ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ನೂತನವಾಗಿ ನೇಮಕವಾಗಿದ್ದ ಮಹಿಳಾ ವೈದ್ಯೆ ಡಾ। ನುಸ್ರತ್ರ ಹಿಜಾಬ್ ಎಳೆದಿದ್ದರು. ಅಂದಿನಿಮದ ತೀವ್ರ ಮಾನಸಿಕ ಒತ್ತಡದಲ್ಲಿ ಸಿಲುಕಿರುವ ನುಸ್ರತ್, ಕರ್ತವ್ಯಕ್ಕೆ ಹಾಜರಾಗಲು ಕೊನೆಯ ದಿನವಾಗಿದ್ದ ಶನಿವಾರ ಡ್ಯೂಟಿಗೆ ಗೈರಾಗಿದ್ದಾರೆ. ಈ ನಡುವೆ ನುಸ್ರತ್ಗೆ ಜಾರ್ಖಂಡ್ ಸರ್ಕಾರ ಆಫರ್ ನೀಡಿದೆ. ‘ನಮ್ಮಲ್ಲಿ ನುಸ್ರತ್ಗೆ 3 ಲಕ್ಷ ರು. ಮಾಸಿಕ ಸಂಬಳ, ಸರ್ಕಾರಿ ಫ್ಲಾಟ್ ಮತ್ತು ಅಪೇಕ್ಷಿತ ಹುದ್ದೆಯೊಂದಿಗೆ ಕೆಲಸ ನೀಡುತ್ತೇವೆ’ ಎಂದು ಜಾರ್ಖಂಡ್ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಹೇಳಿದ್ದಾರೆ.
11:51 PM (IST) Dec 21
ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು, ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶದಿಂದ ಬಿಜೆಪಿ ಸಂಭ್ರಮಾಚರಣೆ ನಡೆಸುತ್ತಿದ್ದರೆ ಇತ್ತ, ಭಾರಿ ಅಧಿಪತ್ಯ ಹೊಂದಿದ್ದ ಸೂರ್ಯವಂಶಿ ಕುಟುಂಬದ 6 ಸದಸ್ಯರು ಸೋಲುಂಡಿದ್ದಾರೆ.
11:07 PM (IST) Dec 21
ಹೊಸ ಅವತಾರದಲ್ಲಿ ರಶ್ಮಿಕಾ ಮಂದಣ್ಣ, ಮೈಸಾ ಆ್ಯಕ್ಷನ್ ಸಿನಿಮಾ ರಿಲೀಸ್ ಅಪ್ಡೇಟ್ ಕೊಟ್ಟ ನಟಿ, ಇದುವರೆಗೆ ತೆರೆ ಮೇಲೆ ನೋಡಿದ ರಶ್ಮಿಕಾ ಮಂದಣ್ಣಗಿಂತ ಮೈಸಾ ಸಿನಿಮಾದಲ್ಲಿನ ರಶ್ಮಿಕಾ ಭಾರಿ ಭಿನ್ನ. ಬುಡುಕಟ್ಟು ಸಮುದಾಯದ ಮಹಿಳೆಯ ಕತೆಯೊಂದಿಗೆ ರಶ್ಮಿಕಾ ಬರುತ್ತಿದ್ದಾರೆ.
10:13 PM (IST) Dec 21
ಬಿಜೆಪಿ ಮಹಾಯುತಿ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ, ಮಹಾರಾಷ್ಟ್ರದಲ್ಲಿ ಮಹಾಯುತಿ 214 ಸ್ಥಾನ ಗೆದ್ದಿದೆ. ಇದು ಇವಿಎಂ, ಚುನಾವಣಾ ಆಯೋಗದ ಕೃಪೆ ಎಂದು ಕಾಂಗ್ರೆಸ್ ಸೇರಿ ವಿಪಕ್ಷ ಆರೋಪಿಸಿದೆ.
09:21 PM (IST) Dec 21
ಉಡುದಾರ, ಶಿವನ ಟಿ ಶರ್ಟ್ ಧರಿಸಿದ ಕಾರಣ ಬಾಂಗ್ಲಾದೇಶದಲ್ಲಿ ಮತ್ತೊಬ್ಬ ಹಿಂದೂ ಮೇಲೆ ಭೀಕರ ದಾಳಿ, ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸೆಯಲ್ಲಿ ಹಿಂದೂಗಳನ್ನೇ ಟಾರ್ಗೆಟ್ ಮಾಡಲಾಗಿದೆ. ದೀಪು ಚಂದ್ರದಾಸ್ ಬಡಿದು ಕೊಂದ ಬೆನ್ನಲ್ಲೇ ಇದೀಗ ಮತ್ತೊಬ್ಬ ಹಿಂದೂ ಮೇಲೆ ದಾಳಿಯಾಗಿದೆ.
