Published : Sep 22, 2025, 06:46 AM ISTUpdated : Sep 22, 2025, 11:05 PM IST

India Latest News Live: ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಅಫ್ಘಾನ್ ಬಾಲಕ, ಬದುಕುಳಿದಿದ್ದೇ ಪವಾಡ

ಸಾರಾಂಶ

ನವರಾತ್ರಿ ಆರಂಭದ ಮೊದಲ ದಿನವೇ ದೇಶದ ಜನತೆಗೆ ಡಬಲ್‌ ಧಮಾಕಾ ಸಿಕ್ಕಿದ್ದು, ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಸೋಮವಾರದಿಂದ ಜಾರಿಗೆ ಬಂದಿದೆ. ಪರಿಣಾಮ ಜನ ಸಾಮಾನ್ಯರಿಗೆ 375 ಉತ್ಪನ್ನಗಳು ಮತ್ತಷ್ಟು ಅಗ್ಗಕ್ಕೆ ದೊರೆಯಲಿವೆ. ಸರ್ಕಾರ ಸೆ.22ರಿಂದ ಜಿಎಸ್ಟಿ ಜಾರಿಗೆ ಬರಲಿದೆ ಎಂದು ಇದೇ ತಿಂಗಳ 3 ರಂದು ಘೋಷಿಸಿತ್ತು. ಇದರ ಅನ್ವಯ ಎರಡು ಸ್ತರದಲ್ಲಿ ಹಿಂದಿದ್ದ ಶೇ.5, ಶೇ.15, ಶೇ.18 ಹಾಗೂ ಶೇ.28ಗಳನ್ನು ಬದಲಿಸಿ ಕೇವಲ ಶೇ. 5 ಹಾಗೂ ಶೇ.18ರ ಸ್ತರಕ್ಕೆ ಇಳಿಸಲಾಗಿದೆ. ಹೊಸ ನಿಯಮದ ಪ್ರಕಾರ ಶೇ.12ರಷ್ಟು ಜಿಎಸ್ಟಿ ಸ್ಲ್ಯಾಬ್‌ಗೆ ಒಳಪಟ್ಟಿದ್ದ ಶೇ.99 ಸರಕುಗಳು ಸೋಮವಾರದಿಂದ ಶೇ.5ರಷ್ಟಕ್ಕೆ ಇಳಿಯಲಿದೆ. ಇನ್ನು ಶೇ.28ರಷ್ಟು ತೆರಿಗೆಗೆ ಒಳಪಡುತ್ತಿದ್ದ ಉತ್ಪನ್ನಗಳು ಶೇ.18ರ ವ್ಯಾಪ್ತಿಗೆ ಬರಲಿದೆ. ಆದರೆ ಸಿಗರೇಟಿನಂಥ ಅಪಾಯಕಾರಿ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಶೇ.40ಕ್ಕೆ ಹೆಚ್ಚಿಸಲಾಗಿದೆ.

 flight

11:05 PM (IST) Sep 22

ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಅಫ್ಘಾನ್ ಬಾಲಕ, ಬದುಕುಳಿದಿದ್ದೇ ಪವಾಡ

ವಿಮಾನದ ಚಕ್ರದ ಬಳಿ ಅಡಗಿ ಕುಳಿತು ದೆಹಲಿಗೆ ಬಂದಿಳಿದ ಅಫ್ಘಾನ್ ಬಾಲಕ, ಬದುಕುಳಿದಿದ್ದೇ ಪವಾಡ, ಕಾಬೂಲ್‌ನಿಂದ ದೆಹಲಿಗೆ 94 ನಿಮಿಷಗಳ ಪ್ರಯಾಣ ಮಾಡಿದ್ದಾನೆ. ವೇಗ, ಗಾಳಿ, ಹವಾಮಾನ ಸೇರಿದಂತೆ ಅತ್ಯಂತ್ಯ ಪ್ರತಿಕೂಲ ಸ್ಥಿತಿಯಲ್ಲಿ 13 ವರ್ಷದ ಬಾಲಕ ಬದುಕುಳಿದಿದ್ದೇ ಹಲವರ ಅಚ್ಚರಿಗೆ ಕಾರಣವಾಗಿದೆ.

