಆಘಾತದ ಬಳಿಕ ಚೇತರಿಸಿಕೊಂಡಿದೆ. ನಾಯಕಿ ಹರ್ಮಾನ್ಪ್ರೀತ್ ಕೌರ್ ಮತ್ತು ಜೆಮಿಮಾ ರೋಡ್ರಿಗಸ್ ಅವರ ಅಮೋಘ ಅರ್ಧಶತಕ ಬಾರಿಸಿದ್ದಾರೆ.
07:54 PM (IST) Oct 30
Mumbai Hostage Crisis ಪೊವೈ ಸ್ಟುಡಿಯೋದಲ್ಲಿ ರೋಹಿತ್ ಆರ್ಯ ಎಂಬ ವ್ಯಕ್ತಿ 17 ಮಕ್ಕಳು ಸೇರಿದಂತೆ 19 ಜನರನ್ನು ಒತ್ತೆಯಾಳಾಗಿರಿಸಿಕೊಂಡಿದ್ದ. ಸರ್ಕಾರಿ ಯೋಜನೆಯೊಂದರ ಕುರಿತು ಅಸಮಾಧಾನಗೊಂಡಿದ್ದ ಆತನನ್ನು ಮುಂಬೈ ಪೊಲೀಸರು ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದ್ದಾರೆ.
06:37 PM (IST) Oct 30
05:45 PM (IST) Oct 30
ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಚಂದ್ರಕಾಂತ್ ಪಂಡಿತ್ ಅವರ ಸ್ಥಾನಕ್ಕೆ ಅಭಿಷೇಕ್ ನಾಯರ್ ಅವರನ್ನು ಹೊಸ ಮುಖ್ಯ ಕೋಚ್ ಆಗಿ ನೇಮಿಸಿದೆ. ಈ ಹಿಂದೆ ಸಹಾಯಕ ಕೋಚ್ ಆಗಿದ್ದ ನಾಯರ್, ರೋಹಿತ್ ಶರ್ಮಾ ಜತೆಗೆ ನಂಟು ಹೊಂದಿದ್ದು, ಇದು ಮುಂದಿನ ಸೀಸನ್ನಲ್ಲಿ ಆಟಗಾರರ ಸಂಭಾವ್ಯ ವರ್ಗಾವಣೆಯ ಕುತೂಹಲಕ್ಕೆ ಕಾರಣವಾಗಿದೆ.
05:36 PM (IST) Oct 30
Gen Z honeymoon trends: ಜೆನ್ ಝಿ ತಲೆಮಾರಿನ ಜೋಡಿಗಳು ಹನಿಮೂನ್ ಪರಿಕಲ್ಪನೆಯನ್ನೇ ಬದಲಿಸುತ್ತಿದ್ದಾರೆ. ದುಬಾರಿ ಪ್ರವಾಸಗಳ ಬದಲು, ಅವರು ವೈಯಕ್ತಿಕ ಅನುಭವ ನೀಡುವ, ಸಾಂಸ್ಕೃತಿಕ ಮಹತ್ವವಿರುವ ತಾಣಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಅವರ ನೆಚ್ಚಿನ ತಾಣಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ಡಿಟೇಲ್.
05:14 PM (IST) Oct 30
Woman Dies Instantly as Boulder Crushes Car Sunroof in Tragic Tamhini Ghat Accident ತಮ್ಹಿನಿ ಘಾಟ್ನಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ ಮೇಲೆ ಬಂಡೆ ಬಿದ್ದು ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
05:03 PM (IST) Oct 30
04:38 PM (IST) Oct 30
ನವೆಂಬರ್ನಿಂದ, ಬ್ಯಾಂಕ್ ಠೇವಣಿಗಳಿಗೆ ನಾಲ್ಕು ನಾಮಿನಿಗಳನ್ನು ನೇಮಿಸುವುದು, ಎಸ್ಬಿಐ ಕಾರ್ಡ್ನ ಕೆಲವು ಪಾವತಿಗಳ ಮೇಲೆ ಹೊಸ ಶುಲ್ಕಗಳು, ಮತ್ತು ಪಿಂಚಣಿದಾರರಿಗೆ ಜೀವನ ಪ್ರಮಾಣಪತ್ರ ಸಲ್ಲಿಕೆಯ ಗಡುವು ಸೇರಿದಂತೆ ಹಲವು ಹಣಕಾಸು ನಿಯಮಗಳು ಬದಲಾಗಲಿವೆ.