08:08 PM (IST) Dec 21
ನಿಧಿ ಅಗರ್ವಾಲ್ ಬೆನ್ನಲ್ಲೇ ನಟಿ ಸಮಂತಾಗೆ ಮೇಲೆ ಮುಗಿ ಬಿದ್ದ ಫ್ಯಾನ್ಸ್, ಹುಚ್ಚಾಟದ ದೃಶ್ಯ ಸೆರೆ, ಈ ಘಟನೆ ಕೂಡ ಹೈದರಾಬಾದ್ನಲ್ಲಿ ನಡೆದಿದೆ. ಬೌನ್ಸರ್, ಪೊಲೀಸರು ಇದ್ದರೂ ಅಭಿಮಾನಿಗಳು ಅತೀರೇಖದ ವರ್ತನೆಯಿಂದ ನಟಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
08:05 PM (IST) Dec 21
ಪೋಷಕರ ಇಚ್ಛೆಗೆ ವಿರುದ್ಧವಾಗಿ ಅನ್ಯ ಧರ್ಮದವರನ್ನು ಮದುವೆಯಾದ ಮಗಳನ್ನು, ತಂದೆಯು ತನ್ನ ಸ್ವಯಾರ್ಜಿತ ಆಸ್ತಿಯಿಂದ ಹೊರಗಿಟ್ಟ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸ್ವಯಾರ್ಜಿತ ಆಸ್ತಿಯನ್ನು ಯಾರಿಗೆ ನೀಡಬೇಕೆಂಬುದು ತಂದೆಯ ಇಚ್ಛೆಗೆ ಬಿಟ್ಟ ವಿಚಾರವಾಗಿದೆ ಎಂದಿದೆ.
07:04 PM (IST) Dec 21
ಸೋನಿಯಾ ಗಾಂಧಿ ತ್ಯಾಗದಿಂದ ಮಾತ್ರ ನಾವು ಕ್ರಿಸ್ಮಸ್ ಆಚರಿಸಲು ಸಾಧ್ಯವಾಗಿದೆ, ರೇವಂತ್ ರೆಡ್ಡಿ ವಿವಾದ ಸೃಷ್ಟಿಸಿದ್ದಾರೆ. ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕರ ಮೆಚ್ಚಿಸಲು ನೀಡಿದ ಹೇಳಿಕೆ ಇದೀಗ ಭಾರಿ ಕೋಲಾಹಲ ಸೃಷ್ಟಿಸಿದೆ.
06:27 PM (IST) Dec 21
ಮಹಾರಾಷ್ಟ್ರ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಭರ್ಜರಿ ಮುನ್ನಡೆ, ಮಕಾಡೆ ಮಲಗಿದ MVA, 129 ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಕಂಡಿದ್ದರೆ, ಮೈತ್ರಿಕೂಟ 200ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.
06:01 PM (IST) Dec 21
2025ರ ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನವು ಭಾರತವನ್ನು 191 ರನ್ಗಳಿಂದ ಸೋಲಿಸಿ ಸತತ ಎರಡನೇ ಬಾರಿಗೆ ಪ್ರಶಸ್ತಿ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, ಸಮೀರ್ ಮಿನ್ಹಾಸ್ ಅವರ 172 ರನ್ಗಳ ನೆರವಿನಿಂದ 347 ರನ್ ಗಳಿಸಿತು.
05:34 PM (IST) Dec 21
ಹೌದು ನಾನು ಟಿ ಮಾರಾಟಗಾರ, ಕಾಂಗ್ರೆಸ್ AI ವಿಡಿಯೋಗೆ ಸೂಕ್ತ ಸ್ಥಳದಲ್ಲಿ ತಿರುಗೇಟು ಕೊಟ್ಟ ಮೋದಿ, ಕಾಂಗ್ರೆಸ್ ನಾಯಕಿ ಪೋಸ್ಟ್ ಮಾಡಿದ ಎಐ ವಿಡಿಯೋಗೆ ಇಷ್ಟು ದಿನ ಮೋದಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಏನಿದು ಏಟು ತಿರುಗೇಟಿನ ಕತೆ?