Read Full Story

10:47 PM (IST) Sep 22

10ನೇ ಕ್ಲಾಸ್ ಫೇಲ್, ಆದ್ರೆ 3 ಬಾರಿ ಸಿವಿಲ್ಸ್ ಪಾಸ್ ಮಾಡಿ IPS ಆದ್ರು.. ಇದಲ್ವಾ ಯಶಸ್ಸು!

10ನೇ ತರಗತಿಯಲ್ಲಿ ಫೇಲ್ ಆಗಿದ್ದ ರಾಜಸ್ಥಾನದ ಈಶ್ವರ್ ಗುರ್ಜರ್, ತಂದೆಯ ಪ್ರೋತ್ಸಾಹದಿಂದ ಮತ್ತೆ ಓದು ಮುಂದುವರೆಸಿದರು. ಶಿಕ್ಷಕರಾಗಿ ಕೆಲಸ ಮಾಡುತ್ತಲೇ UPSC ಪರೀಕ್ಷೆಗೆ ತಯಾರಿ ನಡೆಸಿ, ಸತತ ಪ್ರಯತ್ನಗಳ ನಂತರ IPS ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
Read Full Story

10:17 PM (IST) Sep 22

ತಿರುಪತಿಯಲ್ಲಿ ಭಕ್ತರ ಪರಿಸ್ಥಿತಿ ಇಷ್ಟೊಂದು ಭೀಕರವಾಗಿದೆಯೇ? ಸತ್ಯ ಬಿಚ್ಚಿಟ್ಟ ಬೆಂಗಳೂರಿನ ವ್ಯಕ್ತಿ

ಬೆಂಗಳೂರಿನ ಭಕ್ತರೊಬ್ಬರು ತಮ್ಮ ತಿರುಪತಿ ಯಾತ್ರೆಯಲ್ಲಿ ಎದುರಿಸಿದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ತಿರುಮಲಕ್ಕೆ ಬರುವ ಇತರ ಭಕ್ತರಿಗೆ ಜಾಗರೂಕರಾಗಿರಲು ಎಚ್ಚರಿಕೆ ನೀಡಿದ್ದಾರೆ.

Read Full Story

09:00 PM (IST) Sep 22

ಹೆಚ್‌ 1B ವೀಸಾ ಆಘಾತ - ಟೆಕ್ಕಿಗಳನ್ನು ಭಾರತಕ್ಕೆ ಮರಳಲು ಸಲಹೆ ನೀಡಿದ ಜೊಹೊ ಸಂಸ್ಥಾಪಕ

ಅಮೆರಿಕದ H-1B ವೀಸಾ ಶುಲ್ಕದಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ, ಜೊಹೊ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಅಮೆರಿಕದಲ್ಲಿರುವ ಭಾರತೀಯ ತಂತ್ರಜ್ಞರಿಗೆ ಭಾರತಕ್ಕೆ ಮರಳಲು ಕರೆ ನೀಡಿದ್ದಾರೆ. ಭಾರತದಲ್ಲಿ ಬೆಳೆಯುತ್ತಿರುವ ಅವಕಾಶಗಳನ್ನು ಬಳಸಿಕೊಂಡು ಯಶಸ್ವಿಯಾಗಲು ಅವರು ಸಲಹೆ ನೀಡಿದ್ದಾರೆ.

