ನವದೆಹಲಿ: ರಾಷ್ಟ್ರಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಗಿದ್ದ ವಕ್ಫ್ ತಿದ್ದುಪಡಿ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ಸೋಮವಾರ ಮಧ್ಯಂತರ ತೀರ್ಪು ಪ್ರಕಟಿಸಿದೆ. ಇಡೀ ಕಾಯ್ದೆಗೆ ತಡೆ ನೀಡಲು ಯಾವುದೇ ಕಾರಣಗಳಿಲ್ಲ ಎಂದು ಆ ಕುರಿತ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ, ಅರ್ಜಿದಾರರ ಹಿತಾಸಕ್ತಿ ಮತ್ತು ಸಮತೋಲನ ಕಾಪಾಡಲು ಕೆಲವೊಂದು ಅಂಶಗಳಿಗಷ್ಟೇ ತಡೆ ನೀಡುವುದಾಗಿ ಹೇಳಿದೆ. ವಕ್ಫ್ ಆಸ್ತಿ ದುರ್ಬಳಕೆ ಗಮನಿಸಿಯೇ ಸರ್ಕಾರದಿಂದ ಕಾನೂನು ಮಾಡಲಾಗಿದ್ದು,ವಕ್ಫ್ ಜಾಗ ಕಬಳಿಕೆಗೆ ಸರ್ಕಾರ ಮುಂದಾಗಿಲ್ಲ ಎಂಬುದನ್ನು ಸುಪ್ರೀಂಕೋರ್ಟ್ ಇದೇ ವೇಳೆ ಸ್ಪಷ್ಟಪಡಿಸಿದೆ. ಜೊತೆಗೆ ತಾನು ಪ್ರಸಕ್ತ ನೀಡಿರುವ ತಡೆ ಮಧ್ಯಂತರದ ಕ್ರಮ. ಇದರಿಂದ ಪ್ರಕರಣದ ಕುರಿತ ಮುಂದಿನ ವಿಚಾರಣೆಗಳ ವೇಳೆ ಪ್ರಕರಣದ ಉಭಯ ಪಕ್ಷಗಳಿಗೆ ತಮ್ಮ ವಾದ ಮಂಡನೆಗೆ ಯಾವುದೇ ಅಡ್ಡಿ ಇಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

10:25 PM (IST) Sep 16
Witness Recounts Sanvi Heartbreaking Last Word ಬೀದರ್ನಲ್ಲಿ 7 ವರ್ಷದ ಸಾನ್ವಿಳ ಸಾವು ಆಕಸ್ಮಿಕ ಎಂದು ಭಾವಿಸಲಾಗಿತ್ತು, ಆದರೆ ಇದು ಮಲತಾಯಿ ರಾಧಾ ನಡೆಸಿದ ಕೊಲೆ ಎಂದು ಸಿಸಿಟಿವಿ ದೃಶ್ಯಗಳಿಂದ ಬಯಲಾಗಿದೆ.
09:46 PM (IST) Sep 16
ಪ್ರಧಾನಿ ನರೇಂದ್ರ ಮೋದಿಯವರ 75ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ರಾಜಕೀಯ ಸಾಧನೆಗಳು ಮತ್ತು ವಿಕಸಿತ ಭಾರತದ ಗುರಿಯನ್ನು ಸ್ಮರಿಸಲಾಗಿದೆ. ಖ್ಯಾತ ಜ್ಯೋತಿಷಿಯೊಬ್ಬರು ಮೋದಿಯವರ ಹಿಂದಿನ ಜನ್ಮದ ಬಗ್ಗೆ ಅಚ್ಚರಿಯ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
08:48 PM (IST) Sep 16
10 ಬ್ಲಾಕ್ಬಾಸ್ಟರ್ ಸೂಪರ್ ಹಿಟ್ ಸಿನಿಮಾ: ಅತಿ ಹೆಚ್ಚು ಕಲೆಕ್ಷನ್ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಇಲ್ಲಿದೆ. ಬಾಲಿವುಡ್, ಸ್ಯಾಂಡಲ್ವುಡ್, ಟಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗಗಳ ಯಾವ ಚಿತ್ರಗಳು ಕಡಿಮೆ ಬಜೆಟ್ನಲ್ಲಿ ನೂರಾರು ಕೋಟಿ ಗಳಿಸಿವೆ ಎಂಬುದರ ಸಂಪೂರ್ಣ ಮಾಹಿತಿ ನೀಡಲಾಗಿದೆ.