04:38 PM (IST) Oct 30
PMShri scheme in Kerala: ಕೇಂದ್ರ ಸರ್ಕಾರದ ಮಹತ್ವದ ಪಿಎಂಶ್ರೀ ಶಾಲಾ ಅಭಿವೃದ್ಧಿ ಯೋಜನೆಗೆ ಕೇರಳದಲ್ಲಿ ಬ್ರೇಕ್ ಬೀಳುವ ಸಾಧ್ಯತೆ ಬಹುತೇಕ ದಟ್ಟವಾಗಿದೆ. ಆಡಳಿತಾರೂಢ ಎಲ್ಡಿಎಫ್ನ ಮಿತ್ರಪಕ್ಷವಾದ ಸಿಪಿಐನಿಂದಲೇ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
04:31 PM (IST) Oct 30
Ex-Actress Mamta Kulkarni Claims Dawood Ibrahim is Not a Terrorist ಬಾಲಿವುಡ್ನ ಮಾಜಿ ನಟಿ ಮಮತಾ ಕುಲಕರ್ಣಿ ಇತ್ತೀಚೆಗೆ ದಾವೂದ್ ಇಬ್ರಾಹಿಂ ಮತ್ತು ವಿಕಿ ಗೋಸ್ವಾಮಿ ಅವರನ್ನು ಒಳಗೊಂಡ ಹೇಳಿಕೆಗಳ ಕುರಿತು ಮತ್ತೊಮ್ಮೆ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
04:13 PM (IST) Oct 30
ಭಾರತ ಮತ್ತು ಆಸ್ಟ್ರೇಲಿಯಾ T20 ಸರಣಿಗೂ ಮುನ್ನ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಆಂಧ್ರದ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಗಾಯದ ಕಾರಣ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದಾರೆ.
03:17 PM (IST) Oct 30
Sangeetha Kerala viral video: ಕೇರಳ ಫೈಲ್ಸ್ ಸಿನಿಮಾಗೆ ವಿರೋಧ ವ್ಯಕ್ತಪಡಿಸಿದ ಕೇರಳ ಸಿಪಿಐಎಂ ನಾಯಕ ಭಾಸ್ಕರನ್ ಅವರ ಪುತ್ರಿಯೇ ಈಗ ತನ್ನ ತಂದೆ ಮುಸ್ಲಿಂ ಯುವಕನ ಜೊತೆಗಿನ ತನ್ನ ಪ್ರೇಮವನ್ನು ವಿರೋಧಿಸಿ ತನ್ನನ್ನು ಗೃಹಬಂಧನದಲ್ಲಿ ಇಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
02:43 PM (IST) Oct 30
2025ರ ಮಹಿಳಾ ಏಕದಿನ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಗಾಯಾಳುವಿನ ಬದಲಾಗಿ ಶಫಾಲಿ ವರ್ಮಾ ಸೇರಿದಂತೆ ಭಾರತ ತಂಡದಲ್ಲಿ 3 ಬದಲಾವಣೆಗಳನ್ನು ಮಾಡಲಾಗಿದ್ದು, ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.
01:25 PM (IST) Oct 30
ಕೊಚ್ಚಿಯಿಂದ ಅಬುಧಾಬಿಗೆ ತೆರಳುತ್ತಿದ್ದ ಏರ್ ಅರೇಬಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿತ್ತು. ಅದೇ ವಿಮಾನದಲ್ಲಿದ್ದ ಕೇರಳ ಮೂಲದ ಇಬ್ಬರು ನರ್ಸ್ಗಳು ತಕ್ಷಣವೇ ಸಿಪಿಆರ್ ನೀಡಿ ಪ್ರಯಾಣಿಕನ ಜೀವ ಉಳಿಸಿದ್ದಾರೆ.
12:33 PM (IST) Oct 30
ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಸ್ಥಾನಕ್ಕಾಗಿ ಭಾರತ ಇಂದು ನವಿ ಮುಂಬೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬಲಿಷ್ಠ ಕಾಂಗರೂ ಪಡೆಯ ಜೊತೆಗೆ ಮಳೆಯೂ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದ್ದು, ಮೀಸಲು ದಿನದ ನಿಯಮಗಳು ಕುತೂಹಲ ಕೆರಳಿಸಿವೆ.
11:14 AM (IST) Oct 30
ದುಬೈ: ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ರ್ಯಾಂಕಿಂಗ್ನಲ್ಲಿ ಅಪರೂಪದಲ್ಲೇ ಅಪರೂಪದ ದಾಖಲೆ ಬರೆದಿದ್ದಾರೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
09:36 AM (IST) Oct 30
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ನ ಎರಡನೇ ಸೆಮಿಫೈನಲ್ನಲ್ಲಿ ಭಾರತವು ಹಾಲಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2017ರ ಸೆಮಿಫೈನಲ್ನಲ್ಲಿ ಹರ್ಮನ್ಪ್ರೀತ್ ಕೌರ್ ಅವರ ಸ್ಫೋಟಕ ಶತಕದಂತೆ ಈ ಬಾರಿಯೂ ಭಾರತೀಯ ಆಟಗಾರ್ತಿಯಿಂದ ಅದ್ಭುತ ಪ್ರದರ್ಶನವನ್ನು ನಿರೀಕ್ಷಿಸಲಾಗುತ್ತಿದೆ.
09:00 AM (IST) Oct 30