Read Full Story

08:57 PM (IST) Sep 22

ಹ್ಯಾರಿಸ್ ರೌಫ್ ಬಳಿಕ ಭಾರತ ಅಣಕಿಸಿದ ಪಾಕ್ ಫುಟ್ಬಾಲ್ ಪಟು, ಭುಗಿಲೆದ್ದೆ ಆಕ್ರೋಶ

ಹ್ಯಾರಿಸ್ ರೌಫ್ ಬಳಿಕ ಭಾರತ ಅಣಕಿಸಿದ ಪಾಕ್ ಫುಟ್ಬಾಲ್ ಪಟು, ಭುಗಿಲೆದ್ದೆ ಆಕ್ರೋಶ, ಕ್ರಿಕೆಟ್ ಬಳಿಕ ಫುಟ್ಬಾಲ್ ಪಂದ್ಯದಲ್ಲೂ ನೀಚ ಬುದ್ದಿಯನ್ನು ಪಾಕ್ ಆಟಗಾರರು ತೋರಿದ್ದಾರೆ. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿದ್ದು, ಎಲ್ಲಾ ಪಂದ್ಯ ರದ್ದುಗೊಳಿಸಲು ಆಗ್ರಹ ಕೇಳಿಬರುತ್ತಿದೆ.

 

Read Full Story

08:10 PM (IST) Sep 22

ಬಾಡಿಗೆ ಮನೆಯಲ್ಲಿರುವಾಕೆಗೆ ಅಶ್ಲೀಲ ಸಿಡಿ ಕಲಕ್ಷೆನ್ ತೋರಿಸಿದ ಮಾಲೀಕ, ನೋವು ಹೇಳಿಕೊಂಡ ಯುವತಿ

ಬಾಡಿಗೆ ಮನೆಯಲ್ಲಿರುವಾಕೆಗೆ ಅಶ್ಲೀಲ ಸಿಡಿ ಕಲಕ್ಷೆನ್ ತೋರಿಸಿದ ಮಾಲೀಕ,ನೋವು ಹೇಳಿಕೊಂಡ ಯುವತಿ, ನಡೆದ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಲಹೆ ಕೇಳಿದ್ದಾರೆ. ತನಗಾಗುತ್ತಿರುವ ಹಿಂಸೆಯನ್ನು ಹೇಳಿಕೊಂಡಿದ್ದಾಳೆ.

 

Read Full Story

06:32 PM (IST) Sep 22

Asia Cup 2025 - ಭಾರತ-ಪಾಕಿಸ್ತಾನ ನಡುವೆ ಮೂರನೇ ಸಲ ಫೈಟ್? ಫೈನಲ್‌ನಲ್ಲಿ ಮತ್ತೆ ಫೈಟ್?

ಏಷ್ಯಾಕಪ್‌ನಲ್ಲಿ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿರುವ ಭಾರತ, ಫೈನಲ್‌ನಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುವ ನಿರೀಕ್ಷೆ ಹೆಚ್ಚಾಗಿದೆ.  

Read Full Story

06:17 PM (IST) Sep 22

ನವರಾತ್ರಿ ಸಮಯದಲ್ಲಿ ಈ ಚಿಕ್ಕ ಕೆಲಸ ಮಾಡಿದ್ರೆ ನಿಮ್ಮ ಜೀವನ ಮಾಲಾಮಾಲ್! ಇಲ್ಲಿದೆ ನೋಡಿ ಸಿಂಪಲ್​ ಟಿಪ್ಸ್​...

ಸೆಪ್ಟೆಂಬರ್ 22 ರಿಂದ ಆರಂಭವಾಗುವ ನವರಾತ್ರಿ ಹಬ್ಬವು ಈ ಬಾರಿ 10 ದಿನಗಳ ಕಾಲ ನಡೆಯಲಿದ್ದು, ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸಲಾಗುತ್ತದೆ. ಖ್ಯಾತ ಜ್ಯೋತಿಷಿಯೊಬ್ಬರ ಪ್ರಕಾರ, ಈ ಸಮಯದಲ್ಲಿ ಪತ್ನಿಗೆ ಚಿಕ್ಕ ಉಡುಗೊರೆ ನೀಡುವುದರಿಂದ ಜೀವನದಲ್ಲಿ ಹಣದ ಕೊರತೆ ನೀಗಿ, ಸಂತೋಷ ನೆಲೆಸುತ್ತದೆ.
Read Full Story