08:46 PM (IST) Sep 16
Lesbian Couple in Bigg Boss ಬಿಗ್ ಬಾಸ್ ಮಲಯಾಳಂ 7ನೇ ಸೀಸನ್ಗೆ ಲೆಸ್ಬಿಯನ್ ಜೋಡಿ ಅಧಿಲಾ ನಸಾರಿನ್ ಮತ್ತು ಫಾತಿಮಾ ನೂರಾ ಪ್ರವೇಶಿಸಿದ್ದಾರೆ. ಸಾಮಾಜಿಕ ವಿರೋಧದ ನಡುವೆ ತಮ್ಮ ಸಂಬಂಧವನ್ನು ಉಳಿಸಿಕೊಳ್ಳಲು ದೊಡ್ಡ ಕಾನೂನು ಹೋರಾಟವನ್ನೇ ಈ ಜೋಡಿ ನಡೆಸಿತ್ತು.
08:39 PM (IST) Sep 16
ವಿವಾಹಿತ ಪುರುಷನೊಂದಿಗೆ ವಯಸ್ಕ ಮಹಿಳೆ ವಾಸಿಸುವುದನ್ನು ತಡೆಯುವ ಯಾವುದೇ ಕಾನೂನು ಇಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮಹಿಳೆಯು ತನ್ನ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಹಕ್ಕನ್ನು ಹೊಂದಿದ್ದಾಳೆ ಮತ್ತು ನೈತಿಕತೆಯ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದೆ
07:45 PM (IST) Sep 16
Chirag Paswan Warning For BJP: ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದ ಕ್ಷೇತ್ರ ಹಂಚಿಕೆ ಕಗ್ಗಂಟಾಗಿದೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಮ್ಮ ಲೋಕ ಜನಶಕ್ತಿ ಪಕ್ಷಕ್ಕೆ ಹೆಚ್ಚಿನ ಹಾಗೂ ಗುಣಮಟ್ಟದ ಕ್ಷೇತ್ರಗಳನ್ನು ಕೇಳುತ್ತಿದ್ದಾರೆ
06:57 PM (IST) Sep 16
Ramesh Prabhu Gameskraft ಗೇಮ್ಸ್ಕ್ರಾಫ್ಟ್ ಟೆಕ್ನಾಲಜೀಸ್ನ ಹಿಂದಿನ ಗ್ರೂಪ್ ಸಿಎಫ್ಒ ರಮೇಶ್ ಪ್ರಭು ತಪ್ಪೊಪ್ಪಿಗೆಯ ನಂತರ, ಕಂಪನಿಯು ವಿವರವಾದ ತನಿಖೆ ನಡೆಸಿ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ. ಪ್ರಭು ಅವರು ಇಮೇಲ್ ಕಳುಹಿಸಿದ ನಂತರ ನಾಪತ್ತೆಯಾಗಿದ್ದಾರೆ.
06:12 PM (IST) Sep 16
JeM Commander Admits Masood Family Shattered ಆಪರೇಷನ್ ಸಿಂದೂರ್ ಅಡಿಯಲ್ಲಿ ಬಹಾವಲ್ಪುರದಲ್ಲಿ ನಡೆದ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಛಿದ್ರವಾಗಿದೆ ಎಂದು ಜೆಇಎಂ ಕಮಾಂಡರ್ ಒಪ್ಪಿಕೊಂಡಿದ್ದಾನೆ.
