ಪಟನಾ: ಬಿಹಾರದಲ್ಲಿ ಕಾಂಗ್ರೆಸ್ನ ಹೀನಾಯ ಸೋಲು ಮತ್ತೊಮ್ಮೆ ಪಕ್ಷದ ಅಸ್ತಿತ್ವವನ್ನು ಪ್ರಶ್ನಿಸುವಂತೆ ಮಾಡಿದೆ. ಬಿಹಾರದಲ್ಲಿ ಬಿಜೆಪಿ 89 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಇದು ಕಾಂಗ್ರೆಸ್ ಕಳೆದ ಲೋಕಸಭೆ ಚುನಾವಣೆ ಬಳಿಕ ನಡೆದ 4 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಕ್ಷೇತ್ರಗಳಿಂತಲೂ ಜಾಸ್ತಿ. ಹರ್ಯಾಣದಲ್ಲಿ 37, ಮಹಾರಾಷ್ಟ್ರದಲ್ಲಿ 16, ದೆಹಲಿಯಲ್ಲಿ 0, ಬಿಹಾರದಲ್ಲಿ 6 ಕ್ಷೇತ್ರಗಳಿಗೆ ಕಾಂಗ್ರೆಸ್ ತೃಪ್ತಿ ಪಟ್ಟಿದೆ. ಇದು ಬಿಹಾರದಲ್ಲಿ ಬಿಜೆಪಿ ಗೆದ್ದಿದ್ದಕ್ಕಿಂತ ಬರೋಬ್ಬರಿ 30 ಕ್ಷೇತ್ರಗಳಿಗಿಂತ ಕಡಿಮೆ. ಇದರ ಜತೆಗೆ ಲೋಕಸಭೆ ಚುನಾವಣೆಗೆ ಜತೆಯಲ್ಲಿ ನಡೆದ ಆಂಧ್ರ ಪ್ರದೇಶ, ಒಡಿಶಾ ಚುನಾವಣೆ ಸೇರೆ ಎಲ್ಲ ಕ್ಷೇತ್ರಗಳಲ್ಲಿ ಸೇರಿಸಿದರೆ ಕಾಂಗ್ರೆಸ್ ಪಡೆದಿದ್ದು 81. ಇದು ಬಿಜೆಪಿ ಬಿಹಾರದಲ್ಲಿ ಪಡೆದ 8 ಕ್ಷೇತ್ರಕ್ಕಿಂತ ಕಡಿಮೆ

11:45 PM (IST) Nov 16
ಬಿಹಾರ ಚುನಾವಣೆಯಲ್ಲಿ ಎನ್ಡಿಎ ಗೆಲುವು ಹೇಳಿದ್ದ ಎಕ್ಸಿಟ್ ಪೋಲ್, ಸರಿಯಾದ ನಂಬರ್ ಹೇಳಿದ್ದು ಯಾರು?, ಎನ್ಡಿಎ 202 ಸ್ಥಾನ ಗೆದ್ದು ಹೊಸ ದಾಖಲೆ ನಿರ್ಮಿಸಿದೆ. ಈ ಎಕ್ಸಿಟ್ ಪೋಲ್ಗಳು ಎನ್ಡಿಎ ಗೆಲುವನ್ನು ಭವಿಷ್ಯ ನುಡಿದಿತ್ತು. ಆದರೆ ಹತ್ತಿರದ ಸಂಖ್ಯೆ ಹೇಳಿದ್ದು ಯಾರು?
11:18 PM (IST) Nov 16
Tamil Nadu government airport plan:: ಬೆಂಗಳೂರಿಗೆ ಸಮೀಪವಿರುವ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪಿಸಲು ತಮಿಳುನಾಡು ಸರ್ಕಾರ ಅಧಿಕೃತವಾಗಿ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಅರ್ಜಿ ಸಲ್ಲಿಸಿದೆ. ತಾಂತ್ರಿಕ ವರದಿಯೊಂದಿಗೆ ಸರ್ಕಾರ ಹೊಸ ಪ್ರಸ್ತಾವನೆ ಮುಂದಿಟ್ಟಿದೆ.
10:30 PM (IST) Nov 16
ನಿತೀಶ್ ಕುಮಾರ್ ಜೆಡಿಯುಗೆ ಸಿಎಂ, ಬಿಜೆಪಿ-ಎಲ್ಜೆಪಿಗೆ ಡಿಸಿಎಂ ಸ್ಥಾನ, ಬಿಹಾರ ಸೀಟು ಹಂಚಿಕೆ ಫೈನಲ್ ಆಗಿದೆ. ಟಿಕೆಟ್ ಹಂಚಿಕೆ ವೇಳೆ ತೆಗೆದುಕೊಂಡ ಸೂತ್ರದಡಿ ಸಚಿವ ಸ್ಥಾನ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ.
09:18 PM (IST) Nov 16
ದೆಹಲಿ ಸ್ಪೋಟದ ರೂವಾರಿ ವೈದ್ಯ ಉಮರ್ ಆಪ್ತ ರಶೀದ್ ಅರೆಸ್ಟ್, ಕೃತ್ಯಕ್ಕೆ 20 ಲಕ್ಷ ರೂ ಪಾವತಿ ಮಾಡಿರುವ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಜೈಶ್ ಇ ಮೊಮ್ಮದ್ ಉಗ್ರರು ಹವಾಲ ಮೂಲಕ ಮೊತ್ತ ಪಾವತಿ ಮಾಡಿದ್ದಾರೆ.