05:18 PM (IST) Dec 21
ಪಶ್ಚಿಮ ಬಂಗಾಳದಲ್ಲಿ ದುರ್ಗಾ ದೇವಿಯ 'ಜಾಗೋ ಮಾ' ಭಕ್ತಿಗೀತೆ ಹಾಡುತ್ತಿದ್ದ ಖ್ಯಾತ ಗಾಯಕಿ ಲಗ್ನಜಿತಾ ಚಕ್ರವರ್ತಿ ಅವರನ್ನು ಕಾರ್ಯಕ್ರಮದ ಸಂಘಟಕ ಮೆಹಬೂಬ್ ಮಲ್ಲಿಕ್ ತಡೆದು. ಜಾತ್ಯತೀತ ಗೀತೆ ಹಾಡುವಂತೆ ಒತ್ತಾಯಿಸಿ, ಹಲ್ಲೆಗೆ ಯತ್ನಿಸಿದ ಆರೋಪ ಕೇಳಿ ಬಂದಿದ್ದು, ಆತನನ್ನು ಬಂಧಿಸಲಾಗಿದೆ.
04:49 PM (IST) Dec 21
ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡ ಪ್ರಕಟಿಸಲಾಗಿದೆ. ಹಾಲಿ ಚಾಂಪಿಯನ್ ಭಾರತ ತಂಡದಲ್ಲಿ ಕಳೆದ ವಿಶ್ವಕಪ್ಗೆ ಹೋಲಿಸಿದರೆ 7 ಬದಲಾವಣೆಗಳಾಗಿವೆ. ಈ ಕುರಿತಾದ ಇಂಟ್ರೆಸ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡಿ.
04:46 PM (IST) Dec 21
ಬೊಂಡಿ ಬೀಚ್ ರೀತಿಯಲ್ಲೇ ಮತ್ತೊಂದು ಉಗ್ರ ಕೃತ್ಯ, ಗುಂಡಿನ ದಾಳಿಯಲ್ಲಿ 10 ಸಾವು, ಹಲವರು ಗಂಭೀರ, ಕಾರಿನಲ್ಲಿ ಆಗಮಿಸಿದ ಬಂದೂಕುದಾರಿಗಳು ಅಮಾಯಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.
04:31 PM (IST) Dec 21
ಸಾಮಾಜಿಕ ಜಾಲತಾಣಗಳಲ್ಲಿ 1 ರೂಪಾಯಿ ನಾಣ್ಯ ಬ್ಯಾನ್ ಆಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳಿಗೆ ತೆರೆ ಎಳೆದಿರುವ ಭಾರತೀಯ ರಿಸರ್ವ್ ಬ್ಯಾಂಕ್ (RBI), 50 ಪೈಸೆ, 1, 2, 5, ಮತ್ತು 10 ರೂಪಾಯಿ ಸೇರಿದಂತೆ ಎಲ್ಲಾ ನಾಣ್ಯಗಳು ಕಾನೂನುಬದ್ಧವಾಗಿವೆ ಎಂದು ಸ್ಪಷ್ಟಪಡಿಸಿದೆ.
04:05 PM (IST) Dec 21
ಮುಂಬೈ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಟಿ20 ತಂಡ ಪ್ರಕಟವಾಗಿದ್ದು, ಸೂರ್ಯಕುಮಾರ್ ಯಾದವ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿಗೆ ಭಾರತ ತಂಡದಿಂದ ಹೊರಬಿದ್ದ ಐದು ಸ್ಟಾರ್ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.
03:48 PM (IST) Dec 21
ಫುಟ್ಬಾಲ್ ದಂತಕತೆ ಲಿಯೋನಲ್ ಮೆಸ್ಸಿ ಅವರ 'ದಿ ಗೋಟ್ ಇಂಡಿಯಾ ಟೂರ್' ಕೋಲ್ಕತ್ತಾದಲ್ಲಿ ಅವ್ಯವಸ್ಥೆಯಿಂದ ವಿವಾದಕ್ಕೆ ಕಾರಣವಾಯಿತು. ಈ ಪ್ರವಾಸಕ್ಕಾಗಿ ಮೆಸ್ಸಿಗೆ ಆಯೋಜಕರು ನೀಡಿದ್ದ ಹಣ ಎಷ್ಟು ಕೋಟಿ ಇಲ್ಲಿದೆ ಡಿಟೇಲ್ ಸ್ಟೋರಿ..
03:47 PM (IST) Dec 21
ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ, ವಿಶೇಷ ಅಂದರೆ ಈ ಬಾರಿಯ ರೈಲು ಟಿಕೆಟ್ ದರ ಹೆಚ್ಚಳದಲ್ಲಿ ಪ್ರತಿ ನಿತ್ಯ ರೈಲಿನಲ್ಲಿ ಓಡಾಡುವವರಿಗೆ ಸೇರಿದಂತೆ ಹಲವರಿಗೆ ವಿನಾಯಿತಿ ನೀಡಲಾಗಿದೆ.