05:32 PM (IST) Sep 16
Brain Eating Amoeba: ಕೇರಳದಲ್ಲಿ ಅಪರೂಪದ ಮತ್ತು ಮಾರಣಾಂತಿಕವಾದ 'ಮಿದುಳು ತಿನ್ನುವ ಅಮಿಬಾ' (ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್) ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ವರ್ಷ ಈಗಾಗಲೇ 18 ಜನರು ಈ ಸೋಂಕಿಗೆ ಬಲಿಯಾಗಿದ್ದು, 67 ಪ್ರಕರಣಗಳು ದೃಢಪಟ್ಟಿವೆ.
05:08 PM (IST) Sep 16
Apollo Tyres Replaces Dream11, Wins Team India Jersey Sponsorship for ₹579 Crore ಆನ್ಲೈನ್ ಗೇಮಿಂಗ್ ಕಂಪನಿ ಡ್ರೀಮ್ 11 ಜೊತೆಗಿನ ಒಪ್ಪಂದ ಅಂತ್ಯಗೊಂಡ ಬಳಿಕ, ಬಿಸಿಸಿಐ ಭಾರತೀಯ ತಂಡದ ಜೆರ್ಸಿ ಪ್ರಾಯೋಜಕತ್ವಕ್ಕಾಗಿ ಅಪೊಲೊ ಟೈರ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ.
04:34 PM (IST) Sep 16
Huma Qureshi Engaged to Boyfriend Rachit Singh ತಮ್ಮ ದೀರ್ಘಕಾಲದ ಗೆಳೆಯ ಆಕ್ಟಿಂಗ್ ಕೋಚ್ ರಚಿತ್ ಸಿಂಗ್ ಅವರ ಜೊತೆ ಬಾಲಿವುಡ್ ನಟಿ ತಮ್ಮ 40ನೇ ವರ್ಷದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
04:30 PM (IST) Sep 16
Stranger House Party: 'ಸ್ಟ್ರೇಂಜರ್ ಹೌಸ್ ಪಾರ್ಟಿ' ಆಯೋಜನೆಗೆ ಸಂಬಂಧಿಸಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ವೈರಲ್ ಆದ ನಂತರ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಗೋವಾದಲ್ಲೂ ಇದೇ ರೀತಿಯ ಘಟನೆ ವರದಿಯಾಗಿದೆ.
03:47 PM (IST) Sep 16
ನೀರಿನಿಂದಲ್ಲ ಬಿಯರ್ನಿಂದ ಸ್ನಾನ: ಯುರೋಪ್ನಲ್ಲಿ ಬಿಯರ್ ಸ್ಪಾ ಎಂಬ ಹೊಸ ಟ್ರೆಂಡ್ ಜನಪ್ರಿಯವಾಗುತ್ತಿದೆ. ಇದರಲ್ಲಿ ಜನರು ಬಿಯರ್ ತುಂಬಿದ ಟಬ್ನಲ್ಲಿ ಸ್ನಾನ ಮಾಡುತ್ತಾರೆ, ಇದು ಚರ್ಮದ ಆರೋಗ್ಯ ಮತ್ತು ಮಾನಸಿಕ ವಿಶ್ರಾಂತಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.
03:20 PM (IST) Sep 16
ACS Nupur Bora Arrested:ಕೆಲಸಕ್ಕೆ ಸೇರಿದ ಕೇವಲ ಆರು ವರ್ಷದಲ್ಲಿ ಲಕ್ಷಾಂತರ ರೂ ಹಣ ಆಸ್ತಿ ಮಾಡಿಕೊಂಡಿದ್ದ ಅಸ್ಸಾಂ ನಾಗರಿಕ ಸೇವಾ ಅಧಿಕಾರಿ ನೂಪುರ್ ಬೋರಾ ಅವರನ್ನು ವಿಶೇಷ ಜಾಗೃತ ದಳ ಬಂಧಿಸಿದೆ.