06:06 PM (IST) Sep 22

ಮದುವೆಯಾಗಿ ಜೊತೆಯಲ್ಲಿ ಇದ್ದಿದ್ದು ಒಂದೇ ವರ್ಷ, ಆದರೂ 5 ಕೋಟಿ ಜೀವನಾಂಶ ಕೇಳಿದ ಪತ್ನಿ - ಸುಪ್ರೀಂ ಕೋರ್ಟ್‌ ಛೀಮಾರಿ

Supreme Court Rebukes Wife for Demanding ₹5 Cr Alimony After One Year of Marriage ಕೇವಲ ಒಂದು ವರ್ಷದ ದಾಂಪತ್ಯವನ್ನು ಕೊನೆಗೊಳಿಸಲು ಪತ್ನಿ 5 ಕೋಟಿ ರೂಪಾಯಿ ಜೀವನಾಂಶ ಕೇಳಿದ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್‌ ಆಕೆಯ ಬೇಡಿಕೆಯನ್ನು ಅಸಮಂಜಸ ಎಂದು ಪರಿಗಣಿಸಿ ಕಠಿಣ ಎಚ್ಚರಿಕೆ ನೀಡಿದೆ.

Read Full Story

05:48 PM (IST) Sep 22

ತಿರುಪತಿ ಹುಂಡಿಯಿಂದ ಕದ್ದ 100 ಕೋಟಿ ಹೋಗಿದ್ದೆಲ್ಲಿಗೆ? CCTV ದೃಶ್ಯ ಬಿಡುಗಡೆ

ವೈ.ಎಸ್. ಜಗನ್ ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನದ ಹುಂಡಿಯಿಂದ 100 ಕೋಟಿ ರೂ.ಗೂ ಅಧಿಕ ಹಣ ಕಳ್ಳತನವಾಗಿದೆ ಎಂದು ಬಿಜೆಪಿ ನಾಯಕ ಭಾನು ಪ್ರಕಾಶ್ ರೆಡ್ಡಿ ಆರೋಪಿಸಿದ್ದಾರೆ. ಈ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ, ಜಗನ್ ನಿವಾಸಕ್ಕೆ ಕಳುಹಿಸಲಾಗಿದೆ ಎಂದು ದೂರಿದ್ದಾರೆ.

Read Full Story

04:54 PM (IST) Sep 22

ಭಾರಿ ಇಳಿಕೆ ಕಂಡ ಟಾಟಾ ಪಂಚ್, ಮಾರುತಿ ಫ್ರಾಂಕ್ಸ್ ಸೇರಿ ಸಣ್ಣ ಕಾರು ಬೆಲೆ, ಜೊತೆಗೆ ಹಬ್ಬದ ಆಫರ್

ಭಾರಿ ಇಳಿಕೆ ಕಂಡ ಟಾಟಾ ಪಂಚ್, ಮಾರುತಿ ಫ್ರಾಂಕ್ಸ್ ಸೇರಿ ಸಣ್ಣ ಕಾರು ಬೆಲೆ, ಜೊತೆಗೆ ಹಬ್ಬದ ಆಫರ್, ಗ್ರಾಹಕರ ಸಂಭ್ರಮಕ್ಕೆ ಕಾರಣವಾಗಿದೆ. ಜಿಎಸ್‌ಟಿ ಪರಿಷ್ಕರಣೆಯಿಂದ ಸಣ್ಣ ಕಾರುಗಳ ಬೆಲೆ ಭಾರಿ ಇಳಿಕೆಯಾಗಿದೆ. ಜೊತೆಗೆ ಹಬ್ಬದ ಆಫರ್ ಕೂಡ ಇದೆ. ಹೀಗಾಗಿ ಖರೀದಿಗೆ ಇದೂ ಸೂಕ್ತ ಸಮಯವಾಗಿದೆ. 

