Published : Aug 24, 2025, 07:31 AM ISTUpdated : Aug 24, 2025, 11:41 PM IST

India Latest News Live: ಭದ್ರತೆ ಉಲ್ಲಂಘಿಸಿ ಓಡೋಡಿ ಬಂದು ರಾಹುಲ್‌ ಗಾಂಧಿಯನ್ನು ಅಪ್ಪಿಕೊಂಡ ಯುವಕ

ಸಾರಾಂಶ

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿಯಾದ ಘಟನೆ ನೋಯ್ಡಾದಲ್ಲಿ ನಡೆದಿದೆ. ಬರೋಬ್ಬರಿ 36 ಲಕ್ಷ ರೂಪಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದ್ದು, ಪುಟ್ಟ ಮಗನ ಎದುರೇ ದುರಂತ ನಡೆದಿದೆ. ತಾಯಿಗೆ ಅತ್ಯಂತ ಕ್ರೂರವಾಗಿ ತಂದೆ ಹಲ್ಲೆ ಮಾಡಿದ್ದಾರೆ, ತಾಯಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ ಎಂದು ಕಣ್ಣೀರಿಡುತ್ತಾ, ಭಯದಿಂದಲೇ ಘಟನೆ ವಿವರಿಸಿದ್ದಾನೆ. ಈ ಪ್ರಕರಣ ಸಂಬಂಧ ಪತಿ ಅರೆಸ್ಟ್ ಆಗಿದ್ದರೆ, ಪತಿಯ ತಂದೆ, ಸಹೋದರ ನಾಪತ್ತೆಯಾಗಿದ್ದಾರೆ. ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಲೈವ್ ಅಪ್‌ಡೇಟ್ ಇಲ್ಲಿದೆ. 

11:41 PM (IST) Aug 24

ಭದ್ರತೆ ಉಲ್ಲಂಘಿಸಿ ಓಡೋಡಿ ಬಂದು ರಾಹುಲ್‌ ಗಾಂಧಿಯನ್ನು ಅಪ್ಪಿಕೊಂಡ ಯುವಕ

ಬಿಹಾರದಲ್ಲಿ ಪ್ರವಾಸ ಮಾಡುತ್ತಿದ್ದಾಗ ಓರ್ವ ವ್ಯಕ್ತಿ ರಾಹುಲ್ ಗಾಂಧಿಯವರ ಭದ್ರತೆಯನ್ನು ಭೇದಿಸಿ ಅಪ್ಪಿಕೊಂಡ ಘಟನೆ ನಡೆದಿದೆ.

Read Full Story

10:56 PM (IST) Aug 24

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆ ಅಬ್ಬರ; ಸೇತುವೆ ಕುಸಿತ, ಜನಜೀವನ ಅಸ್ತವ್ಯಸ್ತ

ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು, ಸೇತುವೆಗಳು ಹಾನಿಗೊಳಗಾಗಿವೆ. ರಕ್ಷಣಾ ಕಾರ್ಯಾಚರಣೆಗಳು ಭರದಿಂದ ಸಾಗುತ್ತಿವೆ.
Read Full Story

10:53 PM (IST) Aug 24

ಗ್ರೇಟರ್ ನೋಯ್ಡಾದ ಅಮ್ಮ ಮಗ ಸೇರಿ ಸೊಸೆಗೆ ಬೆಂಕಿ ಹಚ್ಚಿ ಕೊಂದ ಕೇಸ್ - ಮಗನಿಗೆ ಗುಂಡೇಟಿನ ಬಳಿಕ ಅತ್ತೆಯೂ ಅಂದರ್

ವರದಕ್ಷಿಣೆಗಾಗಿ ಸೊಸೆಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಆರೋಪಿ ಪತಿ ವಿಪಿನ್ ಭಾಟಿ ಎನ್‌ಕೌಂಟರ್ ನಂತರ, ಆತನ ತಾಯಿ ದಯಾಳನ್ನು ಪೊಲೀಸರು ಬಂಧಿಸಿದ್ದಾರೆ. ಮಗುವಿನೆದುರೇ ನಡೆದ ಈ ಭೀಕರ ಘಟನೆ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Read Full Story

09:36 PM (IST) Aug 24

ಮೆಟ್ರೋದಲ್ಲಿ ಸೀಟಿನ ಬೆಲೆ ಎಷ್ಟು ಗೊತ್ತಾ? ಕೂದಲು ಹಿಡಿದು ಎಳೆದಾಡಿಕೊಂಡ ಲೇಡಿಸ್

ಮೆಟ್ರೋದಲ್ಲಿ ಸೀಟಿಗಾಗಿ ಇಬ್ಬರು ಮಹಿಳೆಯರು ಕೂದಲು ಹಿಡಿದು ಜಗಳವಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Read Full Story