03:00 PM (IST) Dec 21
02:37 PM (IST) Dec 21
ವಿಶ್ವಕಪ್ ತಂಡದಿಂದ ಶುಭಮನ್ ಗಿಲ್ರನ್ನು ಕೈಬಿಟ್ಟಿರುವುದು ಕೇವಲ ಫಾರ್ಮ್ ಕೊರತೆಯಿಂದಲ್ಲ, ಬದಲಿಗೆ ತಂಡದ ಸಂಯೋಜನೆಯ ಅಗತ್ಯತೆಗಳಿಂದ ಎಂದು ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟಪಡಿಸಿದ್ದಾರೆ.
02:28 PM (IST) Dec 21
ಉತ್ತರ ಪ್ರದೇಶದ ಬರೇಲಿಯಲ್ಲಿ, 8ನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಅಪ್ರಾಪ್ತ ಬಾಲಕರ ಕೃತ್ಯಕ್ಕಾಗಿ ಅವರ ತಾಯಂದಿರನ್ನು ಪೊಲೀಸರು ಬಂಧಿಸಿದ್ದಾರೆ. ಮಕ್ಕಳಿಗೆ ಸರಿಯಾದ ಸಂಸ್ಕಾರ ನೀಡದ ಕಾರಣಕ್ಕೆ ಪೋಷಕರನ್ನು ಬಂಧಿಸಲಾಗಿದೆ ಎಂದು ಹೇಳಿದ್ದು, ಈ ಪ್ರಕರಣ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
01:27 PM (IST) Dec 21
ಮನೆಯ ಹೊರಗೆ ಚಳಿ ಕಾಯಿಸುತ್ತಿದ್ದ 90 ವರ್ಷದ ವೃದ್ಧರೊಬ್ಬರ ಮೇಲೆ ಜಲ್ಲಿಕಲ್ಲು ತುಂಬಿದ ಲಾರಿ ಮಗುಚಿ ಬಿದ್ದು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
01:11 PM (IST) Dec 21
Indian Railways Price: ಭಾರತೀಯ ರೈಲ್ವೆಯು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಪ್ರಯಾಣ ದರವನ್ನು ಹೆಚ್ಚಿಸಿದೆ.. ಈ ದರ ಏರಿಕೆಯು ಲೋಕಲ್ ರೈಲು ಮತ್ತು ಮಾಸಿಕ ಸೀಸನ್ ಟಿಕೆಟ್ಗಳಿಗೆ ಅನ್ವಯಿಸುವುದಿಲ್ಲ.
12:41 PM (IST) Dec 21
12:32 PM (IST) Dec 21
11:57 AM (IST) Dec 21
ತನ್ನ ಪ್ರೇಮ ಸಂಬಂಧವನ್ನು ವಿರೋಧಿಸಿದ್ದಕ್ಕಾಗಿ 17 ವರ್ಷದ ಬಾಲಕಿಯೊಬ್ಬಳು ತನ್ನ ಗೆಳೆಯನೊಂದಿಗೆ ಸೇರಿ ಸ್ವಂತ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಪೋಷಕರಿಗೆ ನಿದ್ರೆ ಮಾತ್ರೆ ನೀಡಿ, ಅವರು ಗಾಢ ನಿದ್ರೆಗೆ ಜಾರಿದ ನಂತರ, ಈ ಕೃತ್ಯವೆಸಗಲಾಗಿದೆ.
10:59 AM (IST) Dec 21
10:33 AM (IST) Dec 21
ಆ್ಯಶಸ್ ಸರಣಿಯ ಮೂರನೇ ಟೆಸ್ಟ್ನಲ್ಲಿ ಇಂಗ್ಲೆಂಡ್ ವಿರುದ್ಧ 82 ರನ್ಗಳ ಜಯ ಸಾಧಿಸಿದ ಆಸ್ಟ್ರೇಲಿಯಾ, ಸರಣಿ ಕೈವಶ ಮಾಡಿಕೊಂಡು ಕಿರೀಟವನ್ನು ಉಳಿಸಿಕೊಂಡಿದೆ. 435 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಅಂತಿಮ ದಿನ ಹೋರಾಟ ನಡೆಸಿದರೂ, ಆಸೀಸ್ ಬೌಲರ್ಗಳ ದಾಳಿಗೆ ತತ್ತರಿಸಿ ಸೋಲೊಪ್ಪಿಕೊಂಡಿತು.
09:19 AM (IST) Dec 21
ದುಬೈ: 12ನೇ ಆವೃತ್ತಿಯ ಅಂಡರ್-19 ಏಷ್ಯಾಕಪ್ ಫೈನಲ್ ಭಾನುವಾರ ನಡೆಯಲಿದ್ದು, ಬದ್ಧವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