Read Full Story

04:17 PM (IST) Sep 22

Asia Cup 2025 - ಭಾರತ ಎದುರು ಸೋತ ಪಾಕಿಸ್ತಾನಕ್ಕೆ ಈಗಲೂ ಇದೆ ಫೈನಲ್‌ಗೇರೋ ಚಾನ್ಸ್!

2025ರ ಏಷ್ಯಾಕಪ್ ಸೂಪರ್-4 ಹಂತದಲ್ಲಿ ಭಾರತದೆದುರು ಸೋತರೂ ಪಾಕಿಸ್ತಾನಕ್ಕೆ ಫೈನಲ್‌ಗೇರುವ ಅವಕಾಶ ಇನ್ನೂ ಇದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶದ ವಿರುದ್ಧದ ಮುಂದಿನ ಪಂದ್ಯಗಳನ್ನು ಗೆಲ್ಲುವುದು ಪಾಕ್‌ಗೆ ನಿರ್ಣಾಯಕವಾಗಿದೆ. ಇತ್ತ, ಟೀಂ ಇಂಡಿಯಾ ಫೈನಲ್ ಪ್ರವೇಶಿಸಲು ಇನ್ನೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
Read Full Story

04:04 PM (IST) Sep 22

ತನ್ನದೇ ಜನರ ಮೇಲೆ ಏರ್‌ಸ್ಟ್ರೈಕ್‌ ಮಾಡಿ 30 ಜನರ ಕೊಂದ ಪಾಕಿಸ್ತಾನ ಏರ್‌ಪೋರ್ಸ್‌!

Pakistan Air Force Airstrike Kills 30 Civilians in Tribal Village ಪಾಕಿಸ್ತಾನ ವಾಯುಪಡೆಯು ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಗ್ರಾಮವೊಂದರ ಮೇಲೆ ಬಾಂಬ್ ದಾಳಿ ನಡೆಸಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ. 

Read Full Story

03:57 PM (IST) Sep 22

ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ

ಯಾರೋ ಮಾತಿಗೆ ಹಿಂದೂಗಳು ಮಾಂಸಾಹಾರ ಬಿಡ್ತೀರಾ, ನವರಾತ್ರಿ ವೇಳೆ ಕಾಂಗ್ರೆಸ್ ನಾಯಕ ವಿವಾದ, ನವರಾತ್ರಿ ವೇಳೆ ಮಾಂಸಾಹಾರ ಬ್ಯಾನ್ ಮಾಡುವ ಆಗ್ರಹಕ್ಕೆ ಕಾಂಗ್ರೆಸ್ ನಾಯಕ ಉದಿತ್ ರಾಜ್ ವಿವಾದಿತ ಹೇಳಿಕೆ ನೀಡಿದ್ದಾರೆ.

Read Full Story

03:43 PM (IST) Sep 22

ರೈಲ್ವೆಯ ಪ್ರತಿಷ್ಠಿತ ಎಸಿ ಕೋಚಲ್ಲಿ ಬೆಡ್‌ಶೀಟ್ ಕದ್ದು ಬ್ಯಾಗ್‌ಗೆ ತುಂಬಿಸಿ ಸಿಕ್ಕಿಬಿದ್ದ ಕುಟುಂಬ - ವೀಡಿಯೋ

ದೆಹಲಿ-ಒಡಿಶಾ ಪುರುಷೋತ್ತಮ್ ಎಕ್ಸ್‌ಪ್ರೆಸ್ ರೈಲಿನ ಫಸ್ಟ್ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದು, ಬೆಡ್‌ಶೀಟ್‌ ಮತ್ತು ಟವೆಲ್‌ಗಳನ್ನು ಕದಿಯಲು ಯತ್ನಿಸಿ ಸಿಕ್ಕಿಬಿದ್ದಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

02:27 PM (IST) Sep 22

135 ನಿಮಿಷದ ಹಾರರ್ ಸಿನಿಮಾ 16 ದಿನದಲ್ಲಿ ಗಳಿಸಿದ್ದು 3140 ಕೋಟಿ; ಭಾರತದಲ್ಲಿಯೂ ರಿಲೀಸ್ ಆಗಿದೆ!

ಇದು ಈ ಫ್ರಾಂಚೈಸಿಯ ಕೊನೆ ಚಿತ್ರ: ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಂಡಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು 15 ದಿನಗಳಲ್ಲಿ 3140 ಕೋಟಿ ಗಳಿಸಿದೆ.

Read Full Story

02:00 PM (IST) Sep 22

ಮಿಲಿಯನ್ ವೀವ್ಸ್‌ ಗಳಿಸಿದ ರೀಲ್ಸ್ ನೋಡಿ ಮನೆಗೆ ಬಂದ ಪೊಲೀಸರು - ಸಾಯುವುದಾಗಿ ಚಾಕು ಹಿಡಿದು ಬೆದರಿಸಿದ ಯುವತಿ

UP Police vs Influencer: ಯುವತಿಯೊಬ್ಬಳು ಪೊಲೀಸ್ ಠಾಣೆಯ ಮುಂದೆ  ರೀಲ್ಸ್ ಮಾಡಿದ್ದಳು ಲಕ್ಷಾಂತರ ವೀವ್ಸ್ ಪಡೆದ ಈ ವಿಡಿಯೋವನ್ನು ಡಿಲೀಟ್ ಮಾಡುವಂತೆ ಪೊಲೀಸರು ಸೂಚಿಸಿದಾಗ, ಆಕೆ ಪ್ರಾಣ ಬಿಡುತ್ತೇನೆ ಹೊರತು ರೀಲ್ಸ್ ಡಿಲೀಟ್ ಮಾಡುವುದಿಲ್ಲ ಎಂದು ಪೊಲೀಸರಿಗೆಯೇ ಧಮ್ಕಿ ಹಾಕಿದ್ದಾಳೆ.

Read Full Story

01:38 PM (IST) Sep 22

ಗುರು ಕಾಣಿಕೆ - ಯುವರಾಜ್ ಸಿಂಗ್ ದಾಖಲೆ ಮುರಿದ ಬಿಗ್ ಹಿಟ್ಟರ್ ಅಭಿಷೇಕ್ ಶರ್ಮಾ!

ಏಷ್ಯಾಕಪ್ ಸೂಪರ್-4 ಹಂತದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 6 ವಿಕೆಟ್‌ಗಳ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಅಭಿಷೇಕ್ ಶರ್ಮಾ, ಕೇವಲ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ತಮ್ಮ ಗುರು ಯುವರಾಜ್ ಸಿಂಗ್ ಅವರ ದಾಖಲೆಯನ್ನು ಮುರಿದರು.  

Read Full Story

01:26 PM (IST) Sep 22

ಪತ್ನಿ ಜೊತೆ ಹನಿಮೂನ್​ಗೆ ಹೋದ ಪತಿ ಫಸ್ಟ್​ ನೈಟ್​ ಮಾಡಿದ್ದು ಸ್ನೇಹಿತನ ಜೊತೆ! ಬೆಚ್ಚಿಬೀಳಿಸೋ ಸ್ಟೋರಿ ಇದು...

ಸಾಫ್ಟ್‌ವೇರ್ ಎಂಜಿನಿಯರ್‌ನನ್ನು ಮದುವೆಯಾದ ಯುವತಿಗೆ ಹನಿಮೂನ್‌ನಲ್ಲಿ ಆಘಾತ ಕಾದಿತ್ತು. ಪತಿಗೆ ಹೆಣ್ಣಿನ ಚಟವಿಲ್ಲ ಎಂದು ಖುಷಿಪಟ್ಟಿದ್ದ ಕುಟುಂಬಕ್ಕೆ, ಆತ ಸಲಿಂಗಕಾಮಿ ಎಂಬ ಸತ್ಯ ತಿಳಿದುಬಂದಿದೆ.  

Read Full Story

12:26 PM (IST) Sep 22

ಭಾರತದ್ದೇ ನೆಲದಲ್ಲಿರುವ ಈ ಹೊಟೇಲ್‌ಗೆ ಭಾರತೀಯರಿಗಿಲ್ಲ ಪ್ರವೇಶ...

ರಾಜಸ್ಥಾನದ ಜೋಧ್‌ಪುರದಲ್ಲಿರುವ ಡೈಲನ್ಸ್ ಕೆಫೆಯು, ಭಾರತೀಯ ಎಂಬ ಕಾರಣಕ್ಕೆ ಐಐಟಿ ವಿದ್ಯಾರ್ಥಿಯೊಬ್ಬರಿಗೆ ಪ್ರವೇಶ ನಿರಾಕರಿಸಿದೆ. ಕೇವಲ ವಿದೇಶಿಗರಿಗೆ ಮಾತ್ರ ಸೇವೆ ನೀಡುತ್ತೇವೆ ಎಂಬ ಹೊಟೇಲ್ ಮಾಲೀಕನ ಉದ್ಧಟತನದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 

Read Full Story

12:20 PM (IST) Sep 22

ಬಾಹ್ಯಾಕಾಶದಲ್ಲಿ ಭಾರತದ 'ಮಿಲಿಟರಿ' ಉಪಗ್ರಹಗಳಿಗೆ ಇನ್ಮುಂದೆ ಇರಲಿದೆ ಬಾಡಿಗಾರ್ಡ್ ಸ್ಯಾಟಲೈಟ್‌!

india to develop bodyguard satellites ನೆರೆಯ ದೇಶದ ಉಪಗ್ರಹವೊಂದು ಢಿಕ್ಕಿಯಾಗುವ ಅಪಾಯದಿಂದ ಪಾರಾದ ನಂತರ, ಭಾರತ ತನ್ನ ಬಾಹ್ಯಾಕಾಶ ಆಸ್ತಿಗಳನ್ನು ರಕ್ಷಿಸಲು 'ಬಾಡಿಗಾರ್ಡ್' ಉಪಗ್ರಹಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದೆ.

Read Full Story

12:14 PM (IST) Sep 22

ಮುಂದಿನ ಚುನಾವಣೆಯಲ್ಲಿ ದೇಶದ ರಾಜಕೀಯದಲ್ಲಿ ಯಾರೂ ಊಹಿಸದ ಕುತೂಹಲ? ಏನಿದು Prediction?

ನರೇಂದ್ರ ಮೋದಿಯವರು ಇಂದಿರಾ ಗಾಂಧಿಯವರನ್ನು ಮೀರಿಸಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಎರಡನೇ ಪ್ರಧಾನಿಯಾಗಿದ್ದಾರೆ. 2029ರ ಚುನಾವಣೆಯಲ್ಲೂ ಗೆದ್ದು, ನೆಹರೂ ದಾಖಲೆ ಮುರಿದು, ನಂತರ ಯೋಗಿ ಆದಿತ್ಯನಾಥರಿಗೆ ಪ್ರಧಾನಿ ಪಟ್ಟ ಬಿಟ್ಟುಕೊಡಲಿದ್ದಾರೆ ಎಂದು ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ.
Read Full Story

12:03 PM (IST) Sep 22

'ನಾವು ಸೋತಿದ್ದು ಅಂಪೈರ್‌ನಿಂದ, ನಮಗೆ ಬೇರೆ ಪಿಚ್ ಬೇಕು' - ಶಾಕ್‌ನಲ್ಲಿ ಏನೇನೋ ಮಾತಾನಾಡಿದ ಪಾಕ್ ಕ್ಯಾಪ್ಟನ್