06:59 PM (IST) Aug 24

19ರ ಗೆಳೆಯನನ್ನು 12 ಲಕ್ಷಕ್ಕೆ ಮಾರಾಟ ಮಾಡಿದ 17ರ ಬ್ಯುಟಿಫುಲ್ ಪ್ರೇಯಸಿ

ಚೀನೀ ಕ್ರಿಮಿನಲ್ ಗ್ಯಾಂಗ್‌ಗಳು ಇಂತಹ ಟೆಲಿಕಾಂ ವಂಚನೆಗಳ ಹಿಂದೆ ಇವೆ ಎಂದು ವರದಿಗಳು ಹೇಳುತ್ತವೆ.

Read Full Story

06:23 PM (IST) Aug 24

ಶಾಪಿಂಗ್ ಮಾಲ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಚೇಳು ಕಡಿತ - ಯುವತಿ ಆಸ್ಪತ್ರೆಗೆ ದಾಖಲು

ಶಾಪಿಂಗ್ ಮಾಲ್‌ನ ಡ್ರೆಸ್ಸಿಂಗ್ ರೂಮ್‌ನಲ್ಲಿ ಬಟ್ಟೆ ಬದಲಿಸುತ್ತಿದ್ದೆ ಯುವತಿಗೆ ಚೇಳು ಕಚ್ಚಿದ ಘಟನೆ ನಡೆದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

Read Full Story

05:29 PM (IST) Aug 24

ನೋಯ್ಡಾದಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪ್ರಕರಣ - ಪೊಲೀಸರಿಂದ ಗಂಡನಿಗೆ ಗುಂಡೇಟು

ವರದಕ್ಷಿಣೆ ಕಿರುಕುಳದ ಹಿನ್ನೆಲೆಯಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪತಿ ವಿಪಿನ್ ಭಾಟಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಈ ಘಟನೆ ನಡೆದಿದೆ.

Read Full Story

04:36 PM (IST) Aug 24

ಎಚ್ಚರ... ಎಚ್ಚರ! Whatsappಗೆ ಬಂದ ಮದ್ವೆ ಪತ್ರಿಕೆ ಓಪನ್‌ ಮಾಡಿ 2 ಲಕ್ಷ ಕಳಕೊಂಡ ಸರ್ಕಾರಿ ನೌಕರ!

WhatsAppಗೆ ಯಾರಾದರೂ ಯಾವುದೇ ರೀತಿಯ ಇನ್ವಿಟೇಷನ್‌ ಕಳುಹಿಸಿದರೆ ಓಪನ್‌ ಮಾಡುವ ಮುನ್ನ ಇರಲಿ ಎಚ್ಚರ. ನಿಮ್ಮ ಬಳಿ ನಂಬರ್‌ ಸೇವ್‌ ಆಗದೇ ಇದ್ದರೆ ಮೈಯೆಲ್ಲಾ ಕಣ್ಣಾಗಿರಲಿ. ಇಲ್ಲದಿದ್ರೆ ಲಕ್ಷ ಲಕ್ಷ ಕಳಕೊಳ್ತೀರಾ! ಆಗಿದ್ದೇನು ನೋಡಿ...

 

Read Full Story

04:09 PM (IST) Aug 24

ಕಾಯಬೇಕಾದವನೇ ಮೇಯಲೆತ್ನಿಸಿದ - ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿಯ ಅಸಭ್ಯವಾಗಿ ಮುಟ್ಟಿದ ರೈಲ್ವೆ ಪೊಲೀಸ್

ಪ್ರಯಾಗ್‌ರಾಜ್‌ ಎಕ್ಸ್‌ಪ್ರೆಸ್ ರೈಲಿನಲ್ಲಿ ನಿದ್ದೆ ಮಾಡುತ್ತಿದ್ದ ಯುವತಿಯೊಬ್ಬಳ ಜೊತೆ ರೈಲ್ವೆ ಪೊಲೀಸ್ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. 