01:44 PM (IST) Sep 16
Virat Kohli and Chris Gayle in Udupi: ಉಡುಪಿಯ ಶ್ರೀಕೃಷ್ಣಾಷ್ಟಮಿ ಸಂಭ್ರಮದಲ್ಲಿ, ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಅವರ ವೇಷಧಾರಿಗಳು ಆರ್ಸಿಬಿ ಜೆರ್ಸಿ ಧರಿಸಿ, ಐಪಿಎಲ್ ಕಪ್ ಹಿಡಿದು ಕಾಣಿಸಿಕೊಂಡು ಎಲ್ಲರನ್ನೂ ರಂಜಿಸಿದರು.
12:26 PM (IST) Sep 16
Israel Intensified Airstrikes: ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಇಸ್ರೇಲ್ಗೆ ಸಂಪೂರ್ಣ ಬೆಂಬಲ ಘೋಷಿಸಿದ ನಂತರ, ಇಸ್ರೇಲ್ ಗಾಜಾದ ಮೇಲೆ ತನ್ನ ದಾಳಿಯನ್ನು ತೀವ್ರಗೊಳಿಸಿದೆ. ಈ ದಾಳಿಯಿಂದಾಗಿ ಅಲ್ಲಿನ, ನಾಗರಿಕರು ಇಸ್ರೇಲ್- ಹಮಾಸ್ ನಡುವೆ ಸಿಲುಕಿ ನರಳುತ್ತಿದ್ದಾರೆ.
11:11 AM (IST) Sep 16
Gold RateToday: ಚಿನ್ನದ ದರವು ನಿರಂತರವಾಗಿ ಏರಿಕೆಯಾಗುತ್ತಿದ್ದು, ಹೂಡಿಕೆಯಾಗಿ ಪರಿಗಣಿಸಲ್ಪಟ್ಟಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಈ ಲೇಖನದಲ್ಲಿ 24, 22, ಮತ್ತು 18 ಕ್ಯಾರೆಟ್ ಚಿನ್ನದ ಇಂದಿನ ದರ ಹಾಗೂ ಪ್ರಮುಖ ನಗರಗಳಲ್ಲಿನ ಬೆಲೆ ಮತ್ತು ಬೆಳ್ಳಿಯ ದರವನ್ನು ನೀಡಲಾಗಿದೆ.
09:21 AM (IST) Sep 16
Uttarakhand Cloudburst: ಡೆಹ್ರಾಡೂನ್ನಲ್ಲಿ ಸಂಭವಿಸಿದ ಮೇಘಸ್ಫೋಟದಿಂದಾಗಿ ತಮ್ಸಾ ನದಿ ಉಕ್ಕಿ ಹರಿದು, ಐತಿಹಾಸಿಕ ತಪಕೇಶ್ವರ ಮಹಾದೇವ ದೇಗುಲ ಜಲಾವೃತವಾಗಿದೆ. ಸಹಸ್ರಧಾರ ಸೇರಿದಂತೆ ಹಲವೆಡೆ ಭಾರೀ ಹಾನಿಯಾಗಿದ್ದು, ಅನೇಕರು ನಾಪತ್ತೆಯಾಗಿದ್ದಾರೆ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
07:30 AM (IST) Sep 16
ಮುಂದಿನ ಎರಡು ದಿನ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ, ಯುಪಿಐ ದೈನಂದಿನ ವಹಿವಾಟಿನ ಮಿತಿ ₹10 ಲಕ್ಷಕ್ಕೆ ಏರಿಕೆ, ನೌಕಾಪಡೆಗೆ ಜಲಾಂತರ್ಗಾಮಿ ವಿರೋಧಿ ಯುದ್ಧನೌಕೆ 'ಆ್ಯನ್ಡ್ರೋಟ್' ಸೇರ್ಪಡೆ, ಎಐ ಕಂಟೆಂಟ್ ರಚನೆಕಾರರಿಗೆ ನೋಂದಣಿ ಕಡ್ಡಾಯಗೊಳಿಸಲು ಸಂಸದೀಯ ಸಮಿತಿ ಶಿಫಾರಸು ಇಂದಿನ ಪ್ರಮುಖ ಸುದ್ದಿಗಳು