08:27 PM (IST) Nov 16
ಅಜ್ಜ ತೀರಿಕೊಂಡಿದ್ದಾರೆ ರಜೆ ಬೇಕು ಎಂದ ಉದ್ಯೋಗಿ, ಲೀವ್ ಕೊಟ್ಟರೂ ಬಾಸ್ ಪ್ರತಿಕ್ರಿಯೆಗೆ ಭಾರಿ ಟೀಕೆ ವ್ಯಕ್ತವಾಗಿದೆ. ಅಷ್ಟಕ್ಕೂ ಒಂದು ದಿನ ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ನೀಡಿದ ಉತ್ತರವೇನು? ಸೋಶಿಯಲ್ ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ವೈರಲ್.
07:27 PM (IST) Nov 16
ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ಗೆ ಗಂಭೀರ ಗಾಯ, ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೆಡೆ ಹೀನಾಯ ಸೋಲಿನ ಬೆನ್ನಲ್ಲೇ ಗಿಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ವೈದ್ಯರ ತಂಡ ಗಿಲ್ ಆರೋಗ್ಯದ ಮೇಲೆ ನಿಗಾವಹಿಸಿದೆ.
05:51 PM (IST) Nov 16
ಮನೆಗೆ ಹಿಂದಿರುಗುವ ವೇಳೆ ಆರ್ಎಸ್ಎಸ್ ಕಾರ್ಯಕರ್ತನ ಮೇಲೆ ಗುಂಡಿನ ದಾಳಿ, ಸ್ಥಳದಲ್ಲೆ ಸಾವು , ಮಕ್ಕಳ ಜೊತೆ ಸಮಯ ಕಳೆಯಲು ಮನೆಗೆ ವಾಪಾಸ್ಸಾಗುತ್ತಿದ್ದ ವೇಳೆ ಇಬ್ಬರು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
05:01 PM (IST) Nov 16
ಬಿಹಾರದಲ್ಲಿ ಸರ್ಕಾರ ರಚನೆ ಕಸರತ್ತು, ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ರಾಜೀನಾಮೆ ಸಾಧ್ಯತೆ ಇದೆ. ಎನ್ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಯಾರು ಮುಖ್ಯಮಂತ್ರಿ ಅನ್ನೋ ಕುತೂಹಲ ತೀವ್ರಗೊಳ್ಳುತ್ತಿದ್ದಂತೆ ಇದೀಗ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ.
04:19 PM (IST) Nov 16
ದೆಹಲಿಯಲ್ಲಿ ಶಾಸಕ ಅಂತ ಸುಳ್ಳು ಹೇಳಿ 18 ದಿನ ಹೋಟೆಲ್ನಲ್ಲಿ ಉಳಿದುಕೊಂಡಿದ್ದ ವ್ಯಕ್ತಿ ಹಾಗೂ ಆತನ ಸಹಾಯಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಣ ಕೊಡದೆ ರೂಮ್ ಬುಕ್ ಮಾಡಿದ್ದ ಇವರ ಬಗ್ಗೆ ಹೋಟೆల్ ಮಾಲೀಕರು ದೂರು ಕೊಟ್ಟ ಮೇಲೆ ಬಲೆಗೆ ಬಿದ್ದಿದ್ದಾರೆ. 'MP' ಬೋರ್ಡ್ ಇದ್ದ ಬಳಸಿದ್ದ ಕದೀಮರು!
04:18 PM (IST) Nov 16
ಮದುವೆಗೂ ಕೆಲವೇ ಗಂಟೆ ಮುನ್ನ ಸೀರೆ ಜಗಳ, ವಧುವನ್ನೇ ಹತ್ಯೆಗೈದ ವರ ಪರಾರಿ, ಕಳೆದ ಒಂದೂವರೆ ವರ್ಷದಿಂದ ಇಬ್ಬರು ಲೀವಿಂಗ್ ಟುಗೆದರ್ನಲ್ಲಿದ್ದ ಈ ಜೋಡಿಯ ಕತೆ ಬಹುತೇಕ ಲೀವಿಂಗ್ ಟುಗೆದರ್ ಕತೆಗಿಂತ ಕೊಂಚ ಭಿನ್ನವಾಗಿದೆ.
03:39 PM (IST) Nov 16
ಬಿಹಾರ ಸೋಲಿನ ಬಳಿಕ ಲಾಲು ಕುಟುಂಬ ಛಿದ್ರ, ಚಪ್ಪಲಿ ಎಸೆದು ಕಿಡ್ನಿ ಕೊಟ್ಟ ಪುತ್ರಿಗೆ ಗೆಟ್ ಔಟ್ ಹೇಳಲಾಗಿದೆ. ಕೊಳಕು ಕಿಡ್ನಿಯನ್ನು ಲಾಲು ಪ್ರಸಾದ್ ಯಾದವ್ಗೆ ಕೊಟ್ಟು ಕೋಟಿ ರೂಪಾಯಿ ಪಡೆದಿದ್ದು ಮಾತ್ರವಲ್ಲ, ಟಿಕೆಟ್ ಗಿಟ್ಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
12:36 PM (IST) Nov 16