Read Full Story

03:05 PM (IST) Aug 24

ಕೆ ಡ್ರಾಮಾದಲ್ಲಿ ಅರಬ್, ಭಾರತೀಯ ಸಂಸ್ಕೃತಿಯ ಅವಹೇಳನ - ಕ್ಷಮೆ ಕೇಳಿದ ಎಂಬಿಸಿ

ಕೆ-ಡ್ರಾಮಾ 'ಟು ದಿ ಮೂನ್' ಟೀಸರ್‌ನಲ್ಲಿ ಭಾರತೀಯ ಮತ್ತು ಅರಬ್ ಸಂಸ್ಕೃತಿಯನ್ನು ಅವಹೇಳನ ಮಾಡಿರುವ ಆರೋಪ ಕೇಳಿಬಂದಿದ್ದು, ವ್ಯಾಪಕ ಟೀಕೆಗಳ ನಂತರ ಪ್ರಸಾರಕರು ಕ್ಷಮೆ ಯಾಚಿಸಿದ್ದಾರೆ. 

Read Full Story

02:57 PM (IST) Aug 24

ಡಿ ಮಾರ್ಟ್‌ನಲ್ಲಿ ಅರ್ಧ ಬೆಲೆಗೆ ಸಾಮಾನುಗಳ ಮಾರಾಟ; ಇದು ಹಬ್ಬದ ಸ್ಪೆಷಲ್ ಆಫರ್!

ಗಣೇಶ ಹಬ್ಬದ ಪ್ರಯುಕ್ತ, ಡಿಮಾರ್ಟ್ ಗ್ರಾಹಕರಿಗೆ ಅರ್ಧಕ್ಕಿಂತ ಕಡಿಮೆ ಬೆಲೆಯಲ್ಲಿ ಸಾಮಾನುಗಳನ್ನು ನೀಡುತ್ತಿದೆ. ದಿನಸಿ, ಮನೆ ಬಳಕೆ ವಸ್ತುಗಳು, ಅಡುಗೆ ಪಾತ್ರೆಗಳು ಹೀಗೆ ಎಲ್ಲದರ ಮೇಲೂ ಭಾರಿ ರಿಯಾಯಿತಿ ಇದೆ.
Read Full Story

01:38 PM (IST) Aug 24

3 ದಶಕಗಳ ಹಿಂದೆ ಮಾಡಿದ ಕೇವಲ 7000 ರೂ ಹೂಡಿಕೆ - ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ ನಾಯ್ಡು

ಆಂಧ್ರಪ್ರದೇಶದ ಸಿಎಂ ಎನ್ ಚಂದ್ರಬಾಬು ನಾಯ್ಡು ಅವರು 931 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದುವ ಮೂಲಕ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಅವರನ್ನು ಮೊದಲ ಸ್ಥಾನದಲ್ಲಿ ಇರಿಸಿದೆ.  ಇವರ ಶ್ರೀಮಂತಿಕೆಗೆ ಕಾರಣಾಗಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Read Full Story

12:43 PM (IST) Aug 24

ಸೂಚನೆ ನೀಡದೇ ಡೋರ್ ತೆಗೆದ ಕಾರು ಚಾಲಕನ ಎಡವಟ್ಟಿಗೆ ಪ್ರಾಣಬಿಟ್ಟ ಯುವ ಕ್ರಿಕೆಟಿಗ

ಜಮ್ಮು ಕಾಶ್ಮೀರದ ಪೂಂಛ್‌ನಲ್ಲಿ ಸಡನ್ ಆಗಿ ತೆರೆದುಕೊಂಡ ಕಾರಿನ ಡೋರ್‌ಗೆ ಡಿಕ್ಕಿ ಹೊಡೆದು ಯುವ ಕ್ರಿಕೆಟಿಗ ಫರೀದ್ ಖಾನ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾದ ಕ್ರಿಕೆಟಿಗನ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Read Full Story

07:31 AM (IST) Aug 24

36 ಲಕ್ಷ ರೂ ವರದಕ್ಷಿಣೆ ಕಿರುಕುಳಕ್ಕೆ 28 ವರ್ಷದ ನಿಕ್ಕಿ ಬಲಿ

ಪತಿ ಹಾಗೂ ಪತಿಯ ಪೋಷಕರು ನಿಕ್ಕಿ ಮೇಲೆ ಹಲ್ಲೆ ಮಾಡಿದ್ದಾರೆ. 36 ಲಕ್ಷ ರೂಪಾಯಿ ತಂದರೆ ಮಾತ್ರ ಮನೆಗೆ ಬರುವಂತೆ ಸೂಚಿಸಿದ ಹಿನ್ನಲೆಯಲ್ಲಿ ಬೆಂಕಿ ಹಚ್ಚಿಕೊಂಡು ಬದುಕನ್ನೇ ಅಂತ್ಯಗೊಳಿಸಿದ ಘಟನೆ ನೋಯ್ಡಾದಲ್ಲಿ ನಡೆದಿದೆ.

 


More Trending News