2025ರ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಮಣಿಸಿದೆ. ಈ ಸೋಲಿಗೆ ಪಾಕಿಸ್ತಾನದ ನಾಯಕ ಸಲ್ಮಾನ್ ಅಲಿ ಅಘಾ, ಪಿಚ್ ಸರಿಯಿರಲಿಲ್ಲ ಮತ್ತು ಅಂಪೈರ್ ತೀರ್ಪು ತಪ್ಪಾಗಿತ್ತು ಎಂದು ಹೊಸ ಕಾರಣಗಳನ್ನು ನೀಡಿದ್ದಾರೆ. 

Read Full Story

11:00 AM (IST) Sep 22

72ರ ವೃದ್ಧನ ಕೈ ಹಿಡಿದ 27ರ ಯುವತಿ - ಹಿಂದೂ ಸಂಪ್ರದಾಯದಂತೆ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ

ರಾಜಸ್ಥಾನದ ಜೋಧ್‌ಪುರದಲ್ಲಿ, 72 ವರ್ಷದ ಉಕ್ರೇನ್ ಮೂಲದ ಸ್ಟಾನಿಸ್ಲಾವ್ ಹಾಗೂ 27 ವರ್ಷದ ಅನ್ಹೆಲಿನಾ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ನಾಲ್ಕು ವರ್ಷಗಳ ಲಿವ್-ಇನ್ ಸಂಬಂಧದ ನಂತರ ಹಸೆಮಣೆ ಏರಿದ ಈ ಜೋಡಿಯ ವಯಸ್ಸಿನ ಅಂತರವು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
Read Full Story

10:05 AM (IST) Sep 22

ಏಷ್ಯಾಕಪ್ 2025 - ನಿನ್ನೆ ನಡೆದ ಭಾರತ-ಪಾಕ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?

ಏಷ್ಯಾಕಪ್ ಟಿ20 ಸೂಪರ್-4 ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಅಭಿಷೇಕ್ ಶರ್ಮಾ ಮತ್ತು ಗಿಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿದ್ದು, ಪಂದ್ಯದ ವೇಳೆ ಪಾಕ್ ಆಟಗಾರನ ಉದ್ಧಟತನದ ವರ್ತನೆ ಗಮನ ಸೆಳೆದವು.

Read Full Story

07:56 AM (IST) Sep 22

Top News Today - ಪಾಕ್ ಮೇಲೆ ಭಾರತದ ಮತ್ತೊಂದು ದಿಗ್ವಿಜಯ, ಇಂದು ನಾಡಹಬ್ಬಕ್ಕೆ ಚಾಲನೆ, ತಿರುಪತಿ ತಿಮ್ಮಪ್ಪನ ಹುಂಡಿಯಿಂದಲೇ ಹಣ ಕಳವು

Top News Today: ಏಷ್ಯಾಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿದೆ. ಇಂದು  ನಾಡಹಬ್ಬಕ್ಕೆ ಚಾಲನೆ ಸಿಗಲಿದೆ.,ಇತ್ತ ಪಂಚಮಸಾಲಿ ಪೀಠದಿಂದ ಸ್ವಾಮೀಜಿಯ ಉಚ್ಛಾಟನೆ, ಸುಳ್ಳು ಕೇಸಿನಲ್ಲಿ 8 ವರ್ಷ ಜೈಲಲ್ಲಿದ್ದ ಯುವಕನಿಗೆ ಹೈಕೋರ್ಟ್‌ನಿಂದ ಬಿಡುಗಡೆ ಹಲವು ಪ್ರಮುಖ ಸುದ್ದಿಗಳ ವಿವರ ಇಲ್ಲಿದೆ.

Read Full Story

More